Maruti Suzuki India Limited: ಮಾರುತಿ ಸುಜುಕಿಗೆ 200 ಕೋಟಿ ರೂಪಾಯಿ ದಂಡ ವಿಧಿಸಿದ ಸಿಸಿಐ

ಸ್ಪರ್ಧಾ ನೀತಿಗಳಿಗೆ ವಿರೋಧವಾಗಿ ನಡೆದುಕೊಂಡ ಆರೋಪದಲ್ಲಿ ಮಾರುತಿ ಸುಜುಕಿಗೆ ಸಿಸಿಐ 200 ಕೋಟಿ ರೂಪಾಯಿ ದಂಡ ವಿಧಿಸಿದೆ.

| Updated By: Srinivas Mata

Updated on: Aug 23, 2021 | 8:16 PM

ಭಾರತದ ಸ್ಪರ್ಧಾ ಆಯೋಗವು (CCI) ಆಗಸ್ಟ್ 23ರಂದು ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL)ಗೆ 200 ಕೋಟಿ ರೂಪಾಯಿ ದಂಡ ವಿಧಿಸಿದೆ. ಕಾರುಗಳ ರಿಯಾಯಿತಿಗೆ ಸಂಬಂಧಿಸಿದಂತೆ ಡೀಲರ್​ಗಳನ್ನು ಹೀಗೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಲಾಯಿತು ಎಂಬ ಸ್ಪರ್ಧಾ- ವಿರೋಧಿ ನೀತಿಗಳನ್ನು ಅನುಸರಿಸಿದ್ದಕ್ಕೆ ಈ ದಂಡ ವಿಧಿಸಲಾಗಿದೆ. ಆ ಪ್ರಕಾರ CCI ಹೇಳಿಕೆ ಹೀಗಿದೆ: "ರಿಯಾಯಿತಿ ಅನುಷ್ಠಾನಗೊಳಿಸುವ ಮೂಲಕ ಪ್ರಯಾಣಿಕರ ವಾಹನ ವಿಭಾಗದಲ್ಲಿ ಮರುಮಾರಾಟ ಬೆಲೆ ನಿರ್ವಹಣೆಯ (RPM) ಸ್ಪರ್ಧಾತ್ಮಕ-ವಿರೋಧಿ ನಡವಳಿಕೆಯಲ್ಲಿ ತೊಡಗಿದ್ದಕ್ಕಾಗಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ವಿರುದ್ಧ ಸ್ಪರ್ಧಾ ಆಯೋಗವು ಅಂತಿಮ ಆದೇಶವನ್ನು ನೀಡಿದೆ. ಎಂಎಸ್‌ಐಎಲ್‌ಗೆ 200 ಕೋಟಿ ರೂಪಾಯಿ ದಂಡವನ್ನು ವಿಧಿಸಲಾಗಿದೆ," ಎಂದಿದೆ. ಇನ್ನೂ ಮುಂದುವರಿದು: "ಎಂಎಸ್​ಐಎಲ್​ನಿಂದ ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ರಿಯಾಯಿತಿಯನ್ನು ನೀಡದಂತೆ ಡೀಲರ್​ಗಳನ್ನು ತಡೆದಿದ್ದು ಸಿಸಿಐ ಗಮನಕ್ಕೆ ಬಂದಿದೆ," ಎಂದಿದೆ.

ಭಾರತದ ಸ್ಪರ್ಧಾ ಆಯೋಗವು (CCI) ಆಗಸ್ಟ್ 23ರಂದು ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL)ಗೆ 200 ಕೋಟಿ ರೂಪಾಯಿ ದಂಡ ವಿಧಿಸಿದೆ. ಕಾರುಗಳ ರಿಯಾಯಿತಿಗೆ ಸಂಬಂಧಿಸಿದಂತೆ ಡೀಲರ್​ಗಳನ್ನು ಹೀಗೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಲಾಯಿತು ಎಂಬ ಸ್ಪರ್ಧಾ- ವಿರೋಧಿ ನೀತಿಗಳನ್ನು ಅನುಸರಿಸಿದ್ದಕ್ಕೆ ಈ ದಂಡ ವಿಧಿಸಲಾಗಿದೆ. ಆ ಪ್ರಕಾರ CCI ಹೇಳಿಕೆ ಹೀಗಿದೆ: "ರಿಯಾಯಿತಿ ಅನುಷ್ಠಾನಗೊಳಿಸುವ ಮೂಲಕ ಪ್ರಯಾಣಿಕರ ವಾಹನ ವಿಭಾಗದಲ್ಲಿ ಮರುಮಾರಾಟ ಬೆಲೆ ನಿರ್ವಹಣೆಯ (RPM) ಸ್ಪರ್ಧಾತ್ಮಕ-ವಿರೋಧಿ ನಡವಳಿಕೆಯಲ್ಲಿ ತೊಡಗಿದ್ದಕ್ಕಾಗಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ವಿರುದ್ಧ ಸ್ಪರ್ಧಾ ಆಯೋಗವು ಅಂತಿಮ ಆದೇಶವನ್ನು ನೀಡಿದೆ. ಎಂಎಸ್‌ಐಎಲ್‌ಗೆ 200 ಕೋಟಿ ರೂಪಾಯಿ ದಂಡವನ್ನು ವಿಧಿಸಲಾಗಿದೆ," ಎಂದಿದೆ. ಇನ್ನೂ ಮುಂದುವರಿದು: "ಎಂಎಸ್​ಐಎಲ್​ನಿಂದ ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ರಿಯಾಯಿತಿಯನ್ನು ನೀಡದಂತೆ ಡೀಲರ್​ಗಳನ್ನು ತಡೆದಿದ್ದು ಸಿಸಿಐ ಗಮನಕ್ಕೆ ಬಂದಿದೆ," ಎಂದಿದೆ.

