AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಳೆ ಇಳುವರಿಗೆ ಹೊಡೆತ ಬಿದ್ರು ಬಂಪರ್ ದರ: ಏಲಕ್ಕಿ ಬಾಳೆ ಕೆಜಿಗೆ ಎಷ್ಟು ಗೊತ್ತಾ?

ದಾವಣಗೆರೆ ಜಿಲ್ಲೆ ಸೇರಿದಂತೆ ಬಹುತೇಕ ಕಡೆ ಹೆಚ್ಚಾಗಿ ಬೆಳೆಯುವುದು ಏಲಕ್ಕಿ ಬಾಳೆ. ಪಚ್ಚ ಬಾಳೆ ದೂರದ ಆಂಧ್ರಪ್ರದೇಶ, ತೆಲಂಗಾಣದಿಂದ ಬರುತ್ತದೆ. ಮೇಲಾಗಿ ಈಗ ಸಾಲು ಸಾಲು ಹಬ್ಬ, ಪೂಜೆಗಳಿವೆ. ಪೂಜೆಗೆ ಬಾಳೆ ಹಣ್ಣು ಬೇಕೇಬೇಕು. ಮಧ್ಯಮ ವರ್ಗದ ಜನ ಏಲಕ್ಕಿ ಬಾಳೆ ದರ ಕೇಳಿ ವಾಪಸ್ಸು ಹೋಗುತ್ತಿದ್ದಾರೆ. ಇನ್ನೂ ಕೆಲವರು ಕಡಿಮೆ ದರ ಪಚ್ಚ ಬಾಳೆ ಹಣ್ಣು ಖರೀದಿಸುತ್ತಿರುವುದು ಮಾರುಕಟ್ಟೆಗೆಯಲ್ಲಿ ಕಂಡುಬಂದಿದೆ. 

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Aug 30, 2024 | 5:18 PM

Share
ಇಳುವರಿ ಕುಸಿದಿದೆ, ಆದರೂ ಬಾಳೆ ಹಣ್ಣಿಗೆ ಬಂಪರ್ ಬೆಲೆ ಬಂದಿದೆ. ಏಲಕ್ಕಿ ಬಾಳೆ ಒಂದು ಕೆಜಿಗೆ 130 ರೂ. ಹಾಗೂ ಪಚ್ಚಬಾಳೆ ಕೆಜಿಗೆ 80 ರೂ. ಇದೆ. ಬಾಳೆ ಇಳುವರಿ ಕುಸಿತ ಒಂದು ಕಡೆದಯಾದರೆ, ಸಾಲು ಸಾಲು ಹಬ್ಬಗಳು ಇನ್ನೊಂದು ಕಡೆ. ಹೀಗಾಗಿ ಬಾಳೆಗೆ ಉತ್ತಮ‌ ಬೆಲೆ ಸಿಗುತ್ತಿದೆ. ಇಳುವರಿಗೆ ಹೊಡೆತ ಬಿದ್ದರು ದರ ಮಾತ್ರ ಉತ್ತಮವಾಗಿ ಸಿಗುತ್ತಿದೆ ಎನ್ನುತ್ತಿದ್ದಾರೆ ರೈತರು.  

ಇಳುವರಿ ಕುಸಿದಿದೆ, ಆದರೂ ಬಾಳೆ ಹಣ್ಣಿಗೆ ಬಂಪರ್ ಬೆಲೆ ಬಂದಿದೆ. ಏಲಕ್ಕಿ ಬಾಳೆ ಒಂದು ಕೆಜಿಗೆ 130 ರೂ. ಹಾಗೂ ಪಚ್ಚಬಾಳೆ ಕೆಜಿಗೆ 80 ರೂ. ಇದೆ. ಬಾಳೆ ಇಳುವರಿ ಕುಸಿತ ಒಂದು ಕಡೆದಯಾದರೆ, ಸಾಲು ಸಾಲು ಹಬ್ಬಗಳು ಇನ್ನೊಂದು ಕಡೆ. ಹೀಗಾಗಿ ಬಾಳೆಗೆ ಉತ್ತಮ‌ ಬೆಲೆ ಸಿಗುತ್ತಿದೆ. ಇಳುವರಿಗೆ ಹೊಡೆತ ಬಿದ್ದರು ದರ ಮಾತ್ರ ಉತ್ತಮವಾಗಿ ಸಿಗುತ್ತಿದೆ ಎನ್ನುತ್ತಿದ್ದಾರೆ ರೈತರು.  

