- Kannada News Photo gallery Lawyer Jagadish done huge controversy in three weeks Entertainment News In Kannada
ಮೂರೇ ವಾರಕ್ಕೆ ಲಾಯರ್ ಜಗದೀಶ್ ಬಿಗ್ ಬಾಸ್ನಲ್ಲಿ ಮಾಡಿರುವ ಅವಾಂತರಗಳು ಒಂದೆರಡಲ್ಲ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡದಾಗಿ ಫೈಟ್ ನಡೆದಿದೆ ಎಂದು ಹೇಳಲಾಗುತ್ತಿದೆ. ಇದು ಕೇವಲ ಮಾತಿನ ಫೈಟ್ ಅಲ್ಲ, ಕೈಕೈ ಮಿಲಾಯಿಸಿ ನಡೆದ ಕುಸ್ತಿ. ಈ ಕಾರಣದಿಂದಲೇ ರಂಜಿತ್ ಹಾಗೂ ಜಗದೀಶ್ ಅವರು ದೊಡ್ಮನೆಯಿಂದ ಔಟ್ ಆಗಿದ್ದಾರೆ ಎಂದು ವರದಿ ಹರಿದಾಡಿದೆ.
Updated on: Oct 16, 2024 | 3:01 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಜಗದೀಶ್ ಅವರು ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದ್ದರು. ಅವರು ಎರಡೂವರೆ ವಾರಗಳ ಕಾಲ ದೊಡ್ಮನೆಯಲ್ಲಿ ಇದ್ದರು. ಈ ಅವಧಿಯಲ್ಲಿ ಅವರು ಸಾಕಷ್ಟು ಅವಾಂತರ ಮಾಡಿಕೊಂಡಿದ್ದರು.

‘ಬಿಗ್ ಬಾಸ್’ ಮನೆಯಿಂದ ಜಗದೀಶ್ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ಅವರು ಫೈಟ್ ಮಾಡಿಕೊಂಡು ದೊಡ್ಮನೆಯಿಂದ ಹೊರ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರಂತೆ.

‘ಬಿಗ್ ಬಾಸ್’ನ ಎಕ್ಸ್ಪೋಸ್ ಮಾಡ್ತೀನಿ ಎಂದು ಹೊರಟಿದ್ದರು ಜಗದೀಶ್. ಅಲ್ಲದೆ, ಬಿಗ್ ಬಾಸ್ನೇ ಖರೀದಿ ಮಾಡುವ ಆಲೋಚನೆಯೂ ಅವರಿಗೆ ಬಂದಿತ್ತು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

ಇದಲ್ಲದೆ, ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರ ಒಳ ಉಡುಪಿನ ಬಗ್ಗೆ ಮಾತನಾಡಿಯೂ ಚರ್ಚೆ ಹುಟ್ಟುಹಾಕಿದ್ದರು. ಈ ಕಾರಣಕ್ಕೆ ಅವರು ಸಾಕಷ್ಟು ಟೀಕೆ ಎದುರಿಸಬೇಕಾಗಿ ಬಂದಿತ್ತು. ಅನೇಕರು ಇದನ್ನು ವಿರೋಧಿಸಿದ್ದರು.

ವೀಕೆಂಡ್ನಲ್ಲಿ ಸುದೀಪ್ ಅವರ ಕಿವಿಮಾತಿನಿಂದ ಅವರು ಬದಲಾಗುವುದಾಗಿ ಒಪ್ಪಿಕೊಂಡಿದ್ದರು. ಆದರೆ, ಈ ಬದಲಾವಣೆ ಹೆಚ್ಚು ದಿನ ಇರಲಿಲ್ಲ. ಅವರು ಮತ್ತೆ ಮೊದಲಿನಂತೆ ಆದರು. ಇದರ ಪರಿಣಾಮವನ್ನು ಅವರು ಎದುರಿಸಿದ್ದಾರೆ.

ಈ ವಾರ ಅವರು ಬಿಗ್ ಬಾಸ್ಗೆ ಅವಮಾನ ಮಾಡಿದ್ದಾರೆ. ಈಗ ಅವರು ದೊಡ್ಮನೆಯಿಂದ ಔಟ್ ಆಗಿದ್ದಾರೆ ಎನ್ನಲಾಗಿದೆ. ರಂಜಿತ್ ಹಾಗೂ ಜಗದೀಶ್ ಮಧ್ಯೆ ಆದ ಫೈಟ್ನಿಂದ ಅವರು ಔಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.




