Karnataka Rain: ಮಳೆಯಿಂದ ಜಲಾವೃತಗೊಂಡ ಪ್ರದೇಶಗಳ ಫೋಟೋಗಳು
ಕರ್ನಾಟಕದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದಲ್ಲದೆ, ಮನೆಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ.
Updated on: Sep 06, 2022 | 11:34 AM

Karnataka Rain Effects Many areas flooded due to rain Photos

Karnataka Rain Effects Many areas flooded due to rain Photos

ರಾತ್ರಿ ಸುರಿದ ಧಾರಾಕಾರ ಮಳೆ ಹಿನ್ನೆಲೆ ಬಾಗಲಕೋಟೆಯ ಬಾದಾಮಿ ಪ್ರವಾಸಿ ತಾಣಕ್ಕೂ ಪ್ರವಾಹ ಬಿಸಿ ತಟ್ಟಿದ್ದು, ಐತಿಹಾಸಿಕ ಮೇಣಬಸದಿ, ಗುಹಾಂತರ ದೇವಾಲಯ ಪ್ರದೇಶದ ಬೀದಿಯಲ್ಲಿ ನೀರು ಬೊರ್ಗರೆದು ಹರಿಯುತ್ತಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು, ಕೊಕಟನೂರ ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನವು ಜಲಾವೃತಗೊಂಡಿತು. ನಿರಂತರ ಮಳೆಯಿಂದ ಕೆರೆ ಕೊಡಿ ಒಡೆದು ದೇವಸ್ಥಾನಕ್ಕೂ ನೀರು ನುಗ್ಗಿದ್ದು, ದೇವಸ್ಥಾನದ ಸುತ್ತಲೂ ನಾಲ್ಕ ಅಡಿಯಷ್ಟು ಎತ್ತರಕ್ಕೆ ನೀರು ತುಂಬಿದೆ. ಗರ್ಭಗುಡಿಗೆ ನುಗ್ಗಿದ ನೀರನ್ನು ಅರ್ಚಕರು ಹೊರಹಾಕಿದರು. ಅಲ್ಲದೆ ನೀರಿನಲ್ಲೇ ಹೋಗಿ ಭಕ್ತರು ದೇವಿ ದರ್ಶನ ಪಡೆಯುತ್ತಿದ್ದಾರೆ.

ಬೆಂಗಳೂರು ನಗರದ ದೊಮ್ಮಲೂರು ಲೇಔಟ್ನಲ್ಲಿ ಸುರಿದ ಭಾರೀ ಮಳೆಗೆ ರಸ್ತೆಗಳಲ್ಲಿ ಮಳೆ ನೀರು ತುಂಬಿಕೊಂಡಿತ್ತು. ಈ ನೀರಿನಲ್ಲಿ ಯುವಕನೊಬ್ಬ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈಜಾಡಿದ್ದು, ಇದರ ದೃಶ್ಯಾವಳಿ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೆಂಗಳೂರಿನ ರಾಮಗೊಂಡನ ಹಳ್ಳಿಯಲ್ಲಿ ಸುರಿದ ಮಳೆಗೆ ಕೆಲವೊಂದು ಪ್ರದೇಶಗಳು ಜಲಾವೃತಗೊಂಡವು.

ಧಾರಾಕರ ಮಳೆಗೆ ಚಿಕ್ಕಬಳ್ಳಾಪುರ ತಾಲೂಕಿನ ಕೊತ್ತನೂರು ಗ್ರಾಮದ ಹಲವು ಮನೆಗಳು ಜಲಾವೃತಗೊಂಡಿತು. ಜಮೀನುಗಳಲ್ಲಿ ಹರಿಯುವ ನೀರು ಗ್ರಾಮಕ್ಕೆ ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ರಾತ್ರಿಯಿಡೀ ಗ್ರಾಮಸ್ಥರು ಮನೆಗೆ ನುಗ್ಗಿರುವ ನೀರನ್ನು ಹೊರತೆಗೆಯುವ ಕೆಲಸಕಾರ್ಯ ಮಾಡಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಯಳಂದೂರು ತಾಲೂಕಿನ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಗೆ ಮಳೆ ನೀರು ನುಗ್ಗಿದೆ. ವಾರದಲ್ಲಿ ಎರಡನೇ ಬಾರಿಗೆ ಪೊಲೀಸ್ ಠಾಣೆ ಮುಳುಗಡೆಯಾಗಿದೆ. ಸುವರ್ಣಾವತಿ ನದಿ ಪ್ರವಾಹದಿಂದಾಗಿ ಈ ಘಟನೆ ನಡೆದಿದ್ದು, ಕೊಳ್ಳೇಗಾಲ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಸಹ ಬಂದ್ ಆಗಿದೆ.

