AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology tips: ಈ ನಾಲ್ಕು ರಾಶಿಯವರು ಆಮೆ ಆಕಾರದ ಉಂಗುರ ಧರಿಸಬಾರದು

ಆಮೆ ಆಕಾರದ ಉಂಗುರ ಧರಿಸುವುದು ಅದೃಷ್ಟ, ಶುಭ ಎಂಬ ಭಾವನೆ ಇದೆ. ಆದರೆ ನಾಲ್ಕು ರಾಶಿಯವರು ಈ ರೀತಿಯ ಉಂಗುರವನ್ನು ಧರಿಸಿದರೆ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಂಡಂತೆ ಎಂಬುದು ಗೊತ್ತಿರಲಿ.

Astrology tips: ಈ ನಾಲ್ಕು ರಾಶಿಯವರು ಆಮೆ ಆಕಾರದ ಉಂಗುರ ಧರಿಸಬಾರದು
ಆಮೆಯ ಆಕಾರ ಇರುವ ಉಂಗುರ
Srinivas Mata
| Updated By: Digi Tech Desk|

Updated on:Apr 30, 2021 | 5:19 PM

Share

ಆಮೆಯನ್ನು ಜಯದ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ವಾಸ್ತು ಮತ್ತು ಫೆಂಗ್​ಶುಯ್ ಎರಡೂ ವಿಧಾನದಲ್ಲೂ ಮನೆಯಲ್ಲಿ ಆಮೆ ಇರುವುದು ಶುಭದಾಯಕ ಎಂದು ಪರಿಗಣಿಸಲಾಗುತ್ತದೆ. ಇನ್ನು ಪೌರಾಣಿಕ ಹಿನ್ನೆಲೆಯಿಂದ ನೋಡುವುದಾದರೆ, ಸ್ವತಃ ಭಗವಾನ್ ಮಹಾವಿಷ್ಣು ಕೂರ್ಮಾವತಾರ (ಅಮೆಯ ರೂಪ) ತಾಳಿದ್ದ ಬಗ್ಗೆ ಪ್ರಸ್ತಾವ ಸಿಗುತ್ತದೆ. ಇದೇ ಕಾರಣಕ್ಕೆ ಮನೆಯಲ್ಲಿ ಆಮೆಯು ಸುಖ, ಶಾಂತಿಯನ್ನು ತರುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಬಹಳ ಮಂದಿ ನಾನಾ ಬಗೆಯಲ್ಲಿ ಆಮೆಯ ರೂಪವನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಇನ್ನೂ ಕೆಲವರು ಆಮೆಯ ಆಕಾರವನ್ನು ಮಾಡಿಸಿ, ಅದರ ಉಂಗುರವನ್ನು ಧರಿಸುತ್ತಾರೆ.

ಆಮೆಯ ರೂಪದ ಉಂಗುರ ಧರಿಸುವುದರಿಂದ ಶಾಂತಿ, ಸೌಭಾಗ್ಯ ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಲಾಗುತ್ತದೆ. ಆದರೆ ಕೆಲವು ರಾಶಿಯವರು ಅಪ್ಪಿತಪ್ಪಿ ಕೂಡ ಆಮೆ ಆಕಾರದ ಉಂಗುರವನ್ನು ಧರಿಸಬಾರದು. ಹಾಗೊಂದು ವೇಳೆ ಧರಿಸಿಬಿಟ್ಟರೆ ಇವರ ಪಾಲಿನ ಸೌಭಾಗ್ಯವು ದೌರ್ಭಾಗ್ಯವಾಗಿ ಮಾರ್ಪಾಡಾಗಿ ಬಿಡುತ್ತದೆ. ಆದ್ದರಿಂದ ಉಂಗುರ ಹಾಕಿಕೊಳ್ಳುವ ಮೊದಲೇ ಜ್ಯೋತಿಷದ ಸಲಹೆ ಪಡೆಯಿರಿ. ಈ ಉಂಗುರ ಧರಿಸುವುದರ ಲಾಭ ಏನು ಹಾಗೂ ಯಾವ ರಾಶಿಗಳವರು ಧರಿಸಬಾರದು ಎಂಬುದನ್ನು ತಿಳಿದುಕೊಳ್ಳಿ.

