Ram Navami 2024: ಪ್ರಾಚೀನ ಶ್ರೀನಾಥ ದೇವಾಲಯದಿಂದ ಅಯೋಧ್ಯೆ ರಾಮನಿಗೆ “ಮಥಾಡಿ” ಮಹಾಪ್ರಸಾದ!

ಮೊದಲ ಬಾರಿಗೆ, 'ಮಥಾಡಿ' ಎಂದು ಕರೆಯಲ್ಪಡುವ ಮಹಾಪ್ರಸಾದವನ್ನು ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀಕೃಷ್ಣನ ಪ್ರಾಚೀನ ಶ್ರೀನಾಥ ದೇವಾಲಯದಿಂದ ಅಯೋಧ್ಯೆ ರಾಮನಿಗೆ ಕಳುಹಿಸಲಾಗುತ್ತಿದೆ. ಈ ಯಾತ್ರೆ ಭಾನುವಾರ ಶ್ರೀನಾಥನ ದೇವಸ್ಥಾನದಿಂದ ಪ್ರಾರಂಭವಾಗಿದ್ದು ಇಂದು (ಎ. 17) ಶ್ರೀ ರಾಮ ನವಮಿಯಂದು ಅಯೋಧ್ಯೆಯನ್ನು ತಲುಪಲಿದೆ.

Ram Navami 2024: ಪ್ರಾಚೀನ ಶ್ರೀನಾಥ ದೇವಾಲಯದಿಂದ ಅಯೋಧ್ಯೆ ರಾಮನಿಗೆ ಮಥಾಡಿ ಮಹಾಪ್ರಸಾದ!
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 17, 2024 | 10:18 AM

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಗವಾನ್ ರಾಮನ ಪಟ್ಟಾಭಿಷೇಕದ ನಂತರ ನಡೆಯಲಿರುವ ಮೊದಲ ಶ್ರೀರಾಮ ನವಮಿ ಆಚರಣೆಗೆ ಇಡೀ ದೇಶ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಮೊದಲ ಬಾರಿಗೆ, ‘ಮಥಾಡಿ’ ಎಂದು ಕರೆಯಲ್ಪಡುವ ಮಹಾಪ್ರಸಾದವನ್ನು ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀಕೃಷ್ಣನ ಪ್ರಾಚೀನ ಶ್ರೀನಾಥ ದೇವಾಲಯದಿಂದ ಅಯೋಧ್ಯೆ ರಾಮನಿಗೆ ಕಳುಹಿಸಲಾಗುತ್ತಿದೆ. ಈ ಯಾತ್ರೆ ಭಾನುವಾರ ಶ್ರೀನಾಥನ ದೇವಸ್ಥಾನದಿಂದ ಪ್ರಾರಂಭವಾಗಿದ್ದು ಇಂದು (ಎ. 17) ಶ್ರೀ ರಾಮ ನವಮಿಯಂದು ಅಯೋಧ್ಯೆಯನ್ನು ತಲುಪಲಿದೆ. ಈ ಮಥಾಡಿ ಪ್ರಸಾದವನ್ನು ಬಾಲರಾಮನಿಗೆ ನೈವೇದ್ಯ ಮಾಡಿದ ಬಳಿಕ, ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುವುದು. ಈ ನಿಟ್ಟಿನಲ್ಲಿ, ಒಂದು ಲಕ್ಷ ಮಥಾಡಿ ಮಹಾಪ್ರಸಾದವನ್ನು ಅಯೋಧ್ಯೆಗೆ ಕಳುಹಿಸಲಾಗುತ್ತಿದೆ ಎಂದು ಶ್ರೀನಾಥ ದೇವಾಲಯದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಮಥಾಡಿ “ಮಹಾಪ್ರಸಾದಂ ಯಾತ್ರೆ”ಯು ನಾಥದ್ವಾರದಿಂದ ಪ್ರಾರಂಭವಾಗಿ ಭಿಲ್ವಾರಾ, ಜೈಪುರ, ಮಥುರಾ ಜತಿಪುರ ಮತ್ತು ಲಕ್ನೋ ಮೂಲಕ ಅಯೋಧ್ಯೆಯನ್ನು ತಲುಪುತ್ತದೆ. ರಾಮನವಮಿಯ ಸಂದರ್ಭದಲ್ಲಿ, ಅಯೋಧ್ಯೆಯಲ್ಲಿ ವಿತರಿಸಲಾಗುವ ಈ ಮಥಾಡಿ ಪ್ರಸಾದವನ್ನು ಶ್ರೀನಾಥ ದೇವಾಲಯದಲ್ಲಿ ಉಚಿತವಾಗಿ ವಿತರಿಸಲಾಗುವುದು.

ಇದನ್ನೂ ಓದಿ: ಅಯೋಧ್ಯೆ ರಾಮನಿಗೆ ಅರ್ಪಣೆಯಾಗಲಿದೆ 1,11,111 ಕೆಜಿ ಲಡ್ಡು

ಮಥಾಡಿ ಮಹಾಪ್ರಸಾದ ಎಂದರೇನು?

‘ಮಥಾಡಿ’ ಎಂಬ ಆಹಾರ ಪದಾರ್ಥವನ್ನು ಶ್ರೀಕೃಷ್ಣನ ಪ್ರಸಾದವಾಗಿ ನೀಡಲಾಗುತ್ತದೆ. ಇದು ಒಂದು ವಿಶೇಷ ಖಾದ್ಯ. ಇದನ್ನು ಉದಯಪುರ ನಾಥದ್ವಾರದ ಶ್ರೀನಾಥ ದೇವಸ್ಥಾನದಲ್ಲಿ ಮಾತ್ರ ತಯಾರಿಸಲಾಗುತ್ತದೆ. ಈ ಪ್ರಸಾದವು ದೇಶದ ಬೇರೆ ಯಾವುದೇ ದೇವಾಲಯದಲ್ಲಿ ಕಂಡುಬರುವುದಿಲ್ಲ ಎಂಬುದೇ ಇದರ ವಿಶೇಷ. ಈ ಮಥಾಡಿ ಪ್ರಸಾದವನ್ನು ಬೇಗನೆ ಹಾಳಾಗದಂತೆ ದೀರ್ಘಕಾಲದವರೆಗೆ ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!