Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಸಿಐನಲ್ಲಿ ಕೆಲಸ ಖಾಲಿ ಇದೆ; ಯಾರು ಅರ್ಜಿ ಸಲ್ಲಿಸಬಹುದು? ಕೊನೆಯ ದಿನಾಂಕ ಯಾವುದು?

BCCI Hiring Spin Bowling Coach: ಬೆಂಗಳೂರಿನಲ್ಲಿರುವ ತನ್ನ ಅತ್ಯಾಧುನಿಕ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಸ್ಪಿನ್ ಬೌಲಿಂಗ್ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಕನಿಷ್ಠ 75 ಪ್ರಥಮ ದರ್ಜೆ ಪಂದ್ಯಗಳ ಅನುಭವ ಹಾಗೂ ಕ್ರಿಕೆಟ್ ತರಬೇತಿಯಲ್ಲಿ 3 ವರ್ಷಗಳ ಅನುಭವ ಇರುವ ಮಾಜಿ ಭಾರತೀಯ ಕ್ರಿಕೆಟಿಗರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 10, 2025.

ಬಿಸಿಸಿಐನಲ್ಲಿ ಕೆಲಸ ಖಾಲಿ ಇದೆ; ಯಾರು ಅರ್ಜಿ ಸಲ್ಲಿಸಬಹುದು? ಕೊನೆಯ ದಿನಾಂಕ ಯಾವುದು?
Bcci
Follow us
ಪೃಥ್ವಿಶಂಕರ
|

Updated on:Mar 28, 2025 | 3:11 PM

ಬೆಂಗಳೂರಿನಲ್ಲಿರುವ ತನ್ನ ಅತ್ಯಾಧುನಿಕ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಸ್ಪಿನ್ ಬೌಲಿಂಗ್ ಕೋಚ್ ಹುದ್ದೆಗೆ ಬಿಸಿಸಿಐ (BCCI) ಅರ್ಜಿ ಆಹ್ವಾನಿಸಿದೆ. ಬಿಸಿಸಿಐ ಪತ್ರಿಕಾ ಪ್ರಕಟಣೆ ನೀಡುವ ಮೂಲಕ ಈ ಮಾಹಿತಿಯನ್ನು ನೀಡಿದ್ದು, ಈ ಹುದ್ದೆಗೆ ಯಾರು ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ನೀಡಿದೆ. ಅದೇ ಸಮಯದಲ್ಲಿ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಸಹ ಉಲ್ಲೇಖಿಸಲಾಗಿದೆ. ಭಾರತದ ಹಿರಿಯ ತಂಡಗಳು (ಪುರುಷ ಮತ್ತು ಮಹಿಳೆಯರು), ಭಾರತ ಎ, 23 ವರ್ಷದೊಳಗಿನವರು, 19 ವರ್ಷದೊಳಗಿನವರು, 16 ವರ್ಷದೊಳಗಿನವರು ಮತ್ತು 15 ವರ್ಷದೊಳಗಿನವರು ಮತ್ತು ಬಿಸಿಸಿಐ ಸಿಒಇಯಲ್ಲಿ ತರಬೇತಿ ಪಡೆಯುವ ರಾಜ್ಯ ಸಂಘದ ಆಟಗಾರರು ಸೇರಿದಂತೆ ಎಲ್ಲಾ ಸ್ವರೂಪಗಳು ಮತ್ತು ವಯೋಮಾನದ ಗುಂಪುಗಳಲ್ಲಿ ಭಾರತದ ಸ್ಪಿನ್ ಬೌಲಿಂಗ್ ಪ್ರತಿಭೆಯ ಅಭಿವೃದ್ಧಿ ಮತ್ತು ಕಾರ್ಯಕ್ಷಮತೆ ವರ್ಧನೆಯಲ್ಲಿ ಸ್ಪಿನ್ ಬೌಲಿಂಗ್ ಕೋಚ್ ಹುದ್ದೆ ಪ್ರಮುಖ ಪಾತ್ರವಹಿಸಲಿದೆ.

