AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈ ಸ್ಪರ್ಶ ಇಲ್ಲದೆಯೇ ಮೊಳಗುತ್ತೆ.. ದೇವಸ್ಥಾನದ ಘಂಟೆ! ಕೊರೊನಾ ಕಾಲದಲ್ಲಿ ಇದು ಅನಿವಾರ್ಯ

ಕೊರೊನಾ ಬಂದ ಮೇಲಂತೂ ದೇವರ ಪೂಜೆಗೂ ಕುತ್ತು ಬಂದಿದೆ ಅಂತ ಬೇಸರ ಮಾಡಿಕೊಂಡ ಭಕ್ತರನ್ನು ಕಂಡಿದ್ದೇವೆ. ದೇವಸ್ಥಾನಕ್ಕೆ ಹೋಗಬೇಕು. ಆದ್ರೆ ಕೊರೊನಾ ಸುರಕ್ಷತೆ ಕೂಡಾ ಕಾಪಾಡಬೇಕಂದ್ರೆ ಹೇಗೆ ಅಂತ ಆಲೋಚಿಸುವ ಹಾಗಾಗಿದ್ದು ಈ ಸಂಕಷ್ಟ ಕಾಲದಲ್ಲೇ..! ಅದಕ್ಕಾಗಿ ದೇವಸ್ಥಾನದಲ್ಲಿ ಸುರಕ್ಷತೆ ಹೆಚ್ಚಿಸಲಾಯ್ತು. ಜನರ ನಡುವೆ ಅಂತರ ಇರಬೇಕೆಂದು ಕಾಲಂಗಳನ್ನು ಬರೆದಿದ್ದಾಯ್ತು. ದೇವಸ್ಥಾನದಲ್ಲಿ ತೀರ್ಥಪ್ರಸಾದ ಇರೋದಿಲ್ಲ ಅಂತ ಕಟ್ಟು ನಿಟ್ಟಾಗಿ ಹೇಳಿದ್ದಾಯ್ತು.. ಅನಿವಾರ್ಯ ಅಂತ ಜನ ಒಪ್ಕೊಂಡ್ರು. ಜನ ದೇವರನ್ನು ನೋಡಬೇಕು.. ಹಾಗೆ ಮುಂದಕ್ಕೆ ಹೋಗಬೇಕು. ಹಾಗೆ ಹೋಗುವಾಗಲೂ […]

ಕೈ ಸ್ಪರ್ಶ ಇಲ್ಲದೆಯೇ ಮೊಳಗುತ್ತೆ.. ದೇವಸ್ಥಾನದ ಘಂಟೆ! ಕೊರೊನಾ ಕಾಲದಲ್ಲಿ ಇದು ಅನಿವಾರ್ಯ
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು|

Updated on:Nov 23, 2020 | 11:55 AM

Share

ಕೊರೊನಾ ಬಂದ ಮೇಲಂತೂ ದೇವರ ಪೂಜೆಗೂ ಕುತ್ತು ಬಂದಿದೆ ಅಂತ ಬೇಸರ ಮಾಡಿಕೊಂಡ ಭಕ್ತರನ್ನು ಕಂಡಿದ್ದೇವೆ. ದೇವಸ್ಥಾನಕ್ಕೆ ಹೋಗಬೇಕು. ಆದ್ರೆ ಕೊರೊನಾ ಸುರಕ್ಷತೆ ಕೂಡಾ ಕಾಪಾಡಬೇಕಂದ್ರೆ ಹೇಗೆ ಅಂತ ಆಲೋಚಿಸುವ ಹಾಗಾಗಿದ್ದು ಈ ಸಂಕಷ್ಟ ಕಾಲದಲ್ಲೇ..! ಅದಕ್ಕಾಗಿ ದೇವಸ್ಥಾನದಲ್ಲಿ ಸುರಕ್ಷತೆ ಹೆಚ್ಚಿಸಲಾಯ್ತು.

