AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಖಂಡಿತವಾಗಿಯೂ ಈ ಬಾರಿ ನೀವು ಈ 7 ಆಟಗಾರರನ್ನು ಮಿಸ್ ಮಾಡಿಕೊಳ್ತೀರಿ

IPL 2022: ಐಪಿಎಲ್​ನ ದಾಖಲೆಗಳ ಸರದಾರ, ಸ್ಪೋಟಕ ಬ್ಯಾಟ್ಸ್​ಮನ್​ಗಳು ಎನಿಸಿಕೊಂಡ ಆಟಗಾರರೇ ಈ ಬಾರಿ ಇಲ್ಲ. ಹಾಗಿದ್ರೆ ಈ ಬಾರಿ ಐಪಿಎಲ್​ನಲ್ಲಿ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿರುವ ಆಟಗಾರರು ಯಾರೆಲ್ಲಾ ನೋಡೋಣ...

TV9 Web
| Edited By: |

Updated on: Mar 26, 2022 | 4:06 PM

Share
 ಐಪಿಎಲ್ ಸೀಸನ್ 15 ರಂಗೇರುತ್ತಿದೆ. ಆದರೆ ಕಳೆದ 14 ಸೀಸನ್​ಗೆ ಒಂದು ಲೆಕ್ಕ, ಈ ಬಾರಿ ಮತ್ತೊಂದು ಲೆಕ್ಕ ಎಂಬಂತಾಗಿದೆ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್. ಏಕೆಂದರೆ ಈ ಬಾರಿ ಐಪಿಎಲ್​ನಲ್ಲಿ ಹಲವು ಬದಲಾವಣೆಗಳಾಗಿವೆ. ಅದರಲ್ಲೂ ಮುಖ್ಯವಾಗಿ 2 ಹೊಸ ತಂಡಗಳ ಸೇರ್ಪಡೆ. ಅದರಂತೆ ಈ ಬಾರಿ 10 ತಂಡಗಳು ಕಣಕ್ಕಿಳಿಯುತ್ತಿರುವುದು ವಿಶೇಷ.

ಐಪಿಎಲ್ ಸೀಸನ್ 15 ರಂಗೇರುತ್ತಿದೆ. ಆದರೆ ಕಳೆದ 14 ಸೀಸನ್​ಗೆ ಒಂದು ಲೆಕ್ಕ, ಈ ಬಾರಿ ಮತ್ತೊಂದು ಲೆಕ್ಕ ಎಂಬಂತಾಗಿದೆ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್. ಏಕೆಂದರೆ ಈ ಬಾರಿ ಐಪಿಎಲ್​ನಲ್ಲಿ ಹಲವು ಬದಲಾವಣೆಗಳಾಗಿವೆ. ಅದರಲ್ಲೂ ಮುಖ್ಯವಾಗಿ 2 ಹೊಸ ತಂಡಗಳ ಸೇರ್ಪಡೆ. ಅದರಂತೆ ಈ ಬಾರಿ 10 ತಂಡಗಳು ಕಣಕ್ಕಿಳಿಯುತ್ತಿರುವುದು ವಿಶೇಷ.

1 / 9
 ಇನ್ನು ಐಪಿಎಲ್​ನಲ್ಲಿ ನಾಯಕರಾಗಿಯೇ ನೋಡಿದ್ದ ಕೆಲ ಆಟಗಾರರು ಈ ಬಾರಿ ಕೇವಲ ಆಟಗಾರರಾಗಿ ಕಾಣಿಸಿಕೊಳ್ತಿರುವುದು ಮತ್ತೊಂದು ಮತ್ತೊಂದು ವಿಶೇಷ ಎನ್ನಬಹುದು. ಇದಾಗ್ಯೂ ಕೆಲ ಸ್ಟಾರ್ ಆಟಗಾರರು ಟೂರ್ನಿಗೆ ವಿದಾಯ ಹೇಳಿದ ನೋವು ಅಭಿಮಾನಿಗಳನ್ನು ಕಾಡುತ್ತಿದೆ. ಹೀಗಾಗಿ ಕಳೆದ 14 ಸೀಸನ್ ಐಪಿಎಲ್​ ನೋಡಿದ ಅನುಭವ ಈ ಬಾರಿ ಸಿಗಬೇಕೆಂದಿಲ್ಲ. ಏಕೆಂದರೆ ಐಪಿಎಲ್​ನ ದಾಖಲೆಗಳ ಸರದಾರ, ಸ್ಪೋಟಕ ಬ್ಯಾಟ್ಸ್​ಮನ್​ಗಳು ಎನಿಸಿಕೊಂಡ ಆಟಗಾರರೇ ಈ ಬಾರಿ ಇಲ್ಲ. ಹಾಗಿದ್ರೆ ಈ ಬಾರಿ ಐಪಿಎಲ್​ನಲ್ಲಿ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿರುವ ಆಟಗಾರರು ಯಾರೆಲ್ಲಾ ನೋಡೋಣ...

