AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ‘ಕಲಿಸಲು ಸಾಧ್ಯವಿಲ್ಲ’; ತನ್ನಲ್ಲಿಯೇ ತಪ್ಪಿಟ್ಟುಕೊಂಡು ಇತರರ ಮೇಲೆ ಗೂಬೆ ಕೂರಿಸಿದ ರೋಹಿತ್..!

T20 World Cup 2022: ಒತ್ತಡವನ್ನು ಹೇಗೆ ಎದುರಿಸಬೇಕೆಂದು ನೀವು ಯಾರಿಗೂ ಕಲಿಸಲು ಸಾಧ್ಯವಿಲ್ಲ. ಈ ಆಟಗಾರರು ಐಪಿಎಲ್ ಪ್ಲೇಆಫ್‌ನಲ್ಲಿ ಆಡುವಾಗ ಇಂತಹ ಸಾಕಷ್ಟು ಒತ್ತಡಗಳನ್ನು ಎದುರಿಸಿರುತ್ತಾರೆ ಎಂದಿದ್ದಾರೆ.

TV9 Web
| Updated By: ಪೃಥ್ವಿಶಂಕರ|

Updated on:Nov 10, 2022 | 7:48 PM

Share
ನಾಯಕ ಬದಲಾದರೂ ಭಾರತದ ಕಥೆ ಬದಲಾಗಲಿಲ್ಲ. ವರ್ಚಸ್ವಿ ನಾಯಕ ರೋಹಿತ್ ಶರ್ಮಾ ಕೂಡ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಚಾಂಪಿಯನ್ ಮಾಡುವಲ್ಲಿ ವಿಫಲರಾಗಿದ್ದಾರೆ. ಅಡಿಲೇಡ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಭಾರತವನ್ನು ಸೋಲಿಸಿದ್ದಲ್ಲದೆ, ವಿಕೆಟ್ ನಷ್ಟವಿಲ್ಲದೆ 169 ರನ್ ಗಳಿಸಿ ಭಾರತವನ್ನು ಮುಜುಗರಕ್ಕೀಡು ಮಾಡಿತು. ತಂಡದ ಸೋಲಿನ ನಂತರ ನಾಯಕ ರೋಹಿತ್ ಈ ಪ್ರದರ್ಶನಕ್ಕೆ ಬೌಲರ್‌ಗಳನ್ನು ದೂಷಿಸಿದ್ದಾರೆ.

ನಾಯಕ ಬದಲಾದರೂ ಭಾರತದ ಕಥೆ ಬದಲಾಗಲಿಲ್ಲ. ವರ್ಚಸ್ವಿ ನಾಯಕ ರೋಹಿತ್ ಶರ್ಮಾ ಕೂಡ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಚಾಂಪಿಯನ್ ಮಾಡುವಲ್ಲಿ ವಿಫಲರಾಗಿದ್ದಾರೆ. ಅಡಿಲೇಡ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಭಾರತವನ್ನು ಸೋಲಿಸಿದ್ದಲ್ಲದೆ, ವಿಕೆಟ್ ನಷ್ಟವಿಲ್ಲದೆ 169 ರನ್ ಗಳಿಸಿ ಭಾರತವನ್ನು ಮುಜುಗರಕ್ಕೀಡು ಮಾಡಿತು. ತಂಡದ ಸೋಲಿನ ನಂತರ ನಾಯಕ ರೋಹಿತ್ ಈ ಪ್ರದರ್ಶನಕ್ಕೆ ಬೌಲರ್‌ಗಳನ್ನು ದೂಷಿಸಿದ್ದಾರೆ.

1 / 5
ಮೊದಲು ಬ್ಯಾಟ್ ಮಾಡಿದ ಭಾರತ 168 ರನ್ ಗಳಿಸಿತು. ಸ್ವತಃ ನಾಯಕ ರೋಹಿತ್ 28 ಎಸೆತಗಳಲ್ಲಿ 27 ರನ್ ಗಳಿಸಲಷ್ಟೇ ಶಕ್ತರಾದರು. ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಅವರ ಬಲದಿಂದ ಇಂಗ್ಲೆಂಡ್ ಕೇವಲ 16 ಓವರ್‌ಗಳಲ್ಲಿ 10 ವಿಕೆಟ್‌ಗಳಿಂದ ಸ್ಮರಣೀಯ ಜಯ ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ ಭಾರತ 168 ರನ್ ಗಳಿಸಿತು. ಸ್ವತಃ ನಾಯಕ ರೋಹಿತ್ 28 ಎಸೆತಗಳಲ್ಲಿ 27 ರನ್ ಗಳಿಸಲಷ್ಟೇ ಶಕ್ತರಾದರು. ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಅವರ ಬಲದಿಂದ ಇಂಗ್ಲೆಂಡ್ ಕೇವಲ 16 ಓವರ್‌ಗಳಲ್ಲಿ 10 ವಿಕೆಟ್‌ಗಳಿಂದ ಸ್ಮರಣೀಯ ಜಯ ಸಾಧಿಸಿತು.

