AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು; ಗಾಳಿ-ಮಳೆಗೆ ಪಕ್ಷಿಗಳ ಜೀವಕ್ಕೆ ಸಂಚಕಾರ, 2 ತಿಂಗಳಲ್ಲಿ 2 ಸಾವಿರ ಪಕ್ಷಿಗಳ ಸಾವು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಿನಿಂದ ಹೆಚ್ಚು ಮಳೆಯಾಗುತ್ತಿದೆ. ಇದರ ಎಫೆಕ್ಟ್ ಜನರ ಮೇಲೆ ಅಷ್ಟೇ ಅಲ್ಲದೇ ಪಕ್ಷಿಗಳ ಮೇಲೂ ತಟ್ಟಿದೆ. ಮಳೆ, ಗಾಳಿಗೆ ಸಾವಿರಾರು ಪಕ್ಷಿಗಳು ಜೀವ ತೆತ್ತಿವೆ. ಕಳೆದ ಜೂನ್​ನಿಂದ ಜುಲೈ 31ರವರೆಗೆ ಬರೋಬ್ಬರಿ 2 ಸಾವಿರ ಪಕ್ಷಿಗಳು ಮೃತಪಟ್ಟಿವೆ. ಅಷ್ಟೇ ಅಲ್ಲದೆ ಗಾಯಗೊಳ್ಳುತ್ತಿರುವ ಪಕ್ಷಿಗಳ ಸಂಖ್ಯೆಯೂ ಹೆಚ್ಚಿದೆ.

Poornima Agali Nagaraj
Poornima Agali Nagaraj| Edited By: ಆಯೇಷಾ ಬಾನು|

Updated on: Aug 06, 2024 | 12:45 PM

Share
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಿನಿಂದ ವರುಣ ಅಬ್ಬರಿಸುತ್ತಿದ್ದು, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಇದರಿಂದ ನೀರು ರಸ್ತೆಗೆ ಹರಿದುಬಂದು ರಸ್ತೆಗಳು ಮುಳುಗುತ್ತಿವೆ, ಮನೆಗಳಿಗೆ ನೀರು ನುಗ್ಗುತ್ತಿದೆ. ಇದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.‌ ಈ ಮಧ್ಯೆ ಮೂಕ‌ ಪ್ರಾಣಿಗಳು ಮಳೆ ಗಾಳಿಗೆ ಜೀವ ಕಳೆದುಕೊಳ್ಳುತ್ತಿವೆ.‌

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಿನಿಂದ ವರುಣ ಅಬ್ಬರಿಸುತ್ತಿದ್ದು, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಇದರಿಂದ ನೀರು ರಸ್ತೆಗೆ ಹರಿದುಬಂದು ರಸ್ತೆಗಳು ಮುಳುಗುತ್ತಿವೆ, ಮನೆಗಳಿಗೆ ನೀರು ನುಗ್ಗುತ್ತಿದೆ. ಇದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.‌ ಈ ಮಧ್ಯೆ ಮೂಕ‌ ಪ್ರಾಣಿಗಳು ಮಳೆ ಗಾಳಿಗೆ ಜೀವ ಕಳೆದುಕೊಳ್ಳುತ್ತಿವೆ.‌

1 / 6
ಈ ವರ್ಷದ ಮಳೆಯಲ್ಲಿ ಗಾಳಿಯ ಪ್ರಮಾಣ ಜಾಸ್ತಿಯಾಗಿದ್ದು, ಮಳೆ, ಗಾಳಿಗೆ ಪಕ್ಷಿಗಳ ಗೂಡುಗಳು ನಾಶವಾಗುತ್ತಿವೆ. ಹೀಗಾಗಿ ಎಳೆಯ ಪಕ್ಷಿಗಳು ಸಾಯುತ್ತಿದ್ದು, ಕಳೆದ ಜೂನ್​ನಿಂದ ಜುಲೈ 31ರವರೆಗೆ ಬರೋಬ್ಬರಿ 2 ಸಾವಿರ ಪಕ್ಷಿಗಳು ಮೃತಪಟ್ಟಿವೆ. ಅಷ್ಟೇ ಅಲ್ಲದೆ ಗಾಯಗೊಳ್ಳುತ್ತಿರುವ ಪಕ್ಷಿಗಳ ಸಂಖ್ಯೆಯೂ ಹೆಚ್ಚಿದೆ.

ಈ ವರ್ಷದ ಮಳೆಯಲ್ಲಿ ಗಾಳಿಯ ಪ್ರಮಾಣ ಜಾಸ್ತಿಯಾಗಿದ್ದು, ಮಳೆ, ಗಾಳಿಗೆ ಪಕ್ಷಿಗಳ ಗೂಡುಗಳು ನಾಶವಾಗುತ್ತಿವೆ. ಹೀಗಾಗಿ ಎಳೆಯ ಪಕ್ಷಿಗಳು ಸಾಯುತ್ತಿದ್ದು, ಕಳೆದ ಜೂನ್​ನಿಂದ ಜುಲೈ 31ರವರೆಗೆ ಬರೋಬ್ಬರಿ 2 ಸಾವಿರ ಪಕ್ಷಿಗಳು ಮೃತಪಟ್ಟಿವೆ. ಅಷ್ಟೇ ಅಲ್ಲದೆ ಗಾಯಗೊಳ್ಳುತ್ತಿರುವ ಪಕ್ಷಿಗಳ ಸಂಖ್ಯೆಯೂ ಹೆಚ್ಚಿದೆ.

