Good Friday 2025: ಏ.18 ಗುಡ್‌ ಫ್ರೈಡೆ; ಕ್ರೈಸ್ತ ಸಮುದಾಯಕ್ಕೆ ನಾಳೆ ಪವಿತ್ರ ಶುಕ್ರವಾರ, ಈ ಬಗ್ಗೆ ಇಲ್ಲಿದೆ ಮಾಹಿತಿ

ಗುಡ್ ಫ್ರೈಡೆ ಅಥವಾ ಶುಭ ಶುಕ್ರವಾರವು ಈಸ್ಟರ್ ಹಬ್ಬಕ್ಕೆ ಮುಂಚಿನ ಶುಕ್ರವಾರ. ಇದು ಯೇಸುವಿನ ತ್ಯಾಗದ ದಿನವೆಂದು ಆಚರಿಸಲಾಗುತ್ತದೆ . ಕ್ರೈಸ್ತರು ಈ ದಿನವನ್ನು ಉಪವಾಸ ಮತ್ತು ಪ್ರಾರ್ಥನೆಯೊಂದಿಗೆ ಆಚರಿಸುತ್ತಾರೆ. ಯೇಸುವಿನ ತ್ಯಾಗ ಮತ್ತು ಪುನರುತ್ಥಾನದ ಭರವಸೆಯನ್ನು ಇದು ಸಂಕೇತಿಸುತ್ತದೆ. 2000 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಈ ದಿನವು ಕ್ರೈಸ್ತರಿಗೆ ಅತ್ಯಂತ ಪವಿತ್ರ ದಿನವಾಗಿದೆ.

Good Friday 2025: ಏ.18 ಗುಡ್‌ ಫ್ರೈಡೆ; ಕ್ರೈಸ್ತ ಸಮುದಾಯಕ್ಕೆ ನಾಳೆ ಪವಿತ್ರ ಶುಕ್ರವಾರ, ಈ  ಬಗ್ಗೆ ಇಲ್ಲಿದೆ ಮಾಹಿತಿ
Good Friday

Updated on: Apr 17, 2025 | 10:53 AM

ಗುಡ್‌ ಫ್ರೈಡೆ ಕ್ರೈಸ್ತರಿಗೆ ಮಹತ್ವದ ದಿನವಾಗಿದ್ದು, ಇದು ಈಸ್ಟರ್‌ಗೆ ಮುಂಚಿನ ಶುಕ್ರವಾರದಂದು ಬರುತ್ತದೆ. ಇದನ್ನು ಕಪ್ಪು ಶುಕ್ರವಾರ, ಮಹಾ ಶುಕ್ರವಾರ ಮತ್ತು ಪವಿತ್ರ ಶುಕ್ರವಾರ ಎಂದೂ ಕರೆಯುತ್ತಾರೆ. ಈ ವರ್ಷ ಗುಡ್‌ ಫ್ರೈಡೆ ಏಪ್ರಿಲ್ 18 ರಂದು ಅಂದರೆ ನಾಳೆ ಆಚರಿಸಲಾಗುತ್ತದೆ. ಈ ದಿನವನ್ನು ಭಗವಂತ ಯೇಸು ಕ್ರಿಸ್ತನ ತ್ಯಾಗದ ಸಂಕೇತವಾಗಿ ಆಚರಿಸಲಾಗುತ್ತದೆ. ಗುಡ್‌ ಫ್ರೈಡೆಯನ್ನು ಆಚರಿಸುವ 40 ದಿನಗಳ ಮೊದಲು ಕ್ರಿಶ್ಚಿಯನ್ ಸಮುದಾಯದವರು ಪ್ರಾರ್ಥನೆಯನ್ನು ಮತ್ತು ಉಪವಾಸವನ್ನು ಪ್ರಾರಂಭಿಸುತ್ತಾರೆ.

