Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Navami

Ram Navami

ಪ್ರಭು ಶ್ರೀರಾಮಚಂದ್ರ ಹುಟ್ಟಿದ ದಿನವನ್ನು ರಾಮ ನವಮಿ ಎಂದು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಈ ದಿನ ರಾಮ ನವಮಿ ಹಬ್ಬದ ಜೊತೆಗೆ ಚೈತ್ರ ನವರಾತ್ರಿ ಕೊನೆಯ ದಿನ. ವಿಷ್ಣುವು ರಾಮನವಮಿಯಂದು ರಾಮನ ಅವತಾರ ತಾಳಿದನು ಎಂಬ ನಂಬಿಕೆ ಇದೆ. ವಾಲ್ಮೀಕಿ ರಾಮಾಯಣದ ಪ್ರಕಾರ, ಭಗವಾನ್ ರಾಮನು ಕರ್ಕಾಟಕ ಲಗ್ನದಲ್ಲಿ ಮಧ್ಯಾಹ್ನ 12 ಗಂಟೆಗೆ ಜನಿಸಿದನು. ಹಾಗಾಗಿಯೇ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನವನ್ನು ಪವಿತ್ರ ದಿನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.ಹಿಂದೂ ಧರ್ಮಗ್ರಂಥಗಳ ಪ್ರಕಾರ, ರಾಜ ದಶರಥನಿಗೆ ಮೂವರು ಹೆಂಡತಿಯರಿದ್ದರು ಆದರೆ ಅವನಿಗೆ ಮಕ್ಕಳಿರಲಿಲ್ಲ, ಆದ್ದರಿಂದ ರಾಜ ದಶರಥನು ಮಹಾ ಋಷಿ ವಸಿಷ್ಠರ ಸಲಹೆಯ ಮೇರೆಗೆ ಪುತ್ರ ಪ್ರಾಪ್ತಿಗಾಗಿ ಅಶ್ವಮೇಧ ಯಾಗವನ್ನು ಮಾಡಿದನು. ಬಳಿಕ ಅವರು ಆಶೀರ್ವದಿಸಿದ ಪಾಯಸವನ್ನು ಅವನ ಹೆಂಡತಿಯರಿಗೆ ಕೊಡಲು ಹೇಳಿದರು. ಬಳಿಕ ದಶರಥನ ಹೆಂಡತಿಯರು 4 ಗಂಡು ಮಕ್ಕಳ ತಾಯಿಯಾದರು. ಅದರಲ್ಲಿ ಮೊದಲನೇಯವನು ರಾಮ. ಕೌಸಲ್ಯಳು ಚೈತ್ರ ಮಾಸದ ಒಂಬತ್ತನೇ ದಿನದಂದು ಭಗವಾನ್ ರಾಮನಿಗೆ ಜನ್ಮ ನೀಡಿದಳು. ಸುಮಿತ್ರಾ ಶತ್ರುಘ್ನ ಮತ್ತು ಲಕ್ಷ್ಮಣನಿಗೆ ಜನ್ಮ ನೀಡಿದಳು, ಕೈಕೇಯಿ ಭರತನಿಗೆ ಜನ್ಮ ನೀಡಿದಳು. ಅಂದಿನಿಂದ ಭಗವಾನ್ ಶ್ರೀ ರಾಮನ ಜನ್ಮ ದಿನವನ್ನು ವಿಶ್ವದಾದ್ಯಂತ ಹಿಂದೂ ಭಕ್ತರು ಬಹಳ ವೈಭವದಿಂದ ಆಚರಿಸುತ್ತಾರೆ

ಇನ್ನೂ ಹೆಚ್ಚು ಓದಿ

Sita Navami 2025: ದಾಂಪತ್ಯದಲ್ಲಿ ಸಂತೋಷ ಹಾಗೂ ಸಾಮರಸ್ಯಕ್ಕಾಗಿ ಸೀತಾ ನವಮಿಯಂದು ಈ ಪರಿಹಾರ ಮಾಡಿ

ಸೀತಾ ನವಮಿ ಅಥವಾ ಸೀತಾ ಜಯಂತಿಯು ತಾಯಿ ಸೀತೆಯ ಜನ್ಮದಿನವಾಗಿದ್ದು, ವೈಶಾಖ ಶುಕ್ಲ ಪಕ್ಷದ ನವಮಿಯಂದು ಆಚರಿಸಲಾಗುತ್ತದೆ. ಮಹಿಳೆಯರು ಈ ದಿನ ಉಪವಾಸ ಮಾಡಿ, ಸುಖಮಯ ದಾಂಪತ್ಯ ಮತ್ತು ಕುಟುಂಬದ ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಶ್ರೀರಾಮ ಮತ್ತು ಲಕ್ಷ್ಮೀ ದೇವಿಯ ಪೂಜೆ, ಭೂಮಿ ಪೂಜೆ ಮುಂತಾದ ವಿಧಿವಿಧಾನಗಳು ಈ ದಿನದ ಪ್ರಮುಖ ಅಂಶಗಳಾಗಿವೆ.

