AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಮನೆಯಲ್ಲಿ ಜೇಡರ ಬಲೆ ಇದ್ದರೆ ಏನು ಮಾಡಬೇಕು? ವಾಸ್ತು ತಜ್ಞರ ಸಲಹೆ ಇಲ್ಲಿದೆ

ಡಾ. ಬಸವರಾಜ್ ಗುರೂಜಿಯವರು ಹೇಳುವಂತೆ, ಮನೆಯಲ್ಲಿ ಜೇಡರ ಬಲೆಗಳು ಮಾನಸಿಕ ಒತ್ತಡ, ಕೋಪ, ಆರ್ಥಿಕ ಸ್ಥಗಿತ ಮತ್ತು ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ಅಮಾವಾಸ್ಯೆ ಅಥವಾ ಹುಣ್ಣಿಮೆಯ ಹಿಂದಿನ ದಿನ ಅವುಗಳನ್ನು ತೆಗೆದುಹಾಕುವುದು ಸೂಕ್ತ. ಧನಾತ್ಮಕ ಶಕ್ತಿಗಾಗಿ ಪಚ್ಚೆ ಕರ್ಪೂರ ಮತ್ತು ತುಪ್ಪದಿಂದ ಆರತಿ ಬೆಳಗುವ ವಿಧಾನವನ್ನು ಅವರು ವಿವರಿಸಿದ್ದಾರೆ.

Daily Devotional: ಮನೆಯಲ್ಲಿ ಜೇಡರ ಬಲೆ ಇದ್ದರೆ ಏನು ಮಾಡಬೇಕು? ವಾಸ್ತು ತಜ್ಞರ ಸಲಹೆ ಇಲ್ಲಿದೆ
ಜೇಡರ ಬಲೆ
ಅಕ್ಷತಾ ವರ್ಕಾಡಿ
|

Updated on: Oct 25, 2025 | 8:11 AM

Share

ಮನೆಯಲ್ಲಿ ಜೇಡರ ಬಲೆ ಇದ್ದರೆ ಏನು ಮಾಡಬೇಕು ಎಂಬುದಕ್ಕೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಮನೆ ಒಂದು ಮಂತ್ರಾಲಯದಂತೆ, ದೇವಾಲಯದಂತೆ ಇರಬೇಕು. ಮನೆಯ ಶುದ್ಧತೆ, ಮನೆಯ ತಲಬಾಗಿಲು, ಮುಂಬಾಗಿಲು, ಅಡುಗೆ ಮನೆ, ದೇವರ ಮನೆ ಇವೆಲ್ಲವೂ ಅತಿ ಮುಖ್ಯ. ಆದರೆ, ದುಷ್ಟಶಕ್ತಿಗಳ ಕಾಟ, ನಕಾರಾತ್ಮಕ ಶಕ್ತಿಗಳು ಅಥವಾ ಮಾಟ ಮಂತ್ರ ಪ್ರಯೋಗಗಳಿಂದ ಮನೆಗೆ ಯಾವುದೇ ತೊಂದರೆಯಾಗಬಾರದೆಂದರೆ, ಮನೆಯನ್ನು ಶುದ್ಧವಾಗಿ ಮತ್ತು ಸಕಾರಾತ್ಮಕ ಶಕ್ತಿಯಿಂದ ತುಂಬಿರಬೇಕು. ನಮ್ಮ ಋಷಿಮುನಿಗಳು ಈ ಬಗ್ಗೆ ಹಲವಾರು ಮಾರ್ಗದರ್ಶನಗಳನ್ನು ನೀಡಿದ್ದಾರೆ. ಅವುಗಳಲ್ಲಿ ಮನೆಯಲ್ಲಿ ಜೇಡರ ಬಲೆಗಳ ಪಾತ್ರವೂ ಒಂದು.

