Sign In

By signing in or creating an account, you agree with Associated Broadcasting Company's Terms & Conditions and Privacy Policy.

Steve Waugh: ನಾನು ತಂಡದಲ್ಲಿರುತ್ತಿದ್ದರೆ ಆಡುತ್ತಲೇ ಇರಲಿಲ್ಲ: ಆಫ್ರಿಕಾ ಟೆಸ್ಟ್ ತಂಡದ ಬಗ್ಗೆ ಕೋಪಗೊಂಡ ಸ್ಟೀವ್ ವಾ

New Zealand vs South Africa Test Series: ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮಂಡಳಿಯು ಭವಿಷ್ಯದ ಟೆಸ್ಟ್ ಬಗ್ಗೆ ಚಿಂತಿಸುತ್ತಿಲ್ಲ. ಹಾಗೊಂದುವೇಳೆ ಅವರ ಅಲೋಚಿಸಿದ್ದರೆ ಅತ್ಯುತ್ತಮ ಆಟಗಾರರನ್ನು ಮನೆಯಲ್ಲಿ ಇರಿಸಿ ಅನನುಭವಿಗಳನ್ನು ನ್ಯೂಝಿಲೆಂಡ್​ಗೆ ಕಳುಹಿಸುತ್ತಿರಲಿಲ್ಲ. ನಾನು ನ್ಯೂಝಿಲೆಂಡ್ ತಂಡದಲ್ಲಿ ಇದ್ದಿದ್ದರೆ ಆ ಸರಣಿಯನ್ನು ಆಡುತ್ತಲೇ ಇರಲಿಲ್ಲ,”ಎಂದು ಸ್ಟೀವ್ ವಾ ಹೇಳಿದ್ದಾರೆ.

Steve Waugh: ನಾನು ತಂಡದಲ್ಲಿರುತ್ತಿದ್ದರೆ ಆಡುತ್ತಲೇ ಇರಲಿಲ್ಲ: ಆಫ್ರಿಕಾ ಟೆಸ್ಟ್ ತಂಡದ ಬಗ್ಗೆ ಕೋಪಗೊಂಡ ಸ್ಟೀವ್ ವಾ
Steve Waugh and South Africa
Follow us
Vinay Bhat
|

Updated on: Jan 01, 2024 | 4:26 PM

ಆಸ್ಟ್ರೇಲಿಯಾದ ದಿಗ್ಗಜ ಸ್ಟೀವ್ ವಾ (Steve Waugh) ದಕ್ಷಿಣ ಆಫ್ರಿಕಾದ ಅಚ್ಚರಿಯ ತಂಡದ ಆಯ್ಕೆಯನ್ನು ಖಂಡಿಸಿದ್ದಾರೆ. ಫೆಬ್ರವರಿಯಲ್ಲಿ ನ್ಯೂಝಿಲೆಂಡ್ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನು ಆಡಲು ಸಜ್ಜಾಗಿರುವ ದಕ್ಷಿಣ ಆಫ್ರಿಕಾ ಅನನುಭವಿ ತಂಡವನ್ನು ಹೆಸರಿಸಿದೆ. 14-ಪುರುಷರ ತಂಡದಲ್ಲಿ, 7 ಆಟಗಾರರು ಅನ್‌ಕ್ಯಾಪ್ ಆಗಿದ್ದಾರೆ, ಇದರಲ್ಲಿ ಸ್ವತಃ ನಾಯಕ, ನೀಲ್ ಬ್ರಾಂಡ್ ಕೂಡ ಇದುವರೆಗೆ ಒಂದೇ ಒಂದು ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಇವರು ಕಿವೀಸ್ ನಾಡಿಗೆ ಟೆಸ್ಟ್ ಆಡಲು ಪ್ರಯಾಣಿಸಲಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ನಾಯಕ ಮತ್ತು ದಂತಕಥೆ ಸ್ಟೀವ್ ವಾ ಈ ನಿರ್ಧಾರದಿಂದ ಕೋಪಗೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಟೆಸ್ಟ್ ಕ್ರಿಕೆಟ್ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ವಾ ಹೇಳಿದ್ದಾರೆ. ಇದಲ್ಲದೆ, ನಾನು ನ್ಯೂಝಿಲೆಂಡ್ ತಂಡದಲ್ಲಿ ಇರುತ್ತಿದ್ದರೆ, ಇಂತಹ ತಂಡದ ವಿರುದ್ಧ ಸರಣಿಯನ್ನು ಸಹ ಆಡುತ್ತಿರಲಿಲ್ಲ ಎಂದು ಕೋಪದಿಂದ ಹೇಳಿದ್ದಾರೆ.

“ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮಂಡಳಿಯು ಭವಿಷ್ಯದ ಟೆಸ್ಟ್ ಬಗ್ಗೆ ಚಿಂತಿಸುತ್ತಿಲ್ಲ. ಹಾಗೊಂದುವೇಳೆ ಅವರ ಅಲೋಚಿಸಿದ್ದರೆ ಅತ್ಯುತ್ತಮ ಆಟಗಾರರನ್ನು ಮನೆಯಲ್ಲಿ ಇರಿಸಿ ಅನನುಭವಿಗಳನ್ನು ನ್ಯೂಝಿಲೆಂಡ್​ಗೆ ಕಳುಹಿಸುತ್ತಿರಲಿಲ್ಲ. ನಾನು ನ್ಯೂಝಿಲೆಂಡ್ ತಂಡದಲ್ಲಿ ಇದ್ದಿದ್ದರೆ ಆ ಸರಣಿಯನ್ನು ಆಡುತ್ತಲೇ ಇರಲಿಲ್ಲ. ಅವರು ಏಕೆ ಆಡುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಇದು ನ್ಯೂಝಿಲೆಂಡ್ ಕ್ರಿಕೆಟ್‌ಗೆ ಅಗೌರವ ತೋರಿದಂತೆ,”ಎಂದು ಸ್ಟೀವ್ ವಾ ಹೇಳಿದರು.

ಇದನ್ನೂ ಓದಿ
Image
2ನೇ ಟೆಸ್ಟ್: ಕೇಪ್​ಟೌನ್​ಗೆ ಆಗಮನಿಸಿದ ಟೀಮ್ ಇಂಡಿಯಾ ಆಟಗಾರರು: ವಿಡಿಯೋ
Image
ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಭಾರತದ ಟೆಸ್ಟ್ ದಾಖಲೆ ಹೇಗಿದೆ?
Image
ಹೊಸ ವರ್ಷದಂದು ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್: ಸ್ಟಾರ್ ಆಟಗಾರನಿಗೆ ಇಂಜುರಿ
Image
ದಕ್ಷಿಣ ಆಫ್ರಿಕಾದಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಭಾರತಕ್ಕೆ ಟಿಪ್ಸ್ ಕೊಟ

David Warner retires: ಹೊಸ ವರ್ಷದಂದು ಶಾಕ್ ನೀಡಿದ ಡೇವಿಡ್ ವಾರ್ನರ್: ಏಕದಿನ ಕ್ರಿಕೆಟ್​ನಿಂದ ದಿಢೀರ್ ನಿವೃತ್ತಿ

