ಬಿಗ್ ಬಾಸ್ ಮನೆಯಲ್ಲಿ ಹೊಸ ಗಾದೆ ಹೇಳಿದ ಡ್ರೋನ್ ಪ್ರತಾಪ್; ಏನಿದರ ಅರ್ಥ?
ಡ್ರೋನ್ ಪ್ರತಾಪ್ ಅವರು ದೊಡ್ಮನೆಯಲ್ಲಿ ಆಗಾಗ ಗಾದೆ ಹೇಳುತ್ತಾ ಇರುತ್ತಾರೆ. ‘ಆರು ಹೆತ್ತವಳಿಗೆ ಮೂರು ಹೆತ್ತವಳು ಹೇಳಿದಳಂತೆ’ ಎಂದು ಈ ಮೊದಲು ಹೇಳಿದ್ದರು. ಈಗ ಹೊಸ ಗಾದೆ ಹೇಳಿದ್ದಾರೆ.
Updated on: Nov 18, 2023 | 9:22 AM

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸಮಾಜದಲ್ಲಿ ಅವರು ಗುರುತಿಸಿಕೊಂಡಿದ್ದಕ್ಕೂ, ಬಿಗ್ ಬಾಸ್ನಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಡ್ರೋನ್ ಪ್ರತಾಪ್ ಬಗ್ಗೆ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ.

ಡ್ರೋನ್ ಪ್ರತಾಪ್ ಅವರು ದೊಡ್ಮನೆಯಲ್ಲಿ ಆಗಾಗ ಗಾದೆ ಹೇಳುತ್ತಾ ಇರುತ್ತಾರೆ. ‘ಆರು ಹೆತ್ತವಳಿಗೆ ಮೂರು ಹೆತ್ತವಳು ಹೇಳಿದಳಂತೆ’ ಎಂದು ಈ ಮೊದಲು ಹೇಳಿದ್ದರು. ಈಗ ಹೊಸ ಗಾದೆ ಹೇಳಿದ್ದಾರೆ.

ಈ ವಾರ ಲೆಟರ್ ಬರೋ ಟಾಸ್ಕ್ ಇತ್ತು. ತುಕಾಲಿ ಸಂತೋಷ್ಗೆ ಲೆಟರ್ ಬಂದಿತ್ತು. ಡ್ರೋನ್ ಪ್ರತಾಪ್ಗೆ ಪತ್ರ ಸಿಗಲಿಲ್ಲ. ಸಂತೋಷ್ ಖುಷಿಯಿಂದ ಸುತ್ತಾಡೋಕೆ ಹೋಗೋಣ ಎಂದಿದ್ದಾರೆ. ಆಗ ಪ್ರತಾಪ್ ಗಾದೆ ಹೇಳಿದ್ದಾರೆ.

‘ಹಸಿದವರು ಅಲ್ಲಾಡ್ತಿದ್ರು, ಉಂಡವ್ರು ಉಳ್ಳಾಡ್ತಿದ್ರು’ ಎಂದಿದ್ದಾರೆ ಡ್ರೋನ್ ಪ್ರತಾಪ್. ಸಂತೋಷ್ ಖುಷಿಯಿಂದ ಕುಣಿಯುತ್ತಿದ್ದಾರೆ, ಪ್ರತಾಪ್ ಬೇಸರದಲ್ಲಿದ್ದಾರೆ ಎಂಬುದು ಗಾದೆಯ ಅರ್ಥ.

ಪ್ರತಾಪ್ ಬಿಗ್ ಬಾಸ್ ಮನೆಗೆ ಬಂದಾಗ ಸಣ್ಣ ಸಣ್ಣ ವಿಚಾರಕ್ಕೆ ಅಳುತ್ತಿದ್ದರು. ಈಗ ಅವರು ಸ್ಟ್ರಾಂಗ್ ಆಗಿದ್ದಾರೆ. ಎಲ್ಲರಿಂದ ಅವರು ಮೆಚ್ಚುಗೆ ಪಡೆಯುತ್ತಿದ್ದಾರೆ.

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More



