AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳನ್ನೇ ಆಯ್ಕೆ ಮಾಡುವುದೇಕೆ ಗೊತ್ತಾ? ಇಲ್ಲಿದೆ ಆಧ್ಯಾತ್ಮಿಕ ಮಹತ್ವ!

ಪುರಿ ಜಗನ್ನಾಥ ರಥಯಾತ್ರೆಯು ಇಂದಿನಿಂದ ವೈಭವದಿಂದ ಪ್ರಾರಂಭವಾಗುತ್ತಿದೆ. ಭಗವಂತನೇ ಭಕ್ತರ ಬಳಿಗೆ ಬರುವ ಈ ಅದ್ಭುತ ಮತ್ತು ಐತಿಹಾಸಿಕ ಕ್ಷಣವನ್ನು ಕಣ್ಣುತುಂಬಿಕೊಳ್ಳಲು ಜಗತ್ತಿನಾದ್ಯಂತ ಲಕ್ಷಾಂತರ ಜನರು ಪುರಿಗೆ ಆಗಮಿಸುತ್ತಾರೆ. ಈ ಭವ್ಯ ಹಬ್ಬದ ವಾತಾವರಣದಲ್ಲಿ ಭಕ್ತರು ಧರಿಸುವ ಉಡುಪುಗಳಲ್ಲಿ ಹಳದಿ ಮತ್ತು ಕೆಂಪು ಬಣ್ಣಗಳು ಅತ್ಯಂತ ಪ್ರಮುಖವಾಗಿ ಎದ್ದು ಕಾಣುತ್ತವೆ. ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳ ಹಿಂದಿರುವ ರಹಸ್ಯವೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳನ್ನೇ ಆಯ್ಕೆ ಮಾಡುವುದೇಕೆ ಗೊತ್ತಾ?  ಇಲ್ಲಿದೆ ಆಧ್ಯಾತ್ಮಿಕ ಮಹತ್ವ!
ಪುರಿ ಜಗನ್ನಾಥ ರಥಯಾತ್ರೆImage Credit source: Getty Images
ಅಕ್ಷತಾ ವರ್ಕಾಡಿ
|

Updated on: Jul 16, 2026 | 9:19 AM

Share

ಮುಖ್ಯಾಂಶಗಳು

  • ಪುರಿ ಜಗನ್ನಾಥ ರಥಯಾತ್ರೆಯು ಭಕ್ತಿ, ಬಣ್ಣ ಮತ್ತು ಸಂಪ್ರದಾಯಗಳ ಸಂಗಮ.
  • ಜಗನ್ನಾಥನ ನಂದಿಘೋಷ ರಥವನ್ನು ಹಳದಿ-ಕೆಂಪು ಬಣ್ಣಗಳಿಂದ ಅಲಂಕರಿಸಲಾಗುತ್ತದೆ.
  • ವಿಷ್ಣುವಿಗೆ ಪ್ರಿಯವಾದ ಹಳದಿ ಬಣ್ಣವು ಶುಭ ತಂದರೆ, ಕೆಂಪು ಬಣ್ಣವು ಸೌಭಾಗ್ಯದ ಸಂಕೇತ.

ಒಡಿಶಾದ ಪುರಿಯಲ್ಲಿ ನಡೆಯುವ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆಯು ಇಂದು, ಅಂದರೆ ಜುಲೈ 16 (ಗುರುವಾರ) ದಿಂದ ಅತ್ಯಂತ ವೈಭವದಿಂದ ಪ್ರಾರಂಭವಾಗುತ್ತಿದೆ. ಈ ಒಂಬತ್ತು ದಿನಗಳ ಸುದೀರ್ಘ ರಥೋತ್ಸವದಲ್ಲಿ ಜಗನ್ನಾಥನು ತನ್ನ ಒಡಹುಟ್ಟಿದವರಾದ ಬಲಭದ್ರ ಮತ್ತು ಸುಭದ್ರೆಯೊಂದಿಗೆ ಮುಖ್ಯ ಆಲಯದಿಂದ ಗುಂಡಿಚಾ ದೇವಸ್ಥಾನಕ್ಕೆ ಪಯಣಿಸುತ್ತಾನೆ. ಭಗವಂತನೇ ಭಕ್ತರ ಬಳಿಗೆ ಬರುವ ಈ ಅದ್ಭುತ ಮತ್ತು ಐತಿಹಾಸಿಕ ಕ್ಷಣವನ್ನು ಕಣ್ಣುತುಂಬಿಕೊಳ್ಳಲು ಜಗತ್ತಿನಾದ್ಯಂತ ಲಕ್ಷಾಂತರ ಜನರು ಪುರಿಗೆ ಆಗಮಿಸುತ್ತಾರೆ.

