AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore Dasara 2024: ಮೈಸೂರಿಗೆ ದಸರಾ ನೋಡಲು ಹೋದ್ರೆ ಈ ತಿನಿಸನ್ನು ಮಿಸ್ ಮಾಡದೇ ಸವಿಯಿರಿ

ಮೈಸೂರು ದಸರಾ ಎಷ್ಟೊಂದು ಸುಂದರ ಈ ಹಾಡು ಕೇಳುವುದಕ್ಕೆ ಎಷ್ಟು ಚಂದವೋ, ಇಲ್ಲಿನ ಖಾದ್ಯಗಳು ಅಷ್ಟೇ ರುಚಿಕರವಾಗಿರುತ್ತದೆ. ಈಗಾಗಲೇ ನಾಡಹಬ್ಬ ದಸರಾಕ್ಕೆ ಎಲ್ಲಾ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿದ್ದು, ಮೈಸೂರಿನಲ್ಲಿ ದಸರಾವನ್ನು ನೋಡುವುದು ಒಂದು ಸುಂದರ ಅನುಭವ. ಅದಲ್ಲದೇ, ನೀವೇನಾದ್ರೂ ಈ ಸಾಂಸ್ಕೃತಿಕ ನಗರಿಗೆ ಹೋಗುವಿರಿ ಅಂತಾದ್ರೆ ಇಲ್ಲಿನ ಪ್ರಸಿದ್ಧ ತಿನಿಸನ್ನು ಮಿಸ್ ಮಾಡದೇ ಸವಿಯಲೇ ಬೇಕು.

ಸಾಯಿನಂದಾ
| Edited By: |

Updated on: Sep 22, 2024 | 12:17 PM

Share
ಮೈಸೂರ್ ಪಾಕ್ : ಸಾಂಸ್ಕೃತಿಕ ನಗರಿಯಲ್ಲಿ ಮೈಸೂರು ಪಾಕ್ ಸಿಕ್ಕಾಪಟ್ಟೆ ಫೇಮಸ್. ಮುಟ್ಟಿದರೆ ಮೃದುವಾಗಿರುವ, ಬಾಯಲ್ಲಿ ಇಟ್ಟರೆ ಕರಗುವ ಶತಮಾನಗಳಷ್ಟೇ ಹಿಂದಿನ ಈ ಸಿಹಿ ತಿನಿಸಿನ ಮೂಲ ರೆಸಿಪಿಯ ರುಚಿಯನ್ನು ಸವಿಯಬೇಕೆಂದರೆ ಚಿಕ್ಕ ಗಡಿಯಾರದ ಬಳಿ ಇರುವ ಗುರು ಸ್ವೀಟ್‌ ಮಾರ್ಟ್‌ನಲ್ಲಿ ಹೋಗಲೇಬೇಕು. ಮೈಸೂರಿಗೆ ಹೋದರೆ ಈ ಸಿಹಿ ತಿಂಡಿಯನ್ನು ಒಮ್ಮೆ ಸವಿಯಿರಿ.

ಮೈಸೂರ್ ಪಾಕ್ : ಸಾಂಸ್ಕೃತಿಕ ನಗರಿಯಲ್ಲಿ ಮೈಸೂರು ಪಾಕ್ ಸಿಕ್ಕಾಪಟ್ಟೆ ಫೇಮಸ್. ಮುಟ್ಟಿದರೆ ಮೃದುವಾಗಿರುವ, ಬಾಯಲ್ಲಿ ಇಟ್ಟರೆ ಕರಗುವ ಶತಮಾನಗಳಷ್ಟೇ ಹಿಂದಿನ ಈ ಸಿಹಿ ತಿನಿಸಿನ ಮೂಲ ರೆಸಿಪಿಯ ರುಚಿಯನ್ನು ಸವಿಯಬೇಕೆಂದರೆ ಚಿಕ್ಕ ಗಡಿಯಾರದ ಬಳಿ ಇರುವ ಗುರು ಸ್ವೀಟ್‌ ಮಾರ್ಟ್‌ನಲ್ಲಿ ಹೋಗಲೇಬೇಕು. ಮೈಸೂರಿಗೆ ಹೋದರೆ ಈ ಸಿಹಿ ತಿಂಡಿಯನ್ನು ಒಮ್ಮೆ ಸವಿಯಿರಿ.

