AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Garuda Purana: ಗರುಡ ಪರಾಣ ಎಲ್ಲರೂ ಕೇಳಬೇಕು, ಏಕೆ? ಏನಿದರ ಮಹತ್ವ? ತಿಳಿಯಿರಿ

Garuda purana in Kannada : ಮೃತನ ಆತ್ಮ ಗರುಡ ಪುರಾಣ ಆಲಿಸಿದ ಬಳಿಕವೇ ಅದು ತನ್ನ ಮುಕ್ತಿ ಮಾರ್ಗದಲ್ಲಿ ಹಜ್ಜೆ ಹಾಕುತ್ತದೆ. ತನ್ನ ಇಹಲೋಕದ ವ್ಯವಹಾರಗಳನ್ನೆಲ್ಲ ಇಲ್ಲಿಯೇ ಬಿಟ್ಟು ಪರ ಲೋಕ, ಪಾರಮಾರ್ಥಿಕ ಲೋಕದತ್ತ ನಡೆಯುತ್ತದೆ. ಈ ಮಹತ್ವಗಳನ್ನು ಅರಿಯುವಂತಾಗಲು ಗರುಡ ಪುರಾಣ ಆಲಿಸಬೇಕಾಗುತ್ತದೆ.

Garuda Purana: ಗರುಡ ಪರಾಣ ಎಲ್ಲರೂ ಕೇಳಬೇಕು, ಏಕೆ? ಏನಿದರ ಮಹತ್ವ? ತಿಳಿಯಿರಿ
Garuda Purana: ಗರುಡ ಪರಾಣ ಎಲ್ಲರೂ ಕೇಳಬೇಕು, ಏಕೆ? ಏನಿದರ ಮಹತ್ವ? ತಿಳಿಯಿರಿ
TV9 Web
| Edited By: |

Updated on:Oct 27, 2021 | 9:36 AM

Share

ಗರುಡ ಪುರಾಣದಲ್ಲಿ ಹೇಳಿರುವುದೆಲ್ಲ ಸ್ವಯಂ ನಾರಾಯಣನೇ ಹೇಳಿರುವುದಾಗಿದೆ. ಯಾರದೇ ಸಾವು ಸಂಭವಿಸಿದಾಗ ಪರಿವಾರದ ಜನರು ಗರುಡ ಪುರಾಣವನ್ನು ಪಠಿಸುವ ಪರಿಪಾಠವಿದೆ. ಇದರಿಂದ ಮೃತರ ಆತ್ಮಕ್ಕೆ ಸದ್ಗತಿ ಸಿಗುತ್ತದೆ ಎಂಬುದು ನಂಬಿಕೆ. ಅದರಿಂದ ಮುಂದಕ್ಕೆ ಕುಟುಂಬಸ್ಥರಿಗೆ ಸನ್ಮಾರ್ಗದಲ್ಲಿ ನಡೆಯುವುದಕ್ಕೆ ಪ್ರೇರಣೆ ಸಿಗುತ್ತದೆ, ದಾರಿದೀಪವಾಗುತ್ತದೆ. ಗರುಡ ಪುರಾಣದ ಮೂಲಕ ವ್ಯಕ್ತಿಯ ಕರ್ಮಗಳನ್ನು ಆಧರಿಸಿ, ಮೃತ್ಯುವಿನ ನಂತರದ ಸ್ಥಿತಿಗತಿಗಳು, ಸ್ವರ್ಗ ಪ್ರಾಪ್ತಿಯಾಗುತ್ತದೋ ಅಥವಾ ನರಕವೇ ಗತಿಯೋ ಎಂಬುದೂ ತಿಳಿದುಬರುತ್ತದೆ. ಹಿಂದೂಗಳ ಮಹಾಪುರಾಣವಾದ ಗರುಡ ಪುರಾಣದಲ್ಲಿ 19 ಸಾವಿರ ಶ್ಲೋಕಗಳು ಇವೆ. ಅದರಲ್ಲಿ 7 ಸಾವಿರ ಶ್ಲೋಕಗಳು ವ್ಯಕ್ತಿಯ ಜ್ಞಾನ, ಧರ್ಮ, ನೀತಿ, ರಹಸ್ಯ, ವ್ಯಾವಹಾರಿಕ ಜೀವನ, ಸದಾಚಾರ, ಯಕ್ಷ, ಯಜ್ಞ, ತಪ ಮುಂತಾದವುಗಳ ಮಹತ್ವವನ್ನು ತಿಳಿಯಹೇಳಲಾಗಿದೆ. ಇದು ಜನರನ್ನು ಸರಿಯಾದ ಮಾರ್ಗದಲ್ಲಿ ಜೀವನ ಸಾಗಿಸುವುದಕ್ಕೆ ಪ್ರೇರೇಪಿಸುತ್ತದೆ.

