AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿ ಇರುವ ಕೆಂಪು, ಹಸಿರು, ನೀಲಿ ಮತ್ತು ಕಪ್ಪು ಗುರುತುಗಳ ಅರ್ಥ ಏನು ಗೊತ್ತೇ?! ಇಲ್ಲಿದೆ ಮಾಹಿತಿ

ಪೇಸ್ಟ್​ನ ನಿರ್ಧಿಷ್ಟ ವಿಷಯ ವಿವರಿಸಲು, ಟೂತ್​ಪೇಸ್ಟ್ ತಯಾರಿಸುವ ಕಂಪನಿಗಳು ಅವುಗಳ ಮೇಲೆ ಗುರುತನ್ನು ಮಾಡುತ್ತವೆ. ಒಂದು ಟೂತ್‌ಪೇಸ್ಟ್ ಇನ್ನೊಂದಕ್ಕಿಂತ ಎಷ್ಟು ಭಿನ್ನವಾಗಿದೆ ಎಂಬುದನ್ನು ಈ ಬಣ್ಣಗಳು ಹೇಳುತ್ತವೆ. ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿನ ವಿವಿಧ ಬಣ್ಣದ ಬ್ಲಾಕ್‌ಗಳ ಅರ್ಥವೇನು? ಇಲ್ಲಿ ತಿಳಿದುಕೊಳ್ಳಿ.

TV9 Web
| Edited By: |

Updated on: Mar 06, 2022 | 10:53 AM

Share
ಟೂತ್​​ಪೇಸ್ಟ್​ನ ಟ್ಯೂಬ್​ನಲ್ಲಿ ವಿವಿಧ ಬಣ್ಣಗಳ ಗುರುತನ್ನು ನೀವು ಗಮನಿಸಿರಬಹುದು. ಉದಾಹರಣೆಗೆ ಕೆಂಪು, ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳು ಇರುವುದು ನೀವು ನೋಡಿರಬಹುದು. ಈ ಬಣ್ಣಗಳು ತಮ್ಮದೇ ಆದ ಅರ್ಥವನ್ನು ಹೊಂದಿವೆ. ಪೇಸ್ಟ್​ನ ನಿರ್ಧಿಷ್ಟ ವಿಷಯ ವಿವರಿಸಲು, ಟೂತ್​ಪೇಸ್ಟ್ ತಯಾರಿಸುವ ಕಂಪನಿಗಳು ಅವುಗಳ ಮೇಲೆ ಗುರುತನ್ನು ಮಾಡುತ್ತವೆ. ಒಂದು ಟೂತ್‌ಪೇಸ್ಟ್ ಇನ್ನೊಂದಕ್ಕಿಂತ ಎಷ್ಟು ಭಿನ್ನವಾಗಿದೆ ಎಂಬುದನ್ನು ಈ ಬಣ್ಣಗಳು ಹೇಳುತ್ತವೆ. ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿನ ವಿವಿಧ ಬಣ್ಣದ ಬ್ಲಾಕ್‌ಗಳ ಅರ್ಥವೇನು? ಇಲ್ಲಿ ತಿಳಿದುಕೊಳ್ಳಿ.

ಟೂತ್​​ಪೇಸ್ಟ್​ನ ಟ್ಯೂಬ್​ನಲ್ಲಿ ವಿವಿಧ ಬಣ್ಣಗಳ ಗುರುತನ್ನು ನೀವು ಗಮನಿಸಿರಬಹುದು. ಉದಾಹರಣೆಗೆ ಕೆಂಪು, ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳು ಇರುವುದು ನೀವು ನೋಡಿರಬಹುದು. ಈ ಬಣ್ಣಗಳು ತಮ್ಮದೇ ಆದ ಅರ್ಥವನ್ನು ಹೊಂದಿವೆ. ಪೇಸ್ಟ್​ನ ನಿರ್ಧಿಷ್ಟ ವಿಷಯ ವಿವರಿಸಲು, ಟೂತ್​ಪೇಸ್ಟ್ ತಯಾರಿಸುವ ಕಂಪನಿಗಳು ಅವುಗಳ ಮೇಲೆ ಗುರುತನ್ನು ಮಾಡುತ್ತವೆ. ಒಂದು ಟೂತ್‌ಪೇಸ್ಟ್ ಇನ್ನೊಂದಕ್ಕಿಂತ ಎಷ್ಟು ಭಿನ್ನವಾಗಿದೆ ಎಂಬುದನ್ನು ಈ ಬಣ್ಣಗಳು ಹೇಳುತ್ತವೆ. ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿನ ವಿವಿಧ ಬಣ್ಣದ ಬ್ಲಾಕ್‌ಗಳ ಅರ್ಥವೇನು? ಇಲ್ಲಿ ತಿಳಿದುಕೊಳ್ಳಿ.

