AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’

Rabindranath Tagore ; ಕಣ್ಣೆದುರಿನ ತಮ್ಮ ನವವಧುವಿಗಿಂತ ಭವಿಷ್ಯದಲ್ಲಿ ಹುಟ್ಟಬಹುದಾಗಿದ್ದ ತಮ್ಮ ಮಕ್ಕಳ ಮುಖಗಳನ್ನೇ ಅವರು ಹೆಚ್ಚು ಸ್ಪಷ್ಟವಾಗಿ ಕಂಡಿದ್ದರು. ಅಂತರಪಟ ಸರಿದಾಗ ವಧೂವರರು ಪರಸ್ಪರ ನೋಡಲು ಆತುರರಾಗಿರುತ್ತಾರೆಯೇ ಹೊರತು ಪ್ರಾಯಶಃ ಇಂಥ ದೂರದೃಷ್ಟಿ ಇರುವುದಿಲ್ಲ.

Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’
ರವೀಂದ್ರನಾಥ ಟ್ಯಾಗೋರ್, ರೇಣುಕಾ ನಿಡಗುಂದಿ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Mar 25, 2022 | 1:27 PM

Share

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ದೇಶಕಾಲವನ್ನೂ ಮೀರಿ ನಿಲ್ಲುವ ರವೀಂದ್ರನಾಥ ಟ್ಯಾಗೋರರ ಭಾಷೆ ಕಾವ್ಯದಷ್ಟು ಮಧುರ ಮತ್ತು ಮೃದು. ನೊಬೆಲ್ ಪ್ರಶಸ್ತಿ ಪಡೆದ ಇವರು ವಿಶ್ವಮಾನವ ಕವಿಯಷ್ಟೇ ಅಲ್ಲ, ಮಹತ್ವದ  ಕಥೆಗಾರ, ಕಾದಂಬರಿಕಾರ, ನಾಟಕಕಾರ, ಪ್ರಬಂಧಕಾರ ಮತ್ತು ಚಿತ್ರಕಲಾವಿದರೂ ಆಗಿದ್ದರು. “ಕಾಬೂಲಿವಾಲಾ” ರವೀಂದ್ರರ ಶ್ರೇಷ್ಠ ಕಥೆಗಳಲ್ಲಿ ಮುಖ್ಯವಾದದ್ದು. ಈ ಕಥೆ ವಿಶ್ವದ ಸರ್ವಶ್ರೇಷ್ಠ ಕಥೆಗಳ ಸಾಲಿಗೆ ಸಲ್ಲಿದೆ. ಅವರ ಪ್ರತಿಯೊಂದೂ ಕಥೆಯೂ ಮಾನವೀಯ ಪ್ರೇಮದ ಮೂಸೆಯಿಂದ  ಜನಸಾಮಾನ್ಯರ ಬದುಕನ್ನು, ಸಮಾಜದ ತರತಮಗಳನ್ನು, ಮನುಷ್ಯ ಸಂಬಂಧಗಳ ಸ್ವಾರ್ಥ ಪೊಳ್ಳುತನಗಳನ್ನು ಶೋಧಿಸಿ ಚಿಂತನೆಗೆ ಹಚ್ಚುತ್ತವೆ. ಟಾಲಸ್ಟಾಯ್ ಕೂಡ ಸಾಮಾನ್ಯರ ಕಥೆಗಳನ್ನು ಬರೆದವರು. ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಎಂಬ ಕುವೆಂಪು ತಮ್ಮ ಕಾದಂಬರಿಯಲ್ಲಿ ಧೀಮಂತ ಸ್ತ್ರೀಯರನ್ನು ಅಂತಃಕರಣದಿಂದ ಚಿತ್ರಿಸಿದರು. ಪ್ರಸ್ತುತ ರವೀಂದ್ರನಾಥ್ ಟ್ಯಾಗೋರರ “ಪುತ್ರಯಜ್ಞ” ಕಥೆ ನನ್ನ ಮನಸ್ಸನ್ನು ಆವರಿಸಿದ್ದು ಅಲ್ಲಿನ ಮಾನವೀಯ ಮೃದು ಸಂವೇದನೆಯ ಕಾರಣಕ್ಕೆ. ಪ್ರಿತೃಪ್ರಧಾನ ವ್ಯವಸ್ಥೆಯಲ್ಲಿ “ಗಂಡು ಸಂತಾನ” ದಿಂದಲೇ ಸದ್ಗತಿ ಎನ್ನುವ ಮೌಢ್ಯಕ್ಕೆ.