ಧಾರವಾಡ ಜಿಲ್ಲೆಯಲ್ಲಿ ಮಳೆ ಅಬ್ಬರ ಹಿನ್ನೆಲೆ ನವಲಗುಂದ ತಾಲೂಕಿನ ಬೋಗಾನೂರ ಗ್ರಾಮಕ್ಕೆ ಹಳ್ಳದ ನೀರು ನುಗ್ಗಿತು.

ಗದಗ ಜಿಲ್ಲೆಯಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಮುಂಡರಗಿ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮಕ್ಕೆ ಹಳ್ಳದ ನೀರು ನುಗ್ಗಿದ್ದು, ಮಲ್ಲಿಕಾರ್ಜುನಪುರದಿಂದ ಬಾಗೇವಾಡಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪರ್ಯಾಯ ವ್ಯವಸ್ಥೆ ಮಾಡದ ಜಿಲ್ಲಾಡಳಿತದ ವಿರುದ್ಧ ಆಕ್ರೋಶವೂ ವ್ಯಕ್ತವಾಗಿದೆ.

ಕೋಲಾರದಲ್ಲಿ ನಿರಂತ ಮಳೆಯಿಂದಾಗಿ ಯರಗೋಳ್ ಅಣೆಕಟ್ಟು ತುಂಬಿ ಹರಿಯುತ್ತಿದೆ. ಸ್ವತಂತ್ರ್ಯಾ ನಂತರ ಕೋಲಾರದಲ್ಲಿ ನಿರ್ಮಾಣವಾದ ಮೊದಲ ಡ್ಯಾಂ ಎಂಬ ಹೆಗ್ಗಳಿಕೆ ಈ ಅಣೆಕಟ್ಟಿಗಿದ್ದು, ಡ್ಯಾಂ ನಿರ್ಮಾಣವಾದ ನಂತರ ಇದೇ ಮೊದಲ ಬಾರಿಗೆ ತುಂಬಿ ಹರಿಯುತ್ತಿದೆ. ಸದ್ಯ ನಿರಂತರ ಮಳೆಯಿಂದ ಡ್ಯಾಂ ತುಂಬಿ ತಮಿಳುನಾಡಿಗೆ ನೀರು ಹರಿಯುತ್ತಿದ್ದು, ಈ ದೃಶ್ಯವನ್ನು ನೋಡಲು ಮನ ಮೋಹಕವಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯಿಂದ ಮಸ್ಕಿ ಜಲಾಶಯ ಭರ್ತಿಗೊಂಡಿದ್ದು, ಜಲಾಶಯದ ಎರಡು ಗೇಟ್ ಮೂಲಕ 300 ಕ್ಯೂಸೆಕ್ ನೀರು ಬಿಡುಗಡೆ. ಸದ್ಯ ಜಲಾಶಯಕ್ಕೆ 500 ಕ್ಯೂಸೆಕ್ ಒಳಹರಿವು ಕೂಡ ಆಗಿದೆ. ಮಸ್ಕಿ ಹಳ್ಳಕ್ಕೆ ನೀರು ಬಿಟ್ಟ ಹಿನ್ನೆಲೆ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದ್ದು, ಹಳ್ಳದ ಪಾತ್ರದ ಜನ ಹಳ್ಳದಲ್ಲಿ ಇಳಿಯುವುದು, ಜಾನುವಾರುಗಳನ್ನು ಬಿಡದಂತೆ ಸೂಚಿಸಿದ್ದಾರೆ.




