AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಬಳ ಹಬ್ಬ: ಫೇಮಸ್ ಮೂಡು ಬೀಡು ಕಂಬಳ ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು

ಉಡುಪಿಯ ಪ್ರಸಿದ್ಧ ಮೂಡುಬೀಡು ಕಂಬಳವು ಅದ್ದೂರಿಯಾಗಿ ನಡೆಯಿತು. ನೂರಾರು ಕೋಣಗಳು ಪಾಲ್ಗೊಂಡ ಈ ಕ್ರೀಡಾಕೂಟವು ಸಾವಿರಾರು ಪ್ರೇಕ್ಷಕರನ್ನು ಆಕರ್ಷಿಸಿತು. ಕರಾವಳಿ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಕಂಬಳವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಈ ಬಾರಿಯ ಕಂಬಳ ಹಬ್ಬವು ಮತ್ತಷ್ಟು ಉತ್ಸಾಹ ಮತ್ತು ರೋಮಾಂಚನಕಾರಿಯಾಗಿತ್ತು.

ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on: Feb 23, 2025 | 2:59 PM

Share
ಕರಾವಳಿಯ ಸೊಗಡನ್ನು ಬಿಂಬಿಸುವ ಕಂಬಳ ಸಾಂಪ್ರದಾಯಿಕ ಕ್ರೀಡೆ. ಕಂಬಳ ನೂರಾರು ವರ್ಷಗಳಿಂದಲೂ ತುಳುನಾಡ ಜನರ ಜೀವದ ಕೊಂಡಿಯಾಗಿದೆ. ಅದರಲ್ಲೂ ಕಟಪಾಡಿ ಬೀಡುವಿನ ಮೂಡು ಬೀಡು ಕಂಬಳ ಉಡುಪಿ ಜಿಲ್ಲೆಯಲ್ಲಿ ತುಂಬಾನೆ ಫೇಮಸ್. ಈ ಕಂಬಳ ಹಬ್ಬಕ್ಕೆ ಈ ಭಾರಿ ಮತ್ತಷ್ಟು ಮೆರುಗು ಬಂದಿತ್ತು. 

ಕರಾವಳಿಯ ಸೊಗಡನ್ನು ಬಿಂಬಿಸುವ ಕಂಬಳ ಸಾಂಪ್ರದಾಯಿಕ ಕ್ರೀಡೆ. ಕಂಬಳ ನೂರಾರು ವರ್ಷಗಳಿಂದಲೂ ತುಳುನಾಡ ಜನರ ಜೀವದ ಕೊಂಡಿಯಾಗಿದೆ. ಅದರಲ್ಲೂ ಕಟಪಾಡಿ ಬೀಡುವಿನ ಮೂಡು ಬೀಡು ಕಂಬಳ ಉಡುಪಿ ಜಿಲ್ಲೆಯಲ್ಲಿ ತುಂಬಾನೆ ಫೇಮಸ್. ಈ ಕಂಬಳ ಹಬ್ಬಕ್ಕೆ ಈ ಭಾರಿ ಮತ್ತಷ್ಟು ಮೆರುಗು ಬಂದಿತ್ತು. 

1 / 5
ಸುಮಾರು ವರ್ಷಗಳ ಇತಿಹಾಸ ಇರುವ ಕಂಬಳ, ಕರಾವಳಿಗರ ನೆಚ್ಚಿನ ಜಾನಪದ ಕ್ರೀಡೆ. ಅದರಲ್ಲೂ ತನ್ನ ಗ್ರಾಮೀಣ ಸೊಗಡಿನಿಂದಲ್ಲೇ ಈ ಕ್ರೀಡೆ ಕರಾವಳಿಯಲ್ಲಿ ಸಿಕ್ಕಪಟ್ಟೆ ಫೇಮಸ್. ಮಣ್ಣಿನ ಮಕ್ಕಳ ಪ್ರತಿಷ್ಠೆಯ ಆಚರಣೆಯಲ್ಲೊಂದು. ಕಂಬಳ ಅನ್ನೋದು ತುಳುನಾಡಿನ ಮಕ್ಕಳ ಭಾವನಾತ್ಮಕ ಆಚರಣೆಯು ಆಗಿದೆ. ಕಂಬಳ ಕ್ರೀಡೆಯಲ್ಲಿ ಜನಪ್ರಿಯತೆ ಪಡೆದಿರುವುದು ಮೂಡು ಬೀಡು ಕಂಬಳ.

ಸುಮಾರು ವರ್ಷಗಳ ಇತಿಹಾಸ ಇರುವ ಕಂಬಳ, ಕರಾವಳಿಗರ ನೆಚ್ಚಿನ ಜಾನಪದ ಕ್ರೀಡೆ. ಅದರಲ್ಲೂ ತನ್ನ ಗ್ರಾಮೀಣ ಸೊಗಡಿನಿಂದಲ್ಲೇ ಈ ಕ್ರೀಡೆ ಕರಾವಳಿಯಲ್ಲಿ ಸಿಕ್ಕಪಟ್ಟೆ ಫೇಮಸ್. ಮಣ್ಣಿನ ಮಕ್ಕಳ ಪ್ರತಿಷ್ಠೆಯ ಆಚರಣೆಯಲ್ಲೊಂದು. ಕಂಬಳ ಅನ್ನೋದು ತುಳುನಾಡಿನ ಮಕ್ಕಳ ಭಾವನಾತ್ಮಕ ಆಚರಣೆಯು ಆಗಿದೆ. ಕಂಬಳ ಕ್ರೀಡೆಯಲ್ಲಿ ಜನಪ್ರಿಯತೆ ಪಡೆದಿರುವುದು ಮೂಡು ಬೀಡು ಕಂಬಳ.

