AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾಚಲ ಪ್ರದೇಶ, ಕಾಶ್ಮೀರದಲ್ಲಿ ಭಾರೀ ಹಿಮಪಾತ; ರಸ್ತೆಗಳು ಬಂದ್ ಆಗಿ ಪ್ರವಾಸಿಗರ ಪರದಾಟ

ಭಾನುವಾರ ರಾತ್ರಿಯ ಹಿಮಪಾತದ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಮೊಘಲ್ ರಸ್ತೆಯನ್ನು ಮುಚ್ಚಲಾಗಿದೆ. ಈ ಸಮಯದಲ್ಲಿ ಹಿಮಪಾತದಿಂದಾಗಿ ಮೊಘಲ್ ರಸ್ತೆಯು ಪ್ರತಿ ವರ್ಷ ಮುಚ್ಚಲ್ಪಡುತ್ತದೆ.

TV9 Web
| Updated By: ಸುಷ್ಮಾ ಚಕ್ರೆ

Updated on: Nov 07, 2022 | 3:19 PM

ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿದೆ.

ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿದೆ.

1 / 19
ಭಾನುವಾರ ರಾತ್ರಿಯ ಹಿಮಪಾತದ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಮೊಘಲ್ ರಸ್ತೆಯನ್ನು ಮುಚ್ಚಲಾಗಿದೆ.

ಭಾನುವಾರ ರಾತ್ರಿಯ ಹಿಮಪಾತದ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಮೊಘಲ್ ರಸ್ತೆಯನ್ನು ಮುಚ್ಚಲಾಗಿದೆ.

2 / 19
3,500 ಮೀ (11,500 ಅಡಿ) ಎತ್ತರದಲ್ಲಿರುವ ಈ ಪ್ರದೇಶದಲ್ಲಿ ನಿನ್ನೆ ರಾತ್ರಿ ಭಾರೀ ಹಿಮಪಾತವಾಗಿತ್ತು.

3,500 ಮೀ (11,500 ಅಡಿ) ಎತ್ತರದಲ್ಲಿರುವ ಈ ಪ್ರದೇಶದಲ್ಲಿ ನಿನ್ನೆ ರಾತ್ರಿ ಭಾರೀ ಹಿಮಪಾತವಾಗಿತ್ತು.

3 / 19
ಜಮ್ಮುವಿನ ಪೂಂಚ್ ಮತ್ತು ರಾಜೌರಿ ಅವಳಿ ಜಿಲ್ಲೆಗಳನ್ನು ಕಾಶ್ಮೀರದ ಶೋಪಿಯಾನ್ ಜಿಲ್ಲೆಗೆ ಸಂಪರ್ಕಿಸುವ ಮೊಘಲ್ ರಸ್ತೆ, ಪೋಷನಾ ಮತ್ತು ಪೀರ್ ಕಿ ಗಲಿ ನಡುವಿನ ನೆಲದ ಮೇಲೆ 5 ಇಂಚುಗಳಷ್ಟು ಹಿಮ ತುಂಬಿದೆ.

ಜಮ್ಮುವಿನ ಪೂಂಚ್ ಮತ್ತು ರಾಜೌರಿ ಅವಳಿ ಜಿಲ್ಲೆಗಳನ್ನು ಕಾಶ್ಮೀರದ ಶೋಪಿಯಾನ್ ಜಿಲ್ಲೆಗೆ ಸಂಪರ್ಕಿಸುವ ಮೊಘಲ್ ರಸ್ತೆ, ಪೋಷನಾ ಮತ್ತು ಪೀರ್ ಕಿ ಗಲಿ ನಡುವಿನ ನೆಲದ ಮೇಲೆ 5 ಇಂಚುಗಳಷ್ಟು ಹಿಮ ತುಂಬಿದೆ.

4 / 19
ನವೆಂಬರ್ 10ರವರೆಗೆ ಆಗಾಗ ಮಳೆ ಮತ್ತು ಹಿಮಪಾತ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಕೂಲ ಹವಾಮಾನ ಉಂಟಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ನವೆಂಬರ್ 10ರವರೆಗೆ ಆಗಾಗ ಮಳೆ ಮತ್ತು ಹಿಮಪಾತ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಕೂಲ ಹವಾಮಾನ ಉಂಟಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

5 / 19
ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಭಾಗಗಳಲ್ಲಿ ಮಳೆಯಾಗುತ್ತಿದ್ದರೂ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಏನೂ ಸಮಸ್ಯೆಯಾಗಿಲ್ಲ.

ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಭಾಗಗಳಲ್ಲಿ ಮಳೆಯಾಗುತ್ತಿದ್ದರೂ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಏನೂ ಸಮಸ್ಯೆಯಾಗಿಲ್ಲ.

6 / 19
ಈ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡೆತಡೆಗಳಿಲ್ಲ ಎಂದು ಸಂಚಾರ ಇಲಾಖೆ ತಿಳಿಸಿದೆ.

ಈ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡೆತಡೆಗಳಿಲ್ಲ ಎಂದು ಸಂಚಾರ ಇಲಾಖೆ ತಿಳಿಸಿದೆ.

7 / 19
ಈ ಸಮಯದಲ್ಲಿ ಹಿಮಪಾತದಿಂದಾಗಿ ಮೊಘಲ್ ರಸ್ತೆಯು ಪ್ರತಿ ವರ್ಷ ಮುಚ್ಚಲ್ಪಡುತ್ತದೆ.

ಈ ಸಮಯದಲ್ಲಿ ಹಿಮಪಾತದಿಂದಾಗಿ ಮೊಘಲ್ ರಸ್ತೆಯು ಪ್ರತಿ ವರ್ಷ ಮುಚ್ಚಲ್ಪಡುತ್ತದೆ.

8 / 19
ಮೊಘಲ್ ಯುಗದಲ್ಲಿ ಪಿರ್ ಪಂಜಾಲ್ ಪಾಸ್ ಅನ್ನು ದಾಟಲು ಈ ರಸ್ತೆಯನ್ನು ಐತಿಹಾಸಿಕವಾಗಿ ಬಳಸಲಾಗುತ್ತಿತ್ತು.

ಮೊಘಲ್ ಯುಗದಲ್ಲಿ ಪಿರ್ ಪಂಜಾಲ್ ಪಾಸ್ ಅನ್ನು ದಾಟಲು ಈ ರಸ್ತೆಯನ್ನು ಐತಿಹಾಸಿಕವಾಗಿ ಬಳಸಲಾಗುತ್ತಿತ್ತು.

9 / 19
ಪ್ರಸ್ತುತ, ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಗೆ (NH-44) ಪರ್ಯಾಯ ಮಾರ್ಗವನ್ನು ಪರಿಗಣಿಸಲಾಗುತ್ತಿದೆ.

ಪ್ರಸ್ತುತ, ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಗೆ (NH-44) ಪರ್ಯಾಯ ಮಾರ್ಗವನ್ನು ಪರಿಗಣಿಸಲಾಗುತ್ತಿದೆ.

10 / 19
ಕಳೆದ ಮಂಗಳವಾರ ಭಾರೀ ಮಳೆಯ ನಂತರ ಶ್ರೀನಗರ-ಲೇಹ್ ಮಾರ್ಗವನ್ನು ಮುಚ್ಚಲಾಗಿತ್ತು.

ಕಳೆದ ಮಂಗಳವಾರ ಭಾರೀ ಮಳೆಯ ನಂತರ ಶ್ರೀನಗರ-ಲೇಹ್ ಮಾರ್ಗವನ್ನು ಮುಚ್ಚಲಾಗಿತ್ತು.

11 / 19
ಲಡಾಖ್ ಕೇಂದ್ರಾಡಳಿತ ಪ್ರದೇಶದ ದ್ರಾಸ್‌ನಲ್ಲಿ ಹಿಮಪಾತವೂ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಡಾಖ್ ಕೇಂದ್ರಾಡಳಿತ ಪ್ರದೇಶದ ದ್ರಾಸ್‌ನಲ್ಲಿ ಹಿಮಪಾತವೂ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

12 / 19
ಕಾಶ್ಮೀರದ ಹೆಚ್ಚಿನ ಭಾಗಗಳು ರಾತ್ರಿಯಿಡೀ ಸಾಧಾರಣ ಮಳೆಯಿಂದ ಹಾನಿಗೊಳಗಾಗಿದ್ದವು.

ಕಾಶ್ಮೀರದ ಹೆಚ್ಚಿನ ಭಾಗಗಳು ರಾತ್ರಿಯಿಡೀ ಸಾಧಾರಣ ಮಳೆಯಿಂದ ಹಾನಿಗೊಳಗಾಗಿದ್ದವು.

13 / 19
ಶ್ರೀನಗರ ನಗರದಲ್ಲಿ ಅತಿ ಹೆಚ್ಚು 27 ಮಿಮೀ ಮಳೆಯಾಗಿದೆ. ಬಾರಾಮುಲ್ಲಾ (23 ಮಿ.ಮೀ.), ಬಂಡಿಪೋರಾ (22 ಮಿ.ಮೀ.), ಕುಲ್ಗಾಮ್ ಮತ್ತು ಬದ್ಗಾಮ್ (ತಲಾ 21 ಮಿ.ಮೀ), ಮತ್ತು ಪುಲ್ವಾಮಾ (20 ಮಿ.ಮೀ)ಗಳಲ್ಲಿಯೂ ಬೆಳಗ್ಗೆ 8.30ರವರೆಗೆ ಸಾಕಷ್ಟು ಮಳೆಯಾಗಿದೆ.

