AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bheemana Amavasya 2021: ಭೀಮನ ಅಮಾವಾಸ್ಯೆಯ ಮಹತ್ವವೇನು?; ಗಂಡನ ಪಾದಪೂಜೆ ಮಾಡಲು ಕಾರಣ ಇಲ್ಲಿದೆ

Bheemana Amavasya Importance | ಆಷಾಡ ಮಾಸದಲ್ಲಿ ಗಂಡನಿಂದ ದೂರ ಉಳಿದು ತವರಿಗೆ ಹೋಗುವ ಮಹಿಳೆಯರು ಭೀಮನ ಅಮಾವಾಸ್ಯೆ ದಿನದಂದು ಪತಿಯ ಪಾದ ಪೂಜೆ ಮಾಡಿ ಮತ್ತೆ ತಮ್ಮ ಸಂಸಾರ ಪ್ರಾರಂಭಿಸುತ್ತಾರೆ.

Bheemana Amavasya 2021: ಭೀಮನ ಅಮಾವಾಸ್ಯೆಯ ಮಹತ್ವವೇನು?; ಗಂಡನ ಪಾದಪೂಜೆ ಮಾಡಲು ಕಾರಣ ಇಲ್ಲಿದೆ
ಕಳೆದ ವರ್ಷ ನಟ ಉಪೇಂದ್ರ ಅವರ ಮನೆಯಲ್ಲಿ ಭೀಮನ ಅಮಾವಾಸ್ಯೆಯ ಸಂಭ್ರಮ
Follow us
TV9 Web
| Updated By: Skanda

Updated on: Aug 08, 2021 | 6:51 AM

ಭಾರತದಲ್ಲಿ ಗಂಡನನ್ನೇ ದೇವರು ಎಂದು ಪೂಜಿಸುವ ಸಂಪ್ರದಾಯ ಬಹಳ ಪುರಾತನ ಕಾಲದಿಂದಲೂ ಇದೆ. ಹೆಣ್ಣಿಗೆ ಮುತ್ತೈದೆ ಭಾಗ್ಯ ನೀಡುವ ಗಂಡನ ಆರೋಗ್ಯ ವೃದ್ಧಿಯಾಗಬೇಕು, ಆತನಿಗೆ ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಸಿಗಬೇಕೆಂದು ಹೆಂಡತಿ ಸಾಕಷ್ಟು ರೀತಿಯ ವ್ರತಗಳನ್ನು ಕೂಡ ಮಾಡುತ್ತಾಳೆ. ಆ ರೀತಿಯ ಮುಖ್ಯವಾದುದು ‘ಭೀಮನ ಅಮಾವಾಸ್ಯೆ’. ಭೀಮನ ಅಮಾವಾಸ್ಯೆಯಂದು ಪತ್ನಿ ಕಂಕಣ ಕಟ್ಟಿಕೊಂಡು ವ್ರತ ಮಾಡಿದರೆ ಪತಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾದರೆ, ಈ ವ್ರತಕ್ಕೆ ಭೀಮನ ಅಮಾವಾಸ್ಯೆ ಎಂದು ಹೆಸರು ಬಂದಿದ್ದು ಹೇಗೆ? ಇದರ ಇತಿಹಾಸವೇನು? ಭೀಮನ ಅಮಾವಾಸ್ಯೆಯ ಹಿಂದೆ ಕೇವಲ ಧಾರ್ಮಿಕ ಕಾರಣ ಮಾತ್ರವಲ್ಲದೆ ಐತಿಹಾಸಿಕ ಕಾರಣವೂ ಇದೆ. ಮಹಾಭಾರತದ ಭೀಮನಿಗೂ ಈ ವ್ರತಕ್ಕೂ ಏನಾದರೂ ಸಂಬಂಧವಿದೆಯಾ? ಎಂಬ ಪ್ರಶ್ನೆಗಳು ಉದ್ಭವವಾಗುವುದು ಸಾಮಾನ್ಯ. ಭೀಮನ ಅಮಾವಾಸ್ಯೆ ಕುರಿತು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.