2 / 5
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಬೀಡು ಕರೆಯಲ್ಲಿ ನಡೆಯುವ ಮೂಡು ಬೀಡು ಕಂಬಳ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಜಿಲ್ಲೆಯ ಅತೀ ದೊಡ್ಡ ಕಂಬಳವಾಗಿರುವ ಮೂಡು ಬೀಡು ಕಂಬಳ ಇಡೀ ಕರ್ನಾಟಕದ ಗಮನ ಸೆಳೆಯುತ್ತದೆ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಬೀಡು ಕರೆಯಲ್ಲಿ ನಡೆಯುವ ಮೂಡು ಬೀಡು ಕಂಬಳ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಜಿಲ್ಲೆಯ ಅತೀ ದೊಡ್ಡ ಕಂಬಳವಾಗಿರುವ ಮೂಡು ಬೀಡು ಕಂಬಳ ಇಡೀ ಕರ್ನಾಟಕದ ಗಮನ ಸೆಳೆಯುತ್ತದೆ.

3 / 5
ಎರಡು ದಿನ ಕಂಬಳವನ್ನು ಸಮಿತಿಯ ಸೂಚನೆಯಂತೆ ಕಟಪಾಡಿ ಬೀಡು ಮೂಡು ಬೀಡು ಕಂಬಳವನ್ನು ಆಯೋಜಿಸಲಾಗಿತ್ತು. ಪ್ರತೀ ಬಾರಿಯಂತೆ ಈ ಬಾರಿಯು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಂದ 100 ಕ್ಕೂ ಹೆಚ್ಚು ಕಂಬಳ ಕೋಣ ಪಾಲ್ಗೊಂಡಿದ್ದವು. ಕಂಬಳವನ್ನು ನೋಡಲು ಸಾವಿರಾರು ಕಂಬಳ ಕ್ರೀಡೆಯ ಪ್ರೇಮಿಗಳು ಆಗಮಿಸಿದ್ದರು. ರಾತ್ರಿಯ ವೇಳೆ ಹತ್ತು ಸಾವಿರಕ್ಕೂ ಅಧಿಕ ಕಂಬಳ ಫ್ಯಾನ್ಸ್ ಆಗಮಿಸಿ ವೀಕ್ಷಿಸಿದ್ದಾರೆ.

ಎರಡು ದಿನ ಕಂಬಳವನ್ನು ಸಮಿತಿಯ ಸೂಚನೆಯಂತೆ ಕಟಪಾಡಿ ಬೀಡು ಮೂಡು ಬೀಡು ಕಂಬಳವನ್ನು ಆಯೋಜಿಸಲಾಗಿತ್ತು. ಪ್ರತೀ ಬಾರಿಯಂತೆ ಈ ಬಾರಿಯು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಂದ 100 ಕ್ಕೂ ಹೆಚ್ಚು ಕಂಬಳ ಕೋಣ ಪಾಲ್ಗೊಂಡಿದ್ದವು. ಕಂಬಳವನ್ನು ನೋಡಲು ಸಾವಿರಾರು ಕಂಬಳ ಕ್ರೀಡೆಯ ಪ್ರೇಮಿಗಳು ಆಗಮಿಸಿದ್ದರು. ರಾತ್ರಿಯ ವೇಳೆ ಹತ್ತು ಸಾವಿರಕ್ಕೂ ಅಧಿಕ ಕಂಬಳ ಫ್ಯಾನ್ಸ್ ಆಗಮಿಸಿ ವೀಕ್ಷಿಸಿದ್ದಾರೆ.

4 / 5
ಉಡುಪಿ ಜಿಲ್ಲೆಯಲ್ಲಿ ನಡೆಯುವ ಅತ್ಯಂತ ಅದ್ದೂರಿಯ ಮೂಡು ಬೀಡು ಕಂಬಳ ಕ್ರೀಡೆಯನ್ನು ವೀಕ್ಷಿಸಲು ಬಂದ ಕಂಬಳ ಪ್ರೇಮಿಗಳ ಸಕತ್ತ ಎಂಜಾಯ್ ಮಾಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ನಡೆಯುವ ಅತ್ಯಂತ ಅದ್ದೂರಿಯ ಮೂಡು ಬೀಡು ಕಂಬಳ ಕ್ರೀಡೆಯನ್ನು ವೀಕ್ಷಿಸಲು ಬಂದ ಕಂಬಳ ಪ್ರೇಮಿಗಳ ಸಕತ್ತ ಎಂಜಾಯ್ ಮಾಡಿದ್ದಾರೆ.

5 / 5
ಪ್ರಜ್ವಲ್ ಅಮೀನ್​, ಉಡುಪಿ
ಪ್ರಜ್ವಲ್ ಅಮೀನ್​, ಉಡುಪಿ

ಪ್ರಜ್ವಲ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಉಡುಪಿ ಜಿಲ್ಲೆಯ ಸ್ಥಳೀಯ ಖಾಸಗಿ ಸುದ್ದಿವಾಹಿನಿಯ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಇವರು ಬಳಿಕ ಪ್ರಜಾವಾಣಿಯ ವರದಿಗಾರನಾಗಿ ಕೆಲಸ ಮಾಡಿರುತ್ತಾರೆ. ನಂತರ 6 ವರ್ಷ ಟಿ.ವಿ 5ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ನಂತರ ದಿಗ್ವಿಜಯ ನ್ಯೂಸ್ ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವರದಿಗಾರನಾಗಿ ಕಾರ್ಯನಿರ್ವಾಹಸಿದ್ದಾರೆ. ಕಳೆದ ಹನ್ನೊಂದು ತಿಂಗಳಿನಿಂದ ಟಿ.ವಿ 9 ಸಂಸ್ಥೆಯಲ್ಲಿ ಉಡುಪಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

Read More
Follow Us
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್