ಅಲ್ಲು ಅರ್ಜುನ್ ತಾತ ಅಲ್ಲು ರಾಮಲಿಂಗಯ್ಯ ಕಂಚಿನ ಪ್ರತಿಮೆ ಅನಾವರಣ ಮಾಡಿದ ಕುಟುಂಬಸ್ಥರು
Allu Ramalingaiah: ಅಲ್ಲು ಅರ್ಜುನ್ ತಾತ ಪದ್ಮಶ್ರೀ ಅಲ್ಲು ರಾಮಲಿಂಗಯ್ಯ ಅವರ 101ನೇ ಜಯಂತಿ ಅಂಗವಾಗಿ ಅವರ ಅವರ ಕುಟುಂಬಸ್ಥರು ಕಂಚಿನ ಪ್ರತಿಮೆಯನ್ನು ನಿರ್ಮಿಸಿ ಅನಾವರಣ ಮಾಡಿದ್ದಾರೆ.
Updated on:Oct 05, 2023 | 4:28 PM

ಅಲ್ಲು ಅರ್ಜುನ್ ಅಲ್ಲು ಕುಟುಂಬದ ಮೂರನೇ ತಲೆಮಾರಿನ ಸ್ಟಾರ್ ನಟ. ಅವರ ತಾತ ಅಲ್ಲು ರಾಮಲಿಂಗಯ್ಯ ಅವರ ವಂಶದ ಮೊದಲ ಸ್ಟಾರ್.

ತೆಲುಗಿನ ದಂತಕತೆ ಅಲ್ಲು ರಾಮಲಿಂಗಯ್ಯ, ತೆಲುಗಿನ ಬಹುತೇಕ ಮೊಟ್ಟ ಮೊದಲ ಅತ್ಯಂತ ಜನಪ್ರಿಯ ಕಮಿಡಿಯನ್.

ಅಲ್ಲು ಅರ್ಜುನ್ ತಂದೆ, ನಿರ್ಮಾಪಕ ಅಲ್ಲು ಅರವಿಂದ್, ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್, ಅಲ್ಲು ಅರ್ಜುನ್ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಂಚಿನ ಪ್ರತಿಮೆ ಉದ್ಘಾಟನೆ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ ಪತ್ನಿ ಸುರೇಖ ಸಹ ಭಾಗಿಯಾಗಿದ್ದರು. ಸುರೇಖ, ಅಲ್ಲು ರಾಮಲಿಂಗಯ್ಯ ಅವರ ಪುತ್ರಿ.

ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಭಾಗಿಯಾಗಿರಲಿಲ್ಲವಾದರೂ ಅವರ ಮಕ್ಕಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಅಲ್ಲು ರಾಮಲಿಂಗಯ್ಯ ಅವರ 101ನೇ ಜಯಂತಿ ಅಂಗವಾಗಿ ಇತ್ತೀಚೆಗಷ್ಟೆ ಅವರ ಕುಟುಂಬಸ್ಥರು ರಾಮಲಿಂಗಯ್ಯ ಅವರ ಕಂಚಿನ ಪ್ರತಿಮೆ ಸ್ಥಾಪಿಸಿ ಅನಾವರಣ ಮಾಡಿದ್ದಾರೆ.

ಅಲ್ಲು ರಾಮಲಿಂಗಯ್ಯ ಸುಮಾರು 1000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಸಿನಿಮಾಗಳ ನಿರ್ಮಾಣವನ್ನೂ ಮಾಡಿದ್ದಾರೆ.
Published On - 4:26 pm, Thu, 5 October 23

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More