ಕ್ರಿಶ್ಚಿಯನ್ ಧಾರ್ಮಿಕ ಗ್ರಂಥ ಬೈಬಲ್ ಪ್ರಕಾರ, ಜನರ ಕಲ್ಯಾಣಕ್ಕಾಗಿ, ಪ್ರಭು ಯೇಸು ಪ್ರೀತಿ, ಕರುಣೆ, ಜ್ಞಾನ ಮತ್ತು ಅಹಿಂಸೆಯ ಸಂದೇಶವನ್ನು ನೀಡಿದ್ದಲ್ಲದೆ, ಯಹೂದಿ ಆಡಳಿತಗಾರರಿಂದ ತೀವ್ರ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಅನುಭವಿಸಿ ಶಿಲುಬೆಗೇರಿಸಲ್ಪಟ್ಟರು. ಪ್ರಭು ಯೇಸುವನ್ನು ಶಿಲುಬೆಗೇರಿಸಿದ ದಿನ ಶುಕ್ರವಾರ. ಆದ್ದರಿಂದ, ಈ ದಿನವನ್ನು ಶುಭ ಶುಕ್ರವಾರ ಎಂದು ಕರೆಯಲಾಗುತ್ತದೆ ಮತ್ತು ಈ ಹಬ್ಬವನ್ನು ಯೇಸುವಿನ ತ್ಯಾಗದ ದಿನವೆಂದು ಆಚರಿಸಲಾಗುತ್ತದೆ.ಈ ದಿನದಂದು ಕ್ರಿಶ್ಚಿಯನ್‌ ಸಮುದಾಯದವರು ತಮ್ಮ ಪ್ರಾರ್ಥನೆಯನ್ನು ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಮಾಡುತ್ತಾರೆ. ಏಕೆಂದರೆ ಈ ಸಮಯದಲ್ಲಿ ಯೇಸುವನ್ನು ಶಿಲುಬೆಗೇರಿಸಲಾಯಿತು ಎನ್ನುವುದು ಅವರ ನಂಬಿಕೆ.

ಇದನ್ನೂ ಓದಿ: ಪುರಿ ಜಗನ್ನಾಥ ದೇವಸ್ಥಾನದಲ್ಲಿ ಪ್ರತಿದಿನ ಧ್ವಜ ಬದಲಾಯಿಸುವುದೇಕೆ?

ಇದನ್ನೂ ಓದಿ
ಭಾನುವಾರ ಈ ವಸ್ತು ಖರೀದಿಸುವ ವ್ಯಕ್ತಿ ಶ್ರೀಮಂತನಾಗುತ್ತಾನೆ
ಪತ್ನಿಯನ್ನು ಹಿಂಸಿಸುವ ಪತಿಗೆ ಏನು ಶಿಕ್ಷೆ? ಗರುಡ ಪುರಾಣದ ಹೇಳುವುದೇನು?
ಮದುವೆಗೂ ಮುನ್ನ ಗ್ರಹ ಶಾಂತಿ ಪೂಜೆ ಮಾಡಿಸುವುದೇಕೆ? ಏನಿದರ ಮಹತ್ವ?
ಊಟ ಮಾಡಿದ ನಂತರ ಬಾಳೆ ಎಲೆಯನ್ನು ಒಳಮುಖವಾಗಿ ಮಡಚುವುದೇಕೆ?

ಪವಿತ್ರ ಶುಕ್ರವಾರ ಹಬ್ಬದ ಇತಿಹಾಸವು 2005 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಯೇಸು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದಾಗ ಮತ್ತು ಮಾನವೀಯತೆ, ಏಕತೆ, ಸಹೋದರತ್ವ ಮತ್ತು ಶಾಂತಿಯ ಸಂದೇಶವನ್ನು ನೀಡುತ್ತಿದ್ದಾಗ ಜನರು ಅವನನ್ನು ದೇವರ ಸಂದೇಶವಾಹಕ ಎಂದು ನಂಬಲು ಪ್ರಾರಂಭಿಸಿದರು, ಆದರೆ ಅದು ಯಹೂದಿ ಆಡಳಿತಗಾರರಿಗೆ ಇಷ್ಟವಾಗಲಿಲ್ಲ ಮತ್ತು ಏಸುವನ್ನು ಶಿಲುಬೆಗೇರಿಸಲಾಯಿತು. ಯೇಸುವನ್ನು ಶಿಲುಬೆಗೇರಿಸುವಾಗ, ಜನರ ಕಲ್ಯಾಣಕ್ಕಾಗಿ ಅವರು ನಗುತ್ತಾ ಶಿಲುಬೆಯ ಮೇಲೆ ಹೋದರು, ಇದು ಅವರ ಧೈರ್ಯವನ್ನು ತೋರಿಸುತ್ತದೆ ಮತ್ತು ಇಡೀ ಮಾನವ ಜನಾಂಗಕ್ಕೆ ಸಂದೇಶವನ್ನು ನೀಡುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:52 am, Thu, 17 April 25