AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Navami Festival Recipes: ರಾಮನವಮಿಗೆ ವಿಶೇಷ ಖಾದ್ಯಗಳನ್ನು ತಯಾರಿಸಿ, ಇಲ್ಲಿದೆ ಪಾಕ ವಿಧಾನ

ರಾಮ ನವಮಿ ಈ ವರ್ಷ ಮಾರ್ಚ್ 30ಕ್ಕೆ ಬಂದಿದೆ. ಆದ್ದರಿಂದ ಈ ಹಬ್ಬದ ಸಮಯದಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ, ಇಲ್ಲಿದೆ ಪಾಕ ವಿಧಾನ.

ಅಕ್ಷತಾ ವರ್ಕಾಡಿ
|

Updated on:Mar 29, 2023 | 3:55 PM

Share
ರಾಮ ನವಮಿ ಹೆಸರೇ ಸೂಚಿಸುವಂತೆ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಲ್ಲಿ ಶ್ರೀರಾಮನ ಜನ್ಮ ದಿನವಾಗಿ ರಾಮ ನವಮಿಯನ್ನು ಆಚರಿಸಲಾಗುವುದು. ರಾಮ ನವಮಿ ಈ ವರ್ಷ ಮಾರ್ಚ್ 30ಕ್ಕೆ ಬಂದಿದೆ. ಆದ್ದರಿಂದ ಈ ಹಬ್ಬದ ಸಮಯದಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ.

ರಾಮ ನವಮಿ ಹೆಸರೇ ಸೂಚಿಸುವಂತೆ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಲ್ಲಿ ಶ್ರೀರಾಮನ ಜನ್ಮ ದಿನವಾಗಿ ರಾಮ ನವಮಿಯನ್ನು ಆಚರಿಸಲಾಗುವುದು. ರಾಮ ನವಮಿ ಈ ವರ್ಷ ಮಾರ್ಚ್ 30ಕ್ಕೆ ಬಂದಿದೆ. ಆದ್ದರಿಂದ ಈ ಹಬ್ಬದ ಸಮಯದಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ.

1 / 6
ಅಕ್ಕಿ ಪಾಯಸ: ಈ ಖಾದ್ಯವನ್ನು ರಾಮ ನವಮಿ ದಿನ ಶ್ರೀರಾಮನಿಗೆ ನೈವೇದ್ಯವಾಗಿ ಇಡಲಾಗುತ್ತದೆ. 1 ಕಪ್ ಬಾಸ್ಮತಿ ಅಕ್ಕಿಯನ್ನು 30 ನಿಮಿಷಗಳ ಕಾಲ ತೊಳೆದು ನೆನೆಸಿಡಿ. ನಂತರ ಅಕ್ಕಿಯನ್ನು 2 ಕಪ್ ನೀರು ಮತ್ತು 1 ಕಪ್ ಹಾಲಿನೊಂದಿಗೆ ಸೇರಿಸಿ. 1/2 ಕಪ್ ಸಕ್ಕರೆ, ಒಂದು ಚಿಟಿಕೆ ಕೇಸರಿ, ಮತ್ತು 2-3 ಪುಡಿಮಾಡಿದ ಏಲಕ್ಕಿ ಬೀಜಗಳನ್ನು ಸೇರಿಸಿ. ಎಲ್ಲವನ್ನೂ ಕಡಿಮೆ ಉರಿಯಲ್ಲಿ ತಳ ಹಿಡಿಯದಂತೆ ಬೇಯಿಸಿ.

ಅಕ್ಕಿ ಪಾಯಸ: ಈ ಖಾದ್ಯವನ್ನು ರಾಮ ನವಮಿ ದಿನ ಶ್ರೀರಾಮನಿಗೆ ನೈವೇದ್ಯವಾಗಿ ಇಡಲಾಗುತ್ತದೆ. 1 ಕಪ್ ಬಾಸ್ಮತಿ ಅಕ್ಕಿಯನ್ನು 30 ನಿಮಿಷಗಳ ಕಾಲ ತೊಳೆದು ನೆನೆಸಿಡಿ. ನಂತರ ಅಕ್ಕಿಯನ್ನು 2 ಕಪ್ ನೀರು ಮತ್ತು 1 ಕಪ್ ಹಾಲಿನೊಂದಿಗೆ ಸೇರಿಸಿ. 1/2 ಕಪ್ ಸಕ್ಕರೆ, ಒಂದು ಚಿಟಿಕೆ ಕೇಸರಿ, ಮತ್ತು 2-3 ಪುಡಿಮಾಡಿದ ಏಲಕ್ಕಿ ಬೀಜಗಳನ್ನು ಸೇರಿಸಿ. ಎಲ್ಲವನ್ನೂ ಕಡಿಮೆ ಉರಿಯಲ್ಲಿ ತಳ ಹಿಡಿಯದಂತೆ ಬೇಯಿಸಿ.

