- TV9 Kannada Photo gallery Venus transit to sagittarius on december 30 2021 it will bring good fortune for 4 zodiac signs zodiac signs in kannada sas
New Year 2022: ಈ ರಾಶಿಯವರಿಗೆ ಡಿಸೆಂಬರ್ 30 ರಿಂದ ಒಳ್ಳೆಯ ಕಾಲ. ಈ ನಾಲ್ಕು ರಾಶಿಯವರು ಇದರ ಲಾಭ ಪಡೆಯಿರಿ
ಹೊಸ ವರ್ಷಾರಂಭದ ಸಮಯಕ್ಕೂ ಮುನ್ನ (2022) ಡಿಸೆಂಬರ್ 30 ರಿಂದ ಈ ರಾಶಿಯವರಿಗೆ ಒಳ್ಳೆಯ ಸಮಯ ಕೂಡಿಬರಲಿದೆ. ಈ ನಾಲ್ಕು ರಾಶಿಯವರು ಇದರ ಲಾಭ ಪಡೆಯಬಹುದು. ಶುಕ್ರ ಗ್ರಹ ಧನ ವೈಭವ ತರುವ ಮತ್ತು ವಿಲಾಸಿತ ಪ್ರಧಾನ ಗ್ರಹ ಎನ್ನಲಾಗುತ್ತದೆ. ಹಾಗಾಗಿ 2021 ಡಿಸೆಂಬರ್ 30 ರಿಂದ ಶುಕ್ರ ಗ್ರಹ ಧನು ರಾಶಿಯಲ್ಲಿ ಪ್ರವೇಶಿಸುತ್ತಾನೆ. 2022 ಫೆಬ್ರವರಿ 27 ವರೆಗೂ ಶುಕ್ರ ಗ್ರಹ ಧನು ರಾಶಿಯಲ್ಲೇ ಸಂಚರಿಸುತ್ತಿರುತ್ತಾನೆ. ಶುಕ್ರ ಗ್ರಹದ ಈ ಪಥ ಬದಲಾವಣೆ ಕೆಳಗಿನ ನಾಲ್ಕು ರಾಶಿಯವರಿಗೆ ಶುಭಪ್ರದ ಫಲಪ್ರದವಾಗಲಿದೆ (venus transit to sagittarius).
Updated on: Dec 23, 2021 | 6:06 AM

ಮೇಷ (Aries): ಶುಕ್ರ ಗ್ರಹ ಪಥ ಬದಲಾವಣೆಯು ಮೇಷ ರಾಶಿಯ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ. ಇದು ಶುಭದಾಯಕವಾಗಿರುತ್ತದೆ. ಈ ಸಮಯದಲ್ಲಿ ನಮ್ಮ ಪರಿಶ್ರಮಕ್ಕೆ ತಕ್ಕತೆ ಎಲ್ಲಾ ಯಶಸ್ಸು ಲಭಿಸುತ್ತದೆ. ನಿಮಗೆ ಕೈಗೂಡಬೇಕಾದ ಕೆಲಸಗಳ ಬಗೆಗೆ ನೀವು ಹೆಚ್ಚಿನ ಕಾಳಜಿ ವಹಿಸಿ ಶರಮ ಹಾಕಿದ್ದೇ ಆದರೆ ಖಂಡಿತಾ ಜಯ ನಿಮ್ಮದಾಗಲಿದೆ.

ವೃಷಭ (Taurus): ವೃಷಭ ರಾಶಿ ಜಾತಕದವರಿಗೆ ಶುಕ್ರ ಗ್ರಹ ಗೋಚರವು ಆರ್ಥಿಕವಾಗಿ ಶುಭದಾಯಕವಾಗಲಿದೆ. ನಿಮಗೆ ದಿಢೀರನೆ ಆರ್ಥಿಕ ಲಾಭ ಗೋಚರಿಸಲಿದೆ. ಇನ್ನು ಉದ್ಯೋಗಿಗಳಿಗೆ ದೊಡ್ಡ ಜವಾಬ್ದಾರಿ ಸ್ಥಾನ ಪ್ರಾಪ್ತಿಯಾಗಲಿದೆ. ಇದರಿಂದ ನೀವು ಪ್ರವಾಸವೂ ಹೋಗಬೇಕಾದೀತು. ಸರಿಯಾದ ರಣನೀತಿ ಅಳವಡಿಸಿಕೊಂಡಿದ್ದೇ ಆದರೆ ಏನೂ ಬೇಕಾದರೂ ನೀವು ಸಾಧಿಸಬಹುದಾಗಿದೆ. ಮುಂದಿನೆ ಎರಡು ತಿಂಗಳೂ ನೀವು ಅದೃಷ್ಟವಂತರು ಎಂಬುದು ಸಾಬೀತಾಗಲಿದೆ.

3. ಕರ್ಕಾಟಕ (Cancer): ಕರ್ಕ ರಾಶಿ ಜಾತಕದವರಿಗೆ ಮುಂದಿನ ಎರಡು ತಿಂಗಳು ಅದೃಷ್ಟ ತರಲಿದೆ. ನೌಕರಿಯಲ್ಲಿ ಇನ್ನೂ ಹೆಚ್ಚಿನ ಅದೃಷ್ಟ ನಿಮ್ಮದಾಗಲಿದೆ. ನೌಕರರಿಗೆ ಪದೋನ್ನತಿ ಸಿಗುವ ಸಂಭಾವ್ಯತೆ ಇರುತ್ತದೆ. ಸರಿಕಾರಿ ನೌಕರಿ ತಲಾಶೆಯಲ್ಲಿ ಇರುವವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಹಾಗಾಗಿ ಪರಿಶ್ರಮ ಹಾಕುವ ಕಸರತ್ತನ್ನು ಕೈಗೊಳ್ಳಿ.

ವೃಶ್ಚಿಕ (Scorpio): ವೃಶ್ಚಿಕ ರಾಶಿ ಜಾತಕದವರ ಮೇಲೆಯೂ ಸಹ ಶುಕ್ರ ಗೋಚರ ಲಾಭದಾಯಕವಾಗಲಿದೆ. ಉದ್ಯೋಗದಲ್ಲಿ ಪ್ರಮೋಶನ್ ಸಿಗುವ ಸಾಧ್ಯತೆ ನಿಚ್ಚಳವಾಗಿದೆ. ಧನ ಲಾಭವಾಗಲಿದೆ. ಯಾವುದಾದರೂ ವ್ಯಾಪಾರ ಶುರು ಮಾಡಬೇಕೆಂದರೂ ಇದು ಪ್ರಶಸತ ಸಮಯವಾಗಿದೆ.

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್ ನ್ಯೂಸ್ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಲ್ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು. ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು



