AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

High Tech Security Pulwama: ಸಂಜಯ್ ಶರ್ಮಾ ಹತ್ಯೆ ನಂತರ ಪುಲ್ವಾಮಾದಲ್ಲಿ ಹೈಟೆಕ್ ಭದ್ರತಾ ಉಪಕರಣಗಳ ಬಳಕೆ

ಕಾಶ್ಮೀರಿ ಪಂಡಿತ್ ಸಂಜಯ್ ಶರ್ಮಾ ಹತ್ಯೆಯ ನಂತರ ಪುಲ್ವಾಮಾದಲ್ಲಿ ಭಾರಿ ಕಟ್ಟೆಚ್ಚರಿಕೆಯನ್ನು ಮಾಡಲಾಗಿದೆ. ಈ ಕಾರಣಕ್ಕೆ ಭದ್ರತಾ ಪಡೆಗಳು ಪುಲ್ವಾಮಾದ ಕೆಲವು ಭಾಗದಲ್ಲಿ ಸೇನಾ ಉಪಕರಣಗಳನ್ನು ಅಳವಡಿಸಲಾಗಿದೆ.

High Tech Security Pulwama: ಸಂಜಯ್ ಶರ್ಮಾ ಹತ್ಯೆ ನಂತರ ಪುಲ್ವಾಮಾದಲ್ಲಿ ಹೈಟೆಕ್ ಭದ್ರತಾ ಉಪಕರಣಗಳ ಬಳಕೆ
ಭದ್ರತಾ ಪಡೆ
ಅಕ್ಷಯ್​ ಪಲ್ಲಮಜಲು​​
|

Updated on:Mar 02, 2023 | 12:22 PM

Share

ಶ್ರೀನಗರ: ಕಾಶ್ಮೀರಿ ಪಂಡಿತ್ ಸಂಜಯ್ ಶರ್ಮಾ (Sanjay Sharma) ಹತ್ಯೆಯ ನಂತರ ಪುಲ್ವಾಮಾದಲ್ಲಿ ( Pulwama) ಭಾರಿ ಕಟ್ಟೆಚ್ಚರಿಕೆಯನ್ನು ಮಾಡಲಾಗಿದೆ. ಈ ಕಾರಣಕ್ಕೆ ಭದ್ರತಾ ಪಡೆಗಳು ಪುಲ್ವಾಮಾದ ಕೆಲವು ಭಾಗದಲ್ಲಿ ಸೇನಾ ಉಪಕರಣಗಳನ್ನು ಅಳವಡಿಸಲಾಗಿದೆ. ಸೇನೆಯು ಬುಲೆಟ್ ಪ್ರೂಫ್ ವಾಹನಗಳು, ವಾಲ್-ಥ್ರೂ ರಾಡಾರ್‌ಗಳು ಮತ್ತು ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಕಾಶ್ಮೀರದಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆಗೆ ಸಿಆರ್‌ಪಿಎಫ್ ಸೇರ್ಪಡೆಗೊಂಡಿರುವ ಕೆಲವು ಹೊಸ ಗ್ಯಾಜೆಟ್‌ಗಳಾಗಿವೆ, ಇದು ಭಯೋತ್ಪಾದಕರ ವಿರುದ್ಧ ನಿಖರ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯವನ್ನು ಮಾಡುತ್ತದೆ. ಬ್ಯಾಂಕ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಕಾಶ್ಮೀರಿ ಪಂಡಿತ್ ಸಂಜಯ್ ಶರ್ಮಾ ಅವರ ಹತ್ಯೆ ನಂತರದ ಭಾಗವಾಗಿ, ಟಿಆರ್‌ಎಫ್‌ನ ಎರಡು ಉಗ್ರರ ವಿರುದ್ಧ ಪುಲ್ವಾಮಾದಲ್ಲಿ ಮಂಗಳವಾರ ನಡೆದ ಕಾರ್ಯಾಚರಣೆಗಾಗಿ ಈ ಹೈಟೆಕ್ ಉಪಕರಣಗಳನ್ನು ಬಳಸಲಾಗಿದೆ.

ನಿನ್ನೆಯ (ಮಂಗಳವಾರ) ಎನ್‌ಕೌಂಟರ್‌ನಲ್ಲಿ, ನಾವು ಬುಲೆಟ್ ಪ್ರೂಫ್ ಆಗಿರುವ ಕ್ರಿಟಿಕಲ್ ಸಿಚುಯೇಶನ್ ರೆಸ್ಪಾನ್ಸ್ ವೆಹಿಕಲ್ (CSRV) ಅನ್ನು ಬಳಸಿದ್ದೇವೆ ಮತ್ತು ಅದನ್ನು ಮನೆಯೊಳಗೆ ದಾಳಿ ಮಾಡಿದ ಶತ್ರುವನ್ನು ತೊಡೆದು ಹಾಕಲು ಸಾಹಯ ಮಾಡಿದೆ. ಇದು ತುಂಬಾ ಕಡಿಮೆ ತಿರುಗುವ ತ್ರಿಜ್ಯವನ್ನು ಹೊಂದಿದೆ. ಜೊತೆಗೆ ಬುಲೆಟ್ ಪ್ರೂಫ್ ಮತ್ತು ಗೋಡೆಗಳನ್ನು ರ್ಯಾಮ್ ಮಾಡಲು ಬಳಸಬಹುದು. ನಮ್ಮಲ್ಲಿ ಬುಲೆಟ್ ಪ್ರೂಫ್ ಜೆಸಿಬಿಗಳೂ ಇವೆ ಎಂದು ಐಜಿ ಸಿಪಿಆರ್ಎಫ್ (ಕಾಶ್ಮೀರ ಕಾರ್ಯಾಚರಣೆ) ಎಂಎಸ್ ಭಾಟಿಯಾ ಪಿಟಿಐಗೆ ತಿಳಿಸಿದರು.