ಇನ್ನು ಐಪಿಎಲ್​ನಲ್ಲಿ ನಾಯಕರಾಗಿಯೇ ನೋಡಿದ್ದ ಕೆಲ ಆಟಗಾರರು ಈ ಬಾರಿ ಕೇವಲ ಆಟಗಾರರಾಗಿ ಕಾಣಿಸಿಕೊಳ್ತಿರುವುದು ಮತ್ತೊಂದು ಮತ್ತೊಂದು ವಿಶೇಷ ಎನ್ನಬಹುದು. ಇದಾಗ್ಯೂ ಕೆಲ ಸ್ಟಾರ್ ಆಟಗಾರರು ಟೂರ್ನಿಗೆ ವಿದಾಯ ಹೇಳಿದ ನೋವು ಅಭಿಮಾನಿಗಳನ್ನು ಕಾಡುತ್ತಿದೆ. ಹೀಗಾಗಿ ಕಳೆದ 14 ಸೀಸನ್ ಐಪಿಎಲ್​ ನೋಡಿದ ಅನುಭವ ಈ ಬಾರಿ ಸಿಗಬೇಕೆಂದಿಲ್ಲ. ಏಕೆಂದರೆ ಐಪಿಎಲ್​ನ ದಾಖಲೆಗಳ ಸರದಾರ, ಸ್ಪೋಟಕ ಬ್ಯಾಟ್ಸ್​ಮನ್​ಗಳು ಎನಿಸಿಕೊಂಡ ಆಟಗಾರರೇ ಈ ಬಾರಿ ಇಲ್ಲ. ಹಾಗಿದ್ರೆ ಈ ಬಾರಿ ಐಪಿಎಲ್​ನಲ್ಲಿ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿರುವ ಆಟಗಾರರು ಯಾರೆಲ್ಲಾ ನೋಡೋಣ...

2 / 9
ಎಬಿ ಡಿವಿಲಿಯರ್ಸ್​: ಆರ್​ಸಿಬಿ ತಂಡದ ಆಪತ್ಬಾಂಧವ ಎಂದೇ ಖ್ಯಾತರಾಗಿದ್ದ ಎಬಿಡಿ ಈ ಬಾರಿ ತಂಡದಲ್ಲಿಲ್ಲ ಎಂಬುದೇ ಅಭಿಮಾನಿಗಳಿಗೆ ದೊಡ್ಡ ನಿರಾಸೆ. ಏಕೆಂದರೆ ಆರ್​ಸಿಬಿ ಪರ ಅದೆಂಥಂತಹ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಶ್ರೇಯಸ್ಸು ಎಬಿಡಿಗೆ ಸಲ್ಲುತ್ತೆ. ಹೀಗಾಗಿಯೇ ವಿರಾಟ್ ಕೊಹ್ಲಿಯಷ್ಟೇ ಆರ್​ಸಿಬಿ ಅಭಿಮಾನಿಗಳಿಗೆ ಎಬಿಡಿಯನ್ನು ಇಷ್ಟಪಟ್ಟಿದ್ದರು. ಆದರೆ ಇದೇ ಮೊದಲ ಬಾರಿಗೆ ಎಬಿಡಿ ಇಲ್ಲದೆ ಆರ್​ಸಿಬಿ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳು ಐಪಿಎಲ್ ನೋಡಲಿದ್ದಾರೆ.