2 / 6
ಮಳೆ ಹಾಗೂ ಗಾಳಿಯಿಂದಾಗಿ ಪಕ್ಷಿಗಳಿಗೆ ಗಾಯಗಳಾಗುತ್ತಿವೆ.‌ ಜೂನ್ 1 ರಿಂದ ಜುಲೈ 31 ರವರೆಗೆ, ರಕ್ಷಣಾ ಕೇಂದ್ರಗಳು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಗಾಯಗೊಂಡ ಪಕ್ಷಿಗಳನ್ನು ರಕ್ಷಿಸಿವೆ.

ಮಳೆ ಹಾಗೂ ಗಾಳಿಯಿಂದಾಗಿ ಪಕ್ಷಿಗಳಿಗೆ ಗಾಯಗಳಾಗುತ್ತಿವೆ.‌ ಜೂನ್ 1 ರಿಂದ ಜುಲೈ 31 ರವರೆಗೆ, ರಕ್ಷಣಾ ಕೇಂದ್ರಗಳು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಗಾಯಗೊಂಡ ಪಕ್ಷಿಗಳನ್ನು ರಕ್ಷಿಸಿವೆ.

3 / 6
ಸಾಮಾನ್ಯವಾಗಿ, ಬೇಸಿಗೆಯ ತಿಂಗಳಲ್ಲಿ ಪಕ್ಷಿಗಳು ಸಾಯುವುದನ್ನ ನೋಡಿರ್ತೀವಿ. ಆದ್ರೆ ಈ ವರ್ಷ ಜೂನ್ ಹಾಗೂ ಜುಲೈ ತಿಂಗಳ ಗಾಳಿ ಮಳೆಗೆ ಪಕ್ಷಿಗಳ ಸಾವು ಹೆಚ್ಚಾಗಿದೆ.

ಸಾಮಾನ್ಯವಾಗಿ, ಬೇಸಿಗೆಯ ತಿಂಗಳಲ್ಲಿ ಪಕ್ಷಿಗಳು ಸಾಯುವುದನ್ನ ನೋಡಿರ್ತೀವಿ. ಆದ್ರೆ ಈ ವರ್ಷ ಜೂನ್ ಹಾಗೂ ಜುಲೈ ತಿಂಗಳ ಗಾಳಿ ಮಳೆಗೆ ಪಕ್ಷಿಗಳ ಸಾವು ಹೆಚ್ಚಾಗಿದೆ.

4 / 6
ಎರಡು ತಿಂಗಳಲ್ಲಿ ಪಕ್ಷಿಗಳನ್ನ ರಕ್ಷಿಸಲು ಒಟ್ಟು 1,479 ರಕ್ಷಣಾ ಕರೆಗಳು ಬಂದಿದ್ದು, ಅದ್ರಲ್ಲಿ 515 ಪಕ್ಷಿಗಳನ್ನು ರಕ್ಷಿಸಲಾಗಿದೆ.‌ ಇನ್ನು‌ ಜನವರಿಯಿಂದ ಜುಲೈವರೆಗೆ ಒಟ್ಟು ನಗರದಾದ್ಯಂತ 7,000 ಕ್ಕೂ ಹೆಚ್ಚು ಪಕ್ಷಿಗಳನ್ನು ರಕ್ಷಿಸಲಾಗಿದೆ.

ಎರಡು ತಿಂಗಳಲ್ಲಿ ಪಕ್ಷಿಗಳನ್ನ ರಕ್ಷಿಸಲು ಒಟ್ಟು 1,479 ರಕ್ಷಣಾ ಕರೆಗಳು ಬಂದಿದ್ದು, ಅದ್ರಲ್ಲಿ 515 ಪಕ್ಷಿಗಳನ್ನು ರಕ್ಷಿಸಲಾಗಿದೆ.‌ ಇನ್ನು‌ ಜನವರಿಯಿಂದ ಜುಲೈವರೆಗೆ ಒಟ್ಟು ನಗರದಾದ್ಯಂತ 7,000 ಕ್ಕೂ ಹೆಚ್ಚು ಪಕ್ಷಿಗಳನ್ನು ರಕ್ಷಿಸಲಾಗಿದೆ.

5 / 6
ಸಿಲಿಕಾನ್‌ ಸಿಟಿಯಲ್ಲಿ ಪಕ್ಷಿಗಳ ರಕ್ಷಣಾ ಕೇಂದ್ರಗಳು ಕಡಿಮೆ ಇವೆ. ಇವುಗಳನ್ನ ಹೆಚ್ಚಳ ಮಾಡಿದ್ದೆ ಆಗಿದ್ದಲ್ಲಿ ಪಕ್ಷಿಗಳನ್ನ ರಕ್ಷಣೆ ಮಾಡಬಹುದಾಗಿದೆ ಅಂತ ಪಕ್ಷಿ ಪ್ರಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಸಿಲಿಕಾನ್‌ ಸಿಟಿಯಲ್ಲಿ ಪಕ್ಷಿಗಳ ರಕ್ಷಣಾ ಕೇಂದ್ರಗಳು ಕಡಿಮೆ ಇವೆ. ಇವುಗಳನ್ನ ಹೆಚ್ಚಳ ಮಾಡಿದ್ದೆ ಆಗಿದ್ದಲ್ಲಿ ಪಕ್ಷಿಗಳನ್ನ ರಕ್ಷಣೆ ಮಾಡಬಹುದಾಗಿದೆ ಅಂತ ಪಕ್ಷಿ ಪ್ರಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕಾಗಿದೆ.

6 / 6
Poornima Agali Nagaraj
Poornima Agali Nagaraj
Follow Us
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