AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nag Panchami 2026: ನಾಗರ ಪಂಚಮಿ; ಈ 8 ಪವಿತ್ರ ಸರ್ಪಗಳನ್ನು ಪೂಜಿಸುವುದರ ಮಹತ್ವವೇನು ಗೊತ್ತಾ?

'ನಾಗರ ಪಂಚಮಿ' (Nagara Panchami) ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಆಗಸ್ಟ್ 17 ರಂದು ಹಬ್ಬವನ್ನು ಆಚರಿಸಲಾಗುತ್ತಿದೆ. ನಾಗ ಪಂಚಮಿಯಂದು ಶಿವನೊಂದಿಗೆ ಅಷ್ಟ ನಾಗಗಳನ್ನು ಅಂದರೆ 8 ಪವಿತ್ರ ಸರ್ಪಗಳನ್ನು ಪೂಜಿಸಲಾಗುತ್ತದೆ. ಆದ್ದರಿಂದ ಈ ಸರ್ಪಗಳನ್ನು ಪೂಜಿಸುವುದರ ಹಿಂದಿನ ಮಹತ್ವವೇನು? ಕಾಳಸರ್ಪ ದೋಷ ನಿವಾರಣೆಗೆ ಈ ದಿನ ಏನು ಮಾಡಬೇಕು? ಪೂರ್ಣ ಮಾಹಿತಿ ಇಲ್ಲಿದೆ.

Nag Panchami 2026: ನಾಗರ ಪಂಚಮಿ; ಈ 8 ಪವಿತ್ರ ಸರ್ಪಗಳನ್ನು ಪೂಜಿಸುವುದರ ಮಹತ್ವವೇನು ಗೊತ್ತಾ?
ನಾಗ ಪಂಚಮಿ
ಅಕ್ಷತಾ ವರ್ಕಾಡಿ
|

Updated on: Aug 09, 2026 | 10:54 AM

Share

ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗರ ಪಂಚಮಿ ಹಬ್ಬವನ್ನು ದೇಶಾದ್ಯಂತ ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಶುಭ ದಿನದಂದು ಮಹಾದೇವನ ಜೊತೆಗೆ ಸರ್ಪ ದೇವರನ್ನು ಪೂಜಿಸುವುದು ಅನಾದಿ ಕಾಲದಿಂದಲೂ ಬಂದ ವಾಡಿಕೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ನಾಗ ಪಂಚಮಿಯಂದು ನಾಗ ದೇವತೆಗಳನ್ನು ಆರಾಧಿಸುವುದರಿಂದ ಜಾತಕದಲ್ಲಿರುವ ಕಾಳಸರ್ಪ ದೋಷ ನಿವಾರಣೆಯಾಗಿ, ಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ.

ಈ ಪವಿತ್ರ ಸಂದರ್ಭದಲ್ಲಿ ಸರ್ಪ ದೇವರಿಗೆ ಹಾಗೂ ಪರಮಶಿವನಿಗೆ ಹಾಲು, ನೀರು, ಹೂವುಗಳು ಮತ್ತು ಧಾನ್ಯಗಳನ್ನು ಅರ್ಪಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ನಾಗ ಪಂಚಮಿಯಂದು ಮುಖ್ಯವಾಗಿ ಅಷ್ಟ ನಾಗಗಳನ್ನು (8 ಪವಿತ್ರ ಸರ್ಪಗಳು) ಪೂಜಿಸಲಾಗುತ್ತದೆ. ಆ ಎಂಟು ನಾಗಗಳು ಯಾರು ಮತ್ತು ಅವುಗಳ ಮಹತ್ವವೇನು ಎಂಬುದನ್ನು ವಿವರವಾಗಿ ತಿಳಿಯೋಣ.