ಜಗನ್ನಾಥ ರಥಯಾತ್ರೆಯು ಕೇವಲ ಧಾರ್ಮಿಕ ಆಚರಣೆಯಲ್ಲ, ಅದು ಬಣ್ಣಗಳು, ಭಕ್ತಿ ಮತ್ತು ಸಂಪ್ರದಾಯಗಳ ಮಹಾ ಸಂಗಮವಾಗಿದೆ. ಪುರಿಯ ಬೀದಿಗಳಲ್ಲಿ ಲಕ್ಷಾಂತರ ಭಕ್ತರು ಒಟ್ಟಿಗೆ ಸೇರಿ ರಥವನ್ನು ಎಳೆಯುವಾಗ ಭಕ್ತಿಯ ಪರಕಾಷ್ಠೆ ಕಣ್ಣಿಗೆ ಕಟ್ಟುತ್ತದೆ. ಈ ಭವ್ಯ ಹಬ್ಬದ ವಾತಾವರಣದಲ್ಲಿ ಭಕ್ತರು ಧರಿಸುವ ಉಡುಪುಗಳಲ್ಲಿ ಹಳದಿ ಮತ್ತು ಕೆಂಪು ಬಣ್ಣಗಳು ಅತ್ಯಂತ ಪ್ರಮುಖವಾಗಿ ಎದ್ದು ಕಾಣುತ್ತವೆ. ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳ ಹಿಂದಿರುವ ರಹಸ್ಯವೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಂದಿಘೋಷ ರಥ ಮತ್ತು ಬಣ್ಣಗಳ ದೈವಿಕ ನಂಟು:

ಶ್ರೀ ಜಗನ್ನಾಥ ದೇವರ ಮುಖ್ಯ ರಥವಾದ ‘ನಂದಿಘೋಷ’ ರಥವನ್ನು ಮುಖ್ಯವಾಗಿ ಕೆಂಪು ಮತ್ತು ಹಳದಿ ಬಣ್ಣದ ವಸ್ತ್ರಗಳಿಂದಲೇ ಅಲಂಕರಿಸಲಾಗುತ್ತದೆ. ಶ್ರೀ ನರಸಿಂಹ ದೇವರಿಗೆ ಸಮರ್ಪಿತವಾಗಿರುವ ಈ ಭವ್ಯ ರಥವು 16 ಚಕ್ರಗಳನ್ನು ಹೊಂದಿದೆ. ಭಕ್ತರು ತಮ್ಮ ಆರಾಧ್ಯ ದೈವನ ರಥದ ಬಣ್ಣಗಳನ್ನೇ ಹೋಲುವ ಉಡುಪುಗಳನ್ನು ಧರಿಸುವ ಮೂಲಕ ಭಗವಂತನೊಂದಿಗೆ ನೇರ ಆಧ್ಯಾತ್ಮಿಕ ಸಂಪರ್ಕ ಹೊಂದಲು ಬಯಸುತ್ತಾರೆ. ಇದು ಕೇವಲ ಬಣ್ಣಗಳ ಆಯ್ಕೆಯಲ್ಲ, ಭಕ್ತಿಯ ಸಾಕಾರ ರೂಪವಾಗಿದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ರಥಯಾತ್ರೆಯಲ್ಲಿ ಹಳದಿ ಬಣ್ಣದ ಮಹತ್ವ ಮತ್ತು ಪವಿತ್ರತೆ:

ಹಿಂದೂ ಧರ್ಮ ಮತ್ತು ಸಂಪ್ರದಾಯಗಳಲ್ಲಿ ಹಳದಿ ಬಣ್ಣಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಜಗನ್ನಾಥನನ್ನು ಜಗತ್ಪಾಲಕನಾದ ಶ್ರೀಮನ್ನಾರಾಯಣನ (ವಿಷ್ಣು) ಸ್ವರೂಪವೆಂದು ಆರಾಧಿಸಲಾಗುತ್ತದೆ ಮತ್ತು ವಿಷ್ಣುವಿಗೆ ಹಳದಿ ವಸ್ತ್ರ (ಪೀತಾಂಬರ) ಎಂದರೆ ಅತ್ಯಂತ ಪ್ರೀತಿ. ಹಾಗಾಗಿ, ರಥಯಾತ್ರೆಯ ಸಮಯದಲ್ಲಿ ಹಳದಿ ಬಟ್ಟೆಗಳನ್ನು ಧರಿಸುವುದು ದೈವಿಕ ಆಶೀರ್ವಾದ, ಜ್ಞಾನ, ಶಾಂತಿ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ.