ಮನೆಯಲ್ಲಿ ಜೇಡರ ಬಲೆಗಳು ಕಾಣಿಸಿಕೊಂಡಾಗ, ಅವು ಎಷ್ಟು ಶುಭ ಅಥವಾ ಅಶುಭ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಬಾಡಿಗೆ ಮನೆ, ಸ್ವಂತ ಮನೆ, ಕಚೇರಿ, ಅಥವಾ ದೇವಾಲಯ ಯಾವುದೇ ಆಗಿರಲಿ, ಜೇಡರ ಬಲೆಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಮಹಾಲಕ್ಷ್ಮಿ ಶುದ್ಧತೆ ಮತ್ತು ಸ್ವಚ್ಛತೆ ಇರುವ ಕಡೆ ನೆಲೆಸುತ್ತಾಳೆ, “ಲಕ್ಷಯತಿ ಇತಿ ಸದಾ ಸರ್ವಂ” ಎಂಬಂತೆ, ಲಕ್ಷ ಇರುವ ಕಡೆ, ಶುದ್ಧತೆ ಇರುವ ಕಡೆ ಮಹಾಲಕ್ಷ್ಮಿ ಇರುತ್ತಾಳೆ. ಇದಕ್ಕೆ ವಿರುದ್ಧವಾಗಿ, ಮಹಾಶನಿ ಭಗವಾನರ ಪತ್ನಿಯಾದ ಜೇಷ್ಠಾಲಕ್ಷ್ಮಿ ಕೊಳಕು, ಅಶುದ್ಧತೆ ಮತ್ತು ನಿರ್ಲಕ್ಷ್ಯ ಇರುವ ಕಡೆ ಇರುತ್ತಾಳೆ. ಆದ್ದರಿಂದ, ಜೇಡರ ಬಲೆಗಳು ಮನೆಗಳಲ್ಲಿ ಜೇಷ್ಠಾಲಕ್ಷ್ಮಿಯ ಉಪಸ್ಥಿತಿಯನ್ನು ಸೂಚಿಸುತ್ತವೆ.

ವಿಡಿಯೋ ಇಲ್ಲಿದೆ ನೋಡಿ:

ಜೇಡರ ಬಲೆಗಳು ಮನೆಯಲ್ಲಿ ಇದ್ದಾಗ ಹಲವು ನಕಾರಾತ್ಮಕ ಪರಿಣಾಮಗಳು ಕಂಡುಬರುತ್ತವೆ. ಅವು ಮಾನಸಿಕ ಒತ್ತಡ, ಕೋಪತಾಪಗಳು, ಮಾನಸಿಕ ಕಿರಿಕಿರಿ, ಮತ್ತು ಆವೇಶವನ್ನು ಹೆಚ್ಚಿಸುತ್ತವೆ. ಮನೆಯ ಯಜಮಾನನ ಕೆಲಸಕಾರ್ಯಗಳು ಸ್ಥಗಿತಗೊಳ್ಳಬಹುದು, ಮತ್ತು ಸರಿಯಾಗಿ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ. ಆಲೋಚನಾ ಶಕ್ತಿ ಕುಗ್ಗಿ, ಅಂತಿಮವಾಗಿ ಬಡತನದ ರೇಖೆ ನಮ್ಮನ್ನು ಆವರಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಜೇಡರ ಬಲೆಯ ದಿಕ್ಕು ಕೂಡ ಅದರ ಪರಿಣಾಮಗಳನ್ನು ವಿಭಿನ್ನವಾಗಿ ವ್ಯಾಖ್ಯಾನಿಸಬಹುದು (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ನೈಋತ್ಯ, ಈಶಾನ್ಯ ದಿಕ್ಕುಗಳು), ಆದರೆ ಒಟ್ಟಾರೆಯಾಗಿ ಇದು ಅಶುಭಕರ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಮನೆಯಲ್ಲಿ ಮೆಟ್ಟಿಲು ನಿರ್ಮಿಸುವಾಗ ಈ ವಾಸ್ತು ನಿಯಮ ನಿರ್ಲಕ್ಷ್ಯಿಸದಿರಿ