ಎಬಿ ಡಿವಿಲಿಯರ್ಸ್​: ಆರ್​ಸಿಬಿ ತಂಡದ ಆಪತ್ಬಾಂಧವ ಎಂದೇ ಖ್ಯಾತರಾಗಿದ್ದ ಎಬಿಡಿ ಈ ಬಾರಿ ತಂಡದಲ್ಲಿಲ್ಲ ಎಂಬುದೇ ಅಭಿಮಾನಿಗಳಿಗೆ ದೊಡ್ಡ ನಿರಾಸೆ. ಏಕೆಂದರೆ ಆರ್​ಸಿಬಿ ಪರ ಅದೆಂಥಂತಹ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಶ್ರೇಯಸ್ಸು ಎಬಿಡಿಗೆ ಸಲ್ಲುತ್ತೆ. ಹೀಗಾಗಿಯೇ ವಿರಾಟ್ ಕೊಹ್ಲಿಯಷ್ಟೇ ಆರ್​ಸಿಬಿ ಅಭಿಮಾನಿಗಳಿಗೆ ಎಬಿಡಿಯನ್ನು ಇಷ್ಟಪಟ್ಟಿದ್ದರು. ಆದರೆ ಇದೇ ಮೊದಲ ಬಾರಿಗೆ ಎಬಿಡಿ ಇಲ್ಲದೆ ಆರ್​ಸಿಬಿ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳು ಐಪಿಎಲ್ ನೋಡಲಿದ್ದಾರೆ.

3 / 9
 ಕ್ರಿಸ್ ಗೇಲ್: ಎಬಿಡಿ ಬಿಟ್ಟರೆ ಆರ್​ಸಿಬಿ ಅಭಿಮಾನಿಗಳು ಅತೀ ಹೆಚ್ಚು ಇಷ್ಟಪಟ್ಟಿದ್ದ ವಿದೇಶಿ ಆಟಗಾರನೆಂದರೆ ಕ್ರಿಸ್ ಗೇಲ್. ಆರ್​ಸಿಬಿಯಿಂದ ಪಂಜಾಬ್ ಕಿಂಗ್ಸ್ ತಂಡಕ್ಕೆ ಹೋದರೂ ಗೇಲ್ ಅಬ್ಬರವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ  ಗೇಲ್ ಕೂಡ ಐಪಿಎಲ್​ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಈ ಬಾರಿ ಕ್ರಿಸ್ ಗೇಲ್ ಅವರ ಆರ್ಭಟ ಕೂಡ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಕ್ರಿಸ್ ಗೇಲ್: ಎಬಿಡಿ ಬಿಟ್ಟರೆ ಆರ್​ಸಿಬಿ ಅಭಿಮಾನಿಗಳು ಅತೀ ಹೆಚ್ಚು ಇಷ್ಟಪಟ್ಟಿದ್ದ ವಿದೇಶಿ ಆಟಗಾರನೆಂದರೆ ಕ್ರಿಸ್ ಗೇಲ್. ಆರ್​ಸಿಬಿಯಿಂದ ಪಂಜಾಬ್ ಕಿಂಗ್ಸ್ ತಂಡಕ್ಕೆ ಹೋದರೂ ಗೇಲ್ ಅಬ್ಬರವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಗೇಲ್ ಕೂಡ ಐಪಿಎಲ್​ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಈ ಬಾರಿ ಕ್ರಿಸ್ ಗೇಲ್ ಅವರ ಆರ್ಭಟ ಕೂಡ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ.

4 / 9
 ಸುರೇಶ್ ರೈನಾ: ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಅನ್​ಸೋಲ್ಡ್ ಆಗಿದ್ದೇ ಅಚ್ಚರಿ. ಸಿಎಸ್​ಕೆ ತಂಡದ ಆಧಾರಸ್ತಂಭವೇ ಆಗಿದ್ದ ರೈನಾ ಅವರನ್ನು ಈ ಬಾರಿ ಯಾವುದೇ ತಂಡ ಖರೀದಿಸಿಲ್ಲ. ಹೀಗಾಗಿ ಸಿಎಸ್​ಕೆ, ರೈನಾ ಅಭಿಮಾನಿಗಳು ಐಪಿಎಲ್​ನಲ್ಲಿ ಎಡಗೈ ದಾಂಡಿಗನನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