ರಾಮನವಮಿ: ಅಯೋಧ್ಯೆಯಲ್ಲಿ ಬಾಲ ರಾಮನ ಹಣೆ ಸ್ಪರ್ಶಿಸಿದ ಸೂರ್ಯ ರಶ್ಮಿ

ಇಂದು ರಾಮನವಮಿ, ದೇಶಾದ್ಯಂತ ಹಿಂದೂಗಳು ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದಾರೆ. ಇಂದು ಅಯೋಧ್ಯೆಯಲ್ಲಿರುವ ಬಾಲ ರಾಮನ ಹಣೆಯನ್ನು ಸೂರ್ಯ ರಶ್ಮಿ ಸ್ಪರ್ಶಿಸಿದೆ. ದೇಶ ಮತ್ತು ಪ್ರಪಂಚದ ಕೋಟ್ಯಂತರ ಜನರು ಈ ಅದ್ಭುತ ದೃಶ್ಯವನ್ನು ವೀಕ್ಷಿಸಿದರು. ರಾಮ ಮಂದಿರದಲ್ಲಿ ಆರತಿಯನ್ನು ನೆರವೇರಿಸಲಾಯಿತು. ಭಕ್ತರ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು, ಬಸ್ತಿ-ಅಯೋಧ್ಯೆ ಚತುಷ್ಪಥದಲ್ಲಿ ಭಾರೀ ವಾಹನಗಳ ಸಂಚಾರವನ್ನು ಏಪ್ರಿಲ್ 7 ರವರೆಗೆ ಬದಲಾಯಿಸಲಾಗಿದೆ.

Ram Navami 2025: ರಾಮ ನವಮಿಯ ಈ ಶುಭ ದಿನ ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ಕೋರಲು ಇಲ್ಲಿವೆ ಅರ್ಥಪೂರ್ಣ ಸಂದೇಶಗಳು

ಪ್ರತಿವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನದಂದು ರಾಮ ನವಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಏಪ್ರಿಲ್‌ 6 ರಂದು ಅಂದರೆ ಇಂದು ರಾಮ ನವಮಿ. ಈ ದಿನ ಭಕ್ತರು ರಾಮ ದೇವರನ್ನು ಬಹಳ ಭಕ್ತಿ ಪೂರ್ವಕವಾಗಿ ಪೂಜಿಸುತ್ತಾರೆ. ಈ ದಿನ ನೀವೇನಾದರೂ ನಿಮ್ಮ ಪ್ರೀತಿ ಪಾತ್ರರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಬೇಕೆಂದಿದ್ದರೆ ಇಲ್ಲಿವೆ ಒಂದಷ್ಟು ಹಬ್ಬದ ಅರ್ಥಪೂರ್ಣ ಸಂದೇಶಗಳು.

Rama Navami 2025: ರಾಮನವಮಿ ಹಬ್ಬಕ್ಕೆ ಸುಲಭವಾಗಿ ಮಾಡಿ ಕ್ಯಾರೆಟ್ ಪಾಯಸ

ಚೈತ್ರ ನವರಾತ್ರಿಯ ಕೊನೆಯ ದಿನವಾದ ರಾಮನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಹಾಗಾಗಿ ಈ ದಿನ ಕೋಸಂಬರಿ, ಪಾನಕ ಜೊತೆಗೆ ವಿವಿಧ ರೀತಿಯ ತಿಂಡಿ, ತಿನಿಸುಗಳನ್ನು ಮಾಡುವ ಮೂಲಕ ದೇವರಿಗಿಟ್ಟು ಊಟ ಮಾಡುವ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿದೆ. ಆದರೆ ಒಂದೇ ಬಗೆಯ ಖಾದ್ಯಗಳನ್ನು ಮಾಡುವ ಬದಲು ಸರಳವಾಗಿ ಮತ್ತು ರುಚಿಯಾಗಿ ಮಾಡುವ ಸಿಹಿ ತಿನಿಸುಗಳನ್ನು ಟ್ರೈ ಮಾಡಿ, ಪಾಕವಿಧಾನ ಇಲ್ಲಿದೆ.

