Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಸಿಕ್ಸ್ ಹೊಡೆಸಿಕೊಳ್ಳದೇ ಒಂದೇ ಎಸೆತದಲ್ಲಿ ರನ್ ನೀಡಿದ ಶಾರ್ದೂಲ್ ಠಾಕೂರ್

IPL 2025 KKR vs LSG: ಕೊಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 238 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್ 234 ರನ್​ಗಳಿಸಿತು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವು 4 ರನ್​ಗಳ ರೋಚಕ ಜಯ ಸಾಧಿಸಿತು.

ಝಾಹಿರ್ ಯೂಸುಫ್
|

Updated on: Apr 09, 2025 | 1:54 PM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 21ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಲ್​ರೌಂಡರ್ ಶಾರ್ದೂಲ್ ಠಾಕೂರ್ (Shardul Thakur) ಅನಪೇಕ್ಷಿತ ದಾಖಲೆ ಬರೆದಿದ್ದಾರೆ. ಅದು ಕೂಡ ಒಂದೇ ಎಸೆತದಲ್ಲಿ 6 ರನ್​ಗಳನ್ನು ನೀಡುವ ಮೂಲಕ. ವಿಶೇಷ ಎಂದರೆ ಈ ಆರು ರನ್​ಗಳಲ್ಲಿ ಸಿಕ್ಸ್​ ಮೂಡಿಬಂದಿಲ್ಲ. ಫೋರ್​ ಅನ್ನು ಸಹ ನೀಡಿಲ್ಲ. ಇದಾಗ್ಯೂ ಒಂದೇ ಎಸೆತದಲ್ಲಿ 6 ರನ್ ನೀಡಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಮೂಡುವುದು ಸಹಜ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 21ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಲ್​ರೌಂಡರ್ ಶಾರ್ದೂಲ್ ಠಾಕೂರ್ (Shardul Thakur) ಅನಪೇಕ್ಷಿತ ದಾಖಲೆ ಬರೆದಿದ್ದಾರೆ. ಅದು ಕೂಡ ಒಂದೇ ಎಸೆತದಲ್ಲಿ 6 ರನ್​ಗಳನ್ನು ನೀಡುವ ಮೂಲಕ. ವಿಶೇಷ ಎಂದರೆ ಈ ಆರು ರನ್​ಗಳಲ್ಲಿ ಸಿಕ್ಸ್​ ಮೂಡಿಬಂದಿಲ್ಲ. ಫೋರ್​ ಅನ್ನು ಸಹ ನೀಡಿಲ್ಲ. ಇದಾಗ್ಯೂ ಒಂದೇ ಎಸೆತದಲ್ಲಿ 6 ರನ್ ನೀಡಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಮೂಡುವುದು ಸಹಜ.

1 / 5
ಈ ಪ್ರಶ್ನೆಗೆ ಉತ್ತರ 5 ವೈಡ್​ಗಳು. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಇನಿಂಗ್ಸ್​ನ 13ನೇ ಓವರ್​ ಎಸೆಯಲು ಬಂದ ಶಾರ್ದೂಲ್ ಠಾಕೂರ್ ಬ್ಯಾಕ್ ಟು ಬ್ಯಾಕ್ 5 ವೈಡ್​ಗಳನ್ನು ಎಸೆದಿದ್ದಾರೆ. ಅಂದರೆ 5 ಎಸೆತಗಳಲ್ಲಿ 5 ರನ್ ನೀಡಿದರೂ ಶಾರ್ದೂಲ್ ಅವರ ಓವರ್ ಕೌಂಟ್ ಶುರುವಾಗಿರಲಿಲ್ಲ. ಇನ್ನು ಆರನೇ ಎಸೆತದಲ್ಲಿ ಒಂದು ರನ್​ ನೀಡುವ ಮೂಲಕ ಮೊದಲ ಎಸೆತವನ್ನು ಪೂರೈಸಿದರು. 

ಈ ಪ್ರಶ್ನೆಗೆ ಉತ್ತರ 5 ವೈಡ್​ಗಳು. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಇನಿಂಗ್ಸ್​ನ 13ನೇ ಓವರ್​ ಎಸೆಯಲು ಬಂದ ಶಾರ್ದೂಲ್ ಠಾಕೂರ್ ಬ್ಯಾಕ್ ಟು ಬ್ಯಾಕ್ 5 ವೈಡ್​ಗಳನ್ನು ಎಸೆದಿದ್ದಾರೆ. ಅಂದರೆ 5 ಎಸೆತಗಳಲ್ಲಿ 5 ರನ್ ನೀಡಿದರೂ ಶಾರ್ದೂಲ್ ಅವರ ಓವರ್ ಕೌಂಟ್ ಶುರುವಾಗಿರಲಿಲ್ಲ. ಇನ್ನು ಆರನೇ ಎಸೆತದಲ್ಲಿ ಒಂದು ರನ್​ ನೀಡುವ ಮೂಲಕ ಮೊದಲ ಎಸೆತವನ್ನು ಪೂರೈಸಿದರು. 