1 / 5
ಮೊದಲಿಗೆ, ಟೂತ್​​ಪೇಸ್ಟ್​ನ ಟ್ಯೂಬ್​ನಲ್ಲಿ ಮಾಡಿದ ಕೆಂಪು ಬಣ್ಣದ ಬ್ಲಾಕ್ ಬಗ್ಗೆ ಮಾತನಾಡೋಣ. ಈ ಬಣ್ಣದ ಬ್ಲಾಕ್ ಎಂದರೆ ನೈಸರ್ಗಿಕ ಮತ್ತು ರಾಸಾಯನಿಕ ವಸ್ತುಗಳು ಎರಡನ್ನೂ ಬೆರೆಸಿ ಈ ಟೂತ್ ಪೇಸ್ಟ್ ತಯಾರಿಸಲಾಗಿದೆ ಎಂದು ಅರ್ಥ. ನೀವು ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಟೂತ್​ಪೇಸ್ಟ್ ಮಾತ್ರ ಬಳಸಲು ಬಯಸಿದರೆ, ಕೆಂಪು ಬಣ್ಣದ ಮಾರ್ಕ್ ಇರುವ ಪೇಸ್ಟ್ ನಿಮಗಾಗಿ ಅಲ್ಲ.

ಮೊದಲಿಗೆ, ಟೂತ್​​ಪೇಸ್ಟ್​ನ ಟ್ಯೂಬ್​ನಲ್ಲಿ ಮಾಡಿದ ಕೆಂಪು ಬಣ್ಣದ ಬ್ಲಾಕ್ ಬಗ್ಗೆ ಮಾತನಾಡೋಣ. ಈ ಬಣ್ಣದ ಬ್ಲಾಕ್ ಎಂದರೆ ನೈಸರ್ಗಿಕ ಮತ್ತು ರಾಸಾಯನಿಕ ವಸ್ತುಗಳು ಎರಡನ್ನೂ ಬೆರೆಸಿ ಈ ಟೂತ್ ಪೇಸ್ಟ್ ತಯಾರಿಸಲಾಗಿದೆ ಎಂದು ಅರ್ಥ. ನೀವು ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಟೂತ್​ಪೇಸ್ಟ್ ಮಾತ್ರ ಬಳಸಲು ಬಯಸಿದರೆ, ಕೆಂಪು ಬಣ್ಣದ ಮಾರ್ಕ್ ಇರುವ ಪೇಸ್ಟ್ ನಿಮಗಾಗಿ ಅಲ್ಲ.

2 / 5
ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿ ಹಸಿರು ಬಣ್ಣದ ಗುರುತು ಇದ್ದರೆ, ಅದು ನೈಸರ್ಗಿಕ ಪದಾರ್ಥಗಳಿಂದ ಮಾತ್ರ ತಯಾರಿಸಲ್ಪಟ್ಟಿದೆ ಎಂದು ಅರ್ಥ. ನೀವು ರಾಸಾಯನಿಕ ವಸ್ತುಗಳನ್ನು ಇಷ್ಟಪಡದಿದ್ದರೆ, ಕೇವಲ ನೈಸರ್ಗಿಕವಾದ ಪೇಸ್ಟ್​ ಬೇಕಾದರೆ ಈ ರೀತಿಯ ಟೂತ್​ಪೇಸ್ಟ್ ಅನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ.

ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿ ಹಸಿರು ಬಣ್ಣದ ಗುರುತು ಇದ್ದರೆ, ಅದು ನೈಸರ್ಗಿಕ ಪದಾರ್ಥಗಳಿಂದ ಮಾತ್ರ ತಯಾರಿಸಲ್ಪಟ್ಟಿದೆ ಎಂದು ಅರ್ಥ. ನೀವು ರಾಸಾಯನಿಕ ವಸ್ತುಗಳನ್ನು ಇಷ್ಟಪಡದಿದ್ದರೆ, ಕೇವಲ ನೈಸರ್ಗಿಕವಾದ ಪೇಸ್ಟ್​ ಬೇಕಾದರೆ ಈ ರೀತಿಯ ಟೂತ್​ಪೇಸ್ಟ್ ಅನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ.

