AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆ ತಂತ್ರಗಾರಿಕೆಯಲ್ಲೂ ಮಿಂಚಿದ ಪ್ರಲ್ಹಾದ್ ಜೋಶಿ, ಮುಂದಿನ ತಯಾರಿ ಕರ್ನಾಟಕದಲ್ಲಿ

5 State Election Results 2022: ದಿವಂಗತ ಅನಂತ ಕುಮಾರ್​ ಗರಡಿಯಲ್ಲಿ ಪಳಗಿದ ಪ್ರಲ್ಹಾದ್​ ಜೋಷಿ ಉತ್ತರಾಖಂಡ್​ ಚುನಾವಣೆ ಉಸ್ತುವಾರಿ ವಹಿಸಿಕೊಂಡು ಪಕ್ಷವನ್ನು ಗೆಲ್ಲಿಸುವ ಮೂಲಕ ತಾವು ರಾಜಕೀಯ ತಂತ್ರಗಾರಿಕೆಗೂ ಸೈ ಎನ್ನಿಸಿಕೊಂಡಿದ್ದಾರೆ.

ಚುನಾವಣೆ ತಂತ್ರಗಾರಿಕೆಯಲ್ಲೂ ಮಿಂಚಿದ ಪ್ರಲ್ಹಾದ್ ಜೋಶಿ, ಮುಂದಿನ ತಯಾರಿ ಕರ್ನಾಟಕದಲ್ಲಿ
ಪ್ರಲ್ಹಾದ್ ಜೋಶಿ
Follow us
ಡಾ. ಭಾಸ್ಕರ ಹೆಗಡೆ
| Updated By: ಸುಷ್ಮಾ ಚಕ್ರೆ

Updated on: Mar 10, 2022 | 6:32 PM

ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಸೋತರೂ, ಉತ್ತರಾಖಂಡ್​ನಲ್ಲಿ(Uttarakhand)  ಭಾರತೀಯ ಜನತಾ ಪಕ್ಷ (BJP) ಬಹುಮತ ಗಳಿಸಿ ನಗೆ ಬೀರಿದೆ. ಕೋವಿಡ್​ ನಿರ್ಬಂಧ ಇದ್ದಾಗ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೂವತ್ತಕ್ಕೂ ಹೆಚ್ಚಿನ ವರ್ಚುವಲ್​ ರ್ಯಾಲಿ ಉದ್ದೇಶಿಸಿ ಮಾತಾಡಿದ್ದರು. ಪ್ರಧಾನಿಯವರ ಜೊತೆಗೆ ಮತ್ತು ಕೇಂದ್ರ ಗ್ರಹ ಸಚಿವ ಅಮಿತ್​ ಷಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ರಾಜ್ಯ ಚುನಾವಣೆಗೆ ಅವಶ್ಯಕವಿರುವ ಮಾರ್ಗದರ್ಶನ ನೀಡಿದರು. ಆದರೆ ಉತ್ತರಾಖಂಡ್​ದಲ್ಲಿ ಬಿಜೆಪಿ ಗೆಲ್ಲಲು ಕೆಲಸ ಮಾಡಿದ ಇನ್ನೊಬ್ಬ ನಾಯಕರಿದ್ದಾರೆ. ಅವರೇ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ (Pralhad Joshi).