ನಾಗ ಪಂಚಮಿಯಂದು ಪೂಜಿಸಲ್ಪಡುವ 8 ಪ್ರಮುಖ ನಾಗಗಳು:

ಶೇಷನಾಗ (ಆದಿಶೇಷ):

ಹಿಂದೂ ಧರ್ಮದಲ್ಲಿ ಶೇಷನಾಗನಿಗೆ ಅತ್ಯುನ್ನತ ಸ್ಥಾನವಿದೆ. ಇವರನ್ನು ‘ಅನಂತ’ ಅಥವಾ ‘ಆದಿಶೇಷ’ ಎಂದೂ ಕರೆಯಲಾಗುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಶೇಷನಾಗನನ್ನು ಎಲ್ಲಾ ಸರ್ಪಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಶ್ರೀಮನ್ನಾರಾಯಣನು (ವಿಷ್ಣು) ಶೇಷನಾಗನ ಮೇಲೆಯೇ ಶಯನ ಭಂಗಿಯಲ್ಲಿ ವಿರಾಜಮಾನನಾಗಿರುತ್ತಾನೆ.

ವಾಸುಕಿ:

ವಾಸುಕಿಯು ಶಿವನ ಪರಮ ಭಕ್ತ. ಶಿವನು ವಾಸುಕಿಯನ್ನು ತನ್ನ ಕುತ್ತಿಗೆಯಲ್ಲಿ ಆಭರಣವಾಗಿ ಧರಿಸಿದ್ದಾನೆ. ಪುರಾಣಗಳ ಪ್ರಕಾರ, ಪ್ರಸಿದ್ಧ ‘ಸಮುದ್ರ ಮಂಥನ’ದ ಸಮಯದಲ್ಲಿ ಮಂದಾರ ಪರ್ವತವನ್ನು ಮಥಿಸಲು ವಾಸುಕಿ ನಾಗನನ್ನೇ ಹಗ್ಗವನ್ನಾಗಿ ಬಳಸಲಾಗಿತ್ತು.

ಪದ್ಮ ನಾಗ ಮತ್ತು ಮಹಾಪದ್ಮ ನಾಗ:

ಪದ್ಮ ನಾಗನು ಶಾಂತಿ ಮತ್ತು ಸಮೃದ್ಧಿಯ ಸಂಕೇತ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗೋಮತಿ ನದಿಯ ಬಳಿಯ ನೇಮಿಶಾರಣ್ಯ ಪ್ರದೇಶವನ್ನು ಪದ್ಮ ನಾಗರು ಆಳುತ್ತಿದ್ದರು ಎಂದು ಹೇಳಲಾಗುತ್ತದೆ. ಇವು ಭವ್ಯವಾದ ಹಾಗೂ ಶ್ವೇತ (ಬಿಳಿ) ವರ್ಣದ ಸರ್ಪಗಳಾಗಿವೆ. ವಿಷ್ಣು ಪುರಾಣದಲ್ಲಿ ಸರ್ಪಗಳ ವಿವಿಧ ಕುಲಗಳ ಬಗ್ಗೆ ವಿವರಿಸುವಾಗ ಮಹಾಪದ್ಮ ನಾಗನ ಉಲ್ಲೇಖ ಹಾಗೂ ಮಹತ್ವವನ್ನು ಎತ್ತಿಹಿಡಿಯಲಾಗಿದೆ.

ತಕ್ಷಕ ನಾಗ:

ಮಹಾಭಾರತದ ಪ್ರಸಂಗಗಳಲ್ಲಿ ತಕ್ಷಕ ಸರ್ಪದ ಬಗ್ಗೆ ವಿಶೇಷ ಉಲ್ಲೇಖವಿದೆ. ಕದ್ರು ಮತ್ತು ಕಶ್ಯಪ ಮಹರ್ಷಿಗಳ ಗರ್ಭದಿಂದ ಜನಿಸಿದ ತಕ್ಷಕನು ಎಂಟು ಪ್ರಮುಖ ಸರ್ಪ ಕುಲಗಳಲ್ಲಿ ಒಂದಾಗಿದ್ದಾನೆ.

ಕುಲಿಕ್ ನಾಗ:

ಈ ಹಾವು ಬ್ರಾಹ್ಮಣ ಕುಲಕ್ಕೆ ಸೇರಿದ್ದು ಎಂದು ನಂಬಲಾಗಿದೆ. ಕುಲಿಕ್ ನಾಗನು ಸೃಷ್ಟಿಕರ್ತನಾದ ಬ್ರಹ್ಮ ದೇವನೊಂದಿಗೆ ಆಳವಾದ ಧಾರ್ಮಿಕ ಸಂಬಂಧವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಕರ್ಕೋಟಕ ನಾಗ:

ಕರ್ಕೋಟಕ ನಾಗನನ್ನು ಸಾಕ್ಷಾತ್ ಶಿವನ ಗಣವೆಂದು ಪರಿಗಣಿಸಲಾಗುತ್ತದೆ. ಪೌರಾಣಿಕ ಕಥೆಗಳ ಪ್ರಕಾರ, ಈ ನಾಗರಹಾವು ಎಲ್ಲಾ ನಾಗಗಳಲ್ಲಿಯೇ ಅತ್ಯಂತ ಬುದ್ಧಿವಂತ ಮತ್ತು ಜ್ಞಾನಿ ಎಂದು ಹೆಸರುವಾಸಿಯಾಗಿದೆ.

ಶಂಖಪಾಲ / ಶಂಖ ನಾಗ:

ಅಷ್ಟ ನಾಗಗಳಲ್ಲಿ ಶಂಖಪಾಲ ಕೂಡ ಪ್ರಮುಖವಾದದ್ದು. ಶಂಖದಂತೆ ಬಿಳಿಯ ಬಣ್ಣ ಹಾಗೂ ಪವಿತ್ರತೆಯನ್ನು ಹೊಂದಿರುವ ಈ ನಾಗನನ್ನು ಪೂಜಿಸುವುದರಿಂದ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ ಎಂದು ನಂಬಲಾಗಿದೆ.

ಕಾಳಸರ್ಪ ದೋಷ ನಿವಾರಣೆಗೆ ನಾಗ ಪಂಚಮಿ ಏಕೈಕ ಪರಿಹಾರ:

