AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಳಿ ಗೋಪುರ ನೆಲಸಮ; ನ. 28ರೊಳಗೆ ಅವಶೇಷಗಳನ್ನು ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ನೊಯ್ಡಾ ಪ್ರಾಧಿಕಾರ ಸೂಚನೆ

ಆಗಸ್ಟ್ 28ರಂದು ನೊಯ್ಡಾದ ಗಗನಚುಂಬಿ ಅವಳಿ ಗೋಪುರಗಳನ್ನು ಕೆಡವಲಾಗಿತ್ತು. ಈ ಅವಳಿ ಗೋಪುರಗಳ ಅವಶೇಷಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಇಂದಿನಿಂದ ಪ್ರಾರಂಭಿಸಬೇಕು ಎಂದು ನೊಯ್ಡಾ ಪ್ರಾಧಿಕಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಅವಳಿ ಗೋಪುರ ನೆಲಸಮ; ನ. 28ರೊಳಗೆ ಅವಶೇಷಗಳನ್ನು ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ನೊಯ್ಡಾ ಪ್ರಾಧಿಕಾರ ಸೂಚನೆ
ಅವಳಿ ಗೋಪುರ ನೆಲಸಮ
TV9 Web
| Updated By: ಸುಷ್ಮಾ ಚಕ್ರೆ|

Updated on:Sep 29, 2022 | 8:09 AM

Share

ನೊಯ್ಡಾ: ಉತ್ತರ ಪ್ರದೇಶದ ನೊಯ್ಡಾದಲ್ಲಿ (Noida) ಸೂಪರ್‌ಟೆಕ್‌ನ ಅವಳಿ ಕಟ್ಟಡಗಳನ್ನು (Twin Towers) ನೆಲಸಮಗೊಳಿಸಿ 1 ತಿಂಗಳಾಗಿದೆ. ನೊಯ್ಡಾದ ಸೆಕ್ಟರ್ 93Aನಲ್ಲಿರುವ 40 ಅಂತಸ್ತಿನ ಎರಡು ಗಗನಚುಂಬಿ ಕಟ್ಟಡಗಳು (ಅಪೆಕ್ಸ್ ಮತ್ತು ಸೆಯಾನೆ) ದೆಹಲಿಯ ಐಕಾನಿಕ್ ಕಟ್ಟಡವಾದ ಕುತುಬ್ ಮಿನಾರ್‌ಗಿಂತ ಎತ್ತರವಾಗಿದ್ದವು. ಇವುಗಳನ್ನು ಅಕ್ರಮವಾಗಿ ಕಟ್ಟಿದ ಹಿನ್ನೆಲೆಯಲ್ಲಿ ಈ ಕಟ್ಟಡಗಳನ್ನು ಪತನಗೊಳಿಸಲಾಗಿತ್ತು. ಈ ಸೂಪರ್‌ಟೆಕ್‌ನ ಅವಳಿ ಗೋಪುರಗಳ ಅವಶೇಷಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಇಂದಿನಿಂದ (ಗುರುವಾರ) ಪ್ರಾರಂಭಿಸಬೇಕು ಮತ್ತು ನವೆಂಬರ್ 28ರೊಳಗೆ ಆ ಜಾಗ ಸಂಪೂರ್ಣವಾಗಿ ಖಾಲಿಯಾಗಬೇಕು ಎಂದು ನೊಯ್ಡಾ ಪ್ರಾಧಿಕಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಆಗಸ್ಟ್ 28ರಂದು ನೊಯ್ಡಾದ ಗಗನಚುಂಬಿ ಅವಳಿ ಗೋಪುರಗಳನ್ನು ಕೆಡವಲಾಗಿತ್ತು. ಈ ಸಮಯದಲ್ಲಿ ಹಾನಿಗೊಳಗಾದ ಎಟಿಎಸ್ ವಿಲೇಜ್ ಸೊಸೈಟಿಯ ಕಾಂಪೌಂಡ್​ ಅನ್ನು ಮರುನಿರ್ಮಾಣ ಮಾಡಲು ಅವಳಿ ಗೋಪುರಗಳನ್ನು ಕೆಡವಲು ಗುತ್ತಿಗೆ ಪಡೆದ ಕಂಪನಿ ಎಡಿಫೈಸ್ ಇಂಜಿನಿಯರಿಂಗ್‌ಗೆ ನೊಯ್ಡಾ ಪ್ರಾಧಿಕಾರ ನಿರ್ದೇಶನ ನೀಡಿದೆ.