ಸುರೇಶ್ ರೈನಾ: ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಅನ್​ಸೋಲ್ಡ್ ಆಗಿದ್ದೇ ಅಚ್ಚರಿ. ಸಿಎಸ್​ಕೆ ತಂಡದ ಆಧಾರಸ್ತಂಭವೇ ಆಗಿದ್ದ ರೈನಾ ಅವರನ್ನು ಈ ಬಾರಿ ಯಾವುದೇ ತಂಡ ಖರೀದಿಸಿಲ್ಲ. ಹೀಗಾಗಿ ಸಿಎಸ್​ಕೆ, ರೈನಾ ಅಭಿಮಾನಿಗಳು ಐಪಿಎಲ್​ನಲ್ಲಿ ಎಡಗೈ ದಾಂಡಿಗನನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

5 / 9
 ಇಯಾನ್ ಮೋರ್ಗನ್: ಕಳೆದ ಬಾರಿ ಕೆಕೆಆರ್ ತಂಡವನ್ನು ಫೈನಲ್​ಗೆ ಕೊಂಡೊಯ್ದ ನಾಯಕ ಇಯಾನ್ ಮೋರ್ಗನ್ ಕೂಡ ಈ ಬಾರಿ ಕಾಣಿಸಿಕೊಳ್ಳುವುದಿಲ್ಲ. ಐಪಿಎಲ್​ನ ಕೂಲ್ ಕ್ಯಾಪ್ಟನ್​ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಮೋರ್ಗನ್ ಅವರನ್ನು ಈ ಸಲ ಅವರ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ.

ಇಯಾನ್ ಮೋರ್ಗನ್: ಕಳೆದ ಬಾರಿ ಕೆಕೆಆರ್ ತಂಡವನ್ನು ಫೈನಲ್​ಗೆ ಕೊಂಡೊಯ್ದ ನಾಯಕ ಇಯಾನ್ ಮೋರ್ಗನ್ ಕೂಡ ಈ ಬಾರಿ ಕಾಣಿಸಿಕೊಳ್ಳುವುದಿಲ್ಲ. ಐಪಿಎಲ್​ನ ಕೂಲ್ ಕ್ಯಾಪ್ಟನ್​ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಮೋರ್ಗನ್ ಅವರನ್ನು ಈ ಸಲ ಅವರ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ.

6 / 9
ಶಾಕಿಬ್ ಅಲ್ ಹಸನ್: ಐಪಿಎಲ್​ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅದರಲ್ಲೂ ಶಾಕಿಬ್ ಅಲ್ ಹಸನ್ ಪ್ರತಿನಿಧಿಸುವ ತಂಡಕ್ಕೆ ಬಾಂಗ್ಲಾದೇಶದ ಅಭಿಮಾನಿಗಳು ಹೆಚ್ಚಿರುತ್ತಾರೆ. ಆದರೆ ಈ ಬಾರಿ ಶಾಕಿಬ್ ಅನ್​ಸೋಲ್ಡ್ ಆಗಿದ್ದಾರೆ. ಇತ್ತ ಐಪಿಎಲ್​ನ ಪ್ರಮುಖ ಆಲ್​ರೌಂಡರ್ ಆಗಿ ಗುರುತಿಸಿಕೊಂಡಿದ್ದ ಶಾಕಿಬ್ ಕೂಡ ಈ ಬಾರಿ ಐಪಿಎಲ್​ನಲ್ಲಿ ಕಾಣಿಸಿಕೊಳ್ತಿಲ್ಲ.

ಶಾಕಿಬ್ ಅಲ್ ಹಸನ್: ಐಪಿಎಲ್​ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅದರಲ್ಲೂ ಶಾಕಿಬ್ ಅಲ್ ಹಸನ್ ಪ್ರತಿನಿಧಿಸುವ ತಂಡಕ್ಕೆ ಬಾಂಗ್ಲಾದೇಶದ ಅಭಿಮಾನಿಗಳು ಹೆಚ್ಚಿರುತ್ತಾರೆ. ಆದರೆ ಈ ಬಾರಿ ಶಾಕಿಬ್ ಅನ್​ಸೋಲ್ಡ್ ಆಗಿದ್ದಾರೆ. ಇತ್ತ ಐಪಿಎಲ್​ನ ಪ್ರಮುಖ ಆಲ್​ರೌಂಡರ್ ಆಗಿ ಗುರುತಿಸಿಕೊಂಡಿದ್ದ ಶಾಕಿಬ್ ಕೂಡ ಈ ಬಾರಿ ಐಪಿಎಲ್​ನಲ್ಲಿ ಕಾಣಿಸಿಕೊಳ್ತಿಲ್ಲ.

