Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಟ್ಸ್​ಆ್ಯಪ್ ಹೊಸ ನೀತಿಯಿಂದ ಸಂವಿಧಾನದ ಆಶಯ ಉಲ್ಲಂಘನೆ: ದೆಹಲಿ ಹೈಕೋರ್ಟ್​ಗೆ ಅರ್ಜಿ

‘ವಾಟ್ಸ್​ಆ್ಯಪ್​ನ ಹೊಸ ಗೌಪ್ಯತಾ ನೀತಿ (ಪ್ರೈವೆಸಿ ಪಾಲಿಸಿ) ಇಷ್ಟವಾಗದಿದ್ರೆ ಆ್ಯಪ್​ನಿಂದ ದೂರವಿರಿ. ಹೊಸ ನೀತಿಗೆ ಸಮ್ಮತಿಸುವುದು ಅಥವಾ ಬಿಡುವುದು ನಿಮ್ಮ ಸ್ವಂತ ನಿರ್ಧಾರ. ನಿಮ್ಮ ಮೇಲೆ ಯಾರೂ ಅದನ್ನು ಹೇರುತ್ತಿಲ್ಲ. ಇಷ್ಟವಾಗದಿದ್ದರೆ ಆ್ಯಪ್​ ಬಳಕೆ ನಿಲ್ಲಿಸಿ, ಮತ್ತೊಂದು ಆ್ಯಪ್ ಬಳಸಲು ಶುರು ಮಾಡಿ’ ಎಂದು ನ್ಯಾಯಾಧೀಶರು ಸಲಹೆ ಮಾಡಿದರು.

ವಾಟ್ಸ್​ಆ್ಯಪ್ ಹೊಸ ನೀತಿಯಿಂದ ಸಂವಿಧಾನದ ಆಶಯ ಉಲ್ಲಂಘನೆ: ದೆಹಲಿ ಹೈಕೋರ್ಟ್​ಗೆ ಅರ್ಜಿ
ಪ್ರಾತಿನಿಧಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Jan 18, 2021 | 5:56 PM

ದೆಹಲಿ: ವಾಟ್ಸ್​ಆ್ಯಪ್ ಈಚೆಗೆ ಪ್ರಕಟಿಸಿರುವ ಹೊಸ ಗೌಪ್ಯತಾ ನೀತಿಯು (ಪ್ರೈವೆಸಿ ಪಾಲಿಸಿ) ಭಾರತೀಯರಿಗೆ ನಮ್ಮ ಸಂವಿಧಾನ ನೀಡಿರುವ ಗೌಪ್ಯತೆಯ ಹಕ್ಕನ್ನು (21ನೇ ವಿಧಿ) ಉಲ್ಲಂಘಿಸುತ್ತದೆ. ಕೆಲ ಐರೋಪ್ಯ ದೇಶಗಳಲ್ಲಿ ಹೊಸ ಗೌಪ್ಯತಾ ನೀತಿಗೆ ಸಮ್ಮತಿಸದೇ ಆ್ಯಪ್ ಬಳಸಬಹುದಾದ ಅವಕಾಶವನ್ನೂ ವಾಟ್ಸ್​ಆ್ಯಪ್ ನೀಡಿದೆ. ಭಾರತೀಯರಿಗೆ ಈ ಆಯ್ಕೆ ನೀಡಿಲ್ಲ ಎಂದು ದೂರಿ ದೆಹಲಿ ಹೈಕೋರ್ಟ್​ಗೆ ವಕೀಲರೊಬ್ಬರು ಅರ್ಜಿ ಸಲ್ಲಿಸಿ, ವಿಚಾರಣೆ ನಡೆಸಲು ವಿನಂತಿಸಿದ್ದಾರೆ.