1 / 7
ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಎಂಎಸ್‌ಐಎಲ್ ತನ್ನ ಡೀಲರ್‌ಗಳಿಗಾಗಿ 'ರಿಯಾಯಿತಿ ನಿಯಂತ್ರಣ ನೀತಿ'ಯನ್ನು ಹೊಂದಿದ್ದು, ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ರಿಯಾಯಿತಿಗಳು, ಉಚಿತ ಕೊಡುಗೆಗಳು ಇತ್ಯಾದಿಗಳನ್ನು ಗ್ರಾಹಕರಿಗೆ ನೀಡದಂತೆ ಡೀಲರ್​ಗಳನ್ನು ತಡೆಯಲಾಗಿದೆ. ಒಂದು ವೇಳೆ ಡೀಲರ್ ಹೆಚ್ಚುವರಿ ರಿಯಾಯಿತಿಗಳನ್ನು ನೀಡಲು ಬಯಸಿದರೆ, MSIL ಪೂರ್ವಾನುಮತಿ ಕಡ್ಡಾಯವಾಗಿತ್ತು. ರಿಯಾಯಿತಿ ನಿಯಂತ್ರಣ ನೀತಿಯನ್ನು ಉಲ್ಲಂಘಿಸುವ ಯಾವುದೇ ಡೀಲರ್‌ಗೆ ದಂಡ ವಿಧಿಸುವ ಬೆದರಿಕೆ ಹಾಕಲಾಗುತ್ತಿತ್ತು. ಡೀಲರ್‌ಶಿಪ್ ಮೇಲೆ ಮಾತ್ರವಲ್ಲ, ಅದರ ನೇರ ಮಾರಾಟ ಕಾರ್ಯನಿರ್ವಾಹಕ (ಡೈರೆಕ್ಟ್ ಸೇಲ್ಸ್ ಎಕ್ಸ್​ಕ್ಯೂಟಿವ್), ಪ್ರಾದೇಶಿಕ ಮ್ಯಾನೇಜರ್, ಶೋರೂಂ ಮ್ಯಾನೇಜರ್, ಟೀಮ್​ ಲೀಡ್​ ಮತ್ತಿತರರಿಗೆ ಕೂಡ ದಂಡ ವಿಧಿಸುವುದಾಗಿ ಬೆದರಿಕೆ ಒಡ್ಡಲಾಗಿತ್ತು ಎಂದು ತಿಳಿಸಲಾಗಿದೆ.

ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಎಂಎಸ್‌ಐಎಲ್ ತನ್ನ ಡೀಲರ್‌ಗಳಿಗಾಗಿ 'ರಿಯಾಯಿತಿ ನಿಯಂತ್ರಣ ನೀತಿ'ಯನ್ನು ಹೊಂದಿದ್ದು, ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ರಿಯಾಯಿತಿಗಳು, ಉಚಿತ ಕೊಡುಗೆಗಳು ಇತ್ಯಾದಿಗಳನ್ನು ಗ್ರಾಹಕರಿಗೆ ನೀಡದಂತೆ ಡೀಲರ್​ಗಳನ್ನು ತಡೆಯಲಾಗಿದೆ. ಒಂದು ವೇಳೆ ಡೀಲರ್ ಹೆಚ್ಚುವರಿ ರಿಯಾಯಿತಿಗಳನ್ನು ನೀಡಲು ಬಯಸಿದರೆ, MSIL ಪೂರ್ವಾನುಮತಿ ಕಡ್ಡಾಯವಾಗಿತ್ತು. ರಿಯಾಯಿತಿ ನಿಯಂತ್ರಣ ನೀತಿಯನ್ನು ಉಲ್ಲಂಘಿಸುವ ಯಾವುದೇ ಡೀಲರ್‌ಗೆ ದಂಡ ವಿಧಿಸುವ ಬೆದರಿಕೆ ಹಾಕಲಾಗುತ್ತಿತ್ತು. ಡೀಲರ್‌ಶಿಪ್ ಮೇಲೆ ಮಾತ್ರವಲ್ಲ, ಅದರ ನೇರ ಮಾರಾಟ ಕಾರ್ಯನಿರ್ವಾಹಕ (ಡೈರೆಕ್ಟ್ ಸೇಲ್ಸ್ ಎಕ್ಸ್​ಕ್ಯೂಟಿವ್), ಪ್ರಾದೇಶಿಕ ಮ್ಯಾನೇಜರ್, ಶೋರೂಂ ಮ್ಯಾನೇಜರ್, ಟೀಮ್​ ಲೀಡ್​ ಮತ್ತಿತರರಿಗೆ ಕೂಡ ದಂಡ ವಿಧಿಸುವುದಾಗಿ ಬೆದರಿಕೆ ಒಡ್ಡಲಾಗಿತ್ತು ಎಂದು ತಿಳಿಸಲಾಗಿದೆ.

2 / 7
ಸಾಂದರ್ಭಿಕ ಚಿತ್ರ

These 5 Financial Changes From LPG Rate To PF Affect You From September 1st 2021

3 / 7
ಎಂಎಸ್​ಎಗಳ ನೇಮಕ

ಇದೇ ರೀತಿಯ ರಿಯಾಯಿತಿ ನಿಯಂತ್ರಣ ನೀತಿಯನ್ನು MSIL ಭಾರತದಾದ್ಯಂತ ಅನುಸರಿಸುತ್ತಿದೆ ಎಂದು ವರದಿಯಾಗಿದೆ. ನಿರ್ದಿಷ್ಟವಾಗಿ, ಒಂದೇ ನಗರದಲ್ಲಿ ಐದಕ್ಕಿಂತ ಹೆಚ್ಚು ವಿತರಕರು ಕಾರ್ಯ ನಿರ್ವಹಿಸುತ್ತಿರುವಲ್ಲಿ ಹೀಗೆ ಮಾಡಲಾಗುತ್ತಿದೆ. ಇತ್ತೀಚಿನ CCI ತನಿಖೆಯು ಬಹಿರಂಗ ಮಾಡಿರುವಂತೆ, ಡಿಸ್ಕೌಂಟ್ ಕಂಟ್ರೋಲ್ ಪಾಲಿಸಿಯನ್ನು ಜಾರಿಗೊಳಿಸಲು MSILನಿಂದ ಮಿಸ್ಟರಿ ಶಾಪಿಂಗ್ ಏಜೆನ್ಸಿಗಳನ್ನು ('MSAs') ನೇಮಿಸಲಾಗಿತ್ತು. ಗ್ರಾಹಕರಿಗೆ ಹೆಚ್ಚುವರಿ ರಿಯಾಯಿತಿಗಳನ್ನು ನೀಡಲಾಗಿದೆಯೇ ಎಂದು ಕಂಡುಹಿಡಿಯಲು MSIL ಡೀಲರ್‌ಶಿಪ್‌ಗಳಿಗೆ ಇವರು ಗ್ರಾಹಕರಂತೆಯೇ ನಟಿಸಿ, ಮಾಹಿತಿ ಕಲೆಹಾಕುತ್ತಿದ್ದರು.