ಶಿವಪುರಾಣದಲ್ಲಿ ನಾಗಗಳ ಉಗಮ ಮತ್ತು ಮಹತ್ವವನ್ನು ವಿಸ್ತಾರವಾಗಿ ವಿವರಿಸಲಾಗಿದೆ. ನಾಗ ಪಂಚಮಿಯಂದು ಸರ್ಪ ದೇವರಿಗೆ ಹಾಲು ಮತ್ತು ನೈವೇದ್ಯ ಅರ್ಪಿಸಿ ಪೂಜಿಸುವುದರಿಂದ ಕಾಳಸರ್ಪ ದೋಷದ ಋಣಾತ್ಮಕ ಪರಿಣಾಮಗಳು ಶಮನಗೊಳ್ಳುತ್ತವೆ. ಜಾತಕದಲ್ಲಿ ಕಾಳಸರ್ಪ ದೋಷವಿದ್ದರೆ ಜೀವನದಲ್ಲಿ ಪದೇ ಪದೇ ತಡೆಗೋಡೆಗಳು, ಮನಸ್ಸಿನ ಅಶಾಂತಿ ಹಾಗೂ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ನಾಗ ಪಂಚಮಿಯ ದಿನದಂದು ಭಕ್ತಿಯಿಂದ ಅಷ್ಟ ನಾಗಗಳನ್ನು ಪೂಜಿಸಿ, ಶಿವನಿಗೆ ಜಲಾಭಿಷೇಕ ಮಾಡುವುದರಿಂದ ಕಾಳಸರ್ಪ ದೋಷದ ನಕಾರಾತ್ಮಕ ಪ್ರಭಾವ ಕಡಿಮೆಯಾಗಿ ಸಾಧಕರ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಆಗಸ್ಟ್ 10 ರಿಂದ 16 ರವರೆಗಿನ ದ್ವಾದಶ ರಾಶಿಗಳ ಸಂಪೂರ್ಣ ವಾರಭವಿಷ್ಯ ಇಲ್ಲಿದೆ
ಆಗಸ್ಟ್ 10 ರಿಂದ 16 ರವರೆಗಿನ ದ್ವಾದಶ ರಾಶಿಗಳ ಸಂಪೂರ್ಣ ವಾರಭವಿಷ್ಯ ಇಲ್ಲಿದೆ
ಚಾಮುಂಡೇಶ್ವರಿ ದರ್ಶನ ಪಡೆದ ಕೇಂದ್ರ ಸಚಿವ ಹೆಚ್​​ಡಿಕೆ
ಚಾಮುಂಡೇಶ್ವರಿ ದರ್ಶನ ಪಡೆದ ಕೇಂದ್ರ ಸಚಿವ ಹೆಚ್​​ಡಿಕೆ
ದೆಹಲಿಯಲ್ಲಿ ಭಾರೀ ಮಳೆ; ಪಾರ್ಕಿಂಗ್ ಗೋಡೆ ಕುಸಿದು 8 ಕಾರುಗಳು ಪೂರ್ತಿ ಜಖಂ
ದೆಹಲಿಯಲ್ಲಿ ಭಾರೀ ಮಳೆ; ಪಾರ್ಕಿಂಗ್ ಗೋಡೆ ಕುಸಿದು 8 ಕಾರುಗಳು ಪೂರ್ತಿ ಜಖಂ
ಹೈದರಾಬಾದ್​ನ ರಸ್ತೆ ಮಧ್ಯೆ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ
ಹೈದರಾಬಾದ್​ನ ರಸ್ತೆ ಮಧ್ಯೆ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ
ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ
ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ
ಮೂರೇ ವಾರಕ್ಕೆ ಕುಸಿದ 4,700 ಕೋಟಿ ವೆಚ್ಚದ ಲಕ್ನೋ-ಕಾನ್ಪುರ ಹೆದ್ದಾರಿ
ಮೂರೇ ವಾರಕ್ಕೆ ಕುಸಿದ 4,700 ಕೋಟಿ ವೆಚ್ಚದ ಲಕ್ನೋ-ಕಾನ್ಪುರ ಹೆದ್ದಾರಿ
ಒಳ್ಳೆಯ ಸಿನಿಮಾಕ್ಕಾಗಿ ನನ್ನ ಬಳಿ ಸಾಕಷ್ಟು ಹಣ ಇದೆ: ನಿರ್ಮಾಪಕ ವೆಂಕಟ್
ಒಳ್ಳೆಯ ಸಿನಿಮಾಕ್ಕಾಗಿ ನನ್ನ ಬಳಿ ಸಾಕಷ್ಟು ಹಣ ಇದೆ: ನಿರ್ಮಾಪಕ ವೆಂಕಟ್
ಟಾಕ್ಸಿಕ್ ಟ್ರೇಲರ್​: ‘ನಾನೇ ಸಿನಿಮಾ ಮಾಡಿದಷ್ಟು ಖುಷಿಯಾಯ್ತು’ ಎಂದ ಶಿವಣ್ಣ
ಟಾಕ್ಸಿಕ್ ಟ್ರೇಲರ್​: ‘ನಾನೇ ಸಿನಿಮಾ ಮಾಡಿದಷ್ಟು ಖುಷಿಯಾಯ್ತು’ ಎಂದ ಶಿವಣ್ಣ
‘ನನ್ನ ಜೀವನದ ಸ್ಮರಣೀಯ ಅನುಭವ’: ಟಾಕ್ಸಿಕ್ ಚಿತ್ರದ ಬಗ್ಗೆ ನಟ ಅಕ್ಷಯ್ ಓಬೆರಾ
‘ನನ್ನ ಜೀವನದ ಸ್ಮರಣೀಯ ಅನುಭವ’: ಟಾಕ್ಸಿಕ್ ಚಿತ್ರದ ಬಗ್ಗೆ ನಟ ಅಕ್ಷಯ್ ಓಬೆರಾ
‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ
‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