1 / 6
ಕಳೆದ ವರ್ಷ ಇದೇ ಅವಧಿಯಲ್ಲಿ 20 ರಿಂದ 25 ರೂ. ಕೆಜಿ ಇದ್ದ ಏಲಕ್ಕಿ ಬಾಳೆ, ಈಗ 130ಕ್ಕೆ ತಲುಪಿದೆ. ಇಲ್ಲಿನ ರೈತರಿಂದ 60 ರಿಂದ 80 ರೂ. ಖರೀದಿಸುವ ಸಗಟುದಾರರು ಗ್ರಾಹಕರಿಗೆ ಮಾರಾಟ ಮಾಡುವುದು ಕೆಜೆ 130 ರೂ. ಇದೇ ರೀತಿ 20 ರೂ ದರವಿದ್ದ ಪಚ್ಚಬಾಳೆ ಈಗ ರೈತರಿಂದ 40 ರೂ ಖರೀದಿ ಮಾಡಿ ಗ್ರಾಹಕರಿಗೆ 80 ರೂ.  ಮಾರಾಟ ಮಾಡುತ್ತಿದ್ದಾರೆ.

ಕಳೆದ ವರ್ಷ ಇದೇ ಅವಧಿಯಲ್ಲಿ 20 ರಿಂದ 25 ರೂ. ಕೆಜಿ ಇದ್ದ ಏಲಕ್ಕಿ ಬಾಳೆ, ಈಗ 130ಕ್ಕೆ ತಲುಪಿದೆ. ಇಲ್ಲಿನ ರೈತರಿಂದ 60 ರಿಂದ 80 ರೂ. ಖರೀದಿಸುವ ಸಗಟುದಾರರು ಗ್ರಾಹಕರಿಗೆ ಮಾರಾಟ ಮಾಡುವುದು ಕೆಜೆ 130 ರೂ. ಇದೇ ರೀತಿ 20 ರೂ ದರವಿದ್ದ ಪಚ್ಚಬಾಳೆ ಈಗ ರೈತರಿಂದ 40 ರೂ ಖರೀದಿ ಮಾಡಿ ಗ್ರಾಹಕರಿಗೆ 80 ರೂ.  ಮಾರಾಟ ಮಾಡುತ್ತಿದ್ದಾರೆ.

2 / 6
ವಿಶೇಷವಾಗಿ ದಾವಣಗೆರೆ ಜಿಲ್ಲೆಯ ಸೇರಿದಂತೆ ಬಹುತೇಕ ಕಡೆ ಹೆಚ್ಚಾಗಿ ಬೆಳೆಯುವುದು ಏಲಕ್ಕಿ ಬಾಳೆ. ಪಚ್ಚ ಬಾಳೆ ದೂರದ ಆಂಧ್ರಪ್ರದೇಶ, ತೆಲಂಗಾಣದಿಂದ ಬರುತ್ತದೆ. ಮೇಲಾಗಿ ಈಗ ಸಾಲು ಸಾಲು ಹಬ್ಬ, ಪೂಜೆಗಳಿವೆ. ಪೂಜೆಗೆ ಬಾಳೆ ಹಣ್ಣು ಬೇಕೇಬೇಕು. ಮಧ್ಯಮ ವರ್ಗದ ಜನ ಏಲಕ್ಕಿ ಬಾಳೆ ದರ ಕೇಳಿ ವಾಪಸ್ಸು ಹೋಗುತ್ತಿದ್ದಾರೆ. ಇನ್ನೂ ಕೆಲವರು ಕಡಿಮೆ ದರ ಪಚ್ಚ ಬಾಳೆ ಹಣ್ಣು ಖರೀದಿಸುತ್ತಿರುವುದು ಮಾರುಕಟ್ಟೆಗೆಯಲ್ಲಿ ಕಂಡುಬಂದಿದೆ. 

