AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಬಿ-ಜಿ-ರಾಮ್​​ ಜಿ ಜಾರಿ: 125 ದಿನ ಕೆಲಸದ ಗ್ಯಾರಂಟಿ ಜೊತೆ ವೇತನ ಹೆಚ್ಚಳ, ಕರ್ನಾಟಕದಲ್ಲಿ ಎಷ್ಟು?

ಭಾರತ ಸರ್ಕಾರವು ʻವಿಕಸಿತ ಭಾರತ–ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯ ಖಾತರಿ ಯೋಜನೆ ಕಾಯ್ದೆ-2025’ರ (ವಿ-ಬಿ ಜಿ ರಾಮ ಜಿ) ಅಡಿಯಲ್ಲಿ ಪಾವತಿಸಬೇಕಾದ ಪರಿಷ್ಕೃತ ವೇತನ ದರಗಳನ್ನು ಅಧಿಸೂಚನೆ ಹೊರಡಿಸಿದೆ, ಇದು ಇಂದಿನಿಂದ ಅಂದರೆ ಜುಲೈ 1ರಿಂದ ಜಾರಿಗೆ ಬಂದಿದ್ದು, ಹೊಸ ಕಾಯ್ದೆಯಡಿ ಪರಿಷ್ಕೃತ ವೇತನ ದರವನ್ನು ಸಹ ಪ್ರಕಟಿಸಲಾಗಿದೆ. ಹಾಗಾದ್ರೆ, ಕರ್ನಾಟಕ ಸೇರಿದಂತೆ ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ಎನ್ನುವ ಡಿಟೇಲ್ಸ್ ಇಲ್ಲಿದೆ.

ವಿಬಿ-ಜಿ-ರಾಮ್​​ ಜಿ ಜಾರಿ: 125 ದಿನ ಕೆಲಸದ ಗ್ಯಾರಂಟಿ ಜೊತೆ ವೇತನ ಹೆಚ್ಚಳ, ಕರ್ನಾಟಕದಲ್ಲಿ ಎಷ್ಟು?
Vb G Ram G
ರಮೇಶ್ ಬಿ. ಜವಳಗೇರಾ
|

Updated on:Jul 01, 2026 | 4:31 PM

Share

ಮುಖ್ಯಾಂಶಗಳು

  • ಉದ್ಯೋಗ ಖಾತ್ರಿ ಯೋಜನೆಯಾದ ವಿಬಿ ಜಿ ರಾಮ್ ಜಿ ಇಂದಿನಿಂದ ಅಂದರೆ ಜುಲೈ 1 ಜಾರಿಗೆ
  • ‘ವಿಬಿ-ಜಿ ರಾಮ್‌ ಜಿ ಕಾಯ್ದೆ-2025ರ ಅಡಿಯಲ್ಲಿ ಪರಿಷ್ಕೃತ ವೇತನ ದರಗಳನ್ನು ಪ್ರಕಟಿಸಿದ ಸರ್ಕಾರ
  • ದಿನಕ್ಕೆ 300 ರೂ.ಗಿಂತ ಕಡಿಮೆ ಇರದರಂತೆ ಕುಟುಂಬಕ್ಕೆ 125 ದಿನಗಳ ಕೆಲಸದ ಗ್ಯಾರಂಟಿ

ಬೆಂಗಳೂರು, (ಜುಲೈ 01): ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಕಾಯ್ದೆಯ (ನರೇಗಾ) ಬದಲಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತ-ಉದ್ಯೋಗ ಖಾತಿ ಮತ್ತಯ ಜೀವನೋಪಾಯ ಮಿಷನ್ (ಗ್ರಾಮೀಣ) (VB G RAM G)  ಕಾಯ್ದೆಯು ದೇಶದಾದ್ಯಂತ ಇಂದಿನಿಂದಲೇ (ಜುಲೈ 01) ಅನುಷ್ಠಾನಕ್ಕೆ ಬರಲಿದ್ದು, ಹೊಸ ಕಾಯ್ದೆಯ ಪರಿಷ್ಕೃತ ವೇತನ ದರಗಳನ್ನು ಸಹ ಪ್ರಕಟಿಸಲಾಗಿದ್ದು, ದಿನಕ್ಕೆ 300 ರೂ.ಗಿಂತ ಕಡಿಮೆ ಇರದರಂತೆ ಕುಟುಂಬಕ್ಕೆ 125 ದಿನಗಳ ಕೆಲಸದ ಗ್ಯಾರಂಟಿ ನೀಡಲಾಗಿದೆ.  ರಾಷ್ಟ್ರೀಯ ಸರಾಸರಿ ವೇತನ, ನರೇಗಾ ಅಡಿಯಲ್ಲಿ ದಿನಕ್ಕೆ 298.8 ರೂಪಾಯಿಗಳಿಂದ ಈಗ ಬಿಬಿ-ಜಿ-ರಾಮ್​ ಜಿ ಅಡಿಯಲ್ಲಿ ದಿನಕ್ಕೆ 327.4ರೂ.ಗಳಿಗೆ ಏರಿಕೆ ಮಾಡಲಾಗಿದೆ. ಅಂದರೆ ದಿನಕ್ಕೆ ಸರಾಸರಿ 28.6 ರೂ. ಹೆಚ್ಚಳವಾಗಿದೆ ಎಂದು ವೇತನ ದರ ಜಾರಿಗೆ ಬರಲಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ. ಇನ್ನು ಕರ್ನಾಟಕದಲ್ಲಿ ವೇತನ 382 ರೂಪಾಯಿ.

ಪರಿಷ್ಕೃತ ಅಧಿಸೂಚನೆಯು ಹೆಚ್ಚಿನ ವೇತನವನ್ನು ಖಾತರಿಪಡಿಸಿದ್ದು, ಇದು ಪ್ರಾದೇಶಿಕ ಅಸಮಾನತೆಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಕಾರ್ಮಿಕರ ಘನತೆಯನ್ನು ಹೆಚ್ಚಿಸುವ ಮೂಲಕ ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಹೆಗ್ಗುರುತಿನ ಹೆಜ್ಜೆಯಾಗಿದೆ. 300 ರೂ.ಗಳ ಮಧ್ಯಂತರ ಮೂಲ ವೇತನ ದರವನ್ನು ಪರಿಚಯಿಸಿರುವುದು ಅಧಿಸೂಚನೆಯ ಒಂದು ಪ್ರಮುಖ ವೈಶಿಷ್ಟ್ಯವಾಗಿದೆ. ಆ ಮೂಲಕ ಕಾರ್ಯಕ್ರಮದ ಅಡಿಯಲ್ಲಿ ಯಾವುದೇ ಅಧಿಸೂಚಿತ ವೇತನವು ದಿನಕ್ಕೆ 300 ರೂ.ಗಿಂತ ಕಡಿಮೆ ಇರದರಂತೆ ಇದು ಖಚಿತಪಡಿಸುತ್ತದೆ.

ಇದನ್ನೂ ಓದಿ: ಹೊಸ ಉದ್ಯೋಗ ಖಾತ್ರಿ ಸ್ಕೀಮ್; ಮನ್ರೇಗಾ ಬದಲು ವಿ ಬಿ ಜಿ ರಾಮ್ ಜಿ ಇಂದಿನಿಂದ ಅಧಿಕೃತ ಜಾರಿ

ಈ ಬಗ್ಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಹಾಗೂ ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ ನೀಡಿದ್ದು, ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಅಭಿವೃದ್ಧಿಯ ಪ್ರಯೋಜನಗಳು ಪ್ರತಿ ಬಡ ಕುಟುಂಬಕ್ಕೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ. ʻವಿಬಿ-ಜಿ ರಾಮ್ ಜಿ ಕಾಯ್ದೆʼಯ ಪ್ರಾರಂಭವು ಸಮೃದ್ಧ ಹಳ್ಳಿಗಳ ಮೂಲಕ ʻವಿಕಸಿತ ಭಾರತʼವನ್ನು ನಿರ್ಮಿಸುವ ನಿಟ್ಟಿನಲ್ಲಿ ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ಉದ್ಯೋಗ ಖಾತರಿಯನ್ನು 125 ದಿನಗಳಿಗೆ ವಿಸ್ತರಿಸುವುದರ ಜೊತೆಗೆ, ನಾವು ಗ್ರಾಮೀಣ ಕಾರ್ಮಿಕರಿಗೆ ಉತ್ತಮ ವೇತನವನ್ನು ಖಾತ್ರಿಪಡಿಸಿದ್ದೇವೆ ಎಂದು ಹೇಳಿದ್ದಾರೆ.

