AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ತಿಂಗಳಿಗೆ ಗೊತ್ತಾದ್ರೆ.. ಮಾಜಿ ಮಡದಿ ಧನಶ್ರೀ ಅರೋಪಗಳಿಗೆ ಚಾಹಲ್ ನೀಡಿದ ಉತ್ತರವೇನು?

Yuzvendra Chahal: ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನದ ನಂತರ, ಧನಶ್ರೀ ರಿಯಾಲಿಟಿ ಶೋನಲ್ಲಿ ಚಾಹಲ್ ಮದುವೆಯಾದ ಎರಡೇ ತಿಂಗಳಿಗೆ ಮೋಸ ಮಾಡಿದ್ದರು ಎಂದು ಆರೋಪಿಸಿದ್ದರು. ಈ ಆರೋಪಗಳಿಗೆ ಚಾಹಲ್ ಈಗ ಪ್ರತಿಕ್ರಿಯಿಸಿ, ಅವುಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. "ನಾನು ಆಟಗಾರ, ಮೋಸ ಮಾಡುವುದಿಲ್ಲ. ಆ ಅಧ್ಯಾಯ ಮುಗಿದಿದೆ, ನಾನು ಮುಂದೆ ಹೋಗಿದ್ದೇನೆ," ಎಂದು ಹಿಂದೂಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ಚಾಹಲ್ ಸ್ಪಷ್ಟಪಡಿಸಿದ್ದಾರೆ.

ಪೃಥ್ವಿಶಂಕರ
|

Updated on: Oct 08, 2025 | 6:05 PM

Share
ಯುಜ್ವೇಂದ್ರ ಚಾಹಲ್ ಮತ್ತು ಅವರ ಮಡದಿ ಧನಶ್ರೀ ವರ್ಮಾ ಮಾರ್ಚ್ 20, 2025 ರಂದು ವಿಚ್ಛೇದನ ಪಡೆಯುವ ಮೂಲಕ ಪರಸ್ಪರ ಬೇರ್ಪಟ್ಟ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೆ. ಡಿಸೆಂಬರ್ 22, 2020 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಈ ಜೋಡಿ ಸರಿಯಾಗಿ ಐದು ವರ್ಷವೂ ಜೊತೆಯಾಗಿ ಬಾಳಲಿಲ್ಲ. ಮದುವೆಯಾದ ಎರಡನೇ ವರ್ಷಕ್ಕೆ ಇವರಿಬ್ಬರ ನಡುವೆ ಬಿರುಕು ಮೂಡಿತ್ತು ಎಂದು ವರದಿಯಾಗಿತ್ತು.

ಯುಜ್ವೇಂದ್ರ ಚಾಹಲ್ ಮತ್ತು ಅವರ ಮಡದಿ ಧನಶ್ರೀ ವರ್ಮಾ ಮಾರ್ಚ್ 20, 2025 ರಂದು ವಿಚ್ಛೇದನ ಪಡೆಯುವ ಮೂಲಕ ಪರಸ್ಪರ ಬೇರ್ಪಟ್ಟ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೆ. ಡಿಸೆಂಬರ್ 22, 2020 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಈ ಜೋಡಿ ಸರಿಯಾಗಿ ಐದು ವರ್ಷವೂ ಜೊತೆಯಾಗಿ ಬಾಳಲಿಲ್ಲ. ಮದುವೆಯಾದ ಎರಡನೇ ವರ್ಷಕ್ಕೆ ಇವರಿಬ್ಬರ ನಡುವೆ ಬಿರುಕು ಮೂಡಿತ್ತು ಎಂದು ವರದಿಯಾಗಿತ್ತು.

1 / 6
ಹೀಗಾಗಿ 2022 ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹಲವಾರು ವರದಿಗಳು ಹೇಳಿದ್ದವು. ಅಲ್ಲದೆ ಇಷ್ಟರಲ್ಲೇ ವಿಚ್ಛೇದನ ಕೂಡ ಪಡೆಯಲಿದ್ದಾರೆ ಎಂದು ವರದಿಯಾಗುತ್ತಿತ್ತು. ಅದರಂತೆ ಅಂತಿಮವಾಗಿ ಇವರಿಬ್ಬರು 2025 ರಲ್ಲಿ ಅಧಿಕೃತವಾಗಿ ಬೇರೆ ಬೇರೆಯಾದರು. ಆದರೆ ಅಷ್ಟು ದಿನಗಳವರೆಗೆ ಒಬ್ಬರಿಗೊಬ್ಬರು ಯಾವುದೇ ಆರೋಪಗಳನ್ನು ಮಾಡಿರಲಿಲ್ಲ.

