AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Swara Samrat Festival 2023: ಭಾರತದ ಅತಿದೊಡ್ಡ ಶಾಸ್ತ್ರೀಯ ಸಂಗೀತ ಉತ್ಸವ, ವಿವಿಧ ಕಾರ್ಯಕ್ರಮಗಳ ವೈಭವ

ಭಾರತ ಸರ್ಕಾರದ ಸಂಸ್ಕತಿ ಸಚಿವಾಲಯ ಆಯೋಜನೆ ಮಾಡಿರುವ ಸ್ವರ ಸಾಮ್ರಾಟ್ ಹಬ್ಬ(SSF) ಇದೇ ಜನವರಿ 14 ಮತ್ತು 15 ರಂದು ಇನ್‍ಕ್ರೆಡಿಬಲ್ ಇಂಡಿಯಾದ ಪ್ರಯೋಜಕತ್ವದಲ್ಲಿ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ನಡೆಯಲಿದೆ.

Swara Samrat Festival 2023: ಭಾರತದ ಅತಿದೊಡ್ಡ ಶಾಸ್ತ್ರೀಯ ಸಂಗೀತ ಉತ್ಸವ, ವಿವಿಧ ಕಾರ್ಯಕ್ರಮಗಳ ವೈಭವ
Swara Samrat Festival 2023Image Credit source: TV9 kannada
TV9 Web
| Edited By: |

Updated on:Jan 13, 2023 | 5:52 PM

Share

ಭಾರತ ಸರ್ಕಾರದ ಸಂಸ್ಕತಿ ಸಚಿವಾಲಯ ಆಯೋಜನೆ ಮಾಡಿರುವ ಸ್ವರ ಸಾಮ್ರಾಟ್ ಹಬ್ಬ 2023 (Swara Samrat Festival 2023) (SSF) ಇದೇ ಜನವರಿ 14 ಮತ್ತು 15 ರಂದು ಇನ್‍ಕ್ರೆಡಿಬಲ್ ಇಂಡಿಯಾದ ಪ್ರಯೋಜಕತ್ವದಲ್ಲಿ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ನಡೆಯಲಿದೆ. ಭಾರತದ ಅತಿದೊಡ್ಡ ಶಾಸ್ತ್ರೀಯ ಸಂಗೀತದ ಉತ್ಸವ ಇದಾಗಿದ್ದು, ಜನವರಿ 14ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ, ಸಂಗೀತ ವಿದ್ವಾಂಸರ ಸಾರಥ್ಯದಲ್ಲಿ ಹಲವಾರು ಸಂಗೀತ ಕಾರ್ಯಕ್ರಮಗಳು ನಡೆಯಲಿದೆ. PT. ವೆಂಕಟೇಶ್ ಕುಮಾರ್(ಹಿಂದೂಸ್ಥಾನಿ ಶೈಲಿ ಗಾಯಕ), PT. ರವೀಂದ್ರ ಯಾವಗಲ್(ತಬಲಾ), PT. ರವೀಂದ್ರ ಕಟೋಟಿ(ಹಾರ್ಮೋನಿಯಂ) ಭಾಗವಹಿಸಲಿದ್ದಾರೆ.

ಜುಗಲ್‍ಬಂದಿ ಕಾರ್ಯಕ್ರಮವನ್ನು PT. ಪುರ್‍ಬಯಾನ್ ಚಟರ್ಜಿ (ಸಿತಾರ್), ವಿದ್ವಾನ್ ಶಶಾಂಕ್ ಸುಬ್ರಮಣ್ಯಮ್ (ಕರ್ನಾಟಿಕ್ ಕೊಳಲು), ಓಜಸ್ ಆಧಿಯಾ(ತಬಲಾ), ವಿದ್ವಾನ್ ಪರುಪಲ್ಲಿ ಫಲ್ಗುಣ್(ಮೃದಂಗ), ವಿದ್ವಾನ್ ಅಭಿಷೇಕ್ ರಘುರಾಮ್(ಕರ್ನಾಟಿಕ್ ಗಾಯಕ), ಸೌಗತ ರಾಯ್ ಚೌಧರಿ (ಸರೋದ್), ಇಂದ್ರಾಣಿಲ್ ಮಲ್ಲಿಕ್ (ತಬಲಾ) ಇವರು ನಡೆಸಿಕೊಡಲಿದ್ದಾರೆ.

ಇದನ್ನು ಓದಿ:Special Story: ನೆಮ್ಮದಿಯ ಜೀವನಕ್ಕೆ ಪರಿಸರ ಸಂರಕ್ಷಣೆ ಅತ್ಯಗತ್ಯ

ಜನವರಿ 15ರಂದು ಸಂಜೆ 4 ಗಂಟೆಗೆ ವಿದುಷಿ ಮಾಳವಿಕ ಸರುಕ್ಕೈ (ಭರತನಾಟ್ಯ), ವಿದುಷಿ ಬಾಂಬೆ ಜಯಶ್ರೀ (ಕರ್ನಾಟಿಕ್ ಗಾಯಕ) ಇವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ತಾಳವಾದ್ಯದಲ್ಲಿ PT. ಯೋಗೇಶ್ ಸಮ್ಸಿ (ತಬಲಾ), ವಿದ್ವಾನ್ ಪ್ಯಾಟ್ರಿ ಸತೀಶ್ ಕುಮಾರ್(ಮೃದಂಗ), ವಿದ್ವಾನ್ ಗಿರಿಧರ್ ಉಡುಪ(ಘಟಮ್), ಮಿಲಿಂದ್ ಕುಲಕರ್ಣಿ(ಹಾರ್ಮೋನಿಯಂ) ಇರಲಿದ್ದಾರೆ.

ಜುಗಲ್‍ಬಂದಿಯಲ್ಲಿ ದೇಬಪ್ರಿಯ ಅಧಿಕಾರಿ(ಹಿಂದುಸ್ಥಾನಿ ಗಾಯಕ), ಸಮನ್ವಯ ಸರ್ಕಾರ್(ಸಿತಾರ್), ರಾಜೇಂದ್ರ ನಾಕೋಡ್(ತಬಲಾ) ಇರಲಿದ್ದಾರೆ. ಈ ಕಾರ್ಯಕ್ರಮದ ಟಿಕೇಟ್ ದರವನ್ನು 500,1000, 2000, 3000(3rd row), 4000(2nd row), 5000(1st row) (ಒಂದು ದಿನಕ್ಕೆ) ಕೂಡ ನಿಗದಿ ಮಾಡಲಾಗಿದೆ.

ಬ್ಲಾಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:52 pm, Fri, 13 January 23

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