ಐತಿಹಾಸಿಕವಾಗಿ ವೇತನ ಕಡಿಮೆ ಇರುವ ರಾಜ್ಯಗಳಿಗೆ ಅತ್ಯಧಿಕ ಹೆಚ್ಚಳವನ್ನು ಒದಗಿಸಲಾಗಿದೆ, ಇದರಿಂದಾಗಿ ಹೆಚ್ಚಿನ ಬೆಂಬಲದ ಅಗತ್ಯವಿರುವವರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಈ ಐತಿಹಾಸಿಕ ವೇತನ ಪರಿಷ್ಕರಣೆಯು ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುತ್ತದೆ, ಖರೀದಿ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಗ್ರಾಮೀಣ ಭಾರತದಾದ್ಯಂತ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ವೇಗ ನೀಡುತ್ತದೆ ಎಂದರು.

ದೇಶಾದ್ಯಂತ ಐತಿಹಾಸಿಕ ವೇತನ ಹೆಚ್ಚಳ

ಪರಿಷ್ಕೃತ ವೇತನ ಅಧಿಸೂಚನೆಯು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ವೇತನ ಪ್ರದೇಶಗಳಲ್ಲಿ ವೇತನ ದರಗಳ ಹೆಚ್ಚಳವನ್ನು ಜಾರಿಗೊಳಿಸುತ್ತದೆ. ಇದು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮದ ಅಡಿಯಲ್ಲಿ ಅತ್ಯಂತ ಮಹತ್ವದ ವೇತನ ಪರಿಷ್ಕರಣೆಗಳಲ್ಲಿ ಒಂದಾಗಿದೆ. ಎಲ್ಲಾ 34 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ವೇತನ ಪ್ರದೇಶಗಳಲ್ಲಿ ವೇತನ ದರಗಳನ್ನು ಹೆಚ್ಚಿಸಲಾಗಿದೆ. 21 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಆಡಳಿತ ಘಟಕಗಳನ್ನು ಹೊಸ 300 ರೂ.ಗಳ ಮಧ್ಯಂತರ ಮೂಲ ವೇತನ ದರದ ವ್ಯಾಪ್ತಿಗೆ ತರಲಾಗಿದೆ. ರಾಷ್ಟ್ರೀಯ ಸರಾಸರಿ ಅಧಿಸೂಚಿತ ವೇತನವು ʻಮನರೇಗಾʼ ಅಡಿಯಲ್ಲಿ ದಿನಕ್ಕೆ 298.8 ರೂ.ಇದ್ದದ್ದು ʻವಿಬಿ-ಜಿ ರಾಮ್‌ ಜಿʼ ಅಡಿಯಲ್ಲಿ ದಿನಕ್ಕೆ 327.4 ರೂ.ಗೆ ಏರಿಕೆಯಾಗಿದೆ. ಇದು ದಿನಕ್ಕೆ ಸರಾಸರಿ 28.6 ರೂ. ಹೆಚ್ಚಳವನ್ನು ಸೂಚಿಸುತ್ತದೆ. ದೇಶಾದ್ಯಂತ ಸರಾಸರಿ ಶೇಕಡಾವಾರು ಹೆಚ್ಚಳವು ಶೇಕಡಾ 10 ಕ್ಕಿಂತ ಅಧಿಕವಾಗಿದೆ. 300 ರೂ.ಗಳು ʻವಿಬಿ ಜಿ ರಾಮ್‌ ಜಿʼ ಅಡಿಯಲ್ಲಿ ಈಗ ಗ್ರಾಮೀಣ ವೇತನದ ಹೊಸ ರಾಷ್ಟ್ರೀಯ ಮಾನದಂಡವಾಗಿದೆ.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮದಡಿ ಮೊದಲ ಬಾರಿಗೆ ದಿನಕ್ಕೆ 300 ರೂ.ಗಳ ಮಧ್ಯಂತರ ಮೂಲ ವೇತನ ದರವನ್ನು ಪರಿಚಯಿಸಲಾಗಿದೆ.ಈ ಅಧಿಸೂಚನೆಗೆ ಮೊದಲು, ಹಲವಾರು ರಾಜ್ಯಗಳಲ್ಲಿ ವೇತನ ದರಗಳು 300 ರೂ.ಗಿಂತ ಕಡಿಮೆ ಇದ್ದವು. ಕೆಲವೆಡೆ ಕನಿಷ್ಠ ಅಧಿಸೂಚಿತ ವೇತನವು ದಿನಕ್ಕೆ 241 ರೂ. ಮಾತ್ರ ಇತ್ತು. ಪರಿಷ್ಕೃತ ಅಧಿಸೂಚನೆಯ ಅಡಿಯಲ್ಲಿ, ಅಂತಹ ಪ್ರತಿಯೊಂದು ರಾಜ್ಯವನ್ನು ಹೊಸ ಮಾನದಂಡದ ವ್ಯಾಪ್ತಿಗೆ ತರಲಾಗಿದೆ, ಇದು ಗ್ರಾಮೀಣ ಕಾರ್ಮಿಕರಿಗೆ ಆದಾಯ ಭದ್ರತೆಯನ್ನು ಗಮನಾರ್ಹ ಮಟ್ಟದಲ್ಲಿ ಸುಧಾರಿಸುತ್ತದೆ. ಜೊತೆಗೆ ದೀರ್ಘಕಾಲದ ಪ್ರಾದೇಶಿಕ ವೇತನ ಅಸಮಾನತೆಗಳನ್ನು ಕಡಿಮೆ ಮಾಡುತ್ತದೆ. ಹೊಸ ಮಧ್ಯಂತರ ಮೂಲ ವೇತನ ದರವು 21 ರಾಜ್ಯಗಳು ಮತ್ತು ಆಡಳಿತಾತ್ಮಕ ಘಟಕಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ. ಇದರ ಅತಿದೊಡ್ಡ ಪ್ರಯೋಜನಗಳು ಐತಿಹಾಸಿಕವಾಗಿ ಕಡಿಮೆ-ವೇತನ ಹೊಂದಿದ್ದ ರಾಜ್ಯಗಳನ್ನು ತಲುಪುತ್ತವೆ.