ಸರ್ಕಾರದ ನಿಯಂತ್ರಣವೇ ಇಲ್ಲದ ರೀತಿಯಲ್ಲಿ ಬಳಕೆದಾರರ ಆನ್​ಲೈನ್ ಚಟುವಟಿಕೆಗಳನ್ನು ಗಮನಿಸಲು, ಸಂಗ್ರಹಿಸಲು ವಾಟ್ಸ್​ಆ್ಯಪ್​ನ ಹೊಸ ಪ್ರೈವೆಸಿ ನೀತಿ ಅವಕಾಶ ನೀಡುತ್ತದೆ. ಹೊಸ ನೀತಿಯನ್ನು ಬಳಕೆದಾರರು ಒಪ್ಪಿಕೊಳ್ಳಬಹುದು ಅಥವಾ ಆ್ಯಪ್​ನಿಂದ ಹೊರಗೆ ಹೋಗಬಹುದು ಎಂಬ ಎರಡೇ ಆಯ್ಕೆಗಳಿವೆ. ಫೇಸ್​ಬುಕ್ ಮಾಲೀಕತ್ವದ ಅಥವಾ ಇತರ ಯಾವುದೇ ಆ್ಯಪ್​ಗಳೊಂದಿಗೆ ಮಾಹಿತಿ ಹಂಚಿಕೊಳ್ಳುವುದಿಲ್ಲ ಎಂದು ಘೋಷಿಸಿ, ಆ್ಯಪ್ ಬಳಸಲು ಅವಕಾಶ ನೀಡುವುದಿಲ್ಲ ಎಂದು ಅರ್ಜಿದಾರರು ದೂರಿದರು.

ವಾಟ್ಸ್​ಆ್ಯಪ್ ಮತ್ತು ಫೇಸ್​ಬುಕ್ ಪರವಾಗಿ ಖ್ಯಾತ ವಕೀಲರಾದ ಕಪಿಲ್ ಸಿಬಲ್ ಮತ್ತು ಮುಕುಲ್ ರೋಹಟಗಿ ವಾದ ಮಂಡಿಸಿದರು. ಈ ಅರ್ಜಿಯಲ್ಲಿ ಪ್ರಸ್ತಾಪವಾಗಿರುವ ಹಲವು ವಿಚಾರಗಳಿಗೆ ಯಾವುದೇ ಆಧಾರವಿಲ್ಲ. ಈ ಬಗ್ಗೆ ಹೆಚ್ಚು ಗಮನ ನೀಡುವುದು ಅಗತ್ಯವಿಲ್ಲ ಎಂದು ಹೇಳಿದರು.

ಕುಟುಂಬದ ಸದಸ್ಯರು ಮತ್ತು ಗೆಳೆಯರ ನಡುವಿನ ಖಾಸಗಿ ಸಂಭಾಷಣೆ ಇನ್ನು ಮುಂದೆಯೂ ಗೂಢಲಿಪಿಯಲ್ಲಿ (ಎನ್​ಕ್ರಿಪ್ಷನ್) ಗೌಪ್ಯವಾಗಿಯೇ ಇರುತ್ತದೆ. ಇಂಥ ಸಂಭಾಷಣೆಯನ್ನು ಸಂಗ್ರಹಿಸಿಡಲು ವಾಟ್ಸ್​​ಆ್ಯಪ್​ಗೆ ಸಾಧ್ಯವಾಗುವುದೂ ಇಲ್ಲ. ಹೊಸ ನೀತಿ ಜಾರಿಗೆ ಬಂದರೂ ಈ ವ್ಯವಸ್ಥೆ ಬದಲಾಗುವುದಿಲ್ಲ. ವಾಟ್ಸ್​ಆ್ಯಪ್​ನ ಬ್ಯುಸಿನೆಸ್​ ಚಾಟ್​ಗಳ ಮೇಲೆಯೂ ಹೊಸ ನೀತಿ​ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು.

