- Kannada News Photo gallery Cricket photos Ipl 2022 shreyas iyer kolkata knight riders captain hardik pandya rashid khan kagiso rabada marcus stoinis
IPL 2022: ಬೆಂಗಳೂರಿನಲ್ಲಿ ಮೆಗಾ ಹರಾಜು; ಶಾರುಖ್ ತಂಡಕ್ಕೆ ಶ್ರೇಯಸ್ ನಾಯಕ? ಹೊಸ ತಂಡಗಳ ಬಿಗ್ ಅಪ್ಡೇಟ್ ಇಲ್ಲಿದೆ
IPL 2022: IPL 2022 ಹರಾಜು ಬೆಂಗಳೂರಿನಲ್ಲಿ ನಡೆಯಲಿದ್ದು, ಹರಾಜಿನ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಮೆಗಾ ಹರಾಜು ಫೆಬ್ರವರಿ 11 ಮತ್ತು 13 ರ ನಡುವೆ ನಡೆಯಲಿದೆ.
Updated on: Jan 10, 2022 | 9:11 PM

ಐಪಿಎಲ್ 2022

ಮಾಧ್ಯಮ ವರದಿಗಳ ಪ್ರಕಾರ, ಕೋಲ್ಕತ್ತಾ ನೈಟ್ ರೈಡರ್ಸ್ 15 ನೇ ಆವೃತ್ತಿಯಲ್ಲಿ ಭಾರತದ ಯುವ ಆಟಗಾರನನ್ನು ನಾಯಕನನ್ನಾಗಿ ಮಾಡಲು ಬಯಸಿದೆ. ಸುದ್ದಿ ಪ್ರಕಾರ ಈ ರೇಸ್ ನಲ್ಲಿ ಶ್ರೇಯಸ್ ಅಯ್ಯರ್ ಮುಂಚೂಣಿಯಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿರುವ ಶ್ರೇಯಸ್ ಅಯ್ಯರ್ ಮೇಲೆ ಕೆಕೆಆರ್ ದೊಡ್ಡ ಮೊತ್ತದ ಹೂಡಿಕೆ ಮಾಡಬಹುದು.

ಡೆಲ್ಲಿ ಕ್ಯಾಪಿಟಲ್ಸ್ನ ಇನ್ನೂ ಇಬ್ಬರು ಮಾಜಿ ಆಟಗಾರರು ಲಕ್ನೋದ ದೃಷ್ಟಿಯಲ್ಲಿದ್ದಾರೆ. ವರದಿಗಳ ಪ್ರಕಾರ, ಲಕ್ನೋ ತಮ್ಮ ತಂಡದಲ್ಲಿ ಮಾರ್ಕಸ್ ಸ್ಟೊಯಿನಿಸ್ ಮತ್ತು ಕಗಿಸೊ ರಬಾಡ ಅವರನ್ನು ಸೇರಿಸಿಕೊಳ್ಳಲು ಸಂಚು ಹಾಕಿದೆ. ಅದೇ ಹೊತ್ತಿಗೆ ಈ ತಂಡದ ನಾಯಕನಾಗಿ ಕೆಎಲ್ ರಾಹುಲ್ ಹೆಸರು ಹೊರಬೀಳುತ್ತಿದೆ.

ಅಹಮದಾಬಾದ್ ಫ್ರಾಂಚೈಸಿ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯಗೆ ಹಸ್ತಾಂತರಿಸಲು ನಿರ್ಧರಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಮುಂಬೈ ಇಂಡಿಯನ್ಸ್ನ ಈ ಮಾಜಿ ಆಲ್ರೌಂಡರ್ ಅಹಮದಾಬಾದ್ ತಂಡದ ನಾಯಕರಾಗಲಿದ್ದಾರೆ. ಅದೇ ಸಮಯದಲ್ಲಿ ರಶೀದ್ ಖಾನ್ ಮತ್ತು ಇಶಾನ್ ಕಿಶನ್ ಕೂಡ ಅಹಮದಾಬಾದ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

IPL 2022 ಹರಾಜು ಬೆಂಗಳೂರಿನಲ್ಲಿ ನಡೆಯಲಿದ್ದು, ಹರಾಜಿನ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಮೆಗಾ ಹರಾಜು ಫೆಬ್ರವರಿ 11 ಮತ್ತು 13 ರ ನಡುವೆ ನಡೆಯಲಿದೆ.



















