AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾಚಲ ಪ್ರದೇಶ, ಕಾಶ್ಮೀರದಲ್ಲಿ ಭಾರೀ ಹಿಮಪಾತ; ರಸ್ತೆಗಳು ಬಂದ್ ಆಗಿ ಪ್ರವಾಸಿಗರ ಪರದಾಟ

ಭಾನುವಾರ ರಾತ್ರಿಯ ಹಿಮಪಾತದ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಮೊಘಲ್ ರಸ್ತೆಯನ್ನು ಮುಚ್ಚಲಾಗಿದೆ. ಈ ಸಮಯದಲ್ಲಿ ಹಿಮಪಾತದಿಂದಾಗಿ ಮೊಘಲ್ ರಸ್ತೆಯು ಪ್ರತಿ ವರ್ಷ ಮುಚ್ಚಲ್ಪಡುತ್ತದೆ.

TV9 Web
| Updated By: ಸುಷ್ಮಾ ಚಕ್ರೆ

Updated on: Nov 07, 2022 | 3:19 PM

ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿದೆ.

ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿದೆ.

1 / 19
ಭಾನುವಾರ ರಾತ್ರಿಯ ಹಿಮಪಾತದ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಮೊಘಲ್ ರಸ್ತೆಯನ್ನು ಮುಚ್ಚಲಾಗಿದೆ.

ಭಾನುವಾರ ರಾತ್ರಿಯ ಹಿಮಪಾತದ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಮೊಘಲ್ ರಸ್ತೆಯನ್ನು ಮುಚ್ಚಲಾಗಿದೆ.

2 / 19
3,500 ಮೀ (11,500 ಅಡಿ) ಎತ್ತರದಲ್ಲಿರುವ ಈ ಪ್ರದೇಶದಲ್ಲಿ ನಿನ್ನೆ ರಾತ್ರಿ ಭಾರೀ ಹಿಮಪಾತವಾಗಿತ್ತು.

3,500 ಮೀ (11,500 ಅಡಿ) ಎತ್ತರದಲ್ಲಿರುವ ಈ ಪ್ರದೇಶದಲ್ಲಿ ನಿನ್ನೆ ರಾತ್ರಿ ಭಾರೀ ಹಿಮಪಾತವಾಗಿತ್ತು.

3 / 19
ಜಮ್ಮುವಿನ ಪೂಂಚ್ ಮತ್ತು ರಾಜೌರಿ ಅವಳಿ ಜಿಲ್ಲೆಗಳನ್ನು ಕಾಶ್ಮೀರದ ಶೋಪಿಯಾನ್ ಜಿಲ್ಲೆಗೆ ಸಂಪರ್ಕಿಸುವ ಮೊಘಲ್ ರಸ್ತೆ, ಪೋಷನಾ ಮತ್ತು ಪೀರ್ ಕಿ ಗಲಿ ನಡುವಿನ ನೆಲದ ಮೇಲೆ 5 ಇಂಚುಗಳಷ್ಟು ಹಿಮ ತುಂಬಿದೆ.

ಜಮ್ಮುವಿನ ಪೂಂಚ್ ಮತ್ತು ರಾಜೌರಿ ಅವಳಿ ಜಿಲ್ಲೆಗಳನ್ನು ಕಾಶ್ಮೀರದ ಶೋಪಿಯಾನ್ ಜಿಲ್ಲೆಗೆ ಸಂಪರ್ಕಿಸುವ ಮೊಘಲ್ ರಸ್ತೆ, ಪೋಷನಾ ಮತ್ತು ಪೀರ್ ಕಿ ಗಲಿ ನಡುವಿನ ನೆಲದ ಮೇಲೆ 5 ಇಂಚುಗಳಷ್ಟು ಹಿಮ ತುಂಬಿದೆ.

4 / 19
ನವೆಂಬರ್ 10ರವರೆಗೆ ಆಗಾಗ ಮಳೆ ಮತ್ತು ಹಿಮಪಾತ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಕೂಲ ಹವಾಮಾನ ಉಂಟಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ನವೆಂಬರ್ 10ರವರೆಗೆ ಆಗಾಗ ಮಳೆ ಮತ್ತು ಹಿಮಪಾತ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಕೂಲ ಹವಾಮಾನ ಉಂಟಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

5 / 19
ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಭಾಗಗಳಲ್ಲಿ ಮಳೆಯಾಗುತ್ತಿದ್ದರೂ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಏನೂ ಸಮಸ್ಯೆಯಾಗಿಲ್ಲ.

ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಭಾಗಗಳಲ್ಲಿ ಮಳೆಯಾಗುತ್ತಿದ್ದರೂ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಏನೂ ಸಮಸ್ಯೆಯಾಗಿಲ್ಲ.