ಕಥೆ : ಪುತ್ರಯಜ್ಞ | ಮೂಲ : ರವೀಂದ್ರನಾಥ ಟ್ಯಾಗೋರ | ಕನ್ನಡಕ್ಕೆ : ರೇಣುಕಾ ನಿಡಗುಂದಿ    

(ಭಾಗ 1)

ಇಡೀ ಹಳ್ಳಿಗೇ ವೈದ್ಯನಾಥರು ಅತಿ ತಿಳಿವಳಿಕೆಯ ವ್ಯವಹಾರಸ್ಥ ವ್ಯಕ್ತಿಯಾಗಿದ್ದರು. ಆದುದರಿಂದಲೇ ಅವರು ವರ್ತಮಾನದ ಎಲ್ಲಾ ಕೆಲಸಕಾರ್ಯಗಳನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಒಂದು  ದೂರದೃಷ್ಟಿಯಿಂದಲೇ ಮಾಡುತ್ತಿದ್ದರು. ಅವರು ಲಗ್ನವಾದಾಗಲೂ ಕಣ್ಣೆದುರಿನ ತಮ್ಮ ನವವಧುವಿಗಿಂತ  ಮುಂದೆ ಭವಿಷ್ಯದಲ್ಲಿ ಹುಟ್ಟಬಹುದಾಗಿದ್ದ ತಮ್ಮ ಮಕ್ಕಳ ಮುಖಗಳನ್ನೇ ಹೆಚ್ಚು ಸ್ಪಷ್ಟವಾಗಿ ಕಂಡಿದ್ದರು.  ವಿವಾಹದ ಸಮಯದಲ್ಲಿ ಅಂತರಪಟ ಸರಿದಾಗ ವಧೂವರರು ಪರಸ್ಪರ ನೋಡಲು ಆತುರರಾಗಿರುತ್ತಾರೆಯೇ ಹೊರತು ಪ್ರಾಯಶಃ ಇಂಥ ದೂರದೃಷ್ಟಿ ಸಾಮಾನ್ಯವಾಗಿ ಇರುವುದಿಲ್ಲ. ಅವರು ಲೋಕದ ವ್ಯವಹಾರಗಳಲ್ಲಿ ಚತುರ ವ್ಯಕ್ತಿಯಾಗಿದ್ದರಿಂದಲೇ ಅವರಿಗೆ  ಮನಸ್ಸಿಗೆ ಹಿತಕೊಡುವ ಭಾವನಾತ್ಮಕ ಪ್ರೇಮಕ್ಕಿಂತ ಮುಂದೆ ತಮಗೆ ಪಿಂಡದಾನವನ್ನು ಮಾಡಬಲ್ಲ ಸಂತಾನವೇ ಅತ್ಯಂತ ಮಹತ್ವದ್ದಾಗಿತ್ತು. “ಪುತ್ರಾರ್ಥೆ ಕ್ರಿಯತೇ ಭಾರ್ಯಾ’  ಎನ್ನುವ ಲೋಕೋಕ್ತಿಯನ್ನು ಅಕ್ಷರಶಃ  ಪಾಲಿಸುವುದಕ್ಕಾಗಿಯೇ ಅವರು ವಿನೋದಿನಿಯನ್ನು ಲಗ್ನವಾಗಿದ್ದರು.

ಆದರೆ ಈ ಜಗತ್ತಿನಲ್ಲಿ ಅತಿ ಬುದ್ಧಿವಂತರೆನಿಸಿಕೊಂಡವರೇ ಮೋಸಹೋಗುತ್ತಾರೆ. ತುಂಬು ತಾರುಣ್ಯದ ವಿನೋದಿನಿ ತನ್ನ ಆ ಮಹತ್ವದ ಕರ್ತವ್ಯವನ್ನು ಪಾಲಿಸದೇ ಹೋದಾಗ ವೈದ್ಯನಾಥರಿಗೆ ಇನ್ನು ತಮಗೆ ‘ಘೋರ’ ನರಕದ ಬಾಗಿಲೇ ಗತಿಯೆನಿಸಿ ಅತ್ಯಂತ ಚಿಂತಿತರಾದರು. ತಮ್ಮ ಮರಣದ ನಂತರ ಈ ಅಪಾರ ಸಂಪತ್ತನ್ನು ಅನುಭೋಗಿಸುವವರಾರು? ಇದೇ ಚಿಂತೆಯಲ್ಲಿ ‘ಇದ್ದಾಗ ಉಣಲಿಲ್ಲ ಉಡಲಿಲ್ಲ’ ಎನ್ನುವಂತೆ ಆರಾಮವಾಗಿ ತಿಂದುಂಡು ತಮ್ಮ ಸಂಪತ್ತಿನ ಸುಖವನ್ನು ಅನುಭವಿಸುವ ಬದಲು ಅವರು ಸಾಯುವ ಮೊದಲೇ ಲೌಕಿಕದಿಂದ ವೈರಾಗ್ಯವನ್ನು ತಾಳಿದರು. ನಾನೂ ಮೊದಲೇ ಹೇಳಿಬಿಟ್ಟಿದ್ದೇನೆ, ಅವರಿಗೆ ವರ್ತಮಾನಕ್ಕಿಂತ ಭವಿಷ್ಯವೇ ಹೆಚ್ಚು ಮಹತ್ವದ್ದಾಗಿತ್ತು ಎಂದು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಒಂದು ಮುತ್ತು ಕೇಳಲಾಗಲಿಲ್ಲ, ಕೊಡಲೂ ಆಗಲಿಲ್ಲ, ನಾನು ಸ್ವತಂತ್ರಳೇ?