4 / 7
ಸ್ಪಷ್ಟೀಕರಣ ಕೇಳಲಾಗುತ್ತಿತ್ತು

ಒಂದು ವೇಳೆ ಹೆಚ್ಚುವರಿ ರಿಯಾಯಿತಿ ನೀಡುತ್ತಿದ್ದಾರೆ ಎಂದಾದಲ್ಲಿ ಎಂಎಸ್‌ಎದಿಂದ ಎಂಎಸ್‌ಐಎಲ್ ನಿರ್ವಹಣೆಗೆ ಪುರಾವೆ (ಆಡಿಯೋ/ ವಿಡಿಯೋ ರೆಕಾರ್ಡಿಂಗ್) ಜತೆಗೆ ವರದಿ ಮಾಡಲಾಗುತ್ತಿತ್ತು. ಆ ನಂತರ ಆ ಡೀಲರ್‌ಶಿಪ್‌ಗೆ 'ಮಿಸ್ಟರಿ ಶಾಪಿಂಗ್ ಆಡಿಟ್ ವರದಿ'ಯೊಂದಿಗೆ ಮಾರುತಿಯಿಂದ ಇ-ಮೇಲ್ ಕಳುಹಿಸಲಾಗುತ್ತಿತ್ತು. ಹೆಚ್ಚುವರಿ ರಿಯಾಯಿತಿ ನೀಡುತ್ತಿರುವುದೇಕೆ ಮತ್ತು ಅದಕ್ಕೆ ಸ್ಪಷ್ಟೀಕರಣ ನೀಡಿ ಎಂದು ಕೇಳಲಾಗುತ್ತಿತ್ತು. MSILಗೆ ಸಮಾಧಾನ ಆಗುವಂತಹ ಸ್ಪಷ್ಟೀಕರಣವನ್ನು ಡೀಲರ್​ಗಳು ನೀಡದಿದ್ದರೆ, ಕೆಲವು ಸಂದರ್ಭಗಳಲ್ಲಿ ವಾಹನ ಪೂರೈಕೆ ನಿಲ್ಲಿಸುವ ಬೆದರಿಕೆಯೊಂದಿಗೆ, ಡೀಲರ್‌ಶಿಪ್ ಮತ್ತು ಅದರ ಉದ್ಯೋಗಿಗಳಿಗೆ ದಂಡ ವಿಧಿಸಲಾಗುತ್ತಿತ್ತು. ದಂಡವನ್ನು ಎಲ್ಲಿ ಜಮಾ ಮಾಡಬೇಕು ಮತ್ತು ಆ ಮೊತ್ತದ ಬಳಕೆಯನ್ನು ಹೇಗೆ ಮಾಡಬೇಕು ಎಂಬುದನ್ನು ಕೂಡ MSIL ನಿರ್ದೇಶನದಂತೆ ಮಾಡಲಾಗುತ್ತಿತ್ತು.

5 / 7
ಪೂರೈಕೆ ನಿಲ್ಲಿಸುವುದು, ದಂಡ ಇತ್ಯಾದಿ

ಹೀಗಾಗಿ, ಎಂಎಸ್‌ಐಎಲ್ ತನ್ನ ಡೀಲರ್‌ಗಳ ಮೇಲೆ ರಿಯಾಯಿತಿ ನಿಯಂತ್ರಣ ನೀತಿಯನ್ನು ವಿಧಿಸುವುದಲ್ಲದೆ, ಎಂಎಸ್‌ಎ ಮೂಲಕ ಡೀಲರ್‌ಗಳನ್ನು ಮೇಲ್ವಿಚಾರಣೆ ಮಾಡುವುದು, ದಂಡ ವಿಧಿಸುವುದು ಮತ್ತು ಪೂರೈಕೆಯನ್ನು ನಿಲ್ಲಿಸುವುದು, ದಂಡವನ್ನು ಸಂಗ್ರಹಿಸುವುದು ಮತ್ತು ಮರುಪಡೆಯುವುದು, ಮತ್ತು ಬಳಕೆಯಂತಹ ಕಠಿಣ ಕ್ರಮಕ್ಕೆ ಬೆದರಿಕೆ ಹಾಕುತ್ತಿತ್ತು. ಆ ಮೂಲಕ ಎಂಎಸ್‌ಐಎಲ್ ರಿಯಾಯಿತಿ ನಿಯಂತ್ರಣ ನೀತಿ ಹೇರಿರುವುದನ್ನು ಸಿಸಿಐ ಕಂಡುಹಿಡಿದಿದೆ. ಆದ್ದರಿಂದ MSILನ ಇಂತಹ ನಡವಳಿಕೆಯು ಭಾರತದೊಳಗಿನ ಸ್ಪರ್ಧೆಯ ಮೇಲೆ ಗಮನಾರ್ಹವಾದ ಪ್ರತಿಕೂಲ ಪರಿಣಾಮವನ್ನು ಉಂಟುಮಾಡಿದೆ. CCIಗೆ ಸೆಕ್ಷನ್ 3(4)(e) ಸ್ಪರ್ಧೆಯ ಕಾಯ್ದೆಯ ವಿರುದ್ಧವಾಗಿ ಕಂಡುಬಂದಿದ್ದು, ಸೆಕ್ಷನ್ 3 (1) ನೊಂದಿಗೆ ಓದಿದ ಸ್ಪರ್ಧಾ ಕಾಯ್ದೆ, 2002ರ ನಿಬಂಧನೆಗಳ ವಿರುದ್ಧವಾಗಿ ಅನಿಸಿದೆ.

6 / 7
ಪ್ರಾತಿನಿಧಿಕ ಚಿತ್ರ

Maruti Suzuki India Limited To Hike All Model Car Prices From September 2021

7 / 7
Follow us
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