ಐತಿಹಾಸಿಕವಾಗಿ ಕಡಿಮೆ ವೇತನ ದರಗಳನ್ನು ಹೊಂದಿರುವ ರಾಜ್ಯಗಳಿಗೆ ಹೆಚ್ಚಿನ ಲಾಭವನ್ನು ಖಚಿತಪಡಿಸಿಕೊಳ್ಳಲು ಪರಿಷ್ಕೃತ ವೇತನ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಹಾಗಾಗಿ, ಇದು ಸಮಾನತೆ ಮತ್ತು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನ ಕಾರ್ಮಿಕರು ಸುಮಾರು ಶೇಕಡಾ 24.5 ರಷ್ಟು ಹೆಚ್ಚಳವನ್ನು ಪಡೆಯಲಿದ್ದಾರೆ. ಇದೇ ವೇಳೆ, ಉತ್ತರ ಪ್ರದೇಶ, ಉತ್ತರಾಖಂಡ, ಬಿಹಾರ, ಜಾರ್ಖಂಡ್, ಅಸ್ಸಾಂ, ತ್ರಿಪುರಾ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಮಧ್ಯಪ್ರದೇಶ, ಒಡಿಶಾ ಮತ್ತು ಇತರ ಹಲವಾರು ರಾಜ್ಯಗಳು ಗಣನೀಯ ಹೆಚ್ಚಳಕ್ಕೆ ಸಾಕ್ಷಿಯಾಗಲಿವೆ.

