AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವ ಆಟಗಾರರು, ಮೂಕ ಪ್ರಾಣಿಗಳಿಗಾಗಿ ಮಹತ್ವದ ಕೆಲಸಕ್ಕೆ ಮುಂದಾದ ಕೊಹ್ಲಿ- ಅನುಷ್ಕಾ

Virat Kohli and Anushka Sharma: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ತಮ್ಮ ಫೌಂಡೇಶನ್ ಅನ್ನು ವಿಲೀನಗೊಳಿಸುವ ಮೂಲಕ ‘ಸೇವಾ’ (SeVVA) ಎಂಬ ಹೊಸ ಫೌಂಡೇಶನ್ ಪ್ರಾರಂಭಿಸಿದ್ದಾರೆ.

ಪೃಥ್ವಿಶಂಕರ
|

Updated on:Mar 24, 2023 | 5:14 PM

Share
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಸದ್ಯ ಕ್ರಿಕೆಟ್​ ಲೋಕದಲ್ಲಿ ರಾಜನಾಗಿ ಮೆರೆಯುತ್ತಿದ್ದು, ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ. ಕ್ರಿಕೆಟ್ ಮಾತ್ರವಲ್ಲದೆ, ಜಾಹೀರಾತು, ಬ್ಯುಸಿನೆಸ್​ನಲ್ಲೂ ತೊಡಗಿಸಿಕೊಂಡಿರುವ ಕೊಹ್ಲಿಯ ಆದಾಯ 1 ಸಾವಿರ ಕೋಟಿಗೂ ಹೆಚ್ಚಿದೆ. ಹಣ ಗಳಿಸುವುದರ ಜೊತೆಗೆ ಈ ಹಣವನ್ನು ಹೇಗೆ ಸರಿಯಾಗಿ ಬಳಸಿಕೊಳ್ಳಬೇಕು ಎಂಬುದನ್ನು ಅರಿತಿರುವ ಕೊಹ್ಲಿ, ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ.

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಸದ್ಯ ಕ್ರಿಕೆಟ್​ ಲೋಕದಲ್ಲಿ ರಾಜನಾಗಿ ಮೆರೆಯುತ್ತಿದ್ದು, ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ. ಕ್ರಿಕೆಟ್ ಮಾತ್ರವಲ್ಲದೆ, ಜಾಹೀರಾತು, ಬ್ಯುಸಿನೆಸ್​ನಲ್ಲೂ ತೊಡಗಿಸಿಕೊಂಡಿರುವ ಕೊಹ್ಲಿಯ ಆದಾಯ 1 ಸಾವಿರ ಕೋಟಿಗೂ ಹೆಚ್ಚಿದೆ. ಹಣ ಗಳಿಸುವುದರ ಜೊತೆಗೆ ಈ ಹಣವನ್ನು ಹೇಗೆ ಸರಿಯಾಗಿ ಬಳಸಿಕೊಳ್ಳಬೇಕು ಎಂಬುದನ್ನು ಅರಿತಿರುವ ಕೊಹ್ಲಿ, ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ.

1 / 5
ವಾಸ್ತವವಾಗಿ ಕೊಹ್ಲಿ ವಿಕೆ ಎಂಬ ಫೌಂಡೇಶನ್ (NGO) ನಡೆಸುತ್ತಿದ್ದು, ಈ ಫೌಂಡೇಶನ್ ಉದಯೋನ್ಮುಖ ಆಟಗಾರರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿತ್ತು. ಕೊಹ್ಲಿಯಂತೆ, ಅನುಷ್ಕಾ ಶರ್ಮಾ ಕೂಡ ಒಂದು ಫೌಂಡೇಶನ್ ನಡೆಸುತ್ತಿದ್ದು, ಈ ಫೌಂಡೇಶನ್ ಮೂಕ ಪ್ರಾಣಿಗಳಿಗಾಗಿ ಕೆಲಸ ಮಾಡುತ್ತಿತ್ತು. ಇದೀಗ ಈ ಇಬ್ಬರೂ ತಮ್ಮ ಫೌಂಡೇಶನ್ ಅನ್ನು ಒಟ್ಟಿಗೆ ವಿಲೀನಗೊಳಿಸಲು ಮುಂದಾಗಿದ್ದಾರೆ.

ವಾಸ್ತವವಾಗಿ ಕೊಹ್ಲಿ ವಿಕೆ ಎಂಬ ಫೌಂಡೇಶನ್ (NGO) ನಡೆಸುತ್ತಿದ್ದು, ಈ ಫೌಂಡೇಶನ್ ಉದಯೋನ್ಮುಖ ಆಟಗಾರರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿತ್ತು. ಕೊಹ್ಲಿಯಂತೆ, ಅನುಷ್ಕಾ ಶರ್ಮಾ ಕೂಡ ಒಂದು ಫೌಂಡೇಶನ್ ನಡೆಸುತ್ತಿದ್ದು, ಈ ಫೌಂಡೇಶನ್ ಮೂಕ ಪ್ರಾಣಿಗಳಿಗಾಗಿ ಕೆಲಸ ಮಾಡುತ್ತಿತ್ತು. ಇದೀಗ ಈ ಇಬ್ಬರೂ ತಮ್ಮ ಫೌಂಡೇಶನ್ ಅನ್ನು ಒಟ್ಟಿಗೆ ವಿಲೀನಗೊಳಿಸಲು ಮುಂದಾಗಿದ್ದಾರೆ.