2 / 6
ತೆಂಗಿನಕಾಯಿ ಲಡ್ಡು : ತೆಂಗಿನಕಾಯಿ ತುರಿ, ಸಕ್ಕರೆ ಮತ್ತು ಹಾಲಿನೊಂದಿಗೆ ತಯಾರಿಸಲಾದ ಸರಳ ಮತ್ತು ರುಚಿಕರವಾದ ಪ್ರಸಾದವಾಗಿದೆ. ತೆಂಗಿನಕಾಯಿ ಲಡ್ಡು ಮಾಡಲು, 1 ಕಪ್ ತುರಿದ ತೆಂಗಿನಕಾಯಿ, 1/2 ಕಪ್ ಸಕ್ಕರೆ ಮತ್ತು 1/4 ಕಪ್ ಹಾಲನ್ನು ಬಾಣಲೆಯಲ್ಲಿ ಕಡಿಮೆ ಉರಿಯಲ್ಲಿ ಕುದಿಸಿ. ಮಿಶ್ರಣವು ದಪ್ಪವಾಗುವವರೆಗೆ ಮತ್ತು ಪ್ಯಾನ್‌ನ ಬದಿಗಳನ್ನು ಬಿಡಲು ಪ್ರಾರಂಭಿಸುವವರೆಗೆ ನಿರಂತರವಾಗಿ ಮಧ್ಯಮ ಉರಿಯಲ್ಲಿ ಬೇಯಿಸಿ.ನಂತರ ಉರಿಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ, ಸಣ್ಣ ಉಂಡೆಗಳನ್ನು ಮಾಡಿ ಮತ್ತು ಗೋಡಂಬಿ, ದ್ರಾಕ್ಷಿಗಳಿಂದ ಅಲಂಕರಿಸಿ.

ತೆಂಗಿನಕಾಯಿ ಲಡ್ಡು : ತೆಂಗಿನಕಾಯಿ ತುರಿ, ಸಕ್ಕರೆ ಮತ್ತು ಹಾಲಿನೊಂದಿಗೆ ತಯಾರಿಸಲಾದ ಸರಳ ಮತ್ತು ರುಚಿಕರವಾದ ಪ್ರಸಾದವಾಗಿದೆ. ತೆಂಗಿನಕಾಯಿ ಲಡ್ಡು ಮಾಡಲು, 1 ಕಪ್ ತುರಿದ ತೆಂಗಿನಕಾಯಿ, 1/2 ಕಪ್ ಸಕ್ಕರೆ ಮತ್ತು 1/4 ಕಪ್ ಹಾಲನ್ನು ಬಾಣಲೆಯಲ್ಲಿ ಕಡಿಮೆ ಉರಿಯಲ್ಲಿ ಕುದಿಸಿ. ಮಿಶ್ರಣವು ದಪ್ಪವಾಗುವವರೆಗೆ ಮತ್ತು ಪ್ಯಾನ್‌ನ ಬದಿಗಳನ್ನು ಬಿಡಲು ಪ್ರಾರಂಭಿಸುವವರೆಗೆ ನಿರಂತರವಾಗಿ ಮಧ್ಯಮ ಉರಿಯಲ್ಲಿ ಬೇಯಿಸಿ.ನಂತರ ಉರಿಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ, ಸಣ್ಣ ಉಂಡೆಗಳನ್ನು ಮಾಡಿ ಮತ್ತು ಗೋಡಂಬಿ, ದ್ರಾಕ್ಷಿಗಳಿಂದ ಅಲಂಕರಿಸಿ.