ವಿಶೇಷವಾಗಿ ದಾವಣಗೆರೆ ಜಿಲ್ಲೆಯ ಸೇರಿದಂತೆ ಬಹುತೇಕ ಕಡೆ ಹೆಚ್ಚಾಗಿ ಬೆಳೆಯುವುದು ಏಲಕ್ಕಿ ಬಾಳೆ. ಪಚ್ಚ ಬಾಳೆ ದೂರದ ಆಂಧ್ರಪ್ರದೇಶ, ತೆಲಂಗಾಣದಿಂದ ಬರುತ್ತದೆ. ಮೇಲಾಗಿ ಈಗ ಸಾಲು ಸಾಲು ಹಬ್ಬ, ಪೂಜೆಗಳಿವೆ. ಪೂಜೆಗೆ ಬಾಳೆ ಹಣ್ಣು ಬೇಕೇಬೇಕು. ಮಧ್ಯಮ ವರ್ಗದ ಜನ ಏಲಕ್ಕಿ ಬಾಳೆ ದರ ಕೇಳಿ ವಾಪಸ್ಸು ಹೋಗುತ್ತಿದ್ದಾರೆ. ಇನ್ನೂ ಕೆಲವರು ಕಡಿಮೆ ದರ ಪಚ್ಚ ಬಾಳೆ ಹಣ್ಣು ಖರೀದಿಸುತ್ತಿರುವುದು ಮಾರುಕಟ್ಟೆಗೆಯಲ್ಲಿ ಕಂಡುಬಂದಿದೆ. 

3 / 6
ಬಹುತೇಕರಿಗೆ ಗೊತ್ತಿಲ್ಲ. ಬಾಳೆ ಬೆಳೆದ ರೈತರ ಕೈಗೆ ಸಿಗುವುದು ಸ್ವಲ್ಪ ಮಾತ್ರ. ಕಾರಣ ಬಹುತೇಕ ವ್ಯಾಪಾರಿಗಳು ಹಸಿ ಬಾಳೆ ಹಣ್ಣು ಖರೀದಿಸುತ್ತಾರೆ. ಹೀಗೆ ಖರೀದಿಸಿದ ಬಾಳೆಯನ್ನ ಗೋದಾಮಿನಲ್ಲಿ ಎರಡರಿಂದ ಮೂರು ದಿನ ಇಟ್ಟು ಹಣ್ಣು ಮಾಡಿ ಮಾರುಕಟ್ಟೆಗೆ ಬಿಡುತ್ತಾರೆ. ರೈತರಿಂದ 60 ರೂ. ಕೆಜಿಗೆ ಖರೀದಿ ಮಾಡಿದರೆ ಗ್ರಾಹಕರಿಗೆ ಮಾರಾಟ ಮಾಡುವುದು 120 ರೂ. ಇದೇ ಪದ್ದತಿ ನಡೆದುಕೊಂಡು ಬಂದಿದೆ. 

ಬಹುತೇಕರಿಗೆ ಗೊತ್ತಿಲ್ಲ. ಬಾಳೆ ಬೆಳೆದ ರೈತರ ಕೈಗೆ ಸಿಗುವುದು ಸ್ವಲ್ಪ ಮಾತ್ರ. ಕಾರಣ ಬಹುತೇಕ ವ್ಯಾಪಾರಿಗಳು ಹಸಿ ಬಾಳೆ ಹಣ್ಣು ಖರೀದಿಸುತ್ತಾರೆ. ಹೀಗೆ ಖರೀದಿಸಿದ ಬಾಳೆಯನ್ನ ಗೋದಾಮಿನಲ್ಲಿ ಎರಡರಿಂದ ಮೂರು ದಿನ ಇಟ್ಟು ಹಣ್ಣು ಮಾಡಿ ಮಾರುಕಟ್ಟೆಗೆ ಬಿಡುತ್ತಾರೆ. ರೈತರಿಂದ 60 ರೂ. ಕೆಜಿಗೆ ಖರೀದಿ ಮಾಡಿದರೆ ಗ್ರಾಹಕರಿಗೆ ಮಾರಾಟ ಮಾಡುವುದು 120 ರೂ. ಇದೇ ಪದ್ದತಿ ನಡೆದುಕೊಂಡು ಬಂದಿದೆ. 