ದಿವಂಗತ ಅನಂತ್​ ಕುಮಾರ್​ ಅವರ ಗರಡಿಯಲ್ಲಿ ಪಳಗಿ, ಲೋಕ ಸಭಾ ಸದಸ್ಯರಾಗಿ ಕೆಲಸ ಮಾಡಿದ ಅನುಭವ ಜೋಶಿಯವರದ್ದು. ಆಮೇಲೆ ಕೇಂದ್ರ ಸಂಪುಟಕ್ಕೆ ಸೇರಿದ ಜೋಷಿಯವರು, ಕಲ್ಲಿದ್ದಲು ಗಣಿ ಹರಾಜು, ಸಂಸದೀಯ ಖಾತೆಯ ನಿರ್ವಹಣೆಯಲ್ಲಿ ತೋರಿದ ಚಾಣಾಕ್ಷತನ, ರಾಜಕೀಯ ಮುತ್ಸದ್ದಿತನದಿಂದಾಗಿ ಪಕ್ಷದಲ್ಲಿ ಮತ್ತು ಪ್ರಧಾನಿ ಮೋದಿಯವರಿಗೆ ಹತ್ತಿರವಾದರು. ಈ ಬಾರಿ ಚುನಾವಣೆ ನಡೆದ ಐದು ರಾಜ್ಯಗಳಲ್ಲಿ ಒಂದು ರಾಜ್ಯದ ಸಂಪೂರ್ಣ ಉಸ್ತುವಾರಿ ಪಡೆದ ನಮ್ಮ ರಾಜ್ಯದ ಏಕೈಕ ನಾಯಕ ಪ್ರಲ್ಹಾದ್​ ಜೋಶಿ. ಅವರು ಮಾಡಿದ ರಾಜಕೀಯ ತಂತ್ರಗಾರಿಕೆಯನ್ನು ಐದು ಅಂಶಗಳಲ್ಲಿ ಸೆರೆಹಿಡಿಯಲಾಗಿದೆ.