ಹೀಗಾಗಿ 2022 ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹಲವಾರು ವರದಿಗಳು ಹೇಳಿದ್ದವು. ಅಲ್ಲದೆ ಇಷ್ಟರಲ್ಲೇ ವಿಚ್ಛೇದನ ಕೂಡ ಪಡೆಯಲಿದ್ದಾರೆ ಎಂದು ವರದಿಯಾಗುತ್ತಿತ್ತು. ಅದರಂತೆ ಅಂತಿಮವಾಗಿ ಇವರಿಬ್ಬರು 2025 ರಲ್ಲಿ ಅಧಿಕೃತವಾಗಿ ಬೇರೆ ಬೇರೆಯಾದರು. ಆದರೆ ಅಷ್ಟು ದಿನಗಳವರೆಗೆ ಒಬ್ಬರಿಗೊಬ್ಬರು ಯಾವುದೇ ಆರೋಪಗಳನ್ನು ಮಾಡಿರಲಿಲ್ಲ.

2 / 6
ಆದರೆ ವಿಚ್ಛೇದನ ಬಳಿಕ ಧನಶ್ರೀ ವರ್ಮಾ ಇತ್ತೀಚೆಗಷ್ಟೇ ಚಾಹಲ್ ತನಗೆ ಮದುವೆಯಾದ ಎರಡೇ ತಿಂಗಳಿಗೆ ಮೋಸ ಮಾಡಿದ್ದಾರೆ ಎಂದು ರಿಯಾಲಿಟಿ ಶೋವೊಂದರಲ್ಲಿ ಹೇಳಿದ್ದರು. ಈ ಆರೋಪಕ್ಕೆ ಯುಜ್ವೇಂದ್ರ ಚಾಹಲ್ ಈಗ ಪ್ರತಿಕ್ರಿಯಿಸಿದ್ದಾರೆ.

ಆದರೆ ವಿಚ್ಛೇದನ ಬಳಿಕ ಧನಶ್ರೀ ವರ್ಮಾ ಇತ್ತೀಚೆಗಷ್ಟೇ ಚಾಹಲ್ ತನಗೆ ಮದುವೆಯಾದ ಎರಡೇ ತಿಂಗಳಿಗೆ ಮೋಸ ಮಾಡಿದ್ದಾರೆ ಎಂದು ರಿಯಾಲಿಟಿ ಶೋವೊಂದರಲ್ಲಿ ಹೇಳಿದ್ದರು. ಈ ಆರೋಪಕ್ಕೆ ಯುಜ್ವೇಂದ್ರ ಚಾಹಲ್ ಈಗ ಪ್ರತಿಕ್ರಿಯಿಸಿದ್ದಾರೆ.

3 / 6
ಧನಶ್ರೀ ವರ್ಮಾ ಮಾಡಿದ ಎಲ್ಲಾ ಆರೋಪಗಳನ್ನು ನಿರಾಕರಿಸಿ ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಚಾಹಲ್, ‘ನಾನು ಒಬ್ಬ ಆಟಗಾರ ಮತ್ತು ನಾನು ಮೋಸ ಮಾಡುವುದಿಲ್ಲ. ಯಾರಾದರೂ ಎರಡು ತಿಂಗಳೊಳಗೆ ಮೋಸ ಮಾಡಿದರೆ, ಸಂಬಂಧ ಎಷ್ಟು ಕಾಲ ಉಳಿಯುತ್ತದೆ? ನನಗೆ, ಈ ಅಧ್ಯಾಯ ಮುಗಿದಿದೆ. ನಾನು ನನ್ನ ಜೀವನವನ್ನು ಮುಂದುವರಿಸಿದ್ದೇನೆ ಮತ್ತು ಉಳಿದವರೆಲ್ಲರೂ ಸಹ ಮುಂದುವರಿಯಬೇಕು.

ಧನಶ್ರೀ ವರ್ಮಾ ಮಾಡಿದ ಎಲ್ಲಾ ಆರೋಪಗಳನ್ನು ನಿರಾಕರಿಸಿ ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಚಾಹಲ್, ‘ನಾನು ಒಬ್ಬ ಆಟಗಾರ ಮತ್ತು ನಾನು ಮೋಸ ಮಾಡುವುದಿಲ್ಲ. ಯಾರಾದರೂ ಎರಡು ತಿಂಗಳೊಳಗೆ ಮೋಸ ಮಾಡಿದರೆ, ಸಂಬಂಧ ಎಷ್ಟು ಕಾಲ ಉಳಿಯುತ್ತದೆ? ನನಗೆ, ಈ ಅಧ್ಯಾಯ ಮುಗಿದಿದೆ. ನಾನು ನನ್ನ ಜೀವನವನ್ನು ಮುಂದುವರಿಸಿದ್ದೇನೆ ಮತ್ತು ಉಳಿದವರೆಲ್ಲರೂ ಸಹ ಮುಂದುವರಿಯಬೇಕು.

