AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಮನೂರು ಶಿವಶಂಕರಪ್ಪ ನಡೆಯನ್ನ ಖಂಡಿಸಿದ ಎಂಎಲ್​ಸಿ ಪ್ರಕಾಶ್​ ರಾಥೋಡ್​; ಹೇಳಿದ್ದಿಷ್ಟು

‘ಶಾಮನೂರು ಶಿವಶಂಕರಪ್ಪ ಅವರಿಗೆ ಈಗ 92 ವರ್ಷ ವಯಸ್ಸು, ಅವರ ಮುಕ್ಕಾಲು ಪ್ರತಿಶತ ವಯಸ್ಸನ್ನು ಕಾಂಗ್ರೆಸ್​ ಮನೆಯಲ್ಲಿಯೇ ಬೆಳೆದಿದ್ದಾರೆ. ಹೀಗಾಗಿ ಸಾಮಾಜಿಕ ನ್ಯಾಯ ಕಾಂಗ್ರೆಸ್​ ಪಕ್ಷದ ಜೀವಾಳ ಎನ್ನುವುದನ್ನ ಶಾಮನೂರು ಅವರಿಗೆ ಯಾರೂ ತಿಳಿ ಹೇಳುವ ಅಗತ್ಯವಿಲ್ಲ ಎಂದು ಎಂಎಲ್​ಸಿ ಪ್ರಕಾಶ್​ ರಾಥೋಡ್​ ಹೇಳಿದರು.

ಶಾಮನೂರು ಶಿವಶಂಕರಪ್ಪ ನಡೆಯನ್ನ ಖಂಡಿಸಿದ ಎಂಎಲ್​ಸಿ ಪ್ರಕಾಶ್​ ರಾಥೋಡ್​; ಹೇಳಿದ್ದಿಷ್ಟು
ಕಾಂಗ್ರೆಸ್​ ಎಂಎಲ್​ಸಿ ಪ್ರಕಾಶ್​ ರಾಥೋಡ್
TV9 Web
| Edited By: |

Updated on: Oct 06, 2023 | 4:55 PM

Share

ಬೆಂಗಳೂರು, ಅ.06: ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಹೇಳಿಕೆ ವಿಚಾರ‘ ಸಿದ್ದರಾಮಯ್ಯ (Siddaramaiah) ಬೆಂಬಲಿಗ ಎಂಎಲ್​ಸಿ ಪ್ರಕಾಶ್ ರಾಥೋಡ್ (Prakash Rathod) ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಹೌದು, ಸಮೀಕ್ಷೆಯೊಂದರ ಪ್ರಕಾರ ಕಾಂಗ್ರೆಸ್​ ಪರ ಅತ್ಯಧಿಕ ಅಂದರೆ ಶೇ.88 ರಷ್ಟು ಮತ ಚಲಾಯಿಸಿದವರು ಮುಸ್ಲಿಂರು, ಅದಕ್ಕೆ ಹೊಲಿಸಿದರೆ, ಲಿಂಗಾಯತ ಕಡೆಯಿಂದ ಶೇ.20 ರಷ್ಟು ಮಾತಗಳು ಮಾತ್ರ ಬಂದಿದೆ. ಹೀಗಿದ್ದರೂ ರಾಜ್ಯ ಸಂಪುಟದಲ್ಲಿ 7 ಸ್ಥಾನಗಳನ್ನು ನೀಡಲಾಗಿದೆ. ಆದರೆ, ಮುಸ್ಲಿಂ ಸಮುದಾಯದವರಿಗೆ ಕೇವಲ 2 ಸ್ಥಾನ ಮಾತ್ರ ನೀಡಲಾಗಿದೆ ಎಂದರು.

ಇನ್ನು ಲಂಬಾಣಿ ಸಮುದಾಯ ಶೇ.80ರಷ್ಟು ಮತಗಳನ್ನು ಕಾಂಗ್ರೆಸ್​ಗೆ ನೀಡಿದೆ. ಹಲವಾರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ಪ್ರಮುಖ ಪಾತ್ರ ಕೂಡ ವಹಿಸಿದೆ. ಆದರೂ, ಲಂಬಾಣಿ ಸಮುದಾಯದವರಿಗೆ ಸಚಿವ ಸ್ಥಾನವೇ ಸಿಕ್ಕಿಲ್ಲ. ಉಪ್ಪಾರ, ಬಣಜಿಗ, ಯಾದವ ಸಮುದಾಯಕ್ಕೂ ಮಂತ್ರಿಸ್ಥಾನ ನೀಡಿಲ್ಲ. ದಾವಣಗೆರೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಮುಸ್ಲಿಮರ 40% ಮತಗಳು ಇದ್ದು, ಎಲ್ಲ ಕ್ಷೇತ್ರಗಳಲ್ಲಿ ಶೇ.‌20ರಷ್ಟು SC ಮತ್ತು ST ಮತಗಳಿವೆ. ಜೊತೆಗೆ ಹಿಂದುಳಿದ ವರ್ಗಗಳ ಶೇ.15ರಷ್ಟು ಮತಗಳಿಂದ 6 ಶಾಸಕರು ಗೆದ್ದಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವಂತಹ ವಾತಾವರಣ ಸೃಷ್ಟಿಯಾಗಿದೆ.

ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ: ಈ ಸಂಬಂಧ ನಾನು ನೀಡಿರುವ ಹೇಳಿಕೆಗೆ ಬದ್ಧ: ಶಾಸಕ ಶಾಮನೂರು

ಹೌದು, 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುವಂತಹ ವಾತಾವರಣ ಸೃಷ್ಟಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುತ್ತಿದ್ದಾರೆ. ಈ ಪರಿಶ್ರಮಕ್ಕೆ ಶಾಸಕರು, ನಾಯಕರು ಸಕ್ರಿಯವಾಗಿ ಬೆಂಬಲಿಸಬೇಕು. ಇನ್ನು ಶಾಮನೂರು ಶಿವಶಂಕರಪ್ಪ ಅವರಿಗೆ ಈಗ 92 ವರ್ಷ ವಯಸ್ಸು, ಅವರ ಮುಕ್ಕಾಲು ಪ್ರತಿಶತ ವಯಸ್ಸನ್ನು ಕಾಂಗ್ರೆಸ್​ ಮನೆಯಲ್ಲಿಯೇ ಬೆಳೆದಿದ್ದಾರೆ. ಹೀಗಾಗಿ ಸಾಮಾಜಿಕ ನ್ಯಾಯ ಕಾಂಗ್ರೆಸ್​ ಪಕ್ಷದ ಜೀವಾಳ ಎನ್ನುವುದನ್ನ ಶಾಮನೂರು ಅವರಿಗೆ ಯಾರೂ ತಿಳಿ ಹೇಳುವ ಅಗತ್ಯವಿಲ್ಲ ಎಂದು ಮಾಧ್ಯಮ ಪ್ರಕಟಣೆ ಮೂಲಕ ಶಾಮನೂರು ಅವರ ನಡೆಯನ್ನ ಪ್ರಕಾಶ್​ ರಾಥೋಡ್ ಖಂಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