- Kannada News Photo gallery Cricket photos Virat Kohlis childhood coach Rajkumar Sharma surprised by Sourav Gangulys comments
ಪಾರದರ್ಶಕತೆ ಇಲ್ಲ! ಗಂಗೂಲಿ ಹೇಳಿಕೆಯಿಂದ ಕೆರಳಿದ ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ಹೇಳಿದ್ದೇನು ಗೊತ್ತಾ?
ಟ್ವೆಂಟಿ-20 ನಾಯಕತ್ವವನ್ನು ಬಿಟ್ಟುಕೊಡಬೇಡಿ ಎಂದು ಮಂಡಳಿಯು ಕೊಹ್ಲಿಗೆ ಕೇಳಿದೆ ಎಂದು ಸೌರವ್ ಗಂಗೂಲಿ ಹೇಳಿಕೆಯನ್ನು ನಾನು ಓದಿದ್ದೇನೆ. ನನಗೆ ಅಂತಹದ್ದೇನೂ ನೆನಪಿಲ್ಲ, ಈ ಹೇಳಿಕೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ.
Updated on: Dec 11, 2021 | 9:39 PM

ಭಾರತ ಕ್ರಿಕೆಟ್ ತಂಡದ ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ವಜಾಗೊಳಿಸಿದ ವಿವಾದ ಶಮನವಾಗುತ್ತಿಲ್ಲ. ಡಿಸೆಂಬರ್ 8 ರಂದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕೊಹ್ಲಿಯನ್ನು ODI ನಾಯಕತ್ವದಿಂದ ತೆಗೆದುಹಾಕಿತು. ಅದನ್ನು T20 ನಾಯಕರನ್ನಾಗಿ ಮಾಡಲಾದ ರೋಹಿತ್ ಶರ್ಮಾಗೆ ಹಸ್ತಾಂತರಿಸಿತು. ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ಈ ನಿರ್ಧಾರಕ್ಕೆ ಯಾವುದೇ ಕಾರಣವನ್ನು ನೀಡಿಲ್ಲ, ಆದರೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಈ ನಿರ್ಧಾರಕ್ಕೆ ಕಾರಣವನ್ನು ನೀಡಿದ್ದು, ಅವರ ಹೇಳಿಕೆ ಬಗ್ಗೆ ಕೊಹ್ಲಿಯ ಬಾಲ್ಯದ ಕೋಚ್ ಹೇಳಿಕೆ ನೀಡಿದ್ದಾರೆ.

ಸೌರವ್ ಗಂಗೂಲಿ

ಗಂಗೂಲಿ ಅವರ ಈ ಹೇಳಿಕೆಯನ್ನು ಕೊಹ್ಲಿಯ ಬಾಲ್ಯದ ಕೋಚ್ ರಾಜ್ಕುಮಾರ್ ಶರ್ಮಾ ಆಘಾತಕಾರಿ ಎಂದು ಹೇಳಿದ್ದಾರೆ. ಕ್ರೀಡಾ ನೀತಿ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಅವರು, "ಟ್ವೆಂಟಿ-20 ನಾಯಕತ್ವವನ್ನು ಬಿಟ್ಟುಕೊಡಬೇಡಿ ಎಂದು ಮಂಡಳಿಯು ಕೊಹ್ಲಿಗೆ ಕೇಳಿದೆ ಎಂದು ಸೌರವ್ ಗಂಗೂಲಿ ಹೇಳಿಕೆಯನ್ನು ನಾನು ಓದಿದ್ದೇನೆ. ನನಗೆ ಅಂತಹದ್ದೇನೂ ನೆನಪಿಲ್ಲ, ಈ ಹೇಳಿಕೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ವಿಭಿನ್ನ ಹೇಳಿಕೆಗಳು ಹೊರಬರುತ್ತಿದೆ ಎಂದಿದ್ದಾರೆ.

ಜೊತೆಗೆ ಕೊಹ್ಲಿಯ ಬಾಲ್ಯದ ಕೋಚ್ ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ಮೇಲೆ ಪ್ರಶ್ನೆಗಳನ್ನು ಎತ್ತಿದರು. ಆಯ್ಕೆ ಸಮಿತಿಯು ನಿರ್ಧಾರಕ್ಕೆ ಕಾರಣಗಳನ್ನು ನೀಡುವುದಿಲ್ಲ. ನಿರ್ವಹಣೆ, ಬಿಸಿಸಿಐ ಅಥವಾ ಆಯ್ಕೆದಾರರು ಏನು ಬಯಸುತ್ತಾರೆ ಎಂಬುದು ನಮಗೆ ತಿಳಿದಿಲ್ಲ, ಯಾವುದೇ ವಿವರಣೆಯಿಲ್ಲ, ಇದರಲ್ಲಿ ಯಾವುದೇ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿದ್ದಾರೆ.




