Ramdan 2026: ಫೆ. 19ರಿಂದ ಪವಿತ್ರ ರಂಜಾನ್ ಮಾಸ ಪ್ರಾರಂಭ: ಉಪವಾಸ, ಪ್ರಾರ್ಥನೆಯ ಮಹತ್ವ ತಿಳಿಯಿರಿ
ಸೌದಿ ಅರೇಬಿಯಾದಲ್ಲಿ ಪವಿತ್ರ ರಂಜಾನ್ ಉಪವಾಸ ಆರಂಭವಾಗಿದೆ. ಇಸ್ಲಾಂ ಧರ್ಮದಲ್ಲಿ ಇದು ಅತ್ಯಂತ ಮಹತ್ವದ ಮಾಸ. ಸೂರ್ಯೋದಯಕ್ಕೂ ಮುನ್ನ ಸೆಹ್ರಿ ಸೇವಿಸಿ, ಸೂರ್ಯಾಸ್ತದ ನಂತರ ಇಫ್ತಾರ್ ಮೂಲಕ ಉಪವಾಸ ಮುರಿಯಲಾಗುತ್ತದೆ. ಉಪವಾಸ ಕೇವಲ ಆಹಾರ ತ್ಯಾಗವಲ್ಲ, ಮನಸ್ಸಿನ ಶುದ್ಧೀಕರಣ, ಮಾತು ಹಾಗೂ ನಡವಳಿಕೆಯ ಶಿಸ್ತು, ಪ್ರಾರ್ಥನೆ, ದಾನಧರ್ಮಗಳ ಮೂಲಕ ಮಾನವೀಯತೆ ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಪ್ರಪಂಚದ ಅನೇಕ ದೇಶಗಳಲ್ಲಿ, ವಿಶೇಷವಾಗಿ ಸೌದಿ ಅರೇಬಿಯಾದಲ್ಲಿ, ಫೆಬ್ರವರಿ 17 ರಂದು ಪವಿತ್ರ ರಂಜಾನ್ ತಿಂಗಳ ಚಂದ್ರ ಕಾಣಿಸಿಕೊಂಡಿದ್ದು, ಫೆಬ್ರವರಿ 18ರಿಂದ ಉಪವಾಸಗಳು ಆರಂಭವಾಗಿವೆ. ಮೆಕ್ಕಾ, ಮದೀನಾ ಸೇರಿದಂತೆ ಜಗತ್ತಿನಾದ್ಯಂತ ಇಸ್ಲಾಂ ಧರ್ಮದವರು ತಮ್ಮ ಸ್ಥಳೀಯ ಮಸೀದಿಗಳಲ್ಲಿ ತರಾವೀಹ್ ಪ್ರಾರ್ಥನೆ (Taraweeh) ಗಳಿಂದ ಈ ಮಾಸವನ್ನು ಆಚರಿಸುತ್ತಿದ್ದಾರೆ. ಅರೇಬಿಯಾ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಸಾಮಾನ್ಯವಾಗಿ ರಂಜಾನ್ ಉಪವಾಸದ ದಿನಕ್ಕೆ ಒಂದು ದಿನದ ವ್ಯತ್ಯಾಸವಿರುತ್ತದೆ, ಹಾಗಾಗಿ ಭಾರತದಲ್ಲಿ ಮೊದಲ ಉಪವಾಸವು ಫೆಬ್ರವರಿ 19 ರಿಂದಲೇ ಪ್ರಾರಂಭವಾಗಲಿದೆ.
ರೋಜಾ ಎಂದರೇನು?