2 / 5
ಸೋಲಿನ ನಂತರ ಬೌಲರ್‌ಗಳನ್ನು ದೂಷಿಸಿದ ರೋಹಿತ್, ಇಂದಿನ ಫಲಿತಾಂಶದಿಂದ ತುಂಬಾ ನಿರಾಸೆಯಾಗಿದೆ. ನಾವು ನಮ್ಮ ಇನಿಂಗ್ಸ್‌ನ ಅಂತ್ಯದ ವೇಳೆಗೆ ಉತ್ತಮವಾಗಿ ಬ್ಯಾಟ್ ಮಾಡಿದ್ದೇವೆ. ಆದರೆ ನಮ್ಮ ಬೌಲಿಂಗ್‌ ಉತ್ತಮವಾಗಿರಲಿಲ್ಲ. ಇದು ಖಂಡಿತವಾಗಿಯೂ 16 ಓವರ್​ಗಳಲ್ಲಿ ಗುರಿಯನ್ನು ಸಾಧಿಸುವ ವಿಕೆಟ್ ಆಗಿರಲಿಲ್ಲ.

ಸೋಲಿನ ನಂತರ ಬೌಲರ್‌ಗಳನ್ನು ದೂಷಿಸಿದ ರೋಹಿತ್, ಇಂದಿನ ಫಲಿತಾಂಶದಿಂದ ತುಂಬಾ ನಿರಾಸೆಯಾಗಿದೆ. ನಾವು ನಮ್ಮ ಇನಿಂಗ್ಸ್‌ನ ಅಂತ್ಯದ ವೇಳೆಗೆ ಉತ್ತಮವಾಗಿ ಬ್ಯಾಟ್ ಮಾಡಿದ್ದೇವೆ. ಆದರೆ ನಮ್ಮ ಬೌಲಿಂಗ್‌ ಉತ್ತಮವಾಗಿರಲಿಲ್ಲ. ಇದು ಖಂಡಿತವಾಗಿಯೂ 16 ಓವರ್​ಗಳಲ್ಲಿ ಗುರಿಯನ್ನು ಸಾಧಿಸುವ ವಿಕೆಟ್ ಆಗಿರಲಿಲ್ಲ.

3 / 5
ಕಳೆದ 9 ವರ್ಷಗಳಿಂದ ಭಾರತ ತಂಡ ನಾಕೌಟ್ ಸುತ್ತಿನಲ್ಲಿ ಸೋಲನುಭವಿಸುತ್ತಿದೆ. ಒತ್ತಡವನ್ನು ಎದುರಿಸಲು ಯಾರೂ ಕಲಿಸಲು ಸಾಧ್ಯವಿಲ್ಲ. ನಾಕೌಟ್ ಹಂತವನ್ನು ತಲುಪಿದಾಗ, ಅದರಲ್ಲಿರುವ ಒತ್ತಡವನ್ನು ಎದುರಿಸುವುದು ಮುಖ್ಯವಾಗುತ್ತದೆ. ಒತ್ತಡವನ್ನು ಹೇಗೆ ಎದುರಿಸಬೇಕೆಂದು ನೀವು ಯಾರಿಗೂ ಕಲಿಸಲು ಸಾಧ್ಯವಿಲ್ಲ. ಈ ಆಟಗಾರರು ಐಪಿಎಲ್ ಪ್ಲೇಆಫ್‌ನಲ್ಲಿ ಆಡುವಾಗ ಇಂತಹ ಸಾಕಷ್ಟು ಒತ್ತಡಗಳನ್ನು ಎದುರಿಸಿರುತ್ತಾರೆ.