ಆದರೆ ಈಗಷ್ಟೇ ತಾರುಣ್ಯಕ್ಕೆ ಕಾಲಿಟ್ಟ ವಿನೋದಿನಿಯಿಂದ ಒಮ್ಮೆಗೇ ಈ ಪರಿಯ ಧಾರ್ಮಿಕ ಜ್ಞಾನವನ್ನು ಅಪೇಕ್ಷಿಸುವುದೂ ತರವಲ್ಲ. ಪಾಪ ಆಕೆಯ ಅತ್ಯಮೂಲ್ಯವಾದ ವರ್ತಮಾನ ಮತ್ತು ಈಗಷ್ಟೇ ಅರಳುತ್ತಿರುವ ಯೌವನ ಪ್ರೇಮದ ಸುಗಂಧವಿರದೇ ವ್ಯರ್ಥವಾಗಿ ಕಳೆದುಹೋಗುತ್ತಿತ್ತು, ಅವಳಿಗಂತೂ ಈ ಸ್ಥಿತಿಯೇ ಅತ್ಯಂತ ಶೋಚನೀಯವೆನಿಸುತ್ತಿತ್ತು. ಇಹದ ಮನಸಿನ ಹಸಿವೆಯ ಮುಂದೆ ಆಕೆ ಪರಲೋಕದ ಪಿಂಡದಾಹದ ವಿಷಯವನ್ನು ಮರೆತೇಬಿಟ್ಟಿದ್ದಳು. ಮನುವಿನ ಪವಿತ್ರ ನಿಯಮ ಮತ್ತು ಪತಿ ವೈದ್ಯನಾಥರ ಆಧ್ಯಾತ್ಮಿಕ ವ್ಯಾಖ್ಯಾನದ ದೆಸೆಯಿಂದ ಅವಳ ತಪಿತ ಮನಕ್ಕೆ ಸ್ವಲ್ಪವೂ ತೃಪ್ತಿಯೆಂಬುದು ಇದ್ದಿಲ್ಲ.

ಯಾರೇನು ಬೇಕಾದರೂ ಅನ್ನಲಿ, ಈ ಅವಸ್ಥೆಯಲ್ಲಿ ಜಗತ್ತಿನ ಎಲ್ಲಾ ಸುಖ ಹಾಗೂ ಕರ್ತವ್ಯಗಳಾಚೆಗೂ ಒಂದು ಮಿಡಿವ ಹೃದಯವಿದೆ. ಪ್ರೀತಿಸುವುದು ಮತ್ತು ಪ್ರೀತಿಸಲ್ಪಡಬೇಕು ಎಂಬುದು  ಹೆಣ್ಣಿನ ಸಹಜ  ಬಯಕೆಯಾಗಿರುತ್ತದೆ. ಆದರೆ ವಿನೋದಿನಿಯ ಭಾಗ್ಯದಲ್ಲಿ ಹೊಸ ಪ್ರೇಮದ ವಸಂತೋತ್ಸವಕ್ಕಿಂತ ಪತಿ, ಅತ್ತೆ ಮತ್ತು ಹಿರಿಯರ ಎತ್ತರದ ಆಕಾಶದಿಂದ  ಬೈಗುಳಗಳ ಆಲೀಕಲ್ಲುಗಳೇ ಸುರಿಯತೊಡಗಿದವು.  ಎಲ್ಲರೂ ಅವಳನ್ನು ಬಂಜೆಯ ಪಟ್ಟ ಕಟ್ಟತೊಡಗಿದರು. ಒಂದು ಹೂವಿನ ಗಿಡಕ್ಕೆ ಗಾಳಿ ಬೆಳಕು ಕಾಣದ ಕತ್ತಲ ಕೋಣೆಯೊಳಗಿಟ್ಟರೆ ಆ ಗಿಡದ ಅವಸ್ಥೆ ಏನಾಗಬೇಡ? ಅದೇ ಅವಸ್ಥೆ ವಿನೋದಿನಿಯ  ತಾರುಣ್ಯದಾಗಿತ್ತು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ನೆರೆನಾಡ ನುಡಿಯೊಳಗಾಡಿ ಅಂಕಣದ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi

Published On - 1:02 pm, Fri, 25 March 22

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್