Mysore Dasara 2024: ಮೈಸೂರಿಗೆ ದಸರಾ ನೋಡಲು ಹೋದ್ರೆ ಈ ತಿನಿಸನ್ನು ಮಿಸ್ ಮಾಡದೇ ಸವಿಯಿರಿ

ಮೈಸೂರು ದಸರಾ ಎಷ್ಟೊಂದು ಸುಂದರ ಈ ಹಾಡು ಕೇಳುವುದಕ್ಕೆ ಎಷ್ಟು ಚಂದವೋ, ಇಲ್ಲಿನ ಖಾದ್ಯಗಳು ಅಷ್ಟೇ ರುಚಿಕರವಾಗಿರುತ್ತದೆ. ಈಗಾಗಲೇ ನಾಡಹಬ್ಬ ದಸರಾಕ್ಕೆ ಎಲ್ಲಾ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿದ್ದು, ಮೈಸೂರಿನಲ್ಲಿ ದಸರಾವನ್ನು ನೋಡುವುದು ಒಂದು ಸುಂದರ ಅನುಭವ. ಅದಲ್ಲದೇ, ನೀವೇನಾದ್ರೂ ಈ ಸಾಂಸ್ಕೃತಿಕ ನಗರಿಗೆ ಹೋಗುವಿರಿ ಅಂತಾದ್ರೆ ಇಲ್ಲಿನ ಪ್ರಸಿದ್ಧ ತಿನಿಸನ್ನು ಮಿಸ್ ಮಾಡದೇ ಸವಿಯಲೇ ಬೇಕು.

| Updated By: ಅಕ್ಷತಾ ವರ್ಕಾಡಿ

Updated on: Sep 22, 2024 | 12:17 PM

ಮೈಸೂರ್ ಪಾಕ್ : ಸಾಂಸ್ಕೃತಿಕ ನಗರಿಯಲ್ಲಿ ಮೈಸೂರು ಪಾಕ್ ಸಿಕ್ಕಾಪಟ್ಟೆ ಫೇಮಸ್. ಮುಟ್ಟಿದರೆ ಮೃದುವಾಗಿರುವ, ಬಾಯಲ್ಲಿ ಇಟ್ಟರೆ ಕರಗುವ ಶತಮಾನಗಳಷ್ಟೇ ಹಿಂದಿನ ಈ ಸಿಹಿ ತಿನಿಸಿನ ಮೂಲ ರೆಸಿಪಿಯ ರುಚಿಯನ್ನು ಸವಿಯಬೇಕೆಂದರೆ ಚಿಕ್ಕ ಗಡಿಯಾರದ ಬಳಿ ಇರುವ ಗುರು ಸ್ವೀಟ್‌ ಮಾರ್ಟ್‌ನಲ್ಲಿ ಹೋಗಲೇಬೇಕು. ಮೈಸೂರಿಗೆ ಹೋದರೆ ಈ ಸಿಹಿ ತಿಂಡಿಯನ್ನು ಒಮ್ಮೆ ಸವಿಯಿರಿ.

ಮೈಸೂರ್ ಪಾಕ್ : ಸಾಂಸ್ಕೃತಿಕ ನಗರಿಯಲ್ಲಿ ಮೈಸೂರು ಪಾಕ್ ಸಿಕ್ಕಾಪಟ್ಟೆ ಫೇಮಸ್. ಮುಟ್ಟಿದರೆ ಮೃದುವಾಗಿರುವ, ಬಾಯಲ್ಲಿ ಇಟ್ಟರೆ ಕರಗುವ ಶತಮಾನಗಳಷ್ಟೇ ಹಿಂದಿನ ಈ ಸಿಹಿ ತಿನಿಸಿನ ಮೂಲ ರೆಸಿಪಿಯ ರುಚಿಯನ್ನು ಸವಿಯಬೇಕೆಂದರೆ ಚಿಕ್ಕ ಗಡಿಯಾರದ ಬಳಿ ಇರುವ ಗುರು ಸ್ವೀಟ್‌ ಮಾರ್ಟ್‌ನಲ್ಲಿ ಹೋಗಲೇಬೇಕು. ಮೈಸೂರಿಗೆ ಹೋದರೆ ಈ ಸಿಹಿ ತಿಂಡಿಯನ್ನು ಒಮ್ಮೆ ಸವಿಯಿರಿ.