1 / 5
ಮೈಸೂರ್ ಮಸಾಲೆ ದೋಸೆ : ಘಮ್ ಎನ್ನುವ ಮಸಾಲೆ ದೋಸೆಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವವರೇ ಹೆಚ್ಚು. ಆದರೆ ಮೈಸೂರಲ್ಲಿ ಸಿಗುವ ಮಸಾಲೆ ದೋಸೆ ಸ್ವಲ್ಪ ವಿಭಿನ್ನವಾಗಿದ್ದು , ಗರಿಗರಿಯಾಗಿರುವ ಈ ದೋಸೆಯನ್ನು ಬಾಳೆಎಲೆಯಲ್ಲಿ ಇಟ್ಟು ಕೊಡಲಾಗುತ್ತದೆ. ಈ ದೋಸೆಯನ್ನು ಅದ್ದಿ ತಿನ್ನಲು ಕಾಯಿ ಚಟ್ನಿ ಇರುತ್ತದೆ. ಇದರ ರುಚಿ ಸವಿದರೆ ಮತ್ತೆ ಬೇಡ ಎನ್ನುವುದೇ ಇಲ್ಲ.

ಮೈಸೂರ್ ಮಸಾಲೆ ದೋಸೆ : ಘಮ್ ಎನ್ನುವ ಮಸಾಲೆ ದೋಸೆಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವವರೇ ಹೆಚ್ಚು. ಆದರೆ ಮೈಸೂರಲ್ಲಿ ಸಿಗುವ ಮಸಾಲೆ ದೋಸೆ ಸ್ವಲ್ಪ ವಿಭಿನ್ನವಾಗಿದ್ದು , ಗರಿಗರಿಯಾಗಿರುವ ಈ ದೋಸೆಯನ್ನು ಬಾಳೆಎಲೆಯಲ್ಲಿ ಇಟ್ಟು ಕೊಡಲಾಗುತ್ತದೆ. ಈ ದೋಸೆಯನ್ನು ಅದ್ದಿ ತಿನ್ನಲು ಕಾಯಿ ಚಟ್ನಿ ಇರುತ್ತದೆ. ಇದರ ರುಚಿ ಸವಿದರೆ ಮತ್ತೆ ಬೇಡ ಎನ್ನುವುದೇ ಇಲ್ಲ.

2 / 5
ಬಿಸಿಬೇಳೆಬಾತ್ : ಕರ್ನಾಟಕದ ಪ್ರಸಿದ್ಧವಾದ ತಿಂಡಿ ಈ ಬಿಸಿಬೇಳೆಬಾತ್. ಆದರೆ ಈ ಸ್ಪೆಷಲ್ ತಿಂಡಿ ಮೈಸೂರಲ್ಲಿ ವಿಭಿನ್ನವಾಗಿಯೇ ಮಾಡಲಾಗುತ್ತದೆ. ಈ ಬಿಸಿಬೇಳೆಬಾತ್ ನಲ್ಲಿ ಬಳಸುವ ಪದಾರ್ಥಗಳು, ಬೇಳೆ, ತರಕಾರಿಗಳು ಇದರ ರುಚಿಯನ್ನು ಮತ್ತಷ್ಟು ಹೆಚ್ಚಿಸುವ ಕಾರಣ ಇದನ್ನೊಮ್ಮೆ ನೀವು ಇಲ್ಲಿ ತಿನ್ನಲೇಬೇಕು.

ಬಿಸಿಬೇಳೆಬಾತ್ : ಕರ್ನಾಟಕದ ಪ್ರಸಿದ್ಧವಾದ ತಿಂಡಿ ಈ ಬಿಸಿಬೇಳೆಬಾತ್. ಆದರೆ ಈ ಸ್ಪೆಷಲ್ ತಿಂಡಿ ಮೈಸೂರಲ್ಲಿ ವಿಭಿನ್ನವಾಗಿಯೇ ಮಾಡಲಾಗುತ್ತದೆ. ಈ ಬಿಸಿಬೇಳೆಬಾತ್ ನಲ್ಲಿ ಬಳಸುವ ಪದಾರ್ಥಗಳು, ಬೇಳೆ, ತರಕಾರಿಗಳು ಇದರ ರುಚಿಯನ್ನು ಮತ್ತಷ್ಟು ಹೆಚ್ಚಿಸುವ ಕಾರಣ ಇದನ್ನೊಮ್ಮೆ ನೀವು ಇಲ್ಲಿ ತಿನ್ನಲೇಬೇಕು.

3 / 5
ಮಲ್ಲಿಗೆ ಇಡ್ಲಿ : ದಕ್ಷಿಣ ಭಾರತದ ಬೆಳಗ್ಗಿನ ಬಹುತೇಕ ಉಪಹಾರಗಳಲ್ಲಿ ಒಂದು ಈ ಇಡ್ಲಿ. ವಿವಿಧ ರೀತಿಯ ಇಡ್ಲಿಗಳಿದ್ದು ಟೇಸ್ಟ್ ಕೂಡ ಭಿನ್ನವಾಗಿರುತ್ತದೆ. ಆದರೆ ಮೈಸೂರಿನಲ್ಲಿ ಮಲ್ಲಿಗೆ ಇಡ್ಲಿಯೊಂದಿಗೆ ಚಟ್ನಿಗಳು ಮತ್ತು ಸಾಂಬಾರ್‌ಗಳೊಂದಿಗೆ ನೀಡಲಾಗುತ್ತದೆ. ರುಚಿಯು ಕೂಡ ಅಷ್ಟೇ ಅದ್ಭುತವಾಗಿರುತ್ತದೆ.