ಉಂಗುರ ಧರಿಸುವುದರ ಲಾಭ ಏನು? ಆಮೆ ರೂಪದ ಉಂಗುರ ಧರಿಸುವುದರಿಂದ ಜೀವನದ ಹಲವು ಸಮಸ್ಯೆಗಳು ದೂರಾಗುತ್ತವೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮತ್ತು ಜೀವನದಲ್ಲಿ ನಕಾರಾತ್ಮಕ ಭಾವನೆಗಳು ದೂರವಾಗುತ್ತವೆ. ಮೊದಲೇ ಹೇಳಿದ ಹಾಗೆ ಆಮೆಯನ್ನು ಭಗವಾನ್ ವಿಷ್ಣುವಿನ ಅವತಾರ ಎಂದೇ ಪರಿಗಣಿಸಲಾಗುತ್ತದೆ. ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ. ಇದರ ಜತೆಗೆ ಯಾವ್ಯಾವುದೋ ಕಾರಣಗಳಿಗೆ ಅದೃಷ್ಟ ದೊರೆಯುವುದು ವಿಳಂಬ ಆಗುತ್ತಿದ್ದಲ್ಲಿ ಅದೂ ವೇಗ ಪಡೆಯುತ್ತದೆ. ಹಣ ಬರುವ ಮಾರ್ಗ ತೆರೆದುಕೊಳ್ಳುತ್ತದೆ ಹಾಗೂ ಈಗ ಇರುವ ದೋಷಗಳ ನಿವಾರಣೆ ಆಗುತ್ತದೆ.

ಈ ನಾಲ್ಕು ರಾಶಿಯವರು ಆಮೆ ಆಕಾರದ ಉಂಗುರ ಧರಿಸಬಾರದು ಈ ಉಂಗುರ ಧರಿಸುವುದು ಶುಭವೇನೋ ನಿಜ. ಆದರೆ ಮೇಷ, ವೃಶ್ಚಿಕ, ಮೀನ ಮತ್ತು ಕನ್ಯಾ ರಾಶಿಯವರು ಈ ಉಂಗುರವನ್ನು ಧರಿಸಬಾರದು. ಒಂದು ವೇಳೆ ಧರಿಸಿದರೆ ಬಹಳ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗ ಸಂಕಷ್ಟಕ್ಕೆ ಸಿಲುಕಿಕೊಂಡು, ವ್ಯವಹಾರ ಮಾಡುತ್ತಿದ್ದಲ್ಲಿ ನಷ್ಟ ಕಾಣುವಂತಾಗುತ್ತದೆ. ಕುಟುಂಬದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗುತ್ತದೆ. ಕೌಟುಂಬಿಕ ಕಲಹ ಏರ್ಪಡುತ್ತದೆ. ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ಕಳೆದುಹೋಗುತ್ತದೆ. ಈ ರಾಶಿಯವರು ಆಮೆ ಆಕಾರದ ಉಂಗುರ ಧರಿಸುವ ಬದಲಿಗೆ ಮನೆಯಲ್ಲಿ ಆಮೆ ಆಕಾರದ ವಸ್ತುಗಳನ್ನು ತಂದಿಟ್ಟರೆ ಇಡೀ ಕುಟುಂಬಕ್ಕೆ ಶ್ರೇಯಸ್ಸಾಗುತ್ತದೆ.

ಇದನ್ನೂ ಓದಿ: Jupiter Transit 2021: ಕುಂಭ ರಾಶಿಗೆ ಗುರು ಗ್ರಹ ಪ್ರವೇಶ; ಮೇಷದಿಂದ ಮೀನದ ತನಕ ಏನು ವಿಶೇಷ?

(Aries, Scorpio, Pisces and Virgo zodiac sign natives should not wear turtle finger ring according to astrology)

Published On - 5:13 pm, Fri, 30 April 21

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್