ಚಂದ್ರಯಾನ-3 ಪಯಣದಲ್ಲಿ ಕನ್ನಡಿಗ ವಿಜ್ಞಾನಿಯ ಸೇವೆ, ಇದುವೇ ನಮಗೆ ಹೆಮ್ಮೆ
ಇಡೀ ವಿಶ್ವವೇ ಇಂದು ನಿಬ್ಬೆರಗಾಗಿದೆ. ಭಾರತದ ಬಗ್ಗೆ ಕಿಳರಿಮೆಯಾಗಿ ಮಾತನಾಡುತ್ತಿದ್ದವರು ಇಂದು ಭೇಷ್ ಎನ್ನುವಂತಾಗಿದೆ. ಚಂದ್ರಯಾನ 3 ಯಶಸ್ವಿಯಾಗಿದ್ದೇ ಇದಕ್ಕೆ ಕಾರಣವಾಗಿದೆ. ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಅಂಗಳದಲ್ಲಿ ಲ್ಯಾಂಡ್ ಅಗಿದ್ದೇ ತಡ ಎಲ್ಲೆಡೆ ಖುಷಿ ಝೇಂಕರಿಸಿದೆ. ಇಡೀ ಚಂದ್ರಯಾನ 3ರ ಯೋಜನೆಯ ತಂಡದಲ್ಲಿ ವಿಜಯಪುರ ಜಿಲ್ಲೆಯ ವಿಜ್ಞಾನಿಯೂ ಸೇವೆ ಸಲ್ಲಿಸಿದ್ದು ವಿಜಯಪುರ ಜಿಲ್ಲೆಯ ಕೀರ್ತಿ ಹೆಚ್ಚಿದೆ. ಇಸ್ರೋದಲ್ಲಿ ವಿಜಯಪುರದ ವಿಜ್ಞಾನಿ ಸಂಭ್ರಮಿಸಿದರೆ ಇತ್ತ ವಿಜಯಪುರ ನಗರದ ವಿಜ್ಞಾನಿಯ ಮನೆಯಲ್ಲೂ ಸಂಭ್ರಮ ಮನೆ ಮಾಡಿತ್ತು.
Updated on: Aug 24, 2023 | 7:29 AM

ಅಷ್ಟು ವಿಜ್ಞಾನಿಗಳ ತಂಡದಲ್ಲಿ ಓರ್ವ ಯುವ ವಿಜ್ಞಾನಿ ಮಾತ್ರ ಹೆಚ್ಚು ಸಡಗರ ಸಂಭ್ರಮದಿಂದಲೇ ಸೆಲೆಬ್ರೇಟ್ ಮಾಡಿದರು. ಅವರೇ ವಿಜಯಪುರ ಜಿಲ್ಲೆಯ ವಿಜ್ಞಾನಿ ಕನ್ನಡಿಗ ಅಭಿಷೇಕ ದೇಶಪಾಂಡೆ. 28 ವರ್ಷದ ಯುವ ವಿಜ್ಞಾನಿ ಇಸ್ರೋದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಚಂದ್ರಯಾನ ಮೂರರ ಯೋಜನೆಯಲ್ಲಿ ವಿಜಯಪುರ ಜಿಲ್ಲೆಯ ಯುವ ವಿಜ್ಞಾನಿ ಸೇವೆ ಸಲ್ಲಿಸಿದ್ದು ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಇಸ್ರೋ ವಿಜ್ಞಾನಿಗಳ ಖುಷಿಯಷ್ಟೇ ವಿಜಯಪುರ ಜಿಲ್ಲೆಯ ಜನರು ಖುಷಿ ಪಟ್ಟಿದ್ದಾರೆ.

ಇತ್ತ ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಯಾಗಿರುವ ಪುತ್ರ ಅಭಿಷೇಕ್ ಸಂಭ್ರಮಿಸುತ್ತಿದ್ರೆ, ಅತ್ತ ಅವರ ನಿವಾಸದಲ್ಲಿ ಅಭಿಷೇಕ ತಂದೆ ಅರವಿಂದ ಮತ್ತು ತಾಯಿ ಅಮಿತಾ ಹಾಗೂ ಸಹೋದರಿ ಡಾ. ಅಮೃತಾ ಸಂತೋಷವೂ ಹೇಳತೀರದಾಗಿತ್ತು.

ಚಂದ್ರಯಾನ 3 ರ ಯೋಜನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅಭಿಷೇಕ ದೇಶಪಾಂಡೆ ವಿಕ್ರಮ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ನೆಲೆಯೂರಿದ್ದಕ್ಕೆ ಹೆಚ್ಚು ಖುಷಿ ಪಟ್ಟಿದ್ದಾರೆ..

ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಯಾಗಿರುವ ಅಭಿಷೇಕ್ ಸಂಭ್ರಮಿಸುತ್ತಿದ್ರೆ, ಹುಬ್ಬಳ್ಳಿಯಲ್ಲಿರೋ ಅಭಿಷೇಕ ಪತ್ನಿ ಅಪೂರ್ವಾರ ಖುಷಿಗೆ ಪಾರವೇ ಇರಲಿಲ್ಲ.

ಇನ್ನು ಅಭಿಷೇಕ್ ದೇಶಪಾಂಡೆ ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ಚಂದ್ರಯಾಣ 3 ಯಶಸ್ವಿ ಸಂಭ್ರಮಾಚರಣೆ ಮಾಡಿದ್ರೆ, ಇತ್ತ ವಿಜಯಪುರದ ಮನೆಯಲ್ಲಿ ಕುಟುಂಬದ ಸದಸ್ಯರು ಪರಸ್ಪರ ಸಿಹಿ ತಿನ್ನಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಚಂದ್ರಯಾನ ಮೂರರ ಯೋಜನೆಯಲ್ಲಿ ವಿಜಯಪುರ ಜಿಲ್ಲೆಯ ಯುವ ವಿಜ್ಞಾನಿ ಸೇವೆ ಸಲ್ಲಿಸಿದ್ದು ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಇಸ್ರೋ ವಿಜ್ಞಾನಿಗಳ ಖುಷಿಯಷ್ಟೇ ವಿಜಯಪುರ ಜಿಲ್ಲೆಯ ಜನರು ಖುಷಿ ಪಟ್ಟಿದ್ದಾರೆ.

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......
Read More



