AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು

Yadgiri: ನಗರದ ರಸ್ತೆಗಳ ಮೇಲೆ ಓಡಾಡಬೇಕು ಅಂದರೆ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಓಡಾಡಬೇಕು. ವಾಹನ ಸವಾರರು ಸ್ವಲ್ಪ ಯಾಮಾರಿದರೂ ಪ್ರಾಣ ಪಕ್ಷಿ ಹಾರಿ ಹೋಗುವುದು ಗ್ಯಾರಂಟಿ.

TV9 Web
| Edited By: Rakesh Nayak Manchi|

Updated on:Nov 07, 2022 | 12:54 PM

Share
ಯಾದಗಿರಿ ಜಿಲ್ಲಾ ಕೇಂದ್ರ ರಸ್ತೆಗಳನ್ನ ಒಮ್ಮೆ ನೋಡಿದರೆ ಮತ್ತೊಮ್ಮೆ ಇತ್ತ ಬರಲೇಬಾರದು ಎನ್ನುವಂತಾಗಿದೆ. ಏಕೆಂದರೆ ನಗರದ ಯಾವ ರಸ್ತೆಗೆ ಕಾಲಿಟ್ಟರೂ ಹೊಂಡಗಳ ಕಾಣಸಿಗುತ್ತದೆ. ಕಳೆದ ಎರಡು ತಿಂಗಳಲ್ಲಿ ಈ ಗುಂಡಿಗಳಿಂದ ಮೂವರು ವಾಹನ ಸವಾರರು ಸಾವಿಗೀಡಾಗಿದ್ದಾರೆ. ದುರ್ಘಟನೆಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳಿಗೆ ಮಾತ್ರ ಕರುಣೆ ಬಂದಿಲ್ಲ. ಹೀಗಾಗಿ ವಾಹನ ಸವಾರರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಲು ಆರಂಭಿಸಿದ್ದಾರೆ.

Yadgiri Potholes on main roads in Yadgir city news in kannada

1 / 5
ಯಾದಗಿರಿ ನಗರದ ಹೃದಯ ಭಾಗದಲ್ಲಿರುವ ಸುಭಾಷ್ ವೃತ್ತದಲ್ಲಿ ರಸ್ತೆಯ ತುಂಬೆಲ್ಲ ಗುಂಡಿಗಳು ಬಿದ್ದಿವೆ. ಅಷ್ಟೇ ಯಾಕೆ ನಗರದ ಹತ್ತಿಕುಣಿ ಕ್ರಾಸ್ ರಸ್ತೆ, ಜಿಲ್ಲಾಧಿಕಾರಿ ಕಚೇರಿ ರಸ್ತೆ, ಹೈದ್ರಾಬಾದ್ ರಸ್ತೆ ಸೇರಿದಂತೆ ನಾನಾ ಕಡೆ ಇರುವ ರಸ್ತೆಗಳ ತುಂಬೆಲ್ಲ ಗುಂಡಿಗಳೇ ಹೆಚ್ಚಾಗಿ ಕಾಣುತ್ತಿವೆ.

Yadgiri Potholes on main roads in Yadgir city news in kannada

2 / 5
Yadgiri Potholes on main roads in Yadgir city news in kannada

ನಿತ್ಯ ಸಾವಿರಾರು ವಾಹನ ಸಂಚಾರ ವಾಗುತ್ತಿದ್ದರೂ ಅಧಿಕಾರಿಗಳು ಗುಂಡಿಗಳನ್ನ ಮುಚ್ಚಿಸುವ ಸಣ್ಣ ಕೆಲಸಕ್ಕೆ ಮುಂದಾಗದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಹತ್ತಿಕುಣಿ ಕ್ರಾಸ್ ರಸ್ತೆ ಮೇಲೆ ವಾಹನ ಸವಾರರು ಓಡಾಡಬೇಕು ಅಂದರೆ ನೂರು ಬಾರಿ ಯೋಚನೆ ಮಾಡಿ ವಾಹನ ಓಡಿಸುವಂತಾಗಿದೆ.

3 / 5
Yadgiri Potholes on main roads in Yadgir city news in kannada

ನಗರದಿಂದ ಹಾದುಹೋಗುವ ಹೈದ್ರಾಬಾದ್ ರಸ್ತೆ ಕೂಡ ಸಂಪೂರ್ಣವಾಗಿ ಗುಂಡಿಮಯವಾಗಿದೆ. ಯಲಸತ್ತಿ ಪೆಟ್ರೋಲ್ ಬಂಕ್ ಬಳಿ ಸುಮಾರು 3 ಅಡಿಯಷ್ಟು ತಗ್ಗುಗುಂಡಿಗಳು ಬಿದ್ದಿವೆ. ಇದಕ್ಕೆ ಮಣ್ಣು ಹಾಕಿ ಅಧಿಕಾರಿಗಳು ಕೈತೊಳೆದಿದ್ದಾರೆ. ಇದರಿಂದ ಮಳೆ ಬಂದಾಗ ರಸ್ತೆ ಮತ್ತಷ್ಟ ಹಾಳಾಗಿ ಹೋಗುತ್ತಿದೆ. ಜೊತೆಗೆ ಈ ರಸ್ತೆ ಮೇಲೆ ಓಡಾಡುವಾಗ ಮಣ್ಣಿನಿಂದ ದೂಳು ಎದ್ದು ಮುಂಬರುವ ವಾಹನಗಳು ಕಾಣದಂತ ಸ್ಥಿತಿ ಕೂಡ ನಿರ್ಮಾಣವಾಗಿದೆ.

4 / 5
Yadgiri Potholes on main roads in Yadgir city news in kannada

ಇನ್ನು ಕೆಲವು ಕಡೆ ಗುಂಡಿಗಳನ್ನ ಮುಚ್ಚಲು ಅಧಿಕಾರಿಗಳು ಸಿಮೆಂಟ್ ಕಾಂಕ್ರಿಟ್ ಬಳಸಿದ್ದಾರೆ. ಇದರಿಂದಾಗಿ ರಸ್ತೆ ತುಂಬೆಲ್ಲ ಜಲ್ಲಿ ಕಲ್ಲುಗಳು ಎದ್ದಿರುವುದರಿಂದ ರಾತ್ರಿ ವೇಳೆ ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದು ಕೈಕಾಲು ಮುರಿದುಕೊಳ್ಳುವ ಸಾಧ್ಯತೆಗಳಿವೆ. ಈ ಬಗ್ಗೆ ಯಾದಗಿರಿ ನಗರಸಭೆ ಆಯುಕ್ತರಿಗೆ ಕೇಳಿದರೆ ಡಾಂಬರ್ ಪ್ಲಾಂಟ್​ಗಳು ಬಂದ್ ಆಗಿವೆ. ಹೀಗಾಗಿ ನಾವು ಗುಂಡಿ ಮುಚ್ಚಲು ಸಿಮೆಂಟ್ ಮತ್ತು ಕಾಂಕ್ರಿಟ್ ಬಳಸಿದ್ದೇವೆ ಅಂತ ಸಬೂಬು ನೀಡುತ್ತಿದ್ದಾರೆ. (ವರದಿ: ಅಮೀನ್ ಹೊಸುರ್, ಟಿವಿ9 ಯಾದಗಿರಿ)

5 / 5

Published On - 10:56 am, Mon, 7 November 22

Web contact
Web contact

TV9 Kannada

Read More
Follow Us