AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರಿನ ಡಿಕ್ಕಿಯ ಹೊರಗೆ ನೇತಾಡುತ್ತಿತ್ತು ಕೈ, ಬೈಕ್ ಸವಾರನೊಬ್ಬ ತಡೆದು ನಿಲ್ಲಿಸಿ ನೋಡಿದಾಗ ಕಂಡಿದ್ದೇನು?

ಕಾರಿನ ಡಿಕ್ಕಿಯ ಹೊರಗೆ ಕೈಯೊಂದು ನೇತಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವೈರಲ್ ಆಗಿದೆ. ಈ ಘಟನೆ ಮುಂಬೈನಲ್ಲಿ ನಡೆದಿದೆ. ವಾಶಿ, ಸನ್ಪದಾ ರೈಲು ನಿಲ್ದಾಣದ ನಡುವೆ ಹೋಗುತ್ತಿದ್ದ ಕಾರೊಂದರ ಡಿಕ್ಕಿಯಿಂದ ಕೈಯೊಂದು ನೇತಾಡುತ್ತಿತ್ತು, ಈ ವಿಡಿಯೋವನ್ನು ಅಲ್ಲಿಯೇ ಹಿಂದೆ ಹೋಗುತ್ತಿದ್ದ ಬೈಕ್ ಸವಾರರೊಬ್ಬರು ಚಿತ್ರೀಕರಿಸಿದ್ದರು.

ಕಾರಿನ ಡಿಕ್ಕಿಯ ಹೊರಗೆ ನೇತಾಡುತ್ತಿತ್ತು ಕೈ, ಬೈಕ್ ಸವಾರನೊಬ್ಬ ತಡೆದು ನಿಲ್ಲಿಸಿ ನೋಡಿದಾಗ ಕಂಡಿದ್ದೇನು?
ಕಾರು
Follow us
ನಯನಾ ರಾಜೀವ್
|

Updated on: Apr 15, 2025 | 2:38 PM

ಮುಂಬೈ, ಏಪ್ರಿಲ್ 15: ಕಾರಿನ ಡಿಕ್ಕಿಯ ಹೊರಗೆ ಕೈಯೊಂದು ನೇತಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವೈರಲ್ ಆಗಿದೆ. ಈ ಘಟನೆ ಮುಂಬೈನಲ್ಲಿ ನಡೆದಿದೆ. ವಾಶಿ, ಸನ್ಪದಾ ರೈಲು ನಿಲ್ದಾಣದ ನಡುವೆ ಹೋಗುತ್ತಿದ್ದ ಕಾರೊಂದರ ಡಿಕ್ಕಿಯಿಂದ ಕೈಯೊಂದು ನೇತಾಡುತ್ತಿತ್ತು, ಈ ವಿಡಿಯೋವನ್ನು ಅಲ್ಲಿಯೇ ಹಿಂದೆ ಹೋಗುತ್ತಿದ್ದ ಬೈಕ್ ಸವಾರರೊಬ್ಬರು ಚಿತ್ರೀಕರಿಸಿದ್ದರು.

ಈ ವಿಡಿಯೋ ಪೊಲೀಸರಿಗೆ ತಲುಪಿದ ನಂತರ ನವಿ ಮುಂಬೈ ಪೊಲೀಸರು ಮತ್ತು ಅಪರಾಧ ವಿಭಾಗದ ತಂಡವು ಕಾರ್ಯಪ್ರವೃತ್ತರಾಗಿ ವಾಹನವನ್ನು ಪತ್ತೆಹಚ್ಚಲು ಪ್ರಾರಂಭಿಸಿತು. ಸೋಮವಾರ ಸಂಜೆ ಸುಮಾರು 6.45 ರ ಸುಮಾರಿಗೆ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ.