ಜನರ ನಡುವೆ ಅಂತರ ಇರಬೇಕೆಂದು ಕಾಲಂಗಳನ್ನು ಬರೆದಿದ್ದಾಯ್ತು. ದೇವಸ್ಥಾನದಲ್ಲಿ ತೀರ್ಥಪ್ರಸಾದ ಇರೋದಿಲ್ಲ ಅಂತ ಕಟ್ಟು ನಿಟ್ಟಾಗಿ ಹೇಳಿದ್ದಾಯ್ತು.. ಅನಿವಾರ್ಯ ಅಂತ ಜನ ಒಪ್ಕೊಂಡ್ರು. ಜನ ದೇವರನ್ನು ನೋಡಬೇಕು.. ಹಾಗೆ ಮುಂದಕ್ಕೆ ಹೋಗಬೇಕು. ಹಾಗೆ ಹೋಗುವಾಗಲೂ ನಡುವೆ ಅಂತರವಿರಲಿ ಸೂತ್ರ ಪಾಲಿಸಬೇಕು. ಇದೆಲ್ಲವೂ ಆಯ್ತು.. ಆದ್ರೆ ಜನ ಮಾತ್ರ ದೇವಸ್ಥಾನದಲ್ಲಿ ತೂಗು ಹಾಕಿದ್ದ ಘಂಟೆಯನ್ನು ಬಾರಿಸೋದು ಬಿಡಲೇ ಇಲ್ಲ..

ದೇವಸ್ಥಾನಕ್ಕೆ ಹೋದರೆ ಕೈ ಮುಟ್ಟಿಸದೇ ಘಂಟೆ ಬಾರಿಸಿ..! ಎಲ್ಲದಕ್ಕೂ ಪರಿಹಾರ ಕಂಡುಕೊಂಡಿದ್ದ ದೇವಸ್ಥಾನ, ಜನ ಘಂಟೆ ಮುಟ್ಟದ ಹಾಗೆ ಮಾಡೋದು ಹೇಗೆ ಅಂತ ತಲೆ ಕೆಡಿಸಿಕೊಳ್ಳ ತೊಡಗಿತ್ತು. ಪೂಜೆಗೆ ಬಂದ ಜನ ಪೂಜೆ ಮಾಡಬೇಕು ಘಂಟೆನೂ ಬಾರಿಸಬೇಕು. ಆದ್ರೆ, ಅದೇ ಸೋಂಕು ಹರಡೋಕೆ ಕಾರಣವಾಗಬಾರದು.

ಅದಕ್ಕೆ ಮಧ್ಯಪ್ರದೇಶದ ಪ್ರಸಿದ್ಧ ಪಶುಪತಿನಾಥ ದೇವಾಸ್ಥಾನದಲ್ಲಿ ಒಂದು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಅಲ್ಲಿ ವಿಶೇಷವಾಗಿರುವ ಸೆನ್ಸಾರ್ ಘಂಟೆಗಳನ್ನು ಅಳವಡಿಸಲಾಗಿದೆ. ಅದರಂತೆ ಅಲ್ಲಿ ಸೆನ್ಸಾರ್ ಟೆಕ್ನಾಲಜಿ ಬಳಸಿ ಘಂಟೆಯ ನಾದ ಬರುವ ಹಾಗೆ ಮಾಡಿದ್ದಾರೆ ತಂತ್ರಜ್ಞರು.

ಅದಕ್ಕಾಗಿ ತಂತ್ರಜ್ಞರು ತುಂಬಾನೇ ಶ್ರಮಿಸಿದ್ದಾರೆ. ದೇವಸ್ಥಾನಕ್ಕೆ ಬಂದ ಮೇಲೆ ಭಕ್ತರಿಗೆ ತಮ್ಮದೇ ಆದ ರೀತಿ ರಿವಾಜುಗಳಿವೆ. ತಾವು ನಮಸ್ಕಾರ ಹಾಕಬೇಕು, ಘಂಟೆ ಬಾರಿಸಬೇಕು ಅನ್ನುವ ಬಯಕೆ ಇರುತ್ತೆ. ಇದನ್ನೆಲ್ಲಾ ಗಮನದಲ್ಲಿಟ್ಟು ಇದೊಂದು ಸೆನ್ಸಾರ್ ಗಂಟೆ ತಯಾರಾಗಿದೆ. ಈಗ ದೇವರ ಮುಂದೆ ಘಂಟೆ ಬಾರಿಸಿದ ಹಾಗೂ ಆಯ್ತು… ಅಂತರ ಕಾಪಾಡಿದ ಹಾಗೂ ಆಯ್ತು.. ಸೋಂಕು ಹರಡದ ಹಾಗೆ ಎಚ್ಚರ ವಹಿಸಿದ ಹಾಗೂ ಆಯ್ತು..! -ರಾಜೇಶ್ ಶೆಟ್ಟಿ

Published On - 4:57 pm, Mon, 15 June 20

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು