AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸಿಸ್ಟೆಂಟ್ ಮ್ಯಾನೇಜರ್ ಇಶಾನ್ ಕಿಶನ್​ಗೆ RBI ನೀಡುವ ಸಂಭಾವನೆ ಎಷ್ಟು ಗೊತ್ತಾ?

Ishan Kishan RBI: ಟೀಂ ಇಂಡಿಯಾ ಕ್ರಿಕೆಟಿಗರು ಕ್ರಿಕೆಟ್ ಜೊತೆಗೆ ಸರ್ಕಾರಿ ನೌಕರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇಶಾನ್ ಕಿಶನ್ RBI ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ನೇಮಕಗೊಂಡಿದ್ದಾರೆ. ಕ್ರೀಡಾ ಕೋಟಾದಡಿ ಈ ಹುದ್ದೆ ಪಡೆದಿರುವ ಕಿಶನ್, ಮಾಸಿಕ 1 ಲಕ್ಷಕ್ಕೂ ಅಧಿಕ ವೇತನ ಪಡೆಯುತ್ತಾರೆ. ಅನೇಕ ಕ್ರೀಡಾಪಟುಗಳಂತೆ, ಇವರು ತಮ್ಮ ಕ್ರಿಕೆಟ್ ವೃತ್ತಿಜೀವನ ಮತ್ತು ಸರ್ಕಾರಿ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಇಶಾನ್, ಪಾಟ್ನಾದ RBI ಕಚೇರಿಗೆ ಭೇಟಿ ನೀಡಿ ಗಮನ ಸೆಳೆದರು.

ಪೃಥ್ವಿಶಂಕರ
|

Updated on: Aug 05, 2026 | 5:28 PM

Share
ಟೀಂ ಇಂಡಿಯಾದ ಹಲವು ಕ್ರಿಕೆಟಿಗರು ಕ್ರಿಕೆಟ್​ನ ಜೊತೆಗೆ ಸರ್ಕಾರಿ ನೌಕರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಕೆಲವರು ಅವರು ಪ್ರತಿನಿಧಿಸುವ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೆ, ಇನ್ನು ಕೆಲವರಿಗೆ ಭಾರತೀಯ ಸೇನೆಯಲ್ಲಿ ಗೌರವನ್ವಿತ ಹುದ್ದೆ ಸಿಕ್ಕಿದೆ. ಹಾಗೆಯೇ ಇನ್ನು ಕೆಲವರು ಆರ್​ಬಿಐನಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿದ್ದಾರೆ. ಅಂತಹವರಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೂಡ ಒಬ್ಬರು(PC-PTI).

ಟೀಂ ಇಂಡಿಯಾದ ಹಲವು ಕ್ರಿಕೆಟಿಗರು ಕ್ರಿಕೆಟ್​ನ ಜೊತೆಗೆ ಸರ್ಕಾರಿ ನೌಕರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಕೆಲವರು ಅವರು ಪ್ರತಿನಿಧಿಸುವ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೆ, ಇನ್ನು ಕೆಲವರಿಗೆ ಭಾರತೀಯ ಸೇನೆಯಲ್ಲಿ ಗೌರವನ್ವಿತ ಹುದ್ದೆ ಸಿಕ್ಕಿದೆ. ಹಾಗೆಯೇ ಇನ್ನು ಕೆಲವರು ಆರ್​ಬಿಐನಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿದ್ದಾರೆ. ಅಂತಹವರಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೂಡ ಒಬ್ಬರು(PC-PTI).

1 / 5
ಪ್ರಸ್ತುತ ಭಾರತ ಏಕದಿನ ಹಾಗೂ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ಕಿಶನ್, ಟಿ20 ತಂಡದ ಖಾಯಂ ಸದಸ್ಯರಾಗಿದ್ದಾರೆ. ಹೀಗಾಗಿ ತಂಡದೊಂದಿಗೆ ಜಿಂಬಾಬ್ವೆ ಪ್ರವಾಸವನ್ನು ಮುಗಿಸಿ ಬಂದಿರುವ ಕಿಶನ್​ ಪ್ರಸ್ತುತ ವಿರಾಮದಲ್ಲಿದ್ದಾರೆ. ಏಕೆಂದರೆ ಟೀಂ ಇಂಡಿಯಾ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸದಲ್ಲಿದೆ. ಆದರೆ ಕಿಶನ್​ ಟೆಸ್ಟ್ ತಂಡದಲ್ಲಿ ಆಯ್ಕೆಯಾಗಿಲ್ಲ(PC-PTI).

ಪ್ರಸ್ತುತ ಭಾರತ ಏಕದಿನ ಹಾಗೂ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ಕಿಶನ್, ಟಿ20 ತಂಡದ ಖಾಯಂ ಸದಸ್ಯರಾಗಿದ್ದಾರೆ. ಹೀಗಾಗಿ ತಂಡದೊಂದಿಗೆ ಜಿಂಬಾಬ್ವೆ ಪ್ರವಾಸವನ್ನು ಮುಗಿಸಿ ಬಂದಿರುವ ಕಿಶನ್​ ಪ್ರಸ್ತುತ ವಿರಾಮದಲ್ಲಿದ್ದಾರೆ. ಏಕೆಂದರೆ ಟೀಂ ಇಂಡಿಯಾ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸದಲ್ಲಿದೆ. ಆದರೆ ಕಿಶನ್​ ಟೆಸ್ಟ್ ತಂಡದಲ್ಲಿ ಆಯ್ಕೆಯಾಗಿಲ್ಲ(PC-PTI).

2 / 5
ಹೀಗಾಗಿ ಕ್ರಿಕೆಟ್​ನ ಹೊರತಾಗಿ ಆರ್​ಬಿಐ ನೌಕರನಾಗಿರುವ ಇಶಾನ್ ಕಿಶನ್​ ಪ್ರಸ್ತುತ ಪಾಟ್ನಾದ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ ಕ್ರೀಡಾ ಕೋಟಾದಡಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಭಾರತೀಯ ಕ್ರಿಕೆಟ್‌ನಲ್ಲಿ ಅವರ ಸಾಧನೆಗಳನ್ನು ಗುರುತಿಸಿ ಈ ಹುದ್ದೆಯನ್ನು ನೀಡಲಾಗಿದೆ. ಸರ್ಕಾರಿ ಸಂಸ್ಥೆಗಳಿಂದ ನೇಮಕಗೊಂಡ ಅನೇಕ ಗಣ್ಯ ಕ್ರೀಡಾಪಟುಗಳಂತೆ, ಅವರು ತಮ್ಮ ವೃತ್ತಿಪರ ಜವಾಬ್ದಾರಿಗಳು ಮತ್ತು ಕ್ರಿಕೆಟ್ ವೃತ್ತಿಜೀವನ ಎರಡನ್ನೂ ನಿರ್ವಹಿಸುತ್ತಾರೆ(PC-PTI).

ಹೀಗಾಗಿ ಕ್ರಿಕೆಟ್​ನ ಹೊರತಾಗಿ ಆರ್​ಬಿಐ ನೌಕರನಾಗಿರುವ ಇಶಾನ್ ಕಿಶನ್​ ಪ್ರಸ್ತುತ ಪಾಟ್ನಾದ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ ಕ್ರೀಡಾ ಕೋಟಾದಡಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಭಾರತೀಯ ಕ್ರಿಕೆಟ್‌ನಲ್ಲಿ ಅವರ ಸಾಧನೆಗಳನ್ನು ಗುರುತಿಸಿ ಈ ಹುದ್ದೆಯನ್ನು ನೀಡಲಾಗಿದೆ. ಸರ್ಕಾರಿ ಸಂಸ್ಥೆಗಳಿಂದ ನೇಮಕಗೊಂಡ ಅನೇಕ ಗಣ್ಯ ಕ್ರೀಡಾಪಟುಗಳಂತೆ, ಅವರು ತಮ್ಮ ವೃತ್ತಿಪರ ಜವಾಬ್ದಾರಿಗಳು ಮತ್ತು ಕ್ರಿಕೆಟ್ ವೃತ್ತಿಜೀವನ ಎರಡನ್ನೂ ನಿರ್ವಹಿಸುತ್ತಾರೆ(PC-PTI).

3 / 5
ಅದರಂತೆ ತಮ್ಮ ಆರ್‌ಬಿಐ ಗುರುತಿನ ಚೀಟಿ ಧರಿಸಿ ಇಶಾನ್ ಕಿಶನ್ ಪಾಟ್ನಾ ಕಚೇರಿಗೆ ಆಗಮಿಸಿದರು. ಇಶಾನ್ ಕಿಶನ್ ಬಂದ ತಕ್ಷಣ, ಅವರನ್ನು ಭೇಟಿ ಮಾಡಲು ಮತ್ತು ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ನೌಕರರು ಮುಗಿಬಿದ್ದರು. ಕಿಶನ್ ಯಾರನ್ನೂ ನಿರಾಶೆಗೊಳಿಸದೆ ಫೋಟೋಗೆ ಪೋಸ್​ ನೀಡಿದರು.

ಅದರಂತೆ ತಮ್ಮ ಆರ್‌ಬಿಐ ಗುರುತಿನ ಚೀಟಿ ಧರಿಸಿ ಇಶಾನ್ ಕಿಶನ್ ಪಾಟ್ನಾ ಕಚೇರಿಗೆ ಆಗಮಿಸಿದರು. ಇಶಾನ್ ಕಿಶನ್ ಬಂದ ತಕ್ಷಣ, ಅವರನ್ನು ಭೇಟಿ ಮಾಡಲು ಮತ್ತು ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ನೌಕರರು ಮುಗಿಬಿದ್ದರು. ಕಿಶನ್ ಯಾರನ್ನೂ ನಿರಾಶೆಗೊಳಿಸದೆ ಫೋಟೋಗೆ ಪೋಸ್​ ನೀಡಿದರು.

4 / 5
ಮೇಲೆ ಹೇಳಿದಂತೆ ಇಶಾನ್ ಕಿಶನ್ ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದು, ಅವರು ಎ ಗ್ರೇಡ್ ಉದ್ಯೋಗಿಯಾಗಿದ್ದಾರೆ. ಕ್ರೀಡಾ ಕೋಟಾದಡಿಯಲ್ಲಿ ಈ ಕೆಲಸ ಧಕ್ಕಿಸಿಕೊಂಡಿರುವ ಇಶಾನ್ ಕಿಶನ್​ಗೆ ಮಾಸಿಕವಾಗಿ 1 ಲಕ್ಷದಿಂದ 1.4 ಲಕ್ಷ ರೂ.ಗಳವರೆಗೆ ಸಂಬಳ ಸಿಗಲಿದೆ.

ಮೇಲೆ ಹೇಳಿದಂತೆ ಇಶಾನ್ ಕಿಶನ್ ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದು, ಅವರು ಎ ಗ್ರೇಡ್ ಉದ್ಯೋಗಿಯಾಗಿದ್ದಾರೆ. ಕ್ರೀಡಾ ಕೋಟಾದಡಿಯಲ್ಲಿ ಈ ಕೆಲಸ ಧಕ್ಕಿಸಿಕೊಂಡಿರುವ ಇಶಾನ್ ಕಿಶನ್​ಗೆ ಮಾಸಿಕವಾಗಿ 1 ಲಕ್ಷದಿಂದ 1.4 ಲಕ್ಷ ರೂ.ಗಳವರೆಗೆ ಸಂಬಳ ಸಿಗಲಿದೆ.

5 / 5
Follow Us
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ
ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ
ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು
ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು
ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ
ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ
ನಾಗೇಂದ್ರಗೆ ಮಂತ್ರಿ ಸ್ಥಾನ ಹೈಕಮಾಂಡ್ ತೀರ್ಮಾನ
ನಾಗೇಂದ್ರಗೆ ಮಂತ್ರಿ ಸ್ಥಾನ ಹೈಕಮಾಂಡ್ ತೀರ್ಮಾನ
ಸಚಿವರ ಪ್ರಮಾಣವಚನಕ್ಕೆ ಸಿದ್ದು ಗೈರಾಗಿದ್ಯಾಕೆ? ಜಾರಕಿಹೊಳಿ ಹಿಂಗ್ಯಾಕಂದ್ರು?
ಸಚಿವರ ಪ್ರಮಾಣವಚನಕ್ಕೆ ಸಿದ್ದು ಗೈರಾಗಿದ್ಯಾಕೆ? ಜಾರಕಿಹೊಳಿ ಹಿಂಗ್ಯಾಕಂದ್ರು?
ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್
ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್
ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆಗಳಿಗಾಗಿ ಹೆಚ್ಚಿದ ಪೈಪೋಟಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆಗಳಿಗಾಗಿ ಹೆಚ್ಚಿದ ಪೈಪೋಟಿ