ಹೆಚ್ಚಿನ ವೇತನ ದರ ಹೊಂದಿರುವ ರಾಜ್ಯಗಳೂ ಸಹ ವೇತನ ಏರಿಕೆಯ ಪ್ರಯೊಜನ ಪಡೆಯಲಿವೆ. ಈಗಾಗಲೇ ಮಧ್ಯಂತರ ಮೂಲ ವೇತನಕ್ಕಿಂತ ಹೆಚ್ಚಿನ ವೇತನ ದರಗಳನ್ನು ಹೊಂದಿರುವ ರಾಜ್ಯಗಳು ಸಹ ನಿಗದಿತ ವಿಧಾನದ ಆಧಾರದ ಮೇಲೆ ವೇತನ ಪರಿಷ್ಕರಣೆಗಳನ್ನು ಪಡೆಯಲಿವೆ. ಅಧಿಸೂಚನೆಯ ನಂತರ ಹರಿಯಾಣ (409 ರೂ.), ಗೋವಾ (406 ರೂ.), ಕೇರಳ (401 ರೂ.) ಮತ್ತು ಸಿಕ್ಕಿಂ (ಭೌಗೋಳಿಕವಾಗಿ ಎತ್ತರದಲ್ಲಿರುವ ಗ್ರಾಮ ಪಂಚಾಯಿತಿಗಳು) (450 ರೂ.) ಈಗ ದಿನಕ್ಕೆ 400 ರೂ.ಗಿಂತಲೂ ಅಧಿಕ ವೇತನ ದರಗಳನ್ನು ಸೂಚಿಸಿವೆ.

ಪಾರದರ್ಶಕ ಮತ್ತು ವೈಜ್ಞಾನಿಕ ವೇತನ ನಿರ್ಣಯ

ಪಾರದರ್ಶಕ ಮತ್ತು ವಸ್ತುನಿಷ್ಠ ವಿಧಾನದ ಆಧಾರದ ಮೇಲೆ ʻವಿಬಿ-ಜಿ ರಾಮ್‌ ಜಿ ಕಾಯ್ದೆ-2025ʼರ ನಿಬಂಧನೆಗಳ ಅಡಿಯಲ್ಲಿ ಪರಿಷ್ಕೃತ ವೇತನವನ್ನು ಅಧಿಸೂಚಿಸಲಾಗಿದೆ. ಗ್ರಾಮೀಣ ವೇತನ ದರಗಳಲ್ಲಿನ ಐತಿಹಾಸಿಕ ಅಸಮಾನತೆಗಳನ್ನು ಕಡಿಮೆ ಮಾಡುವುದರ ಜೊತೆಗೆ ನ್ಯಾಯಯುತ ವೇತನವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಅಧಿಸೂಚನೆಯು ಹೊಸದಾಗಿ ಪರಿಚಯಿಸಲಾದ ಮಧ್ಯಂತರ ಮೂಲ ವೇತನ ದರವನ್ನು ವಾರ್ಷಿಕ ಸೂಚ್ಯಂಕದೊಂದಿಗೆ ಸಂಯೋಜಿಸುತ್ತದೆ.

ವಿಕಸಿತ ಭಾರತ ಅಡಿಯಲ್ಲಿ ಗ್ರಾಮೀಣ ಸಮೃದ್ಧಿಯ ಬಲವರ್ಧನೆ

ಪರಿಷ್ಕೃತ ವೇತನ ಅಧಿಸೂಚನೆಯು ʻವಿಬಿ-ಜಿ ರಾಮ್‌ ಜಿ ಕಾಯ್ದೆ-2025ʼರ ಪರಿವರ್ತನಾತ್ಮಕ ನಿಬಂಧನೆಗಳಿಗೆ ಪೂರಕವಾಗಿದೆ. ಇದು ಪ್ರತಿ ಅರ್ಹ ಗ್ರಾಮೀಣ ಕುಟುಂಬಕ್ಕೆ 125 ದಿನಗಳ ವೇತನಸಹಿತ ಉದ್ಯೋಗದ ಖಾತರಿ ಒದಗಿಸುತ್ತದೆ. ಒಟ್ಟಾರೆಯಾಗಿ, ವಿಸ್ತೃತ ಉದ್ಯೋಗ ಖಾತರಿ ಮತ್ತು ಪರಿಷ್ಕೃತ ವೇತನ ದರಗಳು ಗ್ರಾಮೀಣ ಆದಾಯವನ್ನು ಬಲಪಡಿಸುತ್ತವೆ, ಖರೀದಿ ಶಕ್ತಿಯನ್ನು ಸುಧಾರಿಸುತ್ತವೆ ಹಾಗೂ ದೀರ್ಘ ಬಾಳಿಕೆಯ ಗ್ರಾಮೀಣ ಸ್ವತ್ತುಗಳನ್ನು ಸೃಷ್ಟಿಸುತ್ತವೆ, ಜೊತೆಗೆ, ಎಲ್ಲರನ್ನೂ ಒಳಗೊಂಡ ಮತ್ತು ಸುಸ್ಥಿರ ಗ್ರಾಮೀಣಾಭಿವೃದ್ಧಿಗೆ ಕೊಡುಗೆ ನೀಡುತ್ತವೆ ಎಂದು ನಿರೀಕ್ಷಿಸಲಾಗಿದೆ.

