
ಆಗಸ್ಟ್ 28 ರಂದು ಆಕಾಶದಲ್ಲಿ ಅತ್ಯಂತ ವಿಶಿಷ್ಟ ಖಗೋಳ ಘಟನೆಯೊಂದು ಸಂಭವಿಸಲಿದ್ದು, ಇದು ಈ ವರ್ಷದ ಕೊನೆಯ ಚಂದ್ರಗ್ರಹಣವಾಗಿದೆ. ವಿಶೇಷವೆಂದರೆ, ಈ ದಿನದಂದೇ ರಕ್ಷಾ ಬಂಧನ ಹಬ್ಬವೂ ಬಂದಿದೆ. ಇದು ಸಂಪೂರ್ಣ ಚಂದ್ರಗ್ರಹಣವಲ್ಲದಿದ್ದರೂ, ಭೂಮಿಯ ನೆರಳು ಚಂದ್ರನ ಸುಮಾರು ಶೇ.96ರಷ್ಟು ಭಾಗವನ್ನು ಆವರಿಸುವ ಅತ್ಯಂತ ಆಳವಾದ ಭಾಗಶಃ ಚಂದ್ರಗ್ರಹಣವಾಗಿದೆ. ಸೂರ್ಯನ ಬೆಳಕು ಭೂಮಿಯ ವಾತಾವರಣದ ಮೂಲಕ ಹಾದು ವಕ್ರೀಭವನಗೊಳ್ಳುವುದರಿಂದ ಚಂದ್ರನು ತಾಮ್ರ ಅಥವಾ ಕೆಂಪು ಬಣ್ಣದಲ್ಲಿ ಗೋಚರಿಸಲಿದ್ದು, ಇದನ್ನು ‘ರಕ್ತ ಚಂದ್ರ’ (Blood Moon) ಎಂದು ಕರೆಯಲಾಗುತ್ತದೆ.
ಈ ಆಕರ್ಷಕ ದೃಶ್ಯವು ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಹಾಗೂ ಯುರೋಪ್ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಸ್ಪಷ್ಟವಾಗಿ ಕಾಣಿಸಲಿದೆ. ಆದರೆ ಭಾರತ, ಆಸ್ಟ್ರೇಲಿಯಾ, ಚೀನಾ ಮತ್ತು ಜಪಾನ್ ದೇಶಗಳಲ್ಲಿ ಈ ಚಂದ್ರಗ್ರಹಣ ಗೋಚರಿಸುವುದಿಲ್ಲ.
ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಅಷ್ಟಲಕ್ಷ್ಮಿ ರಾಜಯೋಗ; ಈ 4 ರಾಶಿಗೆ ಒಲಿಯಲಿದೆ ಅಪಾರ ಧನಸಂಪತ್ತು!
ಹಿಂದೂ ಜ್ಯೋತಿಷ್ಯದ ಪ್ರಕಾರ ಚಂದ್ರನು ಮನಸ್ಸು, ಭಾವನೆ ಹಾಗೂ ಶಾಂತಿಯ ಸಂಕೇತ. ರಾಹು-ಕೇತುಗಳ ಪ್ರಭಾವದಿಂದ ಸಂಭವಿಸುವ ಗ್ರಹಣದ ಸಮಯದಲ್ಲಿ ಶಿವ, ವಿಷ್ಣು ಅಥವಾ ಮಹಾಮೃತ್ಯುಂಜಯ ಮಂತ್ರಗಳನ್ನು ಪಠಿಸುವುದು ಶುಭಕರ ಎಂದು ನಂಬಲಾಗುತ್ತದೆ.
ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸದಿರುವುದರಿಂದ, ಯಾವುದೇ ಧಾರ್ಮಿಕ ಸೂತಕ ಅಥವಾ ಆಚರಣೆಯ ನಿಯಮಗಳು ನಮಗೆ ಅನ್ವಯಿಸುವುದಿಲ್ಲ. ಆದ್ದರಿಂದ ಯಾವುದೇ ಗೊಂದಲವಿಲ್ಲದೆ, ಎಂದಿನಂತೆ ಅತ್ಯಂತ ಸಂತೋಷದಿಂದ ರಕ್ಷಾ ಬಂಧನದ ರಾಖಿಯನ್ನು ಕಟ್ಟಬಹುದು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