4 / 6
ವರ್ಷವಿಡಿ ದುಡಿದ ರೈತನಿಗೂ ಅಷ್ಟೇ ಹಣ. ಮೂರು ದಿನ ತಂದಿಟ್ಟು ಹಣ್ಣು ಹಾಕಿದ ಮಾರಾಟಗಾರರಿಗೂ ಅಷ್ಟೇ ಹಣ. ಈ ಸಲ ದರ ಜಾಸ್ತಿ ಆಗಲು ಕಾರಣ ಹೆಚ್ಚಾಗಿ ಮಳೆಯಾದ ಹಿನ್ನೆಲೆ ಶೇಕಡ 50 ರಷ್ಟು ಇಳುವರಿ ಕುಸಿದೆ. ಒಂದು ಕಡೆ ರೈತರಿಗೆ ಸಮಾಧಾನವಾದರೆ ಒಂದು ಕಡೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ವರ್ಷವಿಡಿ ದುಡಿದ ರೈತನಿಗೂ ಅಷ್ಟೇ ಹಣ. ಮೂರು ದಿನ ತಂದಿಟ್ಟು ಹಣ್ಣು ಹಾಕಿದ ಮಾರಾಟಗಾರರಿಗೂ ಅಷ್ಟೇ ಹಣ. ಈ ಸಲ ದರ ಜಾಸ್ತಿ ಆಗಲು ಕಾರಣ ಹೆಚ್ಚಾಗಿ ಮಳೆಯಾದ ಹಿನ್ನೆಲೆ ಶೇಕಡ 50 ರಷ್ಟು ಇಳುವರಿ ಕುಸಿದೆ. ಒಂದು ಕಡೆ ರೈತರಿಗೆ ಸಮಾಧಾನವಾದರೆ ಒಂದು ಕಡೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

5 / 6
ಹೀಗೆ ಬೇರೆ ಬೇರೆ ಕಡೆಯಿಂದ ಬಾಳೆ ಹಣ್ಣು ರಾಜ್ಯದ ಬಹುತೇಕ ಮಾರಾಕಟ್ಟೆಗೆ ಬರುತ್ತದೆ. ಈಗ ಗೌರಿ ಗಣೇಶ್, ದಸರಾ, ದೀಪಾವಳಿ ಹಬ್ಬ ಆಗಮಿಸುತ್ತಿದ್ದು, ಇನ್ನಷ್ಟು ದರ ಹೆಚ್ಚಾಗುವ ಸಾಧ್ಯತೆ ಇದೆ. ಈಗಿರುವ ಬೆಳೆ ಬಿಟ್ಟು ಹೊಸ ಬೆಳೆ ಬಂದ್ರು ದರ ಸ್ವಲ್ಪ ಕಡಿಮೆ ಆಗಬಹುದು. ಆದರೆ ಈಗ ಮಾತ್ರ ಬಾಳೆ ಹಣ್ಣಿನ ಬೆಲೆ ಬಿಸಿ ತಟ್ಟಿಯೇ ತಟ್ಟುತ್ತದೆ. ಕಾರಣ ಇಳುವರಿಯೇ ಇಲ್ಲ.

ಹೀಗೆ ಬೇರೆ ಬೇರೆ ಕಡೆಯಿಂದ ಬಾಳೆ ಹಣ್ಣು ರಾಜ್ಯದ ಬಹುತೇಕ ಮಾರಾಕಟ್ಟೆಗೆ ಬರುತ್ತದೆ. ಈಗ ಗೌರಿ ಗಣೇಶ್, ದಸರಾ, ದೀಪಾವಳಿ ಹಬ್ಬ ಆಗಮಿಸುತ್ತಿದ್ದು, ಇನ್ನಷ್ಟು ದರ ಹೆಚ್ಚಾಗುವ ಸಾಧ್ಯತೆ ಇದೆ. ಈಗಿರುವ ಬೆಳೆ ಬಿಟ್ಟು ಹೊಸ ಬೆಳೆ ಬಂದ್ರು ದರ ಸ್ವಲ್ಪ ಕಡಿಮೆ ಆಗಬಹುದು. ಆದರೆ ಈಗ ಮಾತ್ರ ಬಾಳೆ ಹಣ್ಣಿನ ಬೆಲೆ ಬಿಸಿ ತಟ್ಟಿಯೇ ತಟ್ಟುತ್ತದೆ. ಕಾರಣ ಇಳುವರಿಯೇ ಇಲ್ಲ.

6 / 6
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್