ಇದನ್ನೂ ಓದಿ: Noida Twin Towers: ಯುದ್ಧಪೀಡಿತ ಭೂಮಿಯಂತೆ ಕಾಣುತ್ತಿದೆ ನೊಯ್ಡಾದ ಅವಳಿ ಕಟ್ಟಡ ಧ್ವಂಸವಾದ ಜಾಗ

ಸುಮಾರು 100 ಮೀಟರ್ ಎತ್ತರದ 2 ಟವರ್‌ಗಳನ್ನು ಎಮರಾಲ್ಡ್ ಕೋರ್ಟ್ ಸೊಸೈಟಿ ಮೈದಾನದಲ್ಲಿ ನಿರ್ಮಿಸುವುದು ಅಸಂವಿಧಾನಿಕ ಎಂಬ ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿ ಕಳೆದ ತಿಂಗಳ ಅಂತ್ಯದಲ್ಲಿ ಈ 2 ಕಟ್ಟಡಗಳನ್ನು ಕೆಡವಲಾಗಿತ್ತು. ನೊಯ್ಡಾದ ಸೂಪರ್‌ಟೆಕ್‌ನ ಅವಳಿ ಗೋಪುರಗಳನ್ನು ಭಾನುವಾರ ಸ್ಫೋಟದಿಂದ ಸುರಕ್ಷಿತವಾಗಿ ಕೆಡವಲಾಯಿತು. ಎಮರಾಲ್ಡ್ ಕೋರ್ಟ್ ಮತ್ತು ಎಟಿಎಸ್ ವಿಲೇಜ್ 2 ಹೌಸಿಂಗ್ ಸೊಸೈಟಿಗಳ 5,000 ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು. ಸ್ಫೋಟದ ದೃಷ್ಟಿಯಿಂದ ಸೆಕ್ಟರ್ 93Aಯಲ್ಲಿನ 2 ಸೊಸೈಟಿಗಳಲ್ಲಿ ಅಡುಗೆ ಅನಿಲ ಮತ್ತು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ನಿವಾಸಿಗಳು ಮಾತ್ರವಲ್ಲದೆ, ಅವರ ವಾಹನಗಳು ಮತ್ತು ಸಾಕುಪ್ರಾಣಿಗಳನ್ನು ಸಹ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ಇದನ್ನೂ ಓದಿ: ಸೂಪರ್‌ಟೆಕ್ ಅವಳಿ ಕಟ್ಟಡ ನೆಲಸಮ ಮಾಡಲು ಗುಂಡಿ ಒತ್ತಿದ್ದಇಂಜಿನಿಯರ್ ಕಣ್ಣಲ್ಲಿ ಆನಂದಭಾಷ್ಪ

2 ಬೃಹತ್ ಕಟ್ಟಡಗಳನ್ನು ಕೆಡವಿದ ನಂತರ ಆ ಸ್ಥಳದಲ್ಲಿ 80,000 ಟನ್‌ಗಳಷ್ಟು ಅವಶೇಷಗಳು ಉಳಿದುಕೊಂಡಿವೆ. ಎಟಿಎಸ್ ವಿಲೇಜ್‌ನ ಮುರಿದು ಬಿದ್ದಿರುವ ಗಡಿ ಗೋಡೆಯನ್ನು ಪುನರ್ ನಿರ್ಮಾಣ ಮಾಡುವ ಕಾರ್ಯವನ್ನು ಎಡಿಫೈಸ್ ಇಂಜಿನಿಯರಿಂಗ್ ಆರಂಭಿಸಿದೆ. ಕಾಂಪೌಂಡ್​ನ ವಿನ್ಯಾಸವು ಈ ಮೊದಲು ನಿರ್ಮಿಸಿದ ರೀತಿಯಲ್ಲಿಯೇ ಇರಬೇಕು ಎಂದು ಸೂಚನೆ ನೀಡಲಾಗಿದೆ.

ಅವಶೇಷಗಳನ್ನು ಒಡೆದಾಗ ಉಂಟಾಗುವ ಧೂಳಿನಿಂದ ನಿವಾಸಿಗಳನ್ನು ರಕ್ಷಿಸುವ ಸಲುವಾಗಿ 6 ಸ್ಮಾಗ್ ಗನ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಆದರೆ, ಪ್ರಸ್ತುತ ಅವುಗಳನ್ನು ಬಳಸಲಾಗುತ್ತಿಲ್ಲ. ಸ್ಪ್ರಿಂಕ್ಲರ್‌ಗಳನ್ನು ಮಾತ್ರ ಬಳಸಲಾಗುತ್ತಿದೆ ಎಂದು ನೋಯ್ಡಾ ಪ್ರಾಧಿಕಾರ ತರಾಟೆಗೆ ತೆಗೆದುಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:07 am, Thu, 29 September 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