ಈ ಬಾರಿ ಆಗಸ್ಟ್ 8ರಂದು ಅಂದರೆ ಇಂದು ಭೀಮನ ಅಮಾವಾಸ್ಯೆ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಆಷಾಢ ಮಾಸದಲ್ಲಿ ಬರುವ ಅಮಾವಾಸ್ಯೆಯಂದು ಕರ್ನಾಟಕದಲ್ಲಿ ಈ ಭೀಮನ ಅಮಾವಾಸ್ಯೆಯ ವ್ರತವನ್ನು ಆಚರಿಸಲಾಗುತ್ತದೆ. ಕೇವಲ ಮದುವೆಯಾದ ಗೃಹಿಣಿಯರು ಮಾತ್ರವಲ್ಲದೆ ಅವಿವಾಹಿತ ಯುವತಿಯರು ಕೂಡ ಈ ವ್ರತವನ್ನು ಮಾಡಬಹುದು. ಆದರೆ, ಮುಖ್ಯವಾಗಿ ನವವಿವಾಹಿತರಿಗೆ ಈ ಭೀಮನ ಅಮಾವಾಸ್ಯೆ ಬಹಳ ವಿಶೇಷವಾದುದು. ಮಲೆನಾಡಿನ ಭಾಗದಲ್ಲಿ ಇದನ್ನು ಕೊಡೆ ಅಮಾವಾಸ್ಯೆ ಎಂದು ಕೂಡ ಕರೆಯುತ್ತಾರೆ. ಮದುವೆಯಾದ ಬಳಿಕ ತನ್ನ ತವರುಮನೆಯಲ್ಲಿ ಮೊದಲ ಬಾರಿಗೆ ಮಾಡುವ ಭೀಮನ ಅಮಾವಾಸ್ಯೆ ಅಥವಾ ಕೊಡೆ ಅಮಾವಾಸ್ಯೆ ವ್ರತ ಬಹಳ ವಿಶೇಷವಾದುದು. ಮಲೆನಾಡಿನ ಭಾಗದಲ್ಲಿ ಈ ದಿನ ಮಾವನ ಮನೆಯವರು ತಮ್ಮ ಅಳಿಯನಿಗೆ ಕೊಡೆ ಅಥವಾ ಛತ್ರಿಯನ್ನು ಉಡುಗೊರೆಯಾಗಿ ನೀಡುವ ಪದ್ಧತಿಯಿದೆ.

ಭೀಮನ ಅಮಾವಾಸ್ಯೆಯ ದಿನ ಕರಿಗಡುಬು, ತಂಬಿಟ್ಟಿನ ಉಂಡೆ, ಸಿಹಿ ಭಕ್ಷ್ಯಗಳನ್ನು ಮಾಡುತ್ತಾರೆ. ಈ ದಿನದಂದು ನವವಿವಾಹಿತರನ್ನು ಮನೆಗೆ ಕರೆದು ಛತ್ರಿ ಕೊಟ್ಟು ಕಳುಹಿಸುವ ಪದ್ಧತಿ ಹಲವು ಕಡೆಯಿದೆ. ಈ ದಿನ ಪತ್ನಿಯು ಗಂಡನ ಪಾದವನ್ನು ತೊಳೆದು, ಆತನ ಪಾದಪೂಜೆ ಮಾಡಿ ಆಶೀರ್ವಾದ ಪಡೆಯುತ್ತಾಳೆ.

ಮಲೆನಾಡು ಭಾಗದಲ್ಲಿ ಈ ಹಬ್ಬವನ್ನು ಕೊಡೆ ಅಮಾವಾಸ್ಯೆಯೆಂದು, ದಕ್ಷಿಣ ಕನ್ನಡದಲ್ಲಿ ಇದನ್ನು ಆಟಿ ಅಮಾವಾಸ್ಯೆ, ಕರ್ಕಾಟಕ ಅಮಾವಾಸ್ಯೆ ಎಂದು ಕರೆಯುತ್ತಾರೆ. ಆಷಾಡ ಮಾಸದಲ್ಲಿ ಗಂಡನಿಂದ ದೂರ ಉಳಿದು ತವರಿಗೆ ಹೋಗುವ ಮಹಿಳೆಯರು ಭೀಮನ ಅಮಾವಾಸ್ಯೆ ದಿನದಂದು ಪತಿಯನ್ನು ಪೂಜಿಸಿ ಮತ್ತೆ ತಮ್ಮ ಸಂಸಾರವನ್ನು ಪ್ರಾರಂಭಿಸುತ್ತಾರೆ. ಈ ದಿನ ಮಹಿಳೆಯರು ಶಿವ, ಪಾರ್ವತಿಯನ್ನು ಆರಾಧಿಸಿದರೆ ಸಮೃದ್ಧಿ, ಸಂತಾನ, ಪತಿವ್ರತೆ, ಆಯಸ್ಸು, ಯಶಸ್ಸು, ಸಂತೋಷ ಸೇರಿದಂತೆ ಎಲ್ಲವನ್ನು ಶಿವ ಮತ್ತು ಪಾರ್ವತಿ ದೇವಿ ಕರುಣಿಸುತ್ತಾರೆಂಬ ನಂಬಿಕೆಯಿದೆ.

ಇದನ್ನೂ ಓದಿ: Guru Purnima 2021: ಗುರು ಪೂರ್ಣಿಮೆ ವಿಶೇಷ ದಿನದ ಮಹತ್ವ, ಆಚರಣೆಯ ಇತಿಹಾಸ ಇಳಿಯಿರಿ

ಶ್ರಾವಣ ಮಾಸದ ಹಬ್ಬಗಳು; 2021ರಲ್ಲಿ ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಠಮಿ ಯಾವಾಗ?

(Bheemana Amavasya 2021 Celebrated Today of The Ashada Month Jyoti Bheemeshwara Vrata Importance)

ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