2 / 5
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ತಮ್ಮ ಫೌಂಡೇಶನ್ ಅನ್ನು ವಿಲೀನಗೊಳಿಸುವ ಮೂಲಕ ‘ಸೇವಾ’ (SeVVA) ಎಂಬ ಹೊಸ ಫೌಂಡೇಶನ್ ಪ್ರಾರಂಭಿಸಿದ್ದಾರೆ. ಈ ಫೌಂಡೇಶನ್ ಇನ್ಮುಂದೆ ಆಟಗಾರರು ಮತ್ತು ಪ್ರಾಣಿಗಳಿಗಾಗಿ ಕೆಲಸ ಮಾಡುತ್ತವೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ತಮ್ಮ ಫೌಂಡೇಶನ್ ಅನ್ನು ವಿಲೀನಗೊಳಿಸುವ ಮೂಲಕ ‘ಸೇವಾ’ (SeVVA) ಎಂಬ ಹೊಸ ಫೌಂಡೇಶನ್ ಪ್ರಾರಂಭಿಸಿದ್ದಾರೆ. ಈ ಫೌಂಡೇಶನ್ ಇನ್ಮುಂದೆ ಆಟಗಾರರು ಮತ್ತು ಪ್ರಾಣಿಗಳಿಗಾಗಿ ಕೆಲಸ ಮಾಡುತ್ತವೆ.

3 / 5
ಗುರುವಾರ ನಡೆದ ಕ್ರೀಡಾ ಗೌರವ ಪ್ರಶಸ್ತಿಯಲ್ಲಿ ಈ ಮಾಹಿತಿ ಹಂಚಿಕೊಂಡ ಕೊಹ್ಲಿ, ತಮ್ಮ ಫೌಂಡೇಶನ್ ಅಗತ್ಯವಿರುವವರಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ. ವಾಸ್ತವವಾಗಿ ಈ ಪ್ರತಿಷ್ಠಾನದ ಹೆಸರಿನಲ್ಲಿರುವ ವಿವಿಎ ಎಂದರೆ ವಿರಾಟ್, ವಾಮಿಕಾ ಮತ್ತು ಅನುಷ್ಕಾ ಎಂದರ್ಥ.

ಗುರುವಾರ ನಡೆದ ಕ್ರೀಡಾ ಗೌರವ ಪ್ರಶಸ್ತಿಯಲ್ಲಿ ಈ ಮಾಹಿತಿ ಹಂಚಿಕೊಂಡ ಕೊಹ್ಲಿ, ತಮ್ಮ ಫೌಂಡೇಶನ್ ಅಗತ್ಯವಿರುವವರಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ. ವಾಸ್ತವವಾಗಿ ಈ ಪ್ರತಿಷ್ಠಾನದ ಹೆಸರಿನಲ್ಲಿರುವ ವಿವಿಎ ಎಂದರೆ ವಿರಾಟ್, ವಾಮಿಕಾ ಮತ್ತು ಅನುಷ್ಕಾ ಎಂದರ್ಥ.

4 / 5
ಗುರುವಾರ ನಡೆದ ಕ್ರೀಡಾ ಗೌರವ ಪ್ರಶಸ್ತಿಯಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಭಾಗಿಯಾಗಿದ್ದರು. ಈ ಇಬ್ಬರಲ್ಲದೆ ನೀರಜ್ ಚೋಪ್ರಾ, ಶುಭ್​ಮನ್ ಗಿಲ್‌, ದೀಪಿಕಾ ಪಡುಕೋಣೆ, ರಣ್‌ವೀರ್ ಸಿಂಗ್ ಅವರಂತಹ ನಟರು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗುರುವಾರ ನಡೆದ ಕ್ರೀಡಾ ಗೌರವ ಪ್ರಶಸ್ತಿಯಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಭಾಗಿಯಾಗಿದ್ದರು. ಈ ಇಬ್ಬರಲ್ಲದೆ ನೀರಜ್ ಚೋಪ್ರಾ, ಶುಭ್​ಮನ್ ಗಿಲ್‌, ದೀಪಿಕಾ ಪಡುಕೋಣೆ, ರಣ್‌ವೀರ್ ಸಿಂಗ್ ಅವರಂತಹ ನಟರು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

5 / 5

Published On - 5:14 pm, Fri, 24 March 23

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