ಕಳೆದ 9 ವರ್ಷಗಳಿಂದ ಭಾರತ ತಂಡ ನಾಕೌಟ್ ಸುತ್ತಿನಲ್ಲಿ ಸೋಲನುಭವಿಸುತ್ತಿದೆ. ಒತ್ತಡವನ್ನು ಎದುರಿಸಲು ಯಾರೂ ಕಲಿಸಲು ಸಾಧ್ಯವಿಲ್ಲ. ನಾಕೌಟ್ ಹಂತವನ್ನು ತಲುಪಿದಾಗ, ಅದರಲ್ಲಿರುವ ಒತ್ತಡವನ್ನು ಎದುರಿಸುವುದು ಮುಖ್ಯವಾಗುತ್ತದೆ. ಒತ್ತಡವನ್ನು ಹೇಗೆ ಎದುರಿಸಬೇಕೆಂದು ನೀವು ಯಾರಿಗೂ ಕಲಿಸಲು ಸಾಧ್ಯವಿಲ್ಲ. ಈ ಆಟಗಾರರು ಐಪಿಎಲ್ ಪ್ಲೇಆಫ್‌ನಲ್ಲಿ ಆಡುವಾಗ ಇಂತಹ ಸಾಕಷ್ಟು ಒತ್ತಡಗಳನ್ನು ಎದುರಿಸಿರುತ್ತಾರೆ.

4 / 5
ಇನ್ನು ಇಂಗ್ಲೆಂಡ್ ಬ್ಯಾಟಿಂಗ್ ಬಗ್ಗೆ ಮಾತನಾಡಿದ ರೋಹಿತ್, ನಾವು ಚೆಂಡಿನೊಂದಿಗೆ ಪ್ರಾರಂಭಿಸಿದ ರೀತಿ, ಅದು ಉತ್ತಮವಾಗಿರಲಿಲ್ಲ. ನಾವು ಸ್ವಲ್ಪ ಉದ್ವೇಗಕ್ಕೆ ಒಳಗಾದೆವು. ಅಲ್ಲದೆ ಇಲ್ಲಿ ಖಂಡಿತವಾಗಿಯೂ ಇಂಗ್ಲೆಂಡ್‌ ಆರಂಭಿಕರಿಗೆ ಕ್ರೆಡಿಟ್ ನೀಡಬೇಕು, ಅವರು ನಿಜವಾಗಿಯೂ ಚೆನ್ನಾಗಿ ಆಡಿದರು. ಆರಂಭಿಕರ ಓವರ್‌ಗಳಲ್ಲಿ ಚೆಂಡು ಸ್ವಲ್ಪ ಸ್ವಿಂಗ್ ಆಗುತ್ತದೆ ಎಂದು ನಾವು ಭಾವಿಸಿದ್ದೇವು ಆದರೆ ಹಾಗಾಗಲಿಲ್ಲ ಎಂದು ರೋಹಿತ್ ಹೇಳಿಕೊಂಡಿದ್ದಾರೆ.

ಇನ್ನು ಇಂಗ್ಲೆಂಡ್ ಬ್ಯಾಟಿಂಗ್ ಬಗ್ಗೆ ಮಾತನಾಡಿದ ರೋಹಿತ್, ನಾವು ಚೆಂಡಿನೊಂದಿಗೆ ಪ್ರಾರಂಭಿಸಿದ ರೀತಿ, ಅದು ಉತ್ತಮವಾಗಿರಲಿಲ್ಲ. ನಾವು ಸ್ವಲ್ಪ ಉದ್ವೇಗಕ್ಕೆ ಒಳಗಾದೆವು. ಅಲ್ಲದೆ ಇಲ್ಲಿ ಖಂಡಿತವಾಗಿಯೂ ಇಂಗ್ಲೆಂಡ್‌ ಆರಂಭಿಕರಿಗೆ ಕ್ರೆಡಿಟ್ ನೀಡಬೇಕು, ಅವರು ನಿಜವಾಗಿಯೂ ಚೆನ್ನಾಗಿ ಆಡಿದರು. ಆರಂಭಿಕರ ಓವರ್‌ಗಳಲ್ಲಿ ಚೆಂಡು ಸ್ವಲ್ಪ ಸ್ವಿಂಗ್ ಆಗುತ್ತದೆ ಎಂದು ನಾವು ಭಾವಿಸಿದ್ದೇವು ಆದರೆ ಹಾಗಾಗಲಿಲ್ಲ ಎಂದು ರೋಹಿತ್ ಹೇಳಿಕೊಂಡಿದ್ದಾರೆ.

5 / 5

Published On - 7:48 pm, Thu, 10 November 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?