AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಜಿಸಿ-ನೆಟ್ ಪತ್ರಿಕೆ ತಯಾರಿಕೆಯಲ್ಲಿ ಎಐ ಯಡವಟ್ಟು: 3 ವಿಷಯಗಳ ಪರೀಕ್ಷೆ ರದ್ದು, ಎನ್‌ಟಿಎ ವಿರುದ್ಧ ತಜ್ಞರ ಗಂಭೀರ ಆರೋಪ

ಯುಜಿಸಿ-ನೆಟ್ ಪ್ರಶ್ನೆಪತ್ರಿಕೆ ಸಿದ್ಧಪಡಿಸುವಿಕೆಯಲ್ಲಿ ಕೃತಕ ಬುದ್ಧಿಮತ್ತೆಯ ಅಜಾಗರೂಕ ಬಳಕೆಯಿಂದ ಗಂಭೀರ ದೋಷಗಳು ಕಂಡುಬಂದಿವೆ. ಸಮಾಜಶಾಸ್ತ್ರಜ್ಞರ ಹೆಸರುಗಳ ತಪ್ಪು ಅನುವಾದ ಮತ್ತು 67 ಪ್ರಶ್ನೆಗಳ ಮರುಕಳಿಕೆ ಇದಕ್ಕೆ ಸಾಕ್ಷಿ. ಈ ಹಿನ್ನೆಲೆಯಲ್ಲಿ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ಪರೀಕ್ಷೆಗಳನ್ನು ರದ್ದುಗೊಳಿಸಿ ಮರುಪರೀಕ್ಷೆಗೆ ಆದೇಶಿಸಲಾಗಿದೆ. ಎನ್‌ಟಿಎ ವಿಶ್ವಾಸಾರ್ಹತೆ ಕುರಿತು ಪ್ರಶ್ನೆಗಳೆದ್ದಿದ್ದು, ಉನ್ನತ ಮಟ್ಟದ ಶೈಕ್ಷಣಿಕ ಆಡಿಟ್‌ಗೆ ಆಗ್ರಹಿಸಲಾಗಿದೆ.

ಯುಜಿಸಿ-ನೆಟ್ ಪತ್ರಿಕೆ ತಯಾರಿಕೆಯಲ್ಲಿ ಎಐ ಯಡವಟ್ಟು: 3 ವಿಷಯಗಳ ಪರೀಕ್ಷೆ ರದ್ದು, ಎನ್‌ಟಿಎ ವಿರುದ್ಧ ತಜ್ಞರ ಗಂಭೀರ ಆರೋಪ
ವಿದ್ಯಾರ್ಥಿಗಳು
ನಯನಾ ರಾಜೀವ್
|

Updated on: Aug 20, 2026 | 1:17 PM

Share

ನವದೆಹಲಿ, ಆಗಸ್ಟ್​ 20: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ಪ್ರತಿಷ್ಠಿತ ಯುಜಿಸಿ-ನೆಟ್ (UGC-NET) ಪರೀಕ್ಷೆಯ ಪ್ರಶ್ನೆಪತ್ರಿಕೆ(Question Papers)ಗಳನ್ನು ಸಿದ್ಧಪಡಿಸುವಲ್ಲಿ ಮತ್ತು ಅನುವಾದಿಸುವಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಜಾಗರೂಕವಾಗಿ ಬಳಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಾಕಷ್ಟು ಮಾನವ ಪರಿಶೀಲನೆ ನಡೆಸದೆ ಪತ್ರಿಕೆ ಸಿದ್ಧಪಡಿಸಿದ ಪರಿಣಾಮ ಪ್ರಶ್ನೆಗಳಲ್ಲಿ ಹಾಸ್ಯಾಸ್ಪದ ತಪ್ಪುಗಳು, ವಿಚಿತ್ರ ಅನುವಾದಗಳು ಹಾಗೂ ಹಳೆಯ ಪ್ರಶ್ನೆಗಳ ಮರುಕಳಿಸುವಿಕೆ ಕಂಡುಬಂದಿದ್ದು, ವ್ಯಾಪಕ ವಿವಾದದ ನಂತರ ಎನ್‌ಟಿಎ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ವಿಷಯಗಳ ಪರೀಕ್ಷೆಗಳನ್ನು ರದ್ದುಗೊಳಿಸಿ ಮರುಪರೀಕ್ಷೆಗೆ ಆದೇಶಿಸಿದೆ.

ಸಮಾಜಶಾಸ್ತ್ರಜ್ಞರ ಹೆಸರುಗಳು ತೀರಾ ತಪ್ಪಾಗಿ ಮುದ್ರಣಗೊಂಡಿದ್ದವು. ‘ಜಾರ್ಜ್ ರಿಟ್ಜರ್’ ಹೆಸರನ್ನು ಪುಟ್ಜರ್, ‘ಟಾಲ್ಕಾಟ್ ಪಾರ್ಸನ್ಸ್’ ಹೆಸರನ್ನು “ಪಾರ್ಸೌ” ಹಾಗೂ ಪ್ರಸಿದ್ಧ ಭಾರತೀಯ ಸಮಾಜಶಾಸ್ತ್ರಜ್ಞ ‘ಜಿ.ಎಸ್. ಘುರ್ಯೆ’ ಹೆಸರನ್ನು ಘುನ್ಯೆ ಎಂದು ತಪ್ಪಾಗಿ ಅನುವಾದಿಸಿ ಮುದ್ರಿಸಲಾಗಿತ್ತು. ಇಂಗ್ಲಿಷ್ ಪತ್ರಿಕೆಯ ಒಟ್ಟು 150 ಪ್ರಶ್ನೆಗಳಲ್ಲಿ ಬರೋಬ್ಬರಿ 67 ಪ್ರಶ್ನೆಗಳು ಹಿಂದಿನ ವರ್ಷಗಳ ಪತ್ರಿಕೆಗಳಿಂದ ನೇರವಾಗಿ ಪುನರಾವರ್ತನೆಯಾಗಿದ್ದವು.

