AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

High Tech Security Pulwama: ಸಂಜಯ್ ಶರ್ಮಾ ಹತ್ಯೆ ನಂತರ ಪುಲ್ವಾಮಾದಲ್ಲಿ ಹೈಟೆಕ್ ಭದ್ರತಾ ಉಪಕರಣಗಳ ಬಳಕೆ

ಕಾಶ್ಮೀರಿ ಪಂಡಿತ್ ಸಂಜಯ್ ಶರ್ಮಾ ಹತ್ಯೆಯ ನಂತರ ಪುಲ್ವಾಮಾದಲ್ಲಿ ಭಾರಿ ಕಟ್ಟೆಚ್ಚರಿಕೆಯನ್ನು ಮಾಡಲಾಗಿದೆ. ಈ ಕಾರಣಕ್ಕೆ ಭದ್ರತಾ ಪಡೆಗಳು ಪುಲ್ವಾಮಾದ ಕೆಲವು ಭಾಗದಲ್ಲಿ ಸೇನಾ ಉಪಕರಣಗಳನ್ನು ಅಳವಡಿಸಲಾಗಿದೆ.

High Tech Security Pulwama: ಸಂಜಯ್ ಶರ್ಮಾ ಹತ್ಯೆ ನಂತರ ಪುಲ್ವಾಮಾದಲ್ಲಿ ಹೈಟೆಕ್ ಭದ್ರತಾ ಉಪಕರಣಗಳ ಬಳಕೆ
ಭದ್ರತಾ ಪಡೆ
Follow us
ಅಕ್ಷಯ್​ ಪಲ್ಲಮಜಲು​​
|

Updated on:Mar 02, 2023 | 12:22 PM

ಶ್ರೀನಗರ: ಕಾಶ್ಮೀರಿ ಪಂಡಿತ್ ಸಂಜಯ್ ಶರ್ಮಾ (Sanjay Sharma) ಹತ್ಯೆಯ ನಂತರ ಪುಲ್ವಾಮಾದಲ್ಲಿ ( Pulwama) ಭಾರಿ ಕಟ್ಟೆಚ್ಚರಿಕೆಯನ್ನು ಮಾಡಲಾಗಿದೆ. ಈ ಕಾರಣಕ್ಕೆ ಭದ್ರತಾ ಪಡೆಗಳು ಪುಲ್ವಾಮಾದ ಕೆಲವು ಭಾಗದಲ್ಲಿ ಸೇನಾ ಉಪಕರಣಗಳನ್ನು ಅಳವಡಿಸಲಾಗಿದೆ. ಸೇನೆಯು ಬುಲೆಟ್ ಪ್ರೂಫ್ ವಾಹನಗಳು, ವಾಲ್-ಥ್ರೂ ರಾಡಾರ್‌ಗಳು ಮತ್ತು ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಕಾಶ್ಮೀರದಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆಗೆ ಸಿಆರ್‌ಪಿಎಫ್ ಸೇರ್ಪಡೆಗೊಂಡಿರುವ ಕೆಲವು ಹೊಸ ಗ್ಯಾಜೆಟ್‌ಗಳಾಗಿವೆ, ಇದು ಭಯೋತ್ಪಾದಕರ ವಿರುದ್ಧ ನಿಖರ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯವನ್ನು ಮಾಡುತ್ತದೆ. ಬ್ಯಾಂಕ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಕಾಶ್ಮೀರಿ ಪಂಡಿತ್ ಸಂಜಯ್ ಶರ್ಮಾ ಅವರ ಹತ್ಯೆ ನಂತರದ ಭಾಗವಾಗಿ, ಟಿಆರ್‌ಎಫ್‌ನ ಎರಡು ಉಗ್ರರ ವಿರುದ್ಧ ಪುಲ್ವಾಮಾದಲ್ಲಿ ಮಂಗಳವಾರ ನಡೆದ ಕಾರ್ಯಾಚರಣೆಗಾಗಿ ಈ ಹೈಟೆಕ್ ಉಪಕರಣಗಳನ್ನು ಬಳಸಲಾಗಿದೆ.

ನಿನ್ನೆಯ (ಮಂಗಳವಾರ) ಎನ್‌ಕೌಂಟರ್‌ನಲ್ಲಿ, ನಾವು ಬುಲೆಟ್ ಪ್ರೂಫ್ ಆಗಿರುವ ಕ್ರಿಟಿಕಲ್ ಸಿಚುಯೇಶನ್ ರೆಸ್ಪಾನ್ಸ್ ವೆಹಿಕಲ್ (CSRV) ಅನ್ನು ಬಳಸಿದ್ದೇವೆ ಮತ್ತು ಅದನ್ನು ಮನೆಯೊಳಗೆ ದಾಳಿ ಮಾಡಿದ ಶತ್ರುವನ್ನು ತೊಡೆದು ಹಾಕಲು ಸಾಹಯ ಮಾಡಿದೆ. ಇದು ತುಂಬಾ ಕಡಿಮೆ ತಿರುಗುವ ತ್ರಿಜ್ಯವನ್ನು ಹೊಂದಿದೆ. ಜೊತೆಗೆ ಬುಲೆಟ್ ಪ್ರೂಫ್ ಮತ್ತು ಗೋಡೆಗಳನ್ನು ರ್ಯಾಮ್ ಮಾಡಲು ಬಳಸಬಹುದು. ನಮ್ಮಲ್ಲಿ ಬುಲೆಟ್ ಪ್ರೂಫ್ ಜೆಸಿಬಿಗಳೂ ಇವೆ ಎಂದು ಐಜಿ ಸಿಪಿಆರ್ಎಫ್ (ಕಾಶ್ಮೀರ ಕಾರ್ಯಾಚರಣೆ) ಎಂಎಸ್ ಭಾಟಿಯಾ ಪಿಟಿಐಗೆ ತಿಳಿಸಿದರು.