ಇದನ್ನೂ ಓದಿ
Image
ತನ್ನ ಅಂತಿಮ ವಿಧಿವಿಧಾನವನ್ನು ತಾನೇ ಮಾಡಿದ ಮಹಿಳೆ
Image
ಬೆಡ್​ರೂಮಿನ ಕಿಟಕಿಯಲ್ಲಿ ಇಣುಕಿ ನೋಡಿ, ಪತ್ರವಿಟ್ಟು ಹೋದ ಅಪರಿಚಿತ
Image
ಹಕ್ಕಿಗೆ ಆಹಾರ ನೀಡಿ ಸಿವು ನೀಗಿಸುತ್ತಿರುವ ಪುಟಾಣಿ
Image
ಸಿಂಹದೊಂದಿಗೆ ಸೆಲ್ಫಿ ಕ್ಲಿಕಿಸಲು ಹೋದ ವ್ಯಕ್ತಿ, ಮುಂದೇನಾಯ್ತು ನೋಡಿ

ರಾತ್ರಿ 8.30 ರ ಸುಮಾರಿಗೆ, ಪೊಲೀಸರು ಘಾಟ್‌ಕೋಪರ್ ಬಳಿ ಕಾರನ್ನು ಪತ್ತೆಹಚ್ಚಿದಾಗ ಸುಮಾರು ಮೂವರು ಹುಡುಗರು ತಮ್ಮ ಲ್ಯಾಪ್‌ಟಾಪ್ ಪ್ರಚಾರಕ್ಕಾಗಿ ರೀಲ್ಸ್​ ತಯಾರಿಸುತ್ತಿರುವುದು ಕಂಡುಬಂದಿದೆ. ಆ ಹುಡುಗರು ಮುಂಬೈನವರಾಗಿದ್ದು, ಮದುವೆಗೆಂದು ನವಿ ಮುಂಬೈಗೆ ಬಂದಿದ್ದರು. ನಾವು ಅವರನ್ನು ಬಂಧಿಸಿ ಸತ್ಯಗಳನ್ನು ಪರಿಶೀಲಿಸಿದ್ದೇವೆ ಮತ್ತು ಇದರಲ್ಲಿ ಯಾವುದೇ ಅನುಮಾನಾಸ್ಪದ ಅಂಶಗಳಿಲ್ಲ ಎಂದು ಸಹಾಯಕ ಪೊಲೀಸ್ ಆಯುಕ್ತ (ಅಪರಾಧ ಶಾಖೆ) ಅಜಯ್ ಲ್ಯಾಂಡ್ಗೆ ಹೇಳಿದ್ದಾರೆ.

ಪೊಲೀಸರು ತಾವು ಸೆರೆಹಿಡಿದ ಎಲ್ಲಾ ವೀಡಿಯೊಗಳನ್ನು ಪಡೆದುಕೊಂಡು ಪರಿಶೀಲಿಸಿದರು. ಬೈಕರ್ ಕಾರನ್ನು ನಿಲ್ಲಿಸಿ ಡಿಕ್ಕಿ ತೆರೆಯಲು ಕೇಳುವ ಮೊದಲು ಕೈ ಹೊರಚಾಚಿರುವುದನ್ನು ತೋರಿಸುವುದು ರೀಲ್ಸ್​ನ ಮುಖ್ಯ ಉದ್ದೇಶ. ಬಳಿಕ ಡಿಕ್ಕಿ ಓಪನ್ ಮಾಡಿದಾಗ ಆ ಹುಡುಗ ಭಯವಾಯಿತೇ ನಾನು ಸತ್ತಿಲ್ಲ ನಾನು ಜೀವಂತವಾಗಿದ್ದೇನೆ.

ಮತ್ತಷ್ಟು ಓದಿ: ಪ್ರೇಯಸಿಯನ್ನು ಸೂಟ್ ಕೇಸ್ ನಲ್ಲಿ ತುಂಬಿಕೊಂಡು ಹಾಸ್ಟೆಲ್​​ಗೆ ಬಂದ ವಿದ್ಯಾರ್ಥಿ, ಮುಂದೇನಾಯ್ತು ನೋಡಿ

ಇಷ್ಟೆಲ್ಲಾ ನಡೆದ ಬಳಿಕ ಬೈಕರ್​ ಬಳಿ ನಾವು ಲ್ಯಾಪ್​ಟಾಪ್​ ಪ್ರೊಮೋಷನ್ ಮಾಡುತ್ತಿದ್ದೇವೆ, ನಮ್ಮ ಲ್ಯಾಪ್​ಟಾಪ್​ನಲ್ಲಿರುವ ಅದ್ಭುತ ಆಫರ್​ಗಳನ್ನು ಕೇಳಿ ಎಂದು ಹೇಳುತ್ತಾನೆ. ಯಾವುದೇ ಎಫ್​ಐಆರ್​ ದಾಖಲಾಗಿಲ್ಲ, ಪೊಲೀಸರು ಹುಡುಗರ ವಿಚಾರಣೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