  1.  ಐದು ತಿಂಗಳ ಹಿಂದೆ ಉತ್ತರಾಖಂಡ್​ದ ಉಸ್ತುವಾರಿ ವಹಿಸಿಕೊಂಡಾಗ, ಉತ್ತರಾಖಂಡ್​ ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿತ್ತು. ಒಳ ಜಗಳ, ನಾಯಕರ ಕಿತ್ತಾಟ ಇದರಿಂದ ಪಕ್ಷಕ್ಕೆ ಕೆಟ್ಟ ಹೆಸರು ಬಂದಿತ್ತು. ಇದನ್ನು ಮೀರಿ ಪಕ್ಷವನ್ನು ಅಧಿಕಾರಕ್ಕೆ ಬರುವಂತೆ ಮಾಡಿದ ಜೋಶಿಯವರ ತಂತ್ರಗಾರಿಕೆ ಹೇಗಿತ್ತು ಗೊತ್ತಾ? ಅವರು ಉಸ್ತುವಾರಿ ಪಡೆದಾಗ ಸವಾಲು ದೊಡ್ಡದಿತ್ತು. ಯಾರು ಯಾರು ನಾಯಕರು ಕಚ್ಚಾಟದಲ್ಲಿ ನಿರತರಾಗಿದ್ದರೋ, ಅವರ ಸಭೆ ನಡೆಸಿದರು. ಒಂದು ಸಭೆಗೆ ಮುಗಿಯುವ ಕಚ್ಚಾಟ ಅಲ್ಲ ನೋಡಿ. ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ತಯಾರಿಲ್ಲದ ನಾಯಕರುಗಳ ಸರಣಿ ಸಭೆ ನಡೆಸಿದರು. ಅದೇ ಹೊತ್ತಲ್ಲಿ, ಆ ನಾಯಕರುಗಳನ್ನು ಬೆಳೆಸಿದ ರಾಜಕೀಯ ಗುರುಗಳನ್ನು ಸಂಪರ್ಕಿಸಿ, ಅವರ ಮೂಲಕ ವಿವಿಧ ನಾಯಕರುಳಿಗೆ ಬುದ್ಧಿವಾದ ಹೇಳಿಸಿದರು. ಆ ಮೂಲಕ ಒಡೆದಿದ್ದ ಪಕ್ಷ ಒಂದು ಒಂದುಗೂಡಿಸುವಲ್ಲಿ ಯಶಸ್ವಿಯಾದರು.
  2. ಈ ಮಧ್ಯೆ ನಿಧಾನಗತಿಯಲ್ಲಿ ನಡೆಯುತ್ತಿದ್ದ ಯೋಜನೆಗಳಿಗೆ ವೇಗ ನೀಡಲಾಯ್ತು. ಕೇಂದ್ರ ಸರಕಾರದಲ್ಲಿ ಮಂತ್ರಿ ಆಗಿದ್ದರಿಂದ ಅವರಿಗೆ ಆ ಯೋಜನೆಗಳಿಗೆ ಇದ್ದ ಸಣ್ಣ ಪುಟ್ಟ ಹಿನ್ನಡೆಯನ್ನು ನಿವಾರಿಸುವುದು ಹೇಗೆ ಎಂಬ ಸವಾಲಾಗಿರಲಿಲ್ಲ. ಚುನಾವಣೆಗೆ ಮುಂಚೆ ಅನೇಕ ಯೋಜನೆಗಳ ಉದ್ಘಾಟನೆ ಮಾಡಿಸಿದರು.
  3. ಪಹಾಡಿ (Hill region) ಅಭಿವೃದ್ಧಿಯಲ್ಲಿ ಅತೀವ ಆಸಕ್ತಿ ತೋರಿಸಿದ ಅವರು ಚಾರಧಾಮ್​ ರಸ್ತೆ,ಗುಡ್ಡಗಾಡು ಪ್ರದೇಶದಲ್ಲಿ ರೈಲು ಯೋಜನೆ, ಕೇದಾರನಾಥ್ ಪುನರುತ್ಥಾನ-ಹೀಗೆ ಕೆಲಸದ ಜೊತೆಗೆ ಚುನಾವಣಾ ಸಮೀಕರಣವನ್ನು ಸರಿಯಾಗಿಯೇ ತೂಗಿಸಿದರು.
  4. ಇಂತಹ ಸಣ್ಣ ರಾಜ್ಯದಲ್ಲಿ 50-100 ಜನರ ಸಭೆ ನಡೆಸಿ ಹೇಗೆ ಅಭಿವೃದ್ಧಿ ಕಾರ್ಯ ನಡೆದಿದೆ ಎಂಬುದನ್ನು ವಿವರಿಸುವ ನೀಲನಕ್ಷೆ ಹಾಕಿದರು. ಸಾವಿರಕ್ಕೂ ಹೆಚ್ಚು ಇಂತಹ ಸಭೆ ನಡೆಸಿದ ಕೀರ್ತಿ ಜೋಶಿಯವರದ್ದು. ಇದು ಒಂದು ಗೇಮ್​ ಚೇಂಜರ್​.
  5. ಇಷ್ಟೆಲ್ಲ ಇದ್ದರೂ ಜಾತೀ ಸಮೀಕರಣ ತಪ್ಪಿದರೆ ಗೆಲ್ಲಲು ಸಾಧ್ಯವೇ ಇಲ್ಲ. ಅದನ್ನೂ ಸೂಕ್ಷ್ಮವಾಗಿ ಅರಿತಿದ್ದ ಜೋಶಿ, ಆ ಕುರಿತು ಪಕ್ಷದ ಜೊತೆ ಸದಾ ಸಂಪರ್ಕದಲ್ಲಿದ್ದುಕೊಂಡು ಆ ತಂತ್ರಗಾರಿಕೆಯನ್ನು ಹೆಣೆದರು. ಹೆಚ್ಚು ಕಡಿಮೆ ನಾಲ್ಕು ಸಾವಿರ ಕಾರ್ಯಕರ್ತರನ್ನು ಹಗಲು ರಾತ್ರಿ ಕಣಕ್ಕಿಳಿಸಿ ಅವರ ಜೊತೆ 24 ತಾಸು ಸಂಪರ್ಕದಲ್ಲಿದ್ದ ಜೋಷಿ ಕಅರ್ಯಕರ್ತರನ್ನು ಹುರಿದುಂಬಿಸುತ್ತ, ಕೊನೆಗೂ ಪಕ್ಷ ವಿಜಯದ ನಗೆ ಬೀರುವಂತೆ ಮಾಡಿದರು.
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್