ವಾದ ಆಲಿಸಿದ ನಂತರ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸಂಜೀವ್ ಸಚ್​ದೇವ್​, ‘ಬಹುತೇಕ ಮೊಬೈಲ್ ಆ್ಯಪ್​ಗಳನ್ನು ಇನ್​ಸ್ಟಾಲ್ ಮಾಡಿಕೊಳ್ಳುವಾಗ ಅವುಗಳು ವಿಧಿಸುವ ಷರತ್ತುಗಳನ್ನು ಓದಿದರೆ ನೀವು ಯಾವುದಕ್ಕೆಲ್ಲಾ ಸಮ್ಮತಿಸುತ್ತಿದ್ದೀರಿ ಎಂದು ಆಶ್ಚರ್ಯವಾಗುತ್ತೆ. ಗೂಗಲ್​ ಮ್ಯಾಪ್ಸ್​ ಸಹ ನಿಮ್ಮ ಎಲ್ಲ ಡೇಟಾ ದಾಖಲಿಸಿ, ಸಂಗ್ರಹಿಸಿಡುತ್ತದೆ. ವಾಟ್ಸ್​ಆ್ಯಪ್​ನ ಹೊಸ ಗೌಪ್ಯತಾ ನೀತಿ (ಪ್ರೈವೆಸಿ ಪಾಲಿಸಿ) ಇಷ್ಟವಾಗದಿದ್ರೆ ಆ್ಯಪ್​ನಿಂದ ದೂರವಿರಿ. ಹೊಸ ನೀತಿಗೆ ಸಮ್ಮತಿಸುವುದು ಅಥವಾ ಬಿಡುವುದು ನಿಮ್ಮ ಸ್ವಂತ ನಿರ್ಧಾರ. ನಿಮ್ಮ ಮೇಲೆ ಯಾರೂ ಅದನ್ನು ಹೇರುತ್ತಿಲ್ಲ. ಇಷ್ಟವಾಗದಿದ್ದರೆ ಆ್ಯಪ್​ ಬಳಕೆ ನಿಲ್ಲಿಸಿ, ಮತ್ತೊಂದು ಆ್ಯಪ್ ಬಳಸಲು ಶುರು ಮಾಡಿ’ ಎಂದು ಸಲಹೆ ಮಾಡಿದರು.

ತನ್ನ ಬಳಕೆದಾರರಿಂದ ಸಂಗ್ರಹಿಸಿದ ಯಾವೆಲ್ಲಾ ಅಥವಾ ಎಂತೆಂಥ ಮಾಹಿತಿಯನ್ನು ವಾಟ್ಸ್​ಆ್ಯಪ್​ ಸೋರಿಕೆ ಮಾಡಬಹುದು ಎಂದು ಅರ್ಜಿದಾರರು ಹೇಳುತ್ತಿದ್ದಾರೆ ಎಂಬುದೇ ನ್ಯಾಯಾಲಯಕ್ಕೆ ಅರ್ಥವಾಗುತ್ತಿಲ್ಲ. ಈ ವಿಚಾರದ ಬಗ್ಗೆ ವಿಸ್ತೃತ ವಿಚಾರಣೆಯ ಅಗತ್ಯವಿದೆ. ಹೀಗಾಗಿ ವಿಚಾರಣೆಯನ್ನು ಜನವರಿ 25ಕ್ಕೆ ಮುಂದೂಡುತ್ತಿದ್ದೇವೆ ಎಂದು ನ್ಯಾಯಾಧೀಶರು ಹೇಳಿದರು. ಈ ಪ್ರಕರಣದ ಬಗ್ಗೆ ಮತ್ತಷ್ಟು ವಿಶ್ಲೇಷಣೆಯ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಪರ ವಕೀಲರೂ ಅಭಿಪ್ರಾಯಪಟ್ಟರು.

ವಾಟ್ಸ್​ಆ್ಯಪ್​ನ ಹೊಸ ಗೌಪ್ಯತಾ ನೀತಿಯು ಫೆಬ್ರುವರಿಯಿಂದ ಜಾರಿಯಾಗಬೇಕಿತ್ತು. ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಇದರ ಜಾರಿಯನ್ನು ಮೇ ತಿಂಗಳಿಗೆ ಮುಂದೂಡಲಾಗಿದೆ.

ವಿರೋಧಕ್ಕೆ ಬೆಚ್ಚಿತಾ ವಾಟ್ಸ್​ಆ್ಯಪ್​? ಹೊಸ ಪ್ರೈವೆಸಿ ಪಾಲಿಸಿ ಇನ್ನೂ ವಿಳಂಬ

ನಮ್ಮನ್ನು ನಂಬಿ ಪ್ಲೀಸ್.. ಫೇಸ್​ಬುಕ್​ನೊಂದಿಗೆ ನಿಮ್ಮ ಡೇಟಾ ಹಂಚಿಕೊಳ್ಳುವುದಿಲ್ಲ; ಸ್ಟೇಟಸ್​ ಮೂಲಕ ಅಂಗಲಾಚಿದ ವಾಟ್ಸ್​ಆ್ಯಪ್​

ವಾಟ್ಸ್​ಆ್ಯಪ್ ಇಲ್ಲದೆ ಬದುಕಬಹುದೇ..?: ಇದನ್ನು ಓದಿ ನೀವೇ ಕಂಡುಕೊಳ್ಳಿ ಉತ್ತರ

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್