6 / 19
ಈ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡೆತಡೆಗಳಿಲ್ಲ ಎಂದು ಸಂಚಾರ ಇಲಾಖೆ ತಿಳಿಸಿದೆ.

ಈ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡೆತಡೆಗಳಿಲ್ಲ ಎಂದು ಸಂಚಾರ ಇಲಾಖೆ ತಿಳಿಸಿದೆ.

7 / 19
ಈ ಸಮಯದಲ್ಲಿ ಹಿಮಪಾತದಿಂದಾಗಿ ಮೊಘಲ್ ರಸ್ತೆಯು ಪ್ರತಿ ವರ್ಷ ಮುಚ್ಚಲ್ಪಡುತ್ತದೆ.

ಈ ಸಮಯದಲ್ಲಿ ಹಿಮಪಾತದಿಂದಾಗಿ ಮೊಘಲ್ ರಸ್ತೆಯು ಪ್ರತಿ ವರ್ಷ ಮುಚ್ಚಲ್ಪಡುತ್ತದೆ.

8 / 19
ಮೊಘಲ್ ಯುಗದಲ್ಲಿ ಪಿರ್ ಪಂಜಾಲ್ ಪಾಸ್ ಅನ್ನು ದಾಟಲು ಈ ರಸ್ತೆಯನ್ನು ಐತಿಹಾಸಿಕವಾಗಿ ಬಳಸಲಾಗುತ್ತಿತ್ತು.

ಮೊಘಲ್ ಯುಗದಲ್ಲಿ ಪಿರ್ ಪಂಜಾಲ್ ಪಾಸ್ ಅನ್ನು ದಾಟಲು ಈ ರಸ್ತೆಯನ್ನು ಐತಿಹಾಸಿಕವಾಗಿ ಬಳಸಲಾಗುತ್ತಿತ್ತು.

9 / 19
ಪ್ರಸ್ತುತ, ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಗೆ (NH-44) ಪರ್ಯಾಯ ಮಾರ್ಗವನ್ನು ಪರಿಗಣಿಸಲಾಗುತ್ತಿದೆ.

ಪ್ರಸ್ತುತ, ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಗೆ (NH-44) ಪರ್ಯಾಯ ಮಾರ್ಗವನ್ನು ಪರಿಗಣಿಸಲಾಗುತ್ತಿದೆ.

10 / 19
ಕಳೆದ ಮಂಗಳವಾರ ಭಾರೀ ಮಳೆಯ ನಂತರ ಶ್ರೀನಗರ-ಲೇಹ್ ಮಾರ್ಗವನ್ನು ಮುಚ್ಚಲಾಗಿತ್ತು.

ಕಳೆದ ಮಂಗಳವಾರ ಭಾರೀ ಮಳೆಯ ನಂತರ ಶ್ರೀನಗರ-ಲೇಹ್ ಮಾರ್ಗವನ್ನು ಮುಚ್ಚಲಾಗಿತ್ತು.

11 / 19
ಲಡಾಖ್ ಕೇಂದ್ರಾಡಳಿತ ಪ್ರದೇಶದ ದ್ರಾಸ್‌ನಲ್ಲಿ ಹಿಮಪಾತವೂ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಡಾಖ್ ಕೇಂದ್ರಾಡಳಿತ ಪ್ರದೇಶದ ದ್ರಾಸ್‌ನಲ್ಲಿ ಹಿಮಪಾತವೂ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

12 / 19
ಕಾಶ್ಮೀರದ ಹೆಚ್ಚಿನ ಭಾಗಗಳು ರಾತ್ರಿಯಿಡೀ ಸಾಧಾರಣ ಮಳೆಯಿಂದ ಹಾನಿಗೊಳಗಾಗಿದ್ದವು.

ಕಾಶ್ಮೀರದ ಹೆಚ್ಚಿನ ಭಾಗಗಳು ರಾತ್ರಿಯಿಡೀ ಸಾಧಾರಣ ಮಳೆಯಿಂದ ಹಾನಿಗೊಳಗಾಗಿದ್ದವು.

13 / 19
ಶ್ರೀನಗರ ನಗರದಲ್ಲಿ ಅತಿ ಹೆಚ್ಚು 27 ಮಿಮೀ ಮಳೆಯಾಗಿದೆ. ಬಾರಾಮುಲ್ಲಾ (23 ಮಿ.ಮೀ.), ಬಂಡಿಪೋರಾ (22 ಮಿ.ಮೀ.), ಕುಲ್ಗಾಮ್ ಮತ್ತು ಬದ್ಗಾಮ್ (ತಲಾ 21 ಮಿ.ಮೀ), ಮತ್ತು ಪುಲ್ವಾಮಾ (20 ಮಿ.ಮೀ)ಗಳಲ್ಲಿಯೂ ಬೆಳಗ್ಗೆ 8.30ರವರೆಗೆ ಸಾಕಷ್ಟು ಮಳೆಯಾಗಿದೆ.

ಶ್ರೀನಗರ ನಗರದಲ್ಲಿ ಅತಿ ಹೆಚ್ಚು 27 ಮಿಮೀ ಮಳೆಯಾಗಿದೆ. ಬಾರಾಮುಲ್ಲಾ (23 ಮಿ.ಮೀ.), ಬಂಡಿಪೋರಾ (22 ಮಿ.ಮೀ.), ಕುಲ್ಗಾಮ್ ಮತ್ತು ಬದ್ಗಾಮ್ (ತಲಾ 21 ಮಿ.ಮೀ), ಮತ್ತು ಪುಲ್ವಾಮಾ (20 ಮಿ.ಮೀ)ಗಳಲ್ಲಿಯೂ ಬೆಳಗ್ಗೆ 8.30ರವರೆಗೆ ಸಾಕಷ್ಟು ಮಳೆಯಾಗಿದೆ.

14 / 19
ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಭಾಗದಲ್ಲಿ ಮೈನಸ್ 3.6 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಭಾಗದಲ್ಲಿ ಮೈನಸ್ 3.6 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ.

15 / 19
ಕಾಶ್ಮೀರ ಕಣಿವೆಯಾದ್ಯಂತ ರಾತ್ರಿಯ ತಾಪಮಾನದಲ್ಲಿ ಕುಸಿತ ಉಂಟಾಗಿದೆ.

ಕಾಶ್ಮೀರ ಕಣಿವೆಯಾದ್ಯಂತ ರಾತ್ರಿಯ ತಾಪಮಾನದಲ್ಲಿ ಕುಸಿತ ಉಂಟಾಗಿದೆ.

16 / 19
ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಪರ್ಯಾಯ ಸಂಪರ್ಕವಾದ ಮೊಘಲ್ ರಸ್ತೆಯನ್ನು ಭಾನುವಾರ ವಾಹನ ಸಂಚಾರಕ್ಕಾಗಿ ಮುಚ್ಚಲಾಗಿದೆ.

ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಪರ್ಯಾಯ ಸಂಪರ್ಕವಾದ ಮೊಘಲ್ ರಸ್ತೆಯನ್ನು ಭಾನುವಾರ ವಾಹನ ಸಂಚಾರಕ್ಕಾಗಿ ಮುಚ್ಚಲಾಗಿದೆ.

17 / 19
ಪಂಜಾಬ್, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ ಇತರ ರಾಜ್ಯಗಳಲ್ಲಿ ಇನ್ನೆರಡು ದಿನ ಮಳೆಯ ಜೊತೆಗೆ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶಗಳ ಮೇಲೆ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಪಂಜಾಬ್, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ ಇತರ ರಾಜ್ಯಗಳಲ್ಲಿ ಇನ್ನೆರಡು ದಿನ ಮಳೆಯ ಜೊತೆಗೆ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶಗಳ ಮೇಲೆ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

18 / 19
ಭಾನುವಾರ ಕಾಶ್ಮೀರ ಕಣಿವೆಯ ಮೇಲೆ ಪ್ರತ್ಯೇಕವಾದ ಭಾರೀ ಮಳೆ ಅಥವಾ ಹಿಮ ಬೀಳುವ ಸಾಧ್ಯತೆ ಇದೆ.

ಭಾನುವಾರ ಕಾಶ್ಮೀರ ಕಣಿವೆಯ ಮೇಲೆ ಪ್ರತ್ಯೇಕವಾದ ಭಾರೀ ಮಳೆ ಅಥವಾ ಹಿಮ ಬೀಳುವ ಸಾಧ್ಯತೆ ಇದೆ.

19 / 19
Follow us
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್
ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್
ಉನ್ನಾವೋದಲ್ಲಿ ವ್ಯಕ್ತಿಯನ್ನು ತುಳಿದು ಕೊಂದ ಎತ್ತು
ಉನ್ನಾವೋದಲ್ಲಿ ವ್ಯಕ್ತಿಯನ್ನು ತುಳಿದು ಕೊಂದ ಎತ್ತು
ರಷ್ಯಾದಲ್ಲಿ ರೈಲು ಹಾದುಹೋಗುತ್ತಿದ್ದಂತೆ ಕುಸಿದ ಸೇತುವೆ
ರಷ್ಯಾದಲ್ಲಿ ರೈಲು ಹಾದುಹೋಗುತ್ತಿದ್ದಂತೆ ಕುಸಿದ ಸೇತುವೆ