Ram Navami 2025: ಈ ವರ್ಷದ ರಾಮ ನವಮಿ ಈ ಮೂರು ರಾಶಿಯವರಿಗೆ ಅದೃಷ್ಟ ತರಲಿದೆ

ಈ ವರ್ಷದ ರಾಮನವಮಿಯಂದು ಪುಷ್ಯ ನಕ್ಷತ್ರ ಮತ್ತು ಶುಭ ಯೋಗಗಳ ಸಮ್ಮಿಲನವಿದೆ. ಮೇಷ, ಕರ್ಕಾಟಕ ಮತ್ತು ಧನು ರಾಶಿಯವರಿಗೆ ಈ ದಿನ ಅತ್ಯಂತ ಶುಭಕರವಾಗಿದೆ. ಉದ್ಯೋಗ, ವ್ಯಾಪಾರ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಯಶಸ್ಸು ದೊರೆಯಲಿದೆ ಎಂದು ಜ್ಯೋತಿಷ್ಯವು ತಿಳಿಸುತ್ತದೆ. ಶ್ರೀರಾಮನ ಆಶೀರ್ವಾದವು ಅವರ ಮೇಲೆ ಇರಲಿದೆ.

Rama Navami 2025: ರಾಮನವಮಿಯ ದಿನ ಮಾಡುವ ಪಾನಕವನ್ನು ಕುಡಿಯದೆ ಇರಬೇಡಿ!

ಶ್ರೀರಾಮ ಕೋಟ್ಯಾಂತರ ಭಕ್ತರ ಆರಾಧ್ಯ ದೇವ. ಹಾಗಾಗಿ ರಾಮನವಮಿಯನ್ನು ಎಲ್ಲಾ ಕಡೆಗಳಲ್ಲಿಯೂ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಈ ಬಾರಿ ಏ. 06 ಭಾನುವಾರದಂದು ಈ ದಿನವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಆದರೆ ಈ ದಿನದ ವಿಶೇಷ ಏನೆಂದರೆ, ರಾಮನ ನೈವೇದ್ಯಕ್ಕೆ ಹೋಳಿಗೆ, ಚಕ್ಕುಲಿಗಳಿರುವುದಿಲ್ಲ ಬದಲಾಗಿ ಕೋಸಂಬರಿ, ಪಾನಕಗಳಿರುತ್ತವೆ. ಯಾಕೆ ಹೀಗೆ? ರಾಮನವಮಿಯ ದಿನ ಬೆಲ್ಲದ ಪಾನಕ, ಮಜ್ಜಿಗೆ ಈ ರೀತಿಯ ಖಾದ್ಯಗಳನ್ನೇ ಹೆಚ್ಚಾಗಿ ಸೇವನೆ ಮಾಡಬೇಕು ಎನ್ನಲು ಕಾರಣವೇನು ತಿಳಿದುಕೊಳ್ಳಿ.

ಏ.6ರಂದು ಚಿಕನ್, ಮಟನ್ ಸಿಗಲ್ಲ: ಈ ಭಾನುವಾರದ ಬಾಡೂಟಕ್ಕೆ ಬಿತ್ತು ಬ್ರೇಕ್..!

ಭಾನುವಾರ ಬಂದ್ರೆ ಸಾಕು ಪಾರ್ಟಿ ಮೂಡ್​ನಲ್ಲಿರುತ್ತಾರೆ. ಭಾನುವಾರ ಸರ್ಕಾರಿ ಸೇರಿದಂತ ಖಾಸಗಿ ಕಚೇರಿಗಳಿಗೆ ರಜಾ. ಹೀಗಾಗಿ ಅಂದು ಮಜಾ ದಿನವಾಗಿರುತ್ತೆ. ಅದರಲ್ಲೂ ಭಾನುವಾರದ ಬಾಡೂಟ ಎಲ್ಲೆಡೆ ಘಮ ಘಮಿಸಿರುತ್ತೆ. ಆದ್ರೆ, ಈ ಭಾನುವಾರದ ಬಾಡೂಟಕ್ಕೆ ಬ್ರೇಕ್ ಬೀಳುವುದು ಗ್ಯಾರಂಟಿ. ಯಾಕಂದ್ರೆ, ಏಪ್ರಿಲ್ 06ರಂದು ಬೆಂಗಳೂರಿನಲ್ಲಿ ಚಿಕನ್‌ ಹಾಗೂ ಮಟನ್‌ ಸಿಗುವುದಿಲ್ಲ. ಇದರಿಂದ ಪ್ರತಿ ಭಾನುವಾರ ಮಾಂಸ ಸೇವಿಸುತ್ತಿದ್ದ ನಾನ್​​ ವೆಜ್​ ಪ್ರಿಯರು ಈ ವಾರ ಸಸ್ಯಾಹಾರಿಗಳಾಗಬೇಕಿದೆ.