ರಂಜಾನ್ ಉಪವಾಸ ಇಸ್ಲಾಂ ಧರ್ಮದಲ್ಲಿ ಅತ್ಯಂತ ಶ್ರದ್ಧಾ ಆರಾಧನಾ ಮಾದರಿಯಾಗಿದೆ. ಇದನ್ನು ರೋಜಾ ಎಂದು ಕರೆಯಲಾಗುತ್ತದೆ. ಮುಸ್ಲಿಮರು ಸೂರ್ಯೋದಯಕ್ಕೆ ಮುಂಚಿತವಾಗಿ ತಮ್ಮ ಉಪವಾಸ ನಿರ್ಧರಿಸುತ್ತಾರೆ ಮತ್ತು ಸೂರ್ಯಾಸ್ತದವರೆಗೆ ಆಹಾರ, ನೀರು, ಪಾನೀಯ ತ್ಯಜಿಸುತ್ತಾರೆ. ಉಪವಾಸ ಮುಗಿಯುವ ಕ್ಷಣದಲ್ಲಿ ಸೂರ್ಯಾಸ್ತದ ನಂತರ ಕುಟುಂಬ ಮತ್ತು ಸಮೂಹದೊಂದಿಗೆ ಇಫ್ತಾರ್ ಮಾಡಲಾಗುತ್ತದೆ. ಉಪವಾಸವು ಕೇವಲ ಆಹಾರ, ನೀರಿನ ತ್ಯಾಗವಲ್ಲ; ಅದು ಮನಸ್ಸಿನ ಶುದ್ಧೀಕರಣ, ಮಾತಿನ ಸಂಯಮ, ನಡವಳಿಕೆಯ ಶಿಸ್ತಿಗೆ ಪ್ರಮುಖ ಅವಕಾಶವನ್ನಾಗಿ ಪರಿಗಣಿಸಲಾಗಿದೆ.
ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ
ರಂಜಾನ್ ಉಪವಾಸದ ಮುಖ್ಯ ನಿಯಮಗಳು:
- ಸೆಹ್ರಿ (Sehri): ಸೂರ್ಯೋದಯಕ್ಕೂ ಮುನ್ನ, ಬೆಳಿಗ್ಗೆ ಮೊದಲಿನ ಆಹಾರವನ್ನು ಸೇವಿಸುವುದು. ಇದನ್ನು ಉಪವಾಸಕ್ಕೆ ಸಿದ್ಧತೆ ಎಂದು ಪರಿಗಣಿಸಲಾಗುತ್ತದೆ. ಸೆಹ್ರಿಯ ನಂತರ, ಸೂರ್ಯಾಸ್ತದವರೆಗೆ ಯಾವುದೇ ಆಹಾರ, ನೀರು, ಅಥವಾ ಪಾನೀಯ ಸೇವಿಸುವಂತಿಲ್ಲ.
- ಇಫ್ತಾರ್ (Iftar): ಸೂರ್ಯಾಸ್ತದ ನಂತರ ಮೊದಲು ಖರ್ಜೂರ ಮತ್ತು ನೀರು ಸೇವಿಸಿ ಉಪವಾಸ ಮುರಿಯಲಾಗುತ್ತದೆ. ಸಾಮಾನ್ಯವಾಗಿ ಆರಂಭಿಸಿ, ನಂತರ ಇಫ್ತಾರ್ ಮಾಡಲಾಗುತ್ತದೆ.
- ಪ್ರಾರ್ಥನೆಗಳು: ಐದು ಬಾರಿ ನಮಾಜ್ (ಪ್ರಾರ್ಥನೆ) ಮತ್ತು ರಾತ್ರಿ ತರಾವೀಹ್ ನಮಾಜ್ ಗಳು ಅದರ ಪವಿತ್ರತೆಗೆ ಮುಖ್ಯ ಪಾತ್ರ ವಹಿಸುತ್ತವೆ.
ರಂಜಾನ್ ತಿಂಗಳ ಮಹತ್ವ:
ರಂಜಾನ್ ಭಗವಂತ ಅಲ್ಲಾನಿಗೆ ಸಮರ್ಪಿತ ಸಮಯವೆಂದು ಪರಿಗಣಿಸಲಾಗಿದೆ. ಹೀಗಾಗಿ ಈ ತಿಂಗಳು ಭಗವಂತನೊಂದಿಗೆ ಹೆಚ್ಚು ಸಂಪರ್ಕ ಸಾಧಿಸುವ ಸಮಯ. ಉಪವಾಸದ ಜೊತೆಗೆ ಪ್ರಾರ್ಥನೆ, ದಾನಧರ್ಮ — ಜಕಾತ್ ಮತ್ತು ಸದಾಗಾ ಮೂಲಕ ಮಾನವೀಯತೆ, ಸಹೋದರತ್ವ ಮತ್ತು ಸಹಾಯಭಾವವನ್ನು ಉತ್ತೇಜಿಸುವುದೇ ರಂಜಾನ್ ಹಬ್ಬದ ಅತ್ಯಂತ ಮಹತ್ವದ ಸಂದೇಶವಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