ಮಲ್ಲಿಗೆ ಇಡ್ಲಿ : ದಕ್ಷಿಣ ಭಾರತದ ಬೆಳಗ್ಗಿನ ಬಹುತೇಕ ಉಪಹಾರಗಳಲ್ಲಿ ಒಂದು ಈ ಇಡ್ಲಿ. ವಿವಿಧ ರೀತಿಯ ಇಡ್ಲಿಗಳಿದ್ದು ಟೇಸ್ಟ್ ಕೂಡ ಭಿನ್ನವಾಗಿರುತ್ತದೆ. ಆದರೆ ಮೈಸೂರಿನಲ್ಲಿ ಮಲ್ಲಿಗೆ ಇಡ್ಲಿಯೊಂದಿಗೆ ಚಟ್ನಿಗಳು ಮತ್ತು ಸಾಂಬಾರ್‌ಗಳೊಂದಿಗೆ ನೀಡಲಾಗುತ್ತದೆ. ರುಚಿಯು ಕೂಡ ಅಷ್ಟೇ ಅದ್ಭುತವಾಗಿರುತ್ತದೆ.

4 / 5
ಖಾರಾ ಬಾತ್ : ರವಾ ಬಾತ್ ಎಂದೂ ಕರೆಯಲ್ಪಡುವ ಇದು ಮೈಸೂರಿನಲ್ಲಿ ಜನಪ್ರಿಯ ಉಪಹಾರ ಆಯ್ಕೆಯಾಗಿದೆ. ಮೈಸೂರಿನ ಈ ಪ್ರಸಿದ್ಧ ಆಹಾರವನ್ನು ಸೂಜಿ ರವೆ, ಈರುಳ್ಳಿ, ಟೊಮೆಟೊ, ಮಿಶ್ರ ತರಕಾರಿಗಳು ಮತ್ತು ಗೋಡಂಬಿಗಳನ್ನು ಬಳಸಿ ತಯಾರಿಸಲಾಗುತ್ತದೆ. ಉಪ್ಪಿಟ್ಟು ಅಥವಾ ಉಪ್ಮಾ ಎಂದು ಕೂಡ ಕರೆಯಲಾಗುವ ಖಾರಾ ಬಾತನ್ನು ಇಲ್ಲಿನ ಜನರು ಬಾಯಿಚಪ್ಪರಿಸಿಕೊಂಡು ಸವಿಯುತ್ತಾರೆ.

ಖಾರಾ ಬಾತ್ : ರವಾ ಬಾತ್ ಎಂದೂ ಕರೆಯಲ್ಪಡುವ ಇದು ಮೈಸೂರಿನಲ್ಲಿ ಜನಪ್ರಿಯ ಉಪಹಾರ ಆಯ್ಕೆಯಾಗಿದೆ. ಮೈಸೂರಿನ ಈ ಪ್ರಸಿದ್ಧ ಆಹಾರವನ್ನು ಸೂಜಿ ರವೆ, ಈರುಳ್ಳಿ, ಟೊಮೆಟೊ, ಮಿಶ್ರ ತರಕಾರಿಗಳು ಮತ್ತು ಗೋಡಂಬಿಗಳನ್ನು ಬಳಸಿ ತಯಾರಿಸಲಾಗುತ್ತದೆ. ಉಪ್ಪಿಟ್ಟು ಅಥವಾ ಉಪ್ಮಾ ಎಂದು ಕೂಡ ಕರೆಯಲಾಗುವ ಖಾರಾ ಬಾತನ್ನು ಇಲ್ಲಿನ ಜನರು ಬಾಯಿಚಪ್ಪರಿಸಿಕೊಂಡು ಸವಿಯುತ್ತಾರೆ.

5 / 5
Follow Us
ಆ ಶಾಸಕರಿಂದಲೇ ಅಡ್ಡಮತದಾನ? ಸಿಟಿ ರವಿ ಏನಂದ್ರು ನೋಡಿ
ಆ ಶಾಸಕರಿಂದಲೇ ಅಡ್ಡಮತದಾನ? ಸಿಟಿ ರವಿ ಏನಂದ್ರು ನೋಡಿ
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