Rama Navami 2025: ರಾಮ ನವಮಿ ಹಬ್ಬಕ್ಕೆ ಈ ರೀತಿ ಮನೆಯಲ್ಲೇ ಸಿಂಪಲ್ಲಾಗಿ ಕೋಸಂಬರಿ-ಪಾನಕ ತಯಾರಿಸಿ

ನಂಬಿಕೆಗಳ ಪ್ರಕಾರ ಶ್ರೀರಾಮನು ಚೈತ್ರ ಮಾಸದ ನವಮಿಯಂದು ಜನಿಸಿದನು ಎಂದು ಹೇಳಲಾಗುತ್ತದೆ. ಅದಕ್ಕಾಗಿ ಪ್ರತಿವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನದಂದು ದೇಶಾದ್ಯಂತ ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಏಪ್ರಿಲ್‌ 06 ಭಾನುವಾರದಂದು ಆಚರಿಸಲಾಗುತ್ತಿದ್ದು, ಈ ವಿಶೇಷ ದಿನ ದೇವರ ನೈವೇದ್ಯಕ್ಕೆ ಮನೆಯಲ್ಲಿಯೇ ಸಿಂಪಲ್ಲಾಗಿ ಕೋಸಂಬರಿ, ಪಾನಕ ತಯಾರಿಸಿ. ಈ ರೆಸಿಪಿ ಮಾಡೋದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Ram Navami 2025: ರಾಮನವಮಿಯಂದು ಉಪವಾಸ ಆಚರಿಸುವುದು ಹೇಗೆ ? ಇಲ್ಲಿದೆ ಮಾಹಿತಿ

ಏಪ್ರಿಲ್ 6, 2024 ರಂದು ರಾಮನವಮಿ ಹಬ್ಬ. ಈ ದಿನದ ಮಹತ್ವ, ಪೂಜಾ ವಿಧಾನ, ಉಪವಾಸದ ಮಾರ್ಗಸೂಚಿಗಳು ಮತ್ತು ವಿಶೇಷ ಆಚರಣೆಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಬೆಳಗ್ಗೆ ಪವಿತ್ರ ಸ್ನಾನ, ಮನೆ ಶುದ್ಧೀಕರಣ, ಪೂಜೆಗೆ ಬೇಕಾದ ಸಾಮಗ್ರಿಗಳು, ಪ್ರಸಾದ ವಿತರಣೆ ಹಾಗೂ ದಾನದ ಮಹತ್ವವನ್ನು ತಿಳಿದುಕೊಳ್ಳಿ. ಭಕ್ತಿಯಿಂದ ರಾಮನವಮಿಯನ್ನು ಆಚರಿಸಿ.

Ram Navami 2025: ವಿವಾಹದಲ್ಲಿ ಅಡೆತಡೆ ಅಥವಾ ವಿಳಂಬವಾಗುತ್ತಿದೆಯೇ? ರಾಮನವಮಿಯಂದು ಈ ಪರಿಹಾರ ಮಾಡಿ

ರಾಮನವಮಿಯಂದು ವಿವಿಧ ಪರಿಹಾರಗಳನ್ನು ಮಾಡುವುದರಿಂದ ಮದುವೆಯಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. ಸೀತಾ ದೇವಿಗೆ ಅರಿಶಿನ, ಶ್ರೀಗಂಧ, ಕುಂಕುಮ ಅರ್ಪಿಸುವುದು, 11 ದೀಪಗಳನ್ನು ಬೆಳಗಿಸುವುದು, ಹನುಮಂತನ ಪೂಜೆ ಮತ್ತು ಹನುಮಾನ್ ಚಾಲೀಸಾ ಪಠಣ ಇತ್ಯಾದಿಗಳನ್ನು ಮಾಡುವುದರಿಂದ ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ಮಕ್ಕಳಿಗೆ ಅನುಗ್ರಹ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ಸೆಂಟಿಮೆಂಟ್​ನಿಂದ ಸಿನಿಮಾ ಗೆಲ್ತು ಎಂಬ ಮಾತು ನನಗೆ ಬೇಡ: ಅಜಯ್ ರಾವ್
ಸೆಂಟಿಮೆಂಟ್​ನಿಂದ ಸಿನಿಮಾ ಗೆಲ್ತು ಎಂಬ ಮಾತು ನನಗೆ ಬೇಡ: ಅಜಯ್ ರಾವ್
ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭರ್ಜರಿ ಡ್ಯಾನ್ಸ್
ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭರ್ಜರಿ ಡ್ಯಾನ್ಸ್
ಬಾಲಕನಂತೆ ಸೈಕಲ್ ಸವಾರಿ ಮಾಡಿದ ಶಿವಣ್ಣ; ವೈರಲ್ ವಿಡಿಯೋ ನೋಡಿ..
ಬಾಲಕನಂತೆ ಸೈಕಲ್ ಸವಾರಿ ಮಾಡಿದ ಶಿವಣ್ಣ; ವೈರಲ್ ವಿಡಿಯೋ ನೋಡಿ..
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