7 / 9
ಸ್ಟೀವ್ ಸ್ಮಿತ್: ವಿಶ್ವ ಕ್ರಿಕೆಟ್ ಪ್ರೇಮಿಗಳು ಪ್ರೀತಿಸುವ ಆಟಗಾರರಲ್ಲಿ ಸ್ಟೀವ್ ಸ್ಮಿತ್ ಕೂಡ ಒಬ್ಬರು. ಆದರೆ ಸ್ಮಿತ್​ಗೆ ಈ ಬಾರಿ ಐಪಿಎಲ್​ನಲ್ಲಿ ಅವಕಾಶ ಸಿಕ್ಕಿಲ್ಲ. ಇದರೊಂದಿಗೆ ಸ್ಮಿತ್ ಅಭಿಮಾನಿಗಳಿಗೂ ಈ ಬಾರಿಯ ಐಪಿಎಲ್​ ಈ ಹಿಂದಿನಂತೆ ಇರುವುದಿಲ್ಲ.

ಸ್ಟೀವ್ ಸ್ಮಿತ್: ವಿಶ್ವ ಕ್ರಿಕೆಟ್ ಪ್ರೇಮಿಗಳು ಪ್ರೀತಿಸುವ ಆಟಗಾರರಲ್ಲಿ ಸ್ಟೀವ್ ಸ್ಮಿತ್ ಕೂಡ ಒಬ್ಬರು. ಆದರೆ ಸ್ಮಿತ್​ಗೆ ಈ ಬಾರಿ ಐಪಿಎಲ್​ನಲ್ಲಿ ಅವಕಾಶ ಸಿಕ್ಕಿಲ್ಲ. ಇದರೊಂದಿಗೆ ಸ್ಮಿತ್ ಅಭಿಮಾನಿಗಳಿಗೂ ಈ ಬಾರಿಯ ಐಪಿಎಲ್​ ಈ ಹಿಂದಿನಂತೆ ಇರುವುದಿಲ್ಲ.

8 / 9
ಇಮ್ರಾನ್ ತಾಹಿರ್: ಐಪಿಎಲ್​ನಲ್ಲಿ ತಮ್ಮ ವಿಭಿನ್ನ ಸೆಲೆಬ್ರೇಷನ್ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಆಟಗಾರನೆಂದರೆ ಇಮ್ರಾನ್ ತಾಹಿರ್. ಅದರಲ್ಲೂ ಸಿಎಸ್​ಕೆ ಅಭಿಮಾನಿಗಳ ಪಾಲಿನ ಶಕ್ತಿ ಎಕ್ಸ್​ಪ್ರೆಸ್ ಎಂದೇ ಖ್ಯಾತರಾಗಿದ್ದ ಇಮ್ರಾನ್ ತಾಹಿರ್ ಅವರನ್ನೂ ಕೂಡ ಈ ಬಾರಿ ಐಪಿಎಲ್ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ.

ಇಮ್ರಾನ್ ತಾಹಿರ್: ಐಪಿಎಲ್​ನಲ್ಲಿ ತಮ್ಮ ವಿಭಿನ್ನ ಸೆಲೆಬ್ರೇಷನ್ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಆಟಗಾರನೆಂದರೆ ಇಮ್ರಾನ್ ತಾಹಿರ್. ಅದರಲ್ಲೂ ಸಿಎಸ್​ಕೆ ಅಭಿಮಾನಿಗಳ ಪಾಲಿನ ಶಕ್ತಿ ಎಕ್ಸ್​ಪ್ರೆಸ್ ಎಂದೇ ಖ್ಯಾತರಾಗಿದ್ದ ಇಮ್ರಾನ್ ತಾಹಿರ್ ಅವರನ್ನೂ ಕೂಡ ಈ ಬಾರಿ ಐಪಿಎಲ್ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ.

9 / 9
Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!