2 / 5
ಈ ಮೂಲಕ ಶಾರ್ದೂಲ್ ಠಾಕೂರ್ ಒಂದೇ ಎಸೆತದಲ್ಲಿ 6 ರನ್​ಗಳನ್ನು ನೀಡಿ ಅನಗತ್ಯ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್​ನಲ್ಲಿ ಅತೀ ಹೆಚ್ಚು ಎಸೆತಗಳನ್ನು ಎಸೆದ ಮೂರನೇ ಬೌಲರ್​ ಎಂಬ ಹೀನಾಯ ದಾಖಲೆಯೊಂದನ್ನು ಸಹ ಬರೆದರು.

ಈ ಮೂಲಕ ಶಾರ್ದೂಲ್ ಠಾಕೂರ್ ಒಂದೇ ಎಸೆತದಲ್ಲಿ 6 ರನ್​ಗಳನ್ನು ನೀಡಿ ಅನಗತ್ಯ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್​ನಲ್ಲಿ ಅತೀ ಹೆಚ್ಚು ಎಸೆತಗಳನ್ನು ಎಸೆದ ಮೂರನೇ ಬೌಲರ್​ ಎಂಬ ಹೀನಾಯ ದಾಖಲೆಯೊಂದನ್ನು ಸಹ ಬರೆದರು.

3 / 5
ಇದಕ್ಕೂ ಮುನ್ನ ಇಂತಹದೊಂದು ದಾಖಲೆ ಮೊಹಮ್ಮದ್ ಸಿರಾಜ್ ಹಾಗೂ ತುಷಾರ್ ದೇಶಪಾಂಡೆ ಹೆಸರಿನಲ್ಲಿತ್ತು. 2023 ರಲ್ಲಿ ಆರ್​ಸಿಬಿ ಪರ ಕಣಕ್ಕಿಳಿದಿದ್ದ ಸಿರಾಜ್ ಒಂದೇ ಓವರ್​ನಲ್ಲಿ 11 ಎಸೆತಗಳನ್ನು ಎಸೆದಿದ್ದರು. ಇದೇ ವರ್ಷ ಸಿಎಸ್​ಕೆ ಪರ ಆಡಿದ್ದ ತುಷಾರ್ ದೇಶಪಾಂಡೆ ಕೂಡ 11 ಎಸೆತಗಳೊಂದಿಗೆ ಓವರ್​ ಪೂರ್ಣಗೊಳಿಸಿದ್ದರು.

ಇದಕ್ಕೂ ಮುನ್ನ ಇಂತಹದೊಂದು ದಾಖಲೆ ಮೊಹಮ್ಮದ್ ಸಿರಾಜ್ ಹಾಗೂ ತುಷಾರ್ ದೇಶಪಾಂಡೆ ಹೆಸರಿನಲ್ಲಿತ್ತು. 2023 ರಲ್ಲಿ ಆರ್​ಸಿಬಿ ಪರ ಕಣಕ್ಕಿಳಿದಿದ್ದ ಸಿರಾಜ್ ಒಂದೇ ಓವರ್​ನಲ್ಲಿ 11 ಎಸೆತಗಳನ್ನು ಎಸೆದಿದ್ದರು. ಇದೇ ವರ್ಷ ಸಿಎಸ್​ಕೆ ಪರ ಆಡಿದ್ದ ತುಷಾರ್ ದೇಶಪಾಂಡೆ ಕೂಡ 11 ಎಸೆತಗಳೊಂದಿಗೆ ಓವರ್​ ಪೂರ್ಣಗೊಳಿಸಿದ್ದರು.

4 / 5
ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 11 ಎಸೆತಗಳನ್ನು (wd,wd,wd,wd,wd,1,1,0,4,2,W) ಎಸೆಯುವ ಮೂಲಕ ಶಾರ್ದೂಲ್ ಠಾಕೂರ್ ಕೂಡ ಐಪಿಎಲ್​ನಲ್ಲಿ ದೀರ್ಘಾವಧಿ ಬೌಲಿಂಗ್ ಮಾಡಿದ ಬೌಲರ್​ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಐಪಿಎಲ್​ನ ಅನಗತ್ಯ ದಾಖಲೆ ಶೂರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿದ್ದಾರೆ.

ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 11 ಎಸೆತಗಳನ್ನು (wd,wd,wd,wd,wd,1,1,0,4,2,W) ಎಸೆಯುವ ಮೂಲಕ ಶಾರ್ದೂಲ್ ಠಾಕೂರ್ ಕೂಡ ಐಪಿಎಲ್​ನಲ್ಲಿ ದೀರ್ಘಾವಧಿ ಬೌಲಿಂಗ್ ಮಾಡಿದ ಬೌಲರ್​ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಐಪಿಎಲ್​ನ ಅನಗತ್ಯ ದಾಖಲೆ ಶೂರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿದ್ದಾರೆ.

5 / 5
Follow us
ರಿಕ್ಕಿ ಬಲಗೈಯಲ್ಲಿದ್ದ ಗುಂಡನ್ನು ವೈದ್ಯರು ಹೊರತೆಗೆದಿದ್ದಾರೆ: ಜಗದೀಶ್
ರಿಕ್ಕಿ ಬಲಗೈಯಲ್ಲಿದ್ದ ಗುಂಡನ್ನು ವೈದ್ಯರು ಹೊರತೆಗೆದಿದ್ದಾರೆ: ಜಗದೀಶ್
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಪರಮೇಶ್ವರ್
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಪರಮೇಶ್ವರ್
ಮುಂಬೈನಲ್ಲಿ ದೇವಾಲಯ ಧ್ವಂಸ; ಸಾವಿರಾರು ಜೈನರಿಂದ ಪ್ರತಿಭಟನೆ
ಮುಂಬೈನಲ್ಲಿ ದೇವಾಲಯ ಧ್ವಂಸ; ಸಾವಿರಾರು ಜೈನರಿಂದ ಪ್ರತಿಭಟನೆ
ಸಮುದ್ರದಲ್ಲಿ 28 ಕಿಮೀ ಈಜಿದ ಹುಬ್ಬಳ್ಳಿ CPI
ಸಮುದ್ರದಲ್ಲಿ 28 ಕಿಮೀ ಈಜಿದ ಹುಬ್ಬಳ್ಳಿ CPI
ರಥೋತ್ಸವ ಅವಘಡದಲ್ಲಿ ಯಾರೂ ಗಾಯಗೊಳ್ಳದಿರುವುದೇ ಪವಾಡ
ರಥೋತ್ಸವ ಅವಘಡದಲ್ಲಿ ಯಾರೂ ಗಾಯಗೊಳ್ಳದಿರುವುದೇ ಪವಾಡ
ಶಿವಕುಮಾರ್ ಟೀಕಿಸಿದ್ದಕ್ಕೆ ಮುನಿರತ್ನ ಸಾಕಷ್ಟು ಅನುಭವಿಸಿದ್ದಾರೆ: ಗಣಿಗ
ಶಿವಕುಮಾರ್ ಟೀಕಿಸಿದ್ದಕ್ಕೆ ಮುನಿರತ್ನ ಸಾಕಷ್ಟು ಅನುಭವಿಸಿದ್ದಾರೆ: ಗಣಿಗ
ಆಗ ಅಹಿಂದ ಅಯ್ತು ಈಗ ಜಾತಿ ಗಣತಿ ವರದಿಯ ಸರದಿ: ಪ್ರತಾಪ್ ಸಿಂಹ
ಆಗ ಅಹಿಂದ ಅಯ್ತು ಈಗ ಜಾತಿ ಗಣತಿ ವರದಿಯ ಸರದಿ: ಪ್ರತಾಪ್ ಸಿಂಹ
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಬಂತು ಇಕೋಫಿಕ್ಸ್ ತಂತ್ರಜ್ಞಾನ
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಬಂತು ಇಕೋಫಿಕ್ಸ್ ತಂತ್ರಜ್ಞಾನ
ಚುನಾಯಿತ ಪ್ರತಿನಿಧಿಗಳು ಶಿವಕುಮಾರ್​ರನ್ನು ಭೇಟಿಯಾಗುವುದು ತಪ್ಪಲ್ಲ: ಸಂಸದ
ಚುನಾಯಿತ ಪ್ರತಿನಿಧಿಗಳು ಶಿವಕುಮಾರ್​ರನ್ನು ಭೇಟಿಯಾಗುವುದು ತಪ್ಪಲ್ಲ: ಸಂಸದ
ಕಳೆದ ವರ್ಷಕ್ಕಿಂತ ಈ ವರ್ಷ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ: ಪರಮೇಶ್ವರ್
ಕಳೆದ ವರ್ಷಕ್ಕಿಂತ ಈ ವರ್ಷ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ: ಪರಮೇಶ್ವರ್