1 / 5
ಮೈಸೂರ್ ಮಸಾಲೆ ದೋಸೆ : ಘಮ್ ಎನ್ನುವ ಮಸಾಲೆ ದೋಸೆಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವವರೇ ಹೆಚ್ಚು. ಆದರೆ ಮೈಸೂರಲ್ಲಿ ಸಿಗುವ ಮಸಾಲೆ ದೋಸೆ ಸ್ವಲ್ಪ ವಿಭಿನ್ನವಾಗಿದ್ದು , ಗರಿಗರಿಯಾಗಿರುವ ಈ ದೋಸೆಯನ್ನು ಬಾಳೆಎಲೆಯಲ್ಲಿ ಇಟ್ಟು ಕೊಡಲಾಗುತ್ತದೆ. ಈ ದೋಸೆಯನ್ನು ಅದ್ದಿ ತಿನ್ನಲು ಕಾಯಿ ಚಟ್ನಿ ಇರುತ್ತದೆ. ಇದರ ರುಚಿ ಸವಿದರೆ ಮತ್ತೆ ಬೇಡ ಎನ್ನುವುದೇ ಇಲ್ಲ.

ಮೈಸೂರ್ ಮಸಾಲೆ ದೋಸೆ : ಘಮ್ ಎನ್ನುವ ಮಸಾಲೆ ದೋಸೆಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವವರೇ ಹೆಚ್ಚು. ಆದರೆ ಮೈಸೂರಲ್ಲಿ ಸಿಗುವ ಮಸಾಲೆ ದೋಸೆ ಸ್ವಲ್ಪ ವಿಭಿನ್ನವಾಗಿದ್ದು , ಗರಿಗರಿಯಾಗಿರುವ ಈ ದೋಸೆಯನ್ನು ಬಾಳೆಎಲೆಯಲ್ಲಿ ಇಟ್ಟು ಕೊಡಲಾಗುತ್ತದೆ. ಈ ದೋಸೆಯನ್ನು ಅದ್ದಿ ತಿನ್ನಲು ಕಾಯಿ ಚಟ್ನಿ ಇರುತ್ತದೆ. ಇದರ ರುಚಿ ಸವಿದರೆ ಮತ್ತೆ ಬೇಡ ಎನ್ನುವುದೇ ಇಲ್ಲ.

2 / 5
ಬಿಸಿಬೇಳೆಬಾತ್ : ಕರ್ನಾಟಕದ ಪ್ರಸಿದ್ಧವಾದ ತಿಂಡಿ ಈ ಬಿಸಿಬೇಳೆಬಾತ್. ಆದರೆ ಈ ಸ್ಪೆಷಲ್ ತಿಂಡಿ ಮೈಸೂರಲ್ಲಿ ವಿಭಿನ್ನವಾಗಿಯೇ ಮಾಡಲಾಗುತ್ತದೆ. ಈ ಬಿಸಿಬೇಳೆಬಾತ್ ನಲ್ಲಿ ಬಳಸುವ ಪದಾರ್ಥಗಳು, ಬೇಳೆ, ತರಕಾರಿಗಳು ಇದರ ರುಚಿಯನ್ನು ಮತ್ತಷ್ಟು ಹೆಚ್ಚಿಸುವ ಕಾರಣ ಇದನ್ನೊಮ್ಮೆ ನೀವು ಇಲ್ಲಿ ತಿನ್ನಲೇಬೇಕು.

ಬಿಸಿಬೇಳೆಬಾತ್ : ಕರ್ನಾಟಕದ ಪ್ರಸಿದ್ಧವಾದ ತಿಂಡಿ ಈ ಬಿಸಿಬೇಳೆಬಾತ್. ಆದರೆ ಈ ಸ್ಪೆಷಲ್ ತಿಂಡಿ ಮೈಸೂರಲ್ಲಿ ವಿಭಿನ್ನವಾಗಿಯೇ ಮಾಡಲಾಗುತ್ತದೆ. ಈ ಬಿಸಿಬೇಳೆಬಾತ್ ನಲ್ಲಿ ಬಳಸುವ ಪದಾರ್ಥಗಳು, ಬೇಳೆ, ತರಕಾರಿಗಳು ಇದರ ರುಚಿಯನ್ನು ಮತ್ತಷ್ಟು ಹೆಚ್ಚಿಸುವ ಕಾರಣ ಇದನ್ನೊಮ್ಮೆ ನೀವು ಇಲ್ಲಿ ತಿನ್ನಲೇಬೇಕು.