ವಾಣಿಜ್ಯ ಪತ್ರಿಕೆಯಲ್ಲಿ ಪುನರಾವರ್ತನೆ: ತೆರಿಗೆ, ಬ್ರೇಕ್-ಈವನ್ ಅನಾಲಿಸಿಸ್ ಹಾಗೂ ಬಂಡವಾಳ ರಚನೆ ಕುರಿತ ಪ್ರಶ್ನೆಗಳು ಪದೇ ಪದೇ ಮರುಕಳಿಸಿದ್ದವು.ನೀಟ್-ಯುಜಿ (NEET-UG) ಪತ್ರಿಕೆಗಳ ಪ್ರಾದೇಶಿಕ ಭಾಷಾ ಅನುವಾದಕ್ಕೂ ಇದೇ ರೀತಿಯ ಎಐ ಟೂಲ್‌ಗಳನ್ನು ಬಳಸಲಾಗಿತ್ತು ಎಂದು ಮಾಜಿ ವಿಷಯ ತಜ್ಞರು ಆರೋಪಿಸಿದ್ದಾರೆ.

ಮತ್ತಷ್ಟು ಓದಿ:ಜಾರ್ಖಂಡ್‌ನಲ್ಲಿ ಪರೀಕ್ಷಾ ಹಗರಣಕ್ಕೆ ಬ್ರೇಕ್: 39 ನೇಮಕಾತಿ ಪರೀಕ್ಷೆಗಳು ರದ್ದು, 6 ಪರೀಕ್ಷೆಗಳು ಮುಂದೂಡಿಕೆ

ಪ್ರಶ್ನೆಪತ್ರಿಕೆಗಳನ್ನು ತಜ್ಞರ ಬದಲಿಗೆ ತಾತ್ಕಾಲಿಕವಾಗಿ ಎಐ ಮೂಲಕ ಜೋಡಿಸಲಾಗಿದ್ದರಿಂದ ಅಧಿಕಾರಿಗಳ ಬಳಿಯೇ ಸರಿಯಾದ ಉತ್ತರಗಳ ಕೀಲಿ (Answer Keys) ಇರಲಿಲ್ಲ ಎಂದು ಶಿಕ್ಷಣ ಸಚಿವಾಲಯದ ಮೂಲಗಳು ತಿಳಿಸಿವೆ. ಜೆನೆರೇಟಿವ್ ಎಐ ಬಳಕೆಯ ಆರೋಪವನ್ನು ಎನ್‌ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್ ನಿರಾಕರಿಸಿದ್ದು, ಪತ್ರಿಕೆಗಳ ಪರಿಶೀಲನೆಗೆ ಮಾನವ ಸಂಪನ್ಮೂಲ ಬಳಸಲಾಗಿತ್ತು ಎಂದು ಹೇಳಿದ್ದಾರೆ. ಆದರೆ ಇಷ್ಟೊಂದು ದೋಷಗಳು ಹೇಗೆ ತಪ್ಪಿಸಿಕೊಂಡವು ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ.

ಜುಲೈ ಅಂತ್ಯದಲ್ಲೇ ದೋಷಗಳು ಪತ್ತೆಯಾಗಿದ್ದರೂ, 84 ವಿಷಯಗಳ ಕೀಲಿಗಳನ್ನು ಬಿಡುಗಡೆ ಮಾಡುವವರೆಗೆ ಸುಮಾರು 6 ವಾರಗಳ ಕಾಲ ರದ್ದತಿ ಆದೇಶವನ್ನು ವಿಳಂಬ ಮಾಡಿದ್ದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ದೇಶದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆ (Assistant Professor) ಹಾಗೂ ಕಿರಿಯ ಸಂಶೋಧನಾ ಫೆಲೋಶಿಪ್ (JRF) ಅರ್ಹತೆಯನ್ನು ನಿರ್ಧರಿಸುವ ಇಂತಹ ಉನ್ನತ ಮಟ್ಟದ ಪರೀಕ್ಷೆಯಲ್ಲೇ ಈ ರೀತಿಯ ಬೇಜವಾಬ್ದಾರಿ ಎದ್ದುಕಂಡಿರುವುದು ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ.

ವ್ಯವಸ್ಥಿತ ಆಡಿಟ್‌ಗೆ ಆಗ್ರಹ: ಪರೀಕ್ಷಾ ಪತ್ರಿಕೆಗಳನ್ನು ಸಿದ್ಧಪಡಿಸಲು ಎಐ ಅಳವಡಿಕೆಗೆ ಅನುಮತಿ ನೀಡಿದವರು ಯಾರು ಮತ್ತು ಪರೀಕ್ಷಾ ಮಂಡಳಿಯಲ್ಲಿದ್ದ ವಿಷಯ ತಜ್ಞರ ಪಾತ್ರವೇನು ಎಂಬುದರ ಬಗ್ಗೆ ಉನ್ನತ ಮಟ್ಟದ ಶೈಕ್ಷಣಿಕ ಆಡಿಟ್ ನಡೆಸಬೇಕೆಂದು ಜೆಎನ್‌ಯು ಸೇರಿದಂತೆ ಹಲವು ವಿವಿ ಪ್ರಾಧ್ಯಾಪಕರು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