CSRV ಮತ್ತು JCB ಗಳು ಫೋರ್ಕ್‌ಲಿಫ್ಟ್‌ನಲ್ಲಿ ಬುಲೆಟ್ ಪ್ರೂಫ್ ಕ್ಯಾಬಿನ್ ಅನ್ನು ಹೊಂದಿದ್ದು, ಭದ್ರತಾ ಸಿಬ್ಬಂದಿಗೆ ಅಪಾಯ ಮಾಡದೆ ಎದುರಾಳಿಯ ವಿರುದ್ಧ ಹೋರಾಡುತ್ತದೆ. CSRV ಕ್ಯಾಬಿನ್ 180-ಡಿಗ್ರಿ ರಕ್ಷಣೆಯನ್ನು ಒದಗಿಸುತ್ತದೆ ಮತ್ತು JCB ಗಳು ಬುಲೆಟ್ ಪ್ರೂಫ್ ಕ್ಯಾಬಿನ್‌ನೊಳಗಿನ ಸೈನಿಕರಿಗೆ 360-ಡಿಗ್ರಿ ರಕ್ಷಣೆಯನ್ನು ಹೊಂದಿವೆ.

ಪಡೆಗಳಿಂದ ಡ್ರೋನ್‌ಗಳನ್ನು ಸಹ ಬಳಸಲಾಗುತ್ತಿದೆ ಮತ್ತು ಕಣಿವೆಯಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆಯಲ್ಲಿ ಅವು ಪ್ರಮುಖ ಪಾತ್ರ ವಹಿಸಿವೆ ಎಂದು ಭಾಟಿಯಾ ಹೇಳಿದರು. ಡ್ರೋನ್‌ಗಳನ್ನು ನಮ್ಮ ಬೆಂಗಾವಲು ಪಡೆಗಳ ಚಲನೆಯ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಕಣ್ಗಾವಲುಗಾಗಿ ನಾವು ಹೆಚ್ಚು ಬಳಸುತ್ತೇವೆ. ಅಮರನಾಥ ಯಾತ್ರೆಯ ಸಮಯದಲ್ಲಿಯೂ ಡ್ರೋನ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಕಾರ್ಯಾಚರಣೆಯ ಸಮಯದಲ್ಲಿ ಎನ್‌ಕೌಂಟರ್ ಮಾಡಲು ನಾವು ಡ್ರೋನ್‌ಗಳನ್ನು ಬಳಸುತ್ತೇವೆ.

ಇದನ್ನೂ ಓದಿ: Pulwama Encounter: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ವಾಲ್-ಥ್ರೂ ರಾಡಾರ್‌ಗಳು (WTR) ಮತ್ತು ಹ್ಯಾಂಡ್-ಹೆಲ್ಡ್ ಥರ್ಮಲ್ ಇಮೇಜರ್‌ಗಳು (HHTI) ಸಂಕೀರ್ಣ ಕಾರ್ಯಾಚರಣೆಗಳಲ್ಲಿ ಸಿಬ್ಬಂದಿಗಳಿಗೆ ಅಪಾಯ ಕಡಿಮೆ ಮಾಡುವ ಇನ್ನೊಂದು ಗ್ಯಾಜೆಟ್‌ಗಳಾಗಿವೆ. HHTI ಅನ್ನು ಸಹ ಬಳಸಲಾಗುತ್ತದೆ. ವಿಶೇಷವಾಗಿ ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದಂತೆ ಹೆಚ್ಚು ಪರಿಣಾಮ ಬೀರುವ ಪ್ರತಿಯೊಂದು ಬೆಟಾಲಿಯನ್‌ನಲ್ಲಿ ನಾವು ಅವುಗಳನ್ನು ಹೊಂದಿದ್ದೇವೆ. ಶತ್ರುಗಳು ಕಾಡು ಮತ್ತು ಅಡಗುತಾಣಗಳನ್ನು ಸಮೀಪಿಸುವಾಗ ಈ ತಂತ್ರಗಾರಿಕೆಗಳು ಬಲ ಗುಣಕಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2019 ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಸಿಆರ್‌ಪಿಎಫ್ ಇಡೀ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಸಿಸಿಟಿವಿ ಕಣ್ಗಾವಲು ಮುಂತಾದ ತಂತ್ರಜ್ಞಾನವನ್ನು ಕಣಿವೆಯಲ್ಲಿ ಬಳಸಿದೆ ಎಂದು ಭಾಟಿಯಾ ಹೇಳಿದರು. ನಾವು ಎನ್‌ಎಚ್‌ನಲ್ಲಿ 14 ನಾಕಾಗಳನ್ನು ಸ್ಥಾಪಿಸಿದ್ದೇವೆ, ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಮತ್ತು ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತದೆ ಜೊತೆಗೆ ಅಧಿಕಾರಿಗಳು ಇಲ್ಲಿ ಕಾರ್ಯಚರಣೆಗೆ ನೇಮಕ ಮಾಡಲಾಗುತ್ತದೆ ದು ಅವರು ಹೇಳಿದರು.

Published On - 12:22 pm, Thu, 2 March 23

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್