ಯಾರದೇ ಸಾವು ಸಂಭವಿಸಿದಾಗ ಆ ಸಾವಿನ ಮನೆಯಲ್ಲಿ ಗರುಡ ಪುರಾಣದ ಪಠನ ನಡೆದರೆ ಮೃತ್ಯುವಿನ ಕಾರಣವಾಗಿ ಅವರ ಸಂಬಂಧಿಕರು ಮುಂದೆ ತಮ್ಮ ತಮ್ಮ ಜೀವನಗಳಲ್ಲಿ ಸರಿಯಾದ ದಾರಿಯಲ್ಲಿ ಸಾಗುವುದಕ್ಕೆ ಅನುವು ಮಾಡಿಕೊಡುತ್ತದೆ. ತಪ್ಪುಗಳು ಮಾಡಿದರೆ ಏನಾಗುತ್ತದೆ ಎಂಬುದನ್ನೂ ಉದಾಹರಣೆಗಳೊಂದಿಗೆ ದೃಷ್ಟಾಂತಗಳೊಂದಿಗೆ ಗರುಡ ಪುರಾಣದಲ್ಲಿ ಹೇಳಲಾಗುತ್ತದೆ. ಇದನ್ನು ಆಲಿಸಿದ ಯಾರೇ ಆಗಲಿ ಮುಂದೆ ತಮ್ಮ ಜೀವನದ ಮಾರ್ಗದಲ್ಲಿ ಹೇಗೆ ಸಾಗಬೇಕು ಎಂಬುದನ್ನು ನಿರ್ಧರಿಸಿಬಿಡುತ್ತಾರೆ.

ಗರುಡ ಪುರಾಣದಲ್ಲಿ ಇನ್ನೂ ಒಂದು ಸಂಗತಿಯನ್ನು ಹೇಳಲಾಗಿದೆ. ಯಾರದೇ ಸಾವಿನ ಬಳಿಕ 13 ದಿನಗಳವರೆಗೆ ಮೃತನ ಆತ್ಮ ಅದೇ ಮನೆಯಲ್ಲಿ ವಾಸವಾಗಿರುತ್ತದೆ. ಆ ವೇಳೆಯಲ್ಲಿ ಗರುಡ ಪುರಾಣದ ಪಠನವಾದರೆ ಮೃತನ ಆತ್ಮವೂ ಅದನ್ನು ಆಲಿಸುತ್ತದೆ ಎಂಬ ನಂಬಿಕೆಯಿದೆ. ಇದರಿಂದ ಶಾಂತಿ ಸಿಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

ಮೃತನ ಆತ್ಮ ಗರುಡ ಪುರಾಣ ಆಲಿಸಿದ ಬಳಿಕವೇ ಅದು ತನ್ನ ಮುಕ್ತಿ ಮಾರ್ಗದಲ್ಲಿ ಹಜ್ಜೆ ಹಾಕುತ್ತದೆ. ತನ್ನ ಇಹಲೋಕದ ವ್ಯವಹಾರಗಳನ್ನೆಲ್ಲ ಇಲ್ಲಿಯೇ ಬಿಟ್ಟು ಪರ ಲೋಕ, ಪಾರಮಾರ್ಥಿಕ ಲೋಕದತ್ತ ನಡೆಯುತ್ತದೆ. ಈ ಮಹತ್ವಗಳನ್ನು ಅರಿಯುವಂತಾಗಲು ಗರುಡ ಪುರಾಣ ಆಲಿಸಬೇಕಾಗುತ್ತದೆ.

Published On - 7:29 am, Wed, 27 October 21

Follow Us
ಯಾವ ರಾಶಿಗೆ ಇಂದು ರಾಯರ ಅನುಗ್ರಹ
ಯಾವ ರಾಶಿಗೆ ಇಂದು ರಾಯರ ಅನುಗ್ರಹ
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