3 / 5
ಟ್ಯೂಬ್ ಮೇಲೆ ನೀಲಿ ಗುರುತು ಇದ್ದರೆ, ಅದು ನೈಸರ್ಗಿಕ ಪದಾರ್ಥಗಳು ಮತ್ತು ಔಷಧಿಗಳಿಂದ ತಯಾರಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ. ನಿರ್ದಿಷ್ಟ ಪರಿಸ್ಥಿತಿಯಲ್ಲಿ ಈ ರೀತಿಯ ಪೇಸ್ಟ್ ಅನ್ನು ಬಳಸಲು ವೈದ್ಯರು ಶಿಫಾರಸು ಮಾಡುತ್ತಾರೆ. ಆದ್ದರಿಂದ, ಅದನ್ನು ಬಳಸುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ.

ಟ್ಯೂಬ್ ಮೇಲೆ ನೀಲಿ ಗುರುತು ಇದ್ದರೆ, ಅದು ನೈಸರ್ಗಿಕ ಪದಾರ್ಥಗಳು ಮತ್ತು ಔಷಧಿಗಳಿಂದ ತಯಾರಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ. ನಿರ್ದಿಷ್ಟ ಪರಿಸ್ಥಿತಿಯಲ್ಲಿ ಈ ರೀತಿಯ ಪೇಸ್ಟ್ ಅನ್ನು ಬಳಸಲು ವೈದ್ಯರು ಶಿಫಾರಸು ಮಾಡುತ್ತಾರೆ. ಆದ್ದರಿಂದ, ಅದನ್ನು ಬಳಸುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ.

4 / 5
ಇನ್ನು ಕಪ್ಪು ಗುರುತು ಇದೆ ಎಂದರೆ ಈ ಟೂತ್​ಪೇಸ್ಟ್ ಅನ್ನು ರಾಸಾಯನಿಕಗಳಿಂದ ಮಾತ್ರ ತಯಾರಿಸಲಾಗುತ್ತದೆ. ಆದ್ದರಿಂದ, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ, ವಿವಿಧ ಬಣ್ಣದ ಗುರುತು ಇರುವ ಪೇಸ್ಟ್‌ಗಳಿಂದ ನಿಮ್ಮ ಆಯ್ಕೆಯನ್ನು ನೀವು ಮಾಡಬಹುದು. ಒಟ್ಟಾರೆ ನೋಡುವುದಾದರೆ, ಕೆಂಪು= ನೈಸರ್ಗಿಕ ಮತ್ತು ರಾಸಾಯನಿಕ, ಹಸಿರು= ನೈಸರ್ಗಿಕ ಪದಾರ್ಥ ಮಾತ್ರ, ನೀಲಿ= ನೈಸರ್ಗಿಕ ಪದಾರ್ಥಗಳು ಮತ್ತು ಔಷಧಿ, ಕಪ್ಪು= ರಾಸಾಯನಿಕಗಳಿಂದ ಮಾತ್ರ ಎಂದು ಅರ್ಥ.

ಇನ್ನು ಕಪ್ಪು ಗುರುತು ಇದೆ ಎಂದರೆ ಈ ಟೂತ್​ಪೇಸ್ಟ್ ಅನ್ನು ರಾಸಾಯನಿಕಗಳಿಂದ ಮಾತ್ರ ತಯಾರಿಸಲಾಗುತ್ತದೆ. ಆದ್ದರಿಂದ, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ, ವಿವಿಧ ಬಣ್ಣದ ಗುರುತು ಇರುವ ಪೇಸ್ಟ್‌ಗಳಿಂದ ನಿಮ್ಮ ಆಯ್ಕೆಯನ್ನು ನೀವು ಮಾಡಬಹುದು. ಒಟ್ಟಾರೆ ನೋಡುವುದಾದರೆ, ಕೆಂಪು= ನೈಸರ್ಗಿಕ ಮತ್ತು ರಾಸಾಯನಿಕ, ಹಸಿರು= ನೈಸರ್ಗಿಕ ಪದಾರ್ಥ ಮಾತ್ರ, ನೀಲಿ= ನೈಸರ್ಗಿಕ ಪದಾರ್ಥಗಳು ಮತ್ತು ಔಷಧಿ, ಕಪ್ಪು= ರಾಸಾಯನಿಕಗಳಿಂದ ಮಾತ್ರ ಎಂದು ಅರ್ಥ.

5 / 5
Follow Us
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