ಈ ನಕಾರಾತ್ಮಕ ಶಕ್ತಿಗಳನ್ನು ನಿವಾರಿಸಲು ಕೆಲವು ಪರಿಹಾರಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಜೇಡರ ಬಲೆಗಳನ್ನು ಆಗಾಗ ಶುದ್ಧಿ ಮಾಡುವುದು, ಅಂದರೆ ಸ್ವಚ್ಛಗೊಳಿಸುವುದು ಅತಿ ಮುಖ್ಯ. ಇದನ್ನು ಯಾವಾಗ ಮಾಡಬೇಕು ಎಂದರೆ, ಅಮಾವಾಸ್ಯೆಯ ಹಿಂದಿನ ದಿನ ಅಥವಾ ಹುಣ್ಣಿಮೆಯ ಹಿಂದಿನ ದಿನ ಸ್ವಚ್ಛಗೊಳಿಸುವುದು ಮನೆಗೆ ವಿಶೇಷ ಬಲವನ್ನು ನೀಡುತ್ತದೆ. ಅಮಾವಾಸ್ಯೆಯು ಮನೆಗೆ ಒಂದು ವಿಶೇಷ ಶಕ್ತಿಯನ್ನು ತರುವ ದಿನವಾಗಿದೆ. ಆದರೆ, ಶುಕ್ರವಾರ ಮತ್ತು ಮಂಗಳವಾರದಂದು ಜೇಡರ ಬಲೆಗಳನ್ನು ತೆಗೆಯಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ಅನಿವಾರ್ಯ ಕಾರಣಗಳಿಂದ ತೆಗೆದರೂ, ಈ ದಿನಗಳನ್ನು ಹೊರತುಪಡಿಸುವುದು ಉತ್ತಮ.

ಜೇಡರ ಬಲೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬಲು ಒಂದು ಪ್ರಮುಖ ವಿಧಿಯಿದೆ. ಪಚ್ಚೆ ಕರ್ಪೂರವನ್ನು ತುಪ್ಪದಲ್ಲಿ ಅದ್ದಿ, ಒಂದು ತಟ್ಟೆಯಲ್ಲಿ ಇಟ್ಟು ಆರತಿ ಮಾಡಬೇಕು. ಈ ಆರತಿಯನ್ನು ಮೂರು ಬಾರಿ ಪ್ರದಕ್ಷಿಣೆ ದಿಕ್ಕಿನಲ್ಲಿ ಮತ್ತು ಮೂರು ಬಾರಿ ಅಪ್ರದಕ್ಷಿಣೆ ದಿಕ್ಕಿನಲ್ಲಿ ಮಾಡಬೇಕು. ನಂತರ ಈ ಆರತಿಯನ್ನು ಮನೆಯ ಮುಂಭಾಗದಲ್ಲಿ ಅಥವಾ ಯಾವುದೇ ಗಿಡಗಳ ಹತ್ತಿರ, ಯಾರು ತುಳಿಯದ ಶುದ್ಧವಾದ ಜಾಗದಲ್ಲಿ ಇಡಬೇಕು. ಇದರಿಂದ ಜೇಡರ ಬಲೆಗಳಿಂದ ಉಂಟಾದ ನಕಾರಾತ್ಮಕ ಶಕ್ತಿ ಅಥವಾ ಋಣಾತ್ಮಕ ಶಕ್ತಿ ಮನೆಯಿಂದ ಹೊರಗೆ ಹೋಗುತ್ತದೆ. ಋಷಿಮುನಿಗಳು ಸಹ ಜೇಡರ ಬಲೆಗಳು ಆಲಸ್ಯ, ನಿದ್ದೆ, ಕೋಪ ಮತ್ತು ಮಾನಸಿಕ ಒತ್ತಡಗಳನ್ನು ತರುತ್ತವೆ ಎಂದು ಗುರೂಜಿ ವಿವರಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