3 / 5
ಮಲ್ಲಿಗೆ ಇಡ್ಲಿ : ದಕ್ಷಿಣ ಭಾರತದ ಬೆಳಗ್ಗಿನ ಬಹುತೇಕ ಉಪಹಾರಗಳಲ್ಲಿ ಒಂದು ಈ ಇಡ್ಲಿ. ವಿವಿಧ ರೀತಿಯ ಇಡ್ಲಿಗಳಿದ್ದು ಟೇಸ್ಟ್ ಕೂಡ ಭಿನ್ನವಾಗಿರುತ್ತದೆ. ಆದರೆ ಮೈಸೂರಿನಲ್ಲಿ ಮಲ್ಲಿಗೆ ಇಡ್ಲಿಯೊಂದಿಗೆ ಚಟ್ನಿಗಳು ಮತ್ತು ಸಾಂಬಾರ್‌ಗಳೊಂದಿಗೆ ನೀಡಲಾಗುತ್ತದೆ. ರುಚಿಯು ಕೂಡ ಅಷ್ಟೇ ಅದ್ಭುತವಾಗಿರುತ್ತದೆ.

ಮಲ್ಲಿಗೆ ಇಡ್ಲಿ : ದಕ್ಷಿಣ ಭಾರತದ ಬೆಳಗ್ಗಿನ ಬಹುತೇಕ ಉಪಹಾರಗಳಲ್ಲಿ ಒಂದು ಈ ಇಡ್ಲಿ. ವಿವಿಧ ರೀತಿಯ ಇಡ್ಲಿಗಳಿದ್ದು ಟೇಸ್ಟ್ ಕೂಡ ಭಿನ್ನವಾಗಿರುತ್ತದೆ. ಆದರೆ ಮೈಸೂರಿನಲ್ಲಿ ಮಲ್ಲಿಗೆ ಇಡ್ಲಿಯೊಂದಿಗೆ ಚಟ್ನಿಗಳು ಮತ್ತು ಸಾಂಬಾರ್‌ಗಳೊಂದಿಗೆ ನೀಡಲಾಗುತ್ತದೆ. ರುಚಿಯು ಕೂಡ ಅಷ್ಟೇ ಅದ್ಭುತವಾಗಿರುತ್ತದೆ.

4 / 5
ಖಾರಾ ಬಾತ್ : ರವಾ ಬಾತ್ ಎಂದೂ ಕರೆಯಲ್ಪಡುವ ಇದು ಮೈಸೂರಿನಲ್ಲಿ ಜನಪ್ರಿಯ ಉಪಹಾರ ಆಯ್ಕೆಯಾಗಿದೆ. ಮೈಸೂರಿನ ಈ ಪ್ರಸಿದ್ಧ ಆಹಾರವನ್ನು ಸೂಜಿ ರವೆ, ಈರುಳ್ಳಿ, ಟೊಮೆಟೊ, ಮಿಶ್ರ ತರಕಾರಿಗಳು ಮತ್ತು ಗೋಡಂಬಿಗಳನ್ನು ಬಳಸಿ ತಯಾರಿಸಲಾಗುತ್ತದೆ. ಉಪ್ಪಿಟ್ಟು ಅಥವಾ ಉಪ್ಮಾ ಎಂದು ಕೂಡ ಕರೆಯಲಾಗುವ ಖಾರಾ ಬಾತನ್ನು ಇಲ್ಲಿನ ಜನರು ಬಾಯಿಚಪ್ಪರಿಸಿಕೊಂಡು ಸವಿಯುತ್ತಾರೆ.

ಖಾರಾ ಬಾತ್ : ರವಾ ಬಾತ್ ಎಂದೂ ಕರೆಯಲ್ಪಡುವ ಇದು ಮೈಸೂರಿನಲ್ಲಿ ಜನಪ್ರಿಯ ಉಪಹಾರ ಆಯ್ಕೆಯಾಗಿದೆ. ಮೈಸೂರಿನ ಈ ಪ್ರಸಿದ್ಧ ಆಹಾರವನ್ನು ಸೂಜಿ ರವೆ, ಈರುಳ್ಳಿ, ಟೊಮೆಟೊ, ಮಿಶ್ರ ತರಕಾರಿಗಳು ಮತ್ತು ಗೋಡಂಬಿಗಳನ್ನು ಬಳಸಿ ತಯಾರಿಸಲಾಗುತ್ತದೆ. ಉಪ್ಪಿಟ್ಟು ಅಥವಾ ಉಪ್ಮಾ ಎಂದು ಕೂಡ ಕರೆಯಲಾಗುವ ಖಾರಾ ಬಾತನ್ನು ಇಲ್ಲಿನ ಜನರು ಬಾಯಿಚಪ್ಪರಿಸಿಕೊಂಡು ಸವಿಯುತ್ತಾರೆ.

5 / 5
Follow us
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