4 / 6
ನಮ್ಮ ವೈವಾಹಿಕ ಜೀವನ 4.5 ವರ್ಷಗಳ ಕಾಲ ನಡೆದಿತ್ತು. ಹೀಗಿರುವಾಗ ಮದುವೆಯಾದ ಎರಡು ತಿಂಗಳಲ್ಲಿ ಮೋಸ ಹೋದರೆ ಅಷ್ಟು ವರ್ಷ ಯಾರು ಜೊತೆಯಲಿರುತ್ತಾರೆ?. ನಾನು ಹಿಂದಿನದ್ದು ಮರೆತು ದೂರ ಸರಿದಿದ್ದೇನೆ ಎಂದು ನಾನು ಮೊದಲೇ ಹೇಳಿದ್ದೆ . ಆದರೆ ಕೆಲವರು ಇನ್ನೂ ಅಲ್ಲಿಯೇ ಸಿಲುಕಿಕೊಂಡಿದ್ದಾರೆ . ಅವರ ಮನೆ ನನ್ನ ಹೆಸರಿನಲ್ಲಿ ನಡೆಯುತ್ತಿದೆ, ಆದ್ದರಿಂದ ಅವರು ಹಾಗೆಯೇ ಮುಂದುವರಿಸಬಹುದು.

ನಮ್ಮ ವೈವಾಹಿಕ ಜೀವನ 4.5 ವರ್ಷಗಳ ಕಾಲ ನಡೆದಿತ್ತು. ಹೀಗಿರುವಾಗ ಮದುವೆಯಾದ ಎರಡು ತಿಂಗಳಲ್ಲಿ ಮೋಸ ಹೋದರೆ ಅಷ್ಟು ವರ್ಷ ಯಾರು ಜೊತೆಯಲಿರುತ್ತಾರೆ?. ನಾನು ಹಿಂದಿನದ್ದು ಮರೆತು ದೂರ ಸರಿದಿದ್ದೇನೆ ಎಂದು ನಾನು ಮೊದಲೇ ಹೇಳಿದ್ದೆ . ಆದರೆ ಕೆಲವರು ಇನ್ನೂ ಅಲ್ಲಿಯೇ ಸಿಲುಕಿಕೊಂಡಿದ್ದಾರೆ . ಅವರ ಮನೆ ನನ್ನ ಹೆಸರಿನಲ್ಲಿ ನಡೆಯುತ್ತಿದೆ, ಆದ್ದರಿಂದ ಅವರು ಹಾಗೆಯೇ ಮುಂದುವರಿಸಬಹುದು.

5 / 6
ನನಗೆ ಅದರ ಬಗ್ಗೆ ಚಿಂತೆ ಇಲ್ಲ, ಅದು ಪ್ರಸ್ತುತವೂ ಅಲ್ಲ. ನಾನು ಈ ಅಧ್ಯಾಯವನ್ನು ಮರೆತಿದ್ದೇನೆ. ಯಾರಾದರೂ ಏನು ಬೇಕಾದರೂ ಹೇಳಬಹುದು. ಅದು ಸೋಶಿಯಲ್ ಮೀಡಿಯಾದಲ್ಲಿ ಬೇಗ ವೈರಲ್ ಆಗುತ್ತದೆ. ಇದರ ಜೊತೆಗೆ ನೂರು ವದಂತಿಗಳು ಹರಡುತ್ತವೆ. ಆದರೆ ನನಗೆ, ಆ ಅಧ್ಯಾಯ ಮುಗಿದಿದೆ . ನಾನು ಅದರ ಬಗ್ಗೆ ಮತ್ತೆ ಮಾತನಾಡಲು ಬಯಸುವುದಿಲ್ಲ ಎಂದಿದ್ದಾರೆ.

ನನಗೆ ಅದರ ಬಗ್ಗೆ ಚಿಂತೆ ಇಲ್ಲ, ಅದು ಪ್ರಸ್ತುತವೂ ಅಲ್ಲ. ನಾನು ಈ ಅಧ್ಯಾಯವನ್ನು ಮರೆತಿದ್ದೇನೆ. ಯಾರಾದರೂ ಏನು ಬೇಕಾದರೂ ಹೇಳಬಹುದು. ಅದು ಸೋಶಿಯಲ್ ಮೀಡಿಯಾದಲ್ಲಿ ಬೇಗ ವೈರಲ್ ಆಗುತ್ತದೆ. ಇದರ ಜೊತೆಗೆ ನೂರು ವದಂತಿಗಳು ಹರಡುತ್ತವೆ. ಆದರೆ ನನಗೆ, ಆ ಅಧ್ಯಾಯ ಮುಗಿದಿದೆ . ನಾನು ಅದರ ಬಗ್ಗೆ ಮತ್ತೆ ಮಾತನಾಡಲು ಬಯಸುವುದಿಲ್ಲ ಎಂದಿದ್ದಾರೆ.

6 / 6
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