AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Navami 2024: ಪ್ರಾಚೀನ ಶ್ರೀನಾಥ ದೇವಾಲಯದಿಂದ ಅಯೋಧ್ಯೆ ರಾಮನಿಗೆ “ಮಥಾಡಿ” ಮಹಾಪ್ರಸಾದ!

ಮೊದಲ ಬಾರಿಗೆ, 'ಮಥಾಡಿ' ಎಂದು ಕರೆಯಲ್ಪಡುವ ಮಹಾಪ್ರಸಾದವನ್ನು ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀಕೃಷ್ಣನ ಪ್ರಾಚೀನ ಶ್ರೀನಾಥ ದೇವಾಲಯದಿಂದ ಅಯೋಧ್ಯೆ ರಾಮನಿಗೆ ಕಳುಹಿಸಲಾಗುತ್ತಿದೆ. ಈ ಯಾತ್ರೆ ಭಾನುವಾರ ಶ್ರೀನಾಥನ ದೇವಸ್ಥಾನದಿಂದ ಪ್ರಾರಂಭವಾಗಿದ್ದು ಇಂದು (ಎ. 17) ಶ್ರೀ ರಾಮ ನವಮಿಯಂದು ಅಯೋಧ್ಯೆಯನ್ನು ತಲುಪಲಿದೆ.

Ram Navami 2024: ಪ್ರಾಚೀನ ಶ್ರೀನಾಥ ದೇವಾಲಯದಿಂದ ಅಯೋಧ್ಯೆ ರಾಮನಿಗೆ ಮಥಾಡಿ ಮಹಾಪ್ರಸಾದ!
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Apr 17, 2024 | 10:18 AM

Share

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಗವಾನ್ ರಾಮನ ಪಟ್ಟಾಭಿಷೇಕದ ನಂತರ ನಡೆಯಲಿರುವ ಮೊದಲ ಶ್ರೀರಾಮ ನವಮಿ ಆಚರಣೆಗೆ ಇಡೀ ದೇಶ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಮೊದಲ ಬಾರಿಗೆ, ‘ಮಥಾಡಿ’ ಎಂದು ಕರೆಯಲ್ಪಡುವ ಮಹಾಪ್ರಸಾದವನ್ನು ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀಕೃಷ್ಣನ ಪ್ರಾಚೀನ ಶ್ರೀನಾಥ ದೇವಾಲಯದಿಂದ ಅಯೋಧ್ಯೆ ರಾಮನಿಗೆ ಕಳುಹಿಸಲಾಗುತ್ತಿದೆ. ಈ ಯಾತ್ರೆ ಭಾನುವಾರ ಶ್ರೀನಾಥನ ದೇವಸ್ಥಾನದಿಂದ ಪ್ರಾರಂಭವಾಗಿದ್ದು ಇಂದು (ಎ. 17) ಶ್ರೀ ರಾಮ ನವಮಿಯಂದು ಅಯೋಧ್ಯೆಯನ್ನು ತಲುಪಲಿದೆ. ಈ ಮಥಾಡಿ ಪ್ರಸಾದವನ್ನು ಬಾಲರಾಮನಿಗೆ ನೈವೇದ್ಯ ಮಾಡಿದ ಬಳಿಕ, ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುವುದು. ಈ ನಿಟ್ಟಿನಲ್ಲಿ, ಒಂದು ಲಕ್ಷ ಮಥಾಡಿ ಮಹಾಪ್ರಸಾದವನ್ನು ಅಯೋಧ್ಯೆಗೆ ಕಳುಹಿಸಲಾಗುತ್ತಿದೆ ಎಂದು ಶ್ರೀನಾಥ ದೇವಾಲಯದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಮಥಾಡಿ “ಮಹಾಪ್ರಸಾದಂ ಯಾತ್ರೆ”ಯು ನಾಥದ್ವಾರದಿಂದ ಪ್ರಾರಂಭವಾಗಿ ಭಿಲ್ವಾರಾ, ಜೈಪುರ, ಮಥುರಾ ಜತಿಪುರ ಮತ್ತು ಲಕ್ನೋ ಮೂಲಕ ಅಯೋಧ್ಯೆಯನ್ನು ತಲುಪುತ್ತದೆ. ರಾಮನವಮಿಯ ಸಂದರ್ಭದಲ್ಲಿ, ಅಯೋಧ್ಯೆಯಲ್ಲಿ ವಿತರಿಸಲಾಗುವ ಈ ಮಥಾಡಿ ಪ್ರಸಾದವನ್ನು ಶ್ರೀನಾಥ ದೇವಾಲಯದಲ್ಲಿ ಉಚಿತವಾಗಿ ವಿತರಿಸಲಾಗುವುದು.

ಇದನ್ನೂ ಓದಿ: ಅಯೋಧ್ಯೆ ರಾಮನಿಗೆ ಅರ್ಪಣೆಯಾಗಲಿದೆ 1,11,111 ಕೆಜಿ ಲಡ್ಡು

ಮಥಾಡಿ ಮಹಾಪ್ರಸಾದ ಎಂದರೇನು?

‘ಮಥಾಡಿ’ ಎಂಬ ಆಹಾರ ಪದಾರ್ಥವನ್ನು ಶ್ರೀಕೃಷ್ಣನ ಪ್ರಸಾದವಾಗಿ ನೀಡಲಾಗುತ್ತದೆ. ಇದು ಒಂದು ವಿಶೇಷ ಖಾದ್ಯ. ಇದನ್ನು ಉದಯಪುರ ನಾಥದ್ವಾರದ ಶ್ರೀನಾಥ ದೇವಸ್ಥಾನದಲ್ಲಿ ಮಾತ್ರ ತಯಾರಿಸಲಾಗುತ್ತದೆ. ಈ ಪ್ರಸಾದವು ದೇಶದ ಬೇರೆ ಯಾವುದೇ ದೇವಾಲಯದಲ್ಲಿ ಕಂಡುಬರುವುದಿಲ್ಲ ಎಂಬುದೇ ಇದರ ವಿಶೇಷ. ಈ ಮಥಾಡಿ ಪ್ರಸಾದವನ್ನು ಬೇಗನೆ ಹಾಳಾಗದಂತೆ ದೀರ್ಘಕಾಲದವರೆಗೆ ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