ಕಾಯ್ದೆಯ ಪ್ರಾರಂಭ ಮತ್ತು ಪರಿಷ್ಕೃತ ವೇತನ ದರಗಳ ಅಧಿಸೂಚನೆಯು ʻಗರೀಬ್ ಕಲ್ಯಾಣ್ʼ, ʻಅಂತ್ಯೋದಯʼ ಮತ್ತು ʻವಿಕಸಿತ ಭಾರತ@2047ʼದೃಷ್ಟಿಕೋನಕ್ಕೆ ಸರ್ಕಾರದ ಬದ್ಧತೆಯಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲನ್ನು ಸೂಚಿಸುತ್ತದೆ. ಇದು ಭಾರತದ ಬೆಳವಣಿಗೆಯ ಪ್ರಯೋಜನಗಳು ಪ್ರತಿ ಹಳ್ಳಿ ಮತ್ತು ಪ್ರತಿ ಗ್ರಾಮೀಣ ಕುಟುಂಬವನ್ನು ತಲುಪುವುದನ್ನು ಖಚಿತಪಡಿಸುತ್ತದೆ. ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:06 pm, Wed, 1 July 26

Follow Us
ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ​​: ವಿಡಿಯೋ ವೈರಲ್
ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ​​: ವಿಡಿಯೋ ವೈರಲ್
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು
ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ!
ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ!
ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ
ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ
ವೈದ್ಯಕೀಯ ಪರೀಕ್ಷೆಗೆ ಕರೆತಂದ ವೇಳೆ ಶಂಕಿತ ಉಗ್ರ ಸುಹೇಲ್ ಉದ್ದಟತನ
ವೈದ್ಯಕೀಯ ಪರೀಕ್ಷೆಗೆ ಕರೆತಂದ ವೇಳೆ ಶಂಕಿತ ಉಗ್ರ ಸುಹೇಲ್ ಉದ್ದಟತನ
ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರ ಗಮನಕ್ಕೆ ಬಿಗ್ ಅಪ್​ಡೇಟ್
ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರ ಗಮನಕ್ಕೆ ಬಿಗ್ ಅಪ್​ಡೇಟ್
ಬಸ್ ಪ್ರಯಾಣ ದರ ಹೆಚ್ಚಳದ ಬಗ್ಗೆ ಸಚಿವ ಭೈರತಿ ಸುರೇಶ್ ಹೇಳಿದ್ದೇನು?
ಬಸ್ ಪ್ರಯಾಣ ದರ ಹೆಚ್ಚಳದ ಬಗ್ಗೆ ಸಚಿವ ಭೈರತಿ ಸುರೇಶ್ ಹೇಳಿದ್ದೇನು?
ಮೆಡಿಕಲ್ ಗಾರ್ಬೇಜ್ ತಾಣವಾಗ್ತಿದೆಯಾ ನೆಲಮಂಗಲ?
ಮೆಡಿಕಲ್ ಗಾರ್ಬೇಜ್ ತಾಣವಾಗ್ತಿದೆಯಾ ನೆಲಮಂಗಲ?
ಫುಟ್​ಪಾತ್ ತೆರವು ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳಿಂದ ತೀವ್ರ ಆಕ್ರೋಶ
ಫುಟ್​ಪಾತ್ ತೆರವು ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳಿಂದ ತೀವ್ರ ಆಕ್ರೋಶ
ನಿರ್ಮಾಪಕಿ ಬಳಿಕ ಈಗ ಹಿನ್ನೆಲೆ ಗಾಯಕಿಯಾದ ಗಣೇಶ್ ಪತ್ನಿ ಶಿಲ್ಪಾ
ನಿರ್ಮಾಪಕಿ ಬಳಿಕ ಈಗ ಹಿನ್ನೆಲೆ ಗಾಯಕಿಯಾದ ಗಣೇಶ್ ಪತ್ನಿ ಶಿಲ್ಪಾ