ಕೆಲ ರಾಷ್ಟ್ರಗಳು ಟೆಸ್ಟ್ ಕ್ರಿಕೆಟ್‌ಗೆ ಕಡಿಮೆ ಪ್ರಾಮುಖ್ಯತೆಯನ್ನು ತೋರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ವಾ, “ಸಮಸ್ಯೆ ಏನು ಎಂಬುದು ಬಹಳ ಸ್ಪಷ್ಟವಾಗಿದೆ. ವೆಸ್ಟ್ ಇಂಡೀಸ್ ತಮ್ಮ ಪೂರ್ಣ ಸಾಮರ್ಥ್ಯದ ತಂಡವನ್ನು [ಈ ಬೇಸಿಗೆಯಲ್ಲಿ ಆಸ್ಟ್ರೇಲಿಯಾಕ್ಕೆ] ಕಳುಹಿಸುತ್ತಿಲ್ಲ. ಅವರು ಈಗ ಒಂದೆರಡು ವರ್ಷಗಳಿಂದ ಪೂರ್ಣ ಸಾಮರ್ಥ್ಯದ ಟೆಸ್ಟ್ ತಂಡವನ್ನು ಆಯ್ಕೆಯೇ ಮಾಡಿಲ್ಲ. ಟೆಸ್ಟ್ ಕ್ರಿಕೆಟ್‌ ಕ್ಷೀಣಿಸುತ್ತಿರುವಾಗ ಇದು ಸರಿಯೇ? ಖಂಡಿತವಾಗಿಯೂ ಐಸಿಸಿ ಜೊತೆ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿಗಳು ಟೆಸ್ಟ್ ಸ್ವರೂಪವನ್ನು ರಕ್ಷಿಸಲು ಮುಂದಾಗಬೇಕು,” ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಸದ್ಯ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತವನ್ನು ಸೋಲಿಸಿದೆ. ಆದರೆ ಆತಿಥೇಯರು ನ್ಯೂಝಿಲೆಂಡ್‌ಗೆ ಸ್ಟಾರ್ ಅನುಭವಿ ಆಟಗಾರರನ್ನು ಕಳುಹಿಸದಿರಲು ಪ್ರಮುಖ ಕಾರಣವೆಂದರೆ ಸೌತ್ ಆಫ್ರಿಕಾ 20 ಲೀಗ್. ಟಿ20 ಪಂದ್ಯಾವಳಿಯು ಜನವರಿ 10 ರಿಂದ ಪ್ರಾರಂಭವಾಗಲಿದೆ. ಅಲ್ಲದೆ T20 ವಿಶ್ವಕಪ್‌ಗೆ ಕೆಲವೇ ತಿಂಗಳುಗಳು ಬಾಕಿಯಿದೆ. ಹೀಗಾಗಿ ಆಫ್ರಿಕಾ ತಮ್ಮ ಸಂಪೂರ್ಣ ಗಮನವನ್ನು ಟಿ20 ಸ್ವರೂಪದತ್ತ ಹರಿಸಲು ನಿರ್ಧರಿಸಿದೆ.

ನ್ಯೂಝಿಲೆಂಡ್ ಟೆಸ್ಟ್​ಗೆ ದಕ್ಷಿಣ ಆಫ್ರಿಕಾ ತಂಡ: ನೀಲ್ ಬ್ರಾಂಡ್ (ನಾಯಕ), ಡೇವಿಡ್ ಬೆಡಿಂಗ್ಹ್ಯಾಮ್, ರುವಾನ್ ಡಿ ಸ್ವಾರ್ಡ್ಟ್, ಕ್ಲೈಡ್ ಫಾರ್ಟುಯಿನ್, ಜುಬೇರ್ ಹಮ್ಜಾ, ಟ್ಶೆಪೊ ಮೊರೆಕಿ, ಮಿಹ್ಲಾಲಿ ಎಂಪೊಂಗ್ವಾನಾ, ಡುವಾನ್ನೆ ಒಲಿವಿಯರ್, ಡೇನ್ ಪ್ಯಾಟರ್ಸನ್, ಕೀಗನ್ ಪೀಟರ್ಸನ್, ಡೇನ್ ಪೀಡ್ಟ್, ರೇನಾರ್ಡ್ ವ್ಯಾನ್ ಬರ್ಗ್, ಶಾನ್ ವಾನ್ ಬರ್ಗ್ ಮತ್ತು ಖಯಾ ಜೊಂಡೋ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್