3 / 6
ಬೆಸನ್ ಲಡ್ಡು: ಬೆಸನ್​​ ಲಡ್ಡು ಮಾಡಲು ಬೇಳೆ ಹಿಟ್ಟು, ಸಕ್ಕರೆ ಮತ್ತು ಏಲಕ್ಕಿ ಪುಡಿ ಹಾಗೂ ಡ್ರೈ ಫ್ರೂಟ್ಸ್​​​​ಗಳನ್ನು ತುಪ್ಪದಲ್ಲಿ ಚೆನ್ನಾಗಿ ಹುರಿಯಿರಿ. ನಂತರ ಈ ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ಮಾಡಿ.

ಬೆಸನ್ ಲಡ್ಡು: ಬೆಸನ್​​ ಲಡ್ಡು ಮಾಡಲು ಬೇಳೆ ಹಿಟ್ಟು, ಸಕ್ಕರೆ ಮತ್ತು ಏಲಕ್ಕಿ ಪುಡಿ ಹಾಗೂ ಡ್ರೈ ಫ್ರೂಟ್ಸ್​​​​ಗಳನ್ನು ತುಪ್ಪದಲ್ಲಿ ಚೆನ್ನಾಗಿ ಹುರಿಯಿರಿ. ನಂತರ ಈ ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ಮಾಡಿ.

4 / 6
ಸಿಹಿ ಅವಲಕ್ಕಿ ಪ್ರಸಾದ: ಅವಲಕ್ಕಿಯನ್ನು ಬೆಲ್ಲ, ತುರಿದ ತೆಂಗಿನಕಾಯಿ ಮತ್ತು ಹುರಿದ ಕಡಲೆಕಾಯಿಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಜೊತೆಗೆ ಬಾಳೆಹಣ್ಣು ಅಥವಾ ಮಾವಿನ ಹಣ್ಣುಗಳನ್ನು ಚಿಕ್ಕದಾಗಿ ಕತ್ತರಿಸಿ ಮತ್ತು ಅಲಂಕರಿಸಿ.

ಸಿಹಿ ಅವಲಕ್ಕಿ ಪ್ರಸಾದ: ಅವಲಕ್ಕಿಯನ್ನು ಬೆಲ್ಲ, ತುರಿದ ತೆಂಗಿನಕಾಯಿ ಮತ್ತು ಹುರಿದ ಕಡಲೆಕಾಯಿಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಜೊತೆಗೆ ಬಾಳೆಹಣ್ಣು ಅಥವಾ ಮಾವಿನ ಹಣ್ಣುಗಳನ್ನು ಚಿಕ್ಕದಾಗಿ ಕತ್ತರಿಸಿ ಮತ್ತು ಅಲಂಕರಿಸಿ.

5 / 6
ಪಂಜಿರಿ: ಪಂಜಿರಿ ತಯಾರಿಸಲು, ಗೋಧಿ ಹಿಟ್ಟನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ತುಪ್ಪದಲ್ಲಿ ಹುರಿಯಿರಿ. ಸ್ವಲ್ಪ ಸಕ್ಕರೆ, ಕೆಲವು ಡ್ರೈ ಫ್ರೂಟ್ಸ್​​​ಗಳನ್ನು ಮತ್ತು ಚಿಟಿಕೆ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ತಣ್ಣಗಾಗಲು ಬಿಡಿ. ಈ ಸಿಹಿಯಲ್ಲಿ ಪೌಷ್ಠಿಕಾಂಶ ಹೇರಳವಾಗಿದ್ದು, ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

ಪಂಜಿರಿ: ಪಂಜಿರಿ ತಯಾರಿಸಲು, ಗೋಧಿ ಹಿಟ್ಟನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ತುಪ್ಪದಲ್ಲಿ ಹುರಿಯಿರಿ. ಸ್ವಲ್ಪ ಸಕ್ಕರೆ, ಕೆಲವು ಡ್ರೈ ಫ್ರೂಟ್ಸ್​​​ಗಳನ್ನು ಮತ್ತು ಚಿಟಿಕೆ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ತಣ್ಣಗಾಗಲು ಬಿಡಿ. ಈ ಸಿಹಿಯಲ್ಲಿ ಪೌಷ್ಠಿಕಾಂಶ ಹೇರಳವಾಗಿದ್ದು, ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

6 / 6

Published On - 3:55 pm, Wed, 29 March 23

Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