ಕೆಂಪು ಬಣ್ಣದ ಆಧ್ಯಾತ್ಮಿಕ ಶಕ್ತಿ ಮತ್ತು ಉತ್ಸಾಹ:

ರಥೋತ್ಸವದಲ್ಲಿ ಹಳದಿಯಷ್ಟೇ ಪ್ರಮುಖವಾಗಿ ಕಾಣಿಸಿಕೊಳ್ಳುವ ಮತ್ತೊಂದು ಬಣ್ಣವೆಂದರೆ ಕೆಂಪು. ಭಾರತೀಯ ಸಂಪ್ರದಾಯದಲ್ಲಿ ಕೆಂಪು ಬಣ್ಣವು ಶಕ್ತಿ, ಚೈತನ್ಯ, ಆಧ್ಯಾತ್ಮಿಕ ಉತ್ಸಾಹ ಮತ್ತು ಸೌಭಾಗ್ಯದ ಸಂಕೇತವಾಗಿದೆ. ರಥವನ್ನು ಎಳೆಯಲು ಬೇಕಾದ ಭಕ್ತಿಯ ಶಕ್ತಿಯನ್ನು ಹಾಗೂ ಹಬ್ಬದ ಸಂಭ್ರಮವನ್ನು ಈ ಬಣ್ಣವು ಭಕ್ತರಲ್ಲಿ ಜಾಗೃತಗೊಳಿಸುತ್ತದೆ. ಈ ಕೆಂಪು ಮತ್ತು ಹಳದಿ ಬಣ್ಣಗಳ ಸಂಯೋಜನೆಯು ರಥಯಾತ್ರೆಗೆ ಅತ್ಯಂತ ರೋಮಾಂಚಕ ಮತ್ತು ಆಕರ್ಷಕ ನೋಟವನ್ನು ನೀಡುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪಾವಗಡ - ಆಂಧ್ರ ಪ್ರದೇಶ ಗಡಿಯಲ್ಲಿ ಕೋವಿಡ್ ಚೆಕ್​ಪೋಸ್ಟ್: ತಪಾಸಣೆ ಶುರು
ಪಾವಗಡ - ಆಂಧ್ರ ಪ್ರದೇಶ ಗಡಿಯಲ್ಲಿ ಕೋವಿಡ್ ಚೆಕ್​ಪೋಸ್ಟ್: ತಪಾಸಣೆ ಶುರು
ಸಚಿವ ಸ್ಥಾನಕ್ಕಾಗಿ ದೆಹಲಿಗೆ ದೌಡಾಯಿಸಿದ ಆಕಾಂಕ್ಷಿಗಳು
ಸಚಿವ ಸ್ಥಾನಕ್ಕಾಗಿ ದೆಹಲಿಗೆ ದೌಡಾಯಿಸಿದ ಆಕಾಂಕ್ಷಿಗಳು
ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ಮೇಷ ಮತ್ತು ವೃಷಭ ರಾಶಿಯವರಿಗೆ ಭಾರಿ ಧನಲಾಭದ ಯೋಗ
ಮೇಷ ಮತ್ತು ವೃಷಭ ರಾಶಿಯವರಿಗೆ ಭಾರಿ ಧನಲಾಭದ ಯೋಗ
ಸಚಿವ ಸಂಪುಟ ವಿಸ್ತರಣೆ ಜಟಾಪಟಿ: ಬಿಕೆ ಹರಿಪ್ರಸಾದ್ ಏನಂದ್ರು ನೋಡಿ​​
ಸಚಿವ ಸಂಪುಟ ವಿಸ್ತರಣೆ ಜಟಾಪಟಿ: ಬಿಕೆ ಹರಿಪ್ರಸಾದ್ ಏನಂದ್ರು ನೋಡಿ​​
ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದಿದ್ದು ಹೇಗೆ?
ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದಿದ್ದು ಹೇಗೆ?
ಚಿಕ್ಕಮಗಳೂರು: 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಕಾರ್ಮಿಕನ ರಕ್ಷಣೆ
ಚಿಕ್ಕಮಗಳೂರು: 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಕಾರ್ಮಿಕನ ರಕ್ಷಣೆ
ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ ಜೊತೆ ಡಿಕೆಶಿ ಸುದೀರ್ಘ ಚರ್ಚೆ
ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ ಜೊತೆ ಡಿಕೆಶಿ ಸುದೀರ್ಘ ಚರ್ಚೆ
ವೀಕೆಂಡ್‌ನಲ್ಲೂ ನಡೆಯಲಿದೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ
ವೀಕೆಂಡ್‌ನಲ್ಲೂ ನಡೆಯಲಿದೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ
ಸಿಎಂ ವಿಜಯ್​ಗೆ ಶಾಕ್; ಬಿಜೆಪಿಯಿಂದ ಟಿವಿಕೆ ನಾಯಕನ ಲಂಚದ ವಿಡಿಯೋ ಬಿಡುಗಡೆ
ಸಿಎಂ ವಿಜಯ್​ಗೆ ಶಾಕ್; ಬಿಜೆಪಿಯಿಂದ ಟಿವಿಕೆ ನಾಯಕನ ಲಂಚದ ವಿಡಿಯೋ ಬಿಡುಗಡೆ