CSRV ಮತ್ತು JCB ಗಳು ಫೋರ್ಕ್‌ಲಿಫ್ಟ್‌ನಲ್ಲಿ ಬುಲೆಟ್ ಪ್ರೂಫ್ ಕ್ಯಾಬಿನ್ ಅನ್ನು ಹೊಂದಿದ್ದು, ಭದ್ರತಾ ಸಿಬ್ಬಂದಿಗೆ ಅಪಾಯ ಮಾಡದೆ ಎದುರಾಳಿಯ ವಿರುದ್ಧ ಹೋರಾಡುತ್ತದೆ. CSRV ಕ್ಯಾಬಿನ್ 180-ಡಿಗ್ರಿ ರಕ್ಷಣೆಯನ್ನು ಒದಗಿಸುತ್ತದೆ ಮತ್ತು JCB ಗಳು ಬುಲೆಟ್ ಪ್ರೂಫ್ ಕ್ಯಾಬಿನ್‌ನೊಳಗಿನ ಸೈನಿಕರಿಗೆ 360-ಡಿಗ್ರಿ ರಕ್ಷಣೆಯನ್ನು ಹೊಂದಿವೆ.

ಪಡೆಗಳಿಂದ ಡ್ರೋನ್‌ಗಳನ್ನು ಸಹ ಬಳಸಲಾಗುತ್ತಿದೆ ಮತ್ತು ಕಣಿವೆಯಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆಯಲ್ಲಿ ಅವು ಪ್ರಮುಖ ಪಾತ್ರ ವಹಿಸಿವೆ ಎಂದು ಭಾಟಿಯಾ ಹೇಳಿದರು. ಡ್ರೋನ್‌ಗಳನ್ನು ನಮ್ಮ ಬೆಂಗಾವಲು ಪಡೆಗಳ ಚಲನೆಯ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಕಣ್ಗಾವಲುಗಾಗಿ ನಾವು ಹೆಚ್ಚು ಬಳಸುತ್ತೇವೆ. ಅಮರನಾಥ ಯಾತ್ರೆಯ ಸಮಯದಲ್ಲಿಯೂ ಡ್ರೋನ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಕಾರ್ಯಾಚರಣೆಯ ಸಮಯದಲ್ಲಿ ಎನ್‌ಕೌಂಟರ್ ಮಾಡಲು ನಾವು ಡ್ರೋನ್‌ಗಳನ್ನು ಬಳಸುತ್ತೇವೆ.

ಇದನ್ನೂ ಓದಿ: Pulwama Encounter: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ವಾಲ್-ಥ್ರೂ ರಾಡಾರ್‌ಗಳು (WTR) ಮತ್ತು ಹ್ಯಾಂಡ್-ಹೆಲ್ಡ್ ಥರ್ಮಲ್ ಇಮೇಜರ್‌ಗಳು (HHTI) ಸಂಕೀರ್ಣ ಕಾರ್ಯಾಚರಣೆಗಳಲ್ಲಿ ಸಿಬ್ಬಂದಿಗಳಿಗೆ ಅಪಾಯ ಕಡಿಮೆ ಮಾಡುವ ಇನ್ನೊಂದು ಗ್ಯಾಜೆಟ್‌ಗಳಾಗಿವೆ. HHTI ಅನ್ನು ಸಹ ಬಳಸಲಾಗುತ್ತದೆ. ವಿಶೇಷವಾಗಿ ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದಂತೆ ಹೆಚ್ಚು ಪರಿಣಾಮ ಬೀರುವ ಪ್ರತಿಯೊಂದು ಬೆಟಾಲಿಯನ್‌ನಲ್ಲಿ ನಾವು ಅವುಗಳನ್ನು ಹೊಂದಿದ್ದೇವೆ. ಶತ್ರುಗಳು ಕಾಡು ಮತ್ತು ಅಡಗುತಾಣಗಳನ್ನು ಸಮೀಪಿಸುವಾಗ ಈ ತಂತ್ರಗಾರಿಕೆಗಳು ಬಲ ಗುಣಕಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2019 ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಸಿಆರ್‌ಪಿಎಫ್ ಇಡೀ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಸಿಸಿಟಿವಿ ಕಣ್ಗಾವಲು ಮುಂತಾದ ತಂತ್ರಜ್ಞಾನವನ್ನು ಕಣಿವೆಯಲ್ಲಿ ಬಳಸಿದೆ ಎಂದು ಭಾಟಿಯಾ ಹೇಳಿದರು. ನಾವು ಎನ್‌ಎಚ್‌ನಲ್ಲಿ 14 ನಾಕಾಗಳನ್ನು ಸ್ಥಾಪಿಸಿದ್ದೇವೆ, ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಮತ್ತು ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತದೆ ಜೊತೆಗೆ ಅಧಿಕಾರಿಗಳು ಇಲ್ಲಿ ಕಾರ್ಯಚರಣೆಗೆ ನೇಮಕ ಮಾಡಲಾಗುತ್ತದೆ ದು ಅವರು ಹೇಳಿದರು.

Published On - 12:22 pm, Thu, 2 March 23

‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