ಶ್ರೀನಗರ ನಗರದಲ್ಲಿ ಅತಿ ಹೆಚ್ಚು 27 ಮಿಮೀ ಮಳೆಯಾಗಿದೆ. ಬಾರಾಮುಲ್ಲಾ (23 ಮಿ.ಮೀ.), ಬಂಡಿಪೋರಾ (22 ಮಿ.ಮೀ.), ಕುಲ್ಗಾಮ್ ಮತ್ತು ಬದ್ಗಾಮ್ (ತಲಾ 21 ಮಿ.ಮೀ), ಮತ್ತು ಪುಲ್ವಾಮಾ (20 ಮಿ.ಮೀ)ಗಳಲ್ಲಿಯೂ ಬೆಳಗ್ಗೆ 8.30ರವರೆಗೆ ಸಾಕಷ್ಟು ಮಳೆಯಾಗಿದೆ.

14 / 19
ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಭಾಗದಲ್ಲಿ ಮೈನಸ್ 3.6 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಭಾಗದಲ್ಲಿ ಮೈನಸ್ 3.6 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ.

15 / 19
ಕಾಶ್ಮೀರ ಕಣಿವೆಯಾದ್ಯಂತ ರಾತ್ರಿಯ ತಾಪಮಾನದಲ್ಲಿ ಕುಸಿತ ಉಂಟಾಗಿದೆ.

ಕಾಶ್ಮೀರ ಕಣಿವೆಯಾದ್ಯಂತ ರಾತ್ರಿಯ ತಾಪಮಾನದಲ್ಲಿ ಕುಸಿತ ಉಂಟಾಗಿದೆ.

16 / 19
ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಪರ್ಯಾಯ ಸಂಪರ್ಕವಾದ ಮೊಘಲ್ ರಸ್ತೆಯನ್ನು ಭಾನುವಾರ ವಾಹನ ಸಂಚಾರಕ್ಕಾಗಿ ಮುಚ್ಚಲಾಗಿದೆ.

ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಪರ್ಯಾಯ ಸಂಪರ್ಕವಾದ ಮೊಘಲ್ ರಸ್ತೆಯನ್ನು ಭಾನುವಾರ ವಾಹನ ಸಂಚಾರಕ್ಕಾಗಿ ಮುಚ್ಚಲಾಗಿದೆ.

17 / 19
ಪಂಜಾಬ್, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ ಇತರ ರಾಜ್ಯಗಳಲ್ಲಿ ಇನ್ನೆರಡು ದಿನ ಮಳೆಯ ಜೊತೆಗೆ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶಗಳ ಮೇಲೆ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಪಂಜಾಬ್, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ ಇತರ ರಾಜ್ಯಗಳಲ್ಲಿ ಇನ್ನೆರಡು ದಿನ ಮಳೆಯ ಜೊತೆಗೆ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶಗಳ ಮೇಲೆ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

18 / 19
ಭಾನುವಾರ ಕಾಶ್ಮೀರ ಕಣಿವೆಯ ಮೇಲೆ ಪ್ರತ್ಯೇಕವಾದ ಭಾರೀ ಮಳೆ ಅಥವಾ ಹಿಮ ಬೀಳುವ ಸಾಧ್ಯತೆ ಇದೆ.

ಭಾನುವಾರ ಕಾಶ್ಮೀರ ಕಣಿವೆಯ ಮೇಲೆ ಪ್ರತ್ಯೇಕವಾದ ಭಾರೀ ಮಳೆ ಅಥವಾ ಹಿಮ ಬೀಳುವ ಸಾಧ್ಯತೆ ಇದೆ.

19 / 19
Follow us
ಶಿವರಾಜ್​ ಕುಮಾರ್​ ಬಗ್ಗೆ ಹಗುರ ಮಾತುಗಳ ಸಹಿಸಲ್ಲ: ಬೇಳೂರು ಗೋಪಾಲಕೃಷ್ಣ
ಶಿವರಾಜ್​ ಕುಮಾರ್​ ಬಗ್ಗೆ ಹಗುರ ಮಾತುಗಳ ಸಹಿಸಲ್ಲ: ಬೇಳೂರು ಗೋಪಾಲಕೃಷ್ಣ
ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್