ಬಿಸಿಸಿಐ ಪತ್ರಿಕಾ ಪ್ರಕಟಣೆ

ಈ ಹುದ್ದೆಯ ಭರ್ತಿಯ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಬಿಸಿಸಿಐ, ಈ ಸ್ಪಿನ್ ಬೌಲಿಂಗ್ ತರಬೇತುದಾರ, ಬಿಸಿಸಿಐ ಸಿಒಇಯ ಹೆಡ್ ಕ್ರಿಕೆಟ್‌ನೊಂದಿಗೆ ಕೆಲಸ ಮಾಡಲಿದ್ದಾರೆ. ಆಯ್ಕೆದಾರರು, ರಾಷ್ಟ್ರೀಯ ಮತ್ತು ರಾಜ್ಯ ತರಬೇತುದಾರರು, ಕಾರ್ಯಕ್ಷಮತೆ ವಿಶ್ಲೇಷಕರು, ಕಂಡೀಷನಿಂಗ್ ತಜ್ಞರ ಸಹಯೋಗದೊಂದಿಗೆ ಉನ್ನತ ಕಾರ್ಯಕ್ಷಮತೆಯ ತರಬೇತಿ ಯೋಜನೆಗಳನ್ನು ಅಭಿವೃದ್ಧಿಪಡಿಸುವುದು ಈ ಹುದ್ದೆಯ ಕೆಲಸವಾಗಿದೆ. ಇದಲ್ಲದೆ, ಸ್ಪಿನ್ ಬೌಲಿಂಗ್ ತರಬೇತುದಾರರ ಕೆಲಸವು ಆಟಗಾರರಿಗೆ ಅವಶ್ಯಕತೆಗೆ ಅನುಗುಣವಾಗಿ ವೈಯಕ್ತಿಕ ತಾಂತ್ರಿಕ ತರಬೇತಿಯನ್ನು ನೀಡುವುದಾಗಿದೆ. ಹಾಗೆಯೇ ಈ ಹುದ್ದೆಗೇರುವವರು ಪ್ರತಿಭಾನ್ವಿತ ಸ್ಪಿನ್ ಬೌಲರ್‌ಗಳನ್ನು ಗುರುತಿಸುವುದು ಮತ್ತು ತರಬೇತಿ ನೀಡಲು ಆಯ್ಕೆದಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಸಹಕರಿಸಬೇಕು. ಈ ಹುದ್ದೆಗೆ ಅರ್ಜಿಗಳನ್ನು ಏಪ್ರಿಲ್ 10, 2025 ರಂದು ಸಂಜೆ 5:00 ಗಂಟೆಯವರೆಗೆ ಸಲ್ಲಿಸಬಹುದು ಎಂದು ಪ್ರಕಟಣೆ ಹೊರಡಿಸಿದೆ.

IPL 2025: ಕೆಕೆಆರ್ ಪಂದ್ಯ ತೂಗುಯ್ಯಾಲೆಯಲ್ಲಿ; ಬಿಸಿಸಿಐ ಉಪಾಧ್ಯಕ್ಷರು ಹೇಳಿದ್ದೇನು?

ಇದನ್ನೂ ಓದಿ
Image
ನಾಯಕರ ನಿಷೇಧಕ್ಕೆ ಬ್ರೇಕ್ ಹಾಕಿದ ಬಿಸಿಸಿಐ ಬದಲಿಯಾಗಿ ತಂದಿದ್ದು ಯಾವ ನಿಯಮ?
Image
ಐಪಿಎಲ್ ವೇಳಾಪಟ್ಟಿಯಲ್ಲಿ ಬದಲಾವಣೆ; ಗುವಾಹಟಿಗೆ ಪಂದ್ಯ ಶಿಫ್ಟ್
Image
ಐಪಿಎಲ್ ಆಟಗಾರರ ಖಾತೆಗೆ ಬಿಳಲಿದೆ ಮತ್ತಷ್ಟು ಹಣ
Image
2ನೇ ಇನ್ನಿಂಗ್ಸ್​ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಬಿಸಿಸಿಐ ಬಂಪರ್ ಗಿಫ್ಟ್

ಯಾರು ಅರ್ಜಿ ಸಲ್ಲಿಸಬಹುದು?

  • ಈ ಹುದ್ದೆಗೆ ಯಾವ ಅರ್ಹತೆಗಳು ಮತ್ತು ಅನುಭವ ಬೇಕು ಎಂಬುದನ್ನು ಬಿಸಿಸಿಐ ತಿಳಿಸಿದೆ. ಕನಿಷ್ಠ 75 ಪಂದ್ಯಗಳ ಪ್ರಥಮ ದರ್ಜೆ ಅನುಭವ ಮತ್ತು ಕನಿಷ್ಠ 3 ವರ್ಷಗಳ ಕಾಲ (ಕಳೆದ 7 ವರ್ಷಗಳಲ್ಲಿ) ಕ್ರಿಕೆಟ್ ತರಬೇತಿಯ ದಾಖಲೆಯನ್ನು ಹೊಂದಿರುವ ಮಾಜಿ ಭಾರತೀಯ ಕ್ರಿಕೆಟಿಗ ಅಥವಾ ಮಾಜಿ ಭಾರತೀಯ ಪ್ರಥಮ ದರ್ಜೆ ಕ್ರಿಕೆಟಿಗ (ಉನ್ನತ ಪ್ರದರ್ಶನ ಕೇಂದ್ರ/ಅಂತರರಾಷ್ಟ್ರೀಯ/ಭಾರತ ಎ/ಭಾರತ ಅಂಡರ್-19/ಭಾರತ ಮಹಿಳಾ/ಐಪಿಎಲ್) ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
  • ಬಿಸಿಸಿಐ ಸಿಒಇ ಲೆವೆಲ್ 3 ಪರ್ಫಾರ್ಮೆನ್ಸ್ ಕೋಚ್, ಕಳೆದ 7 ವರ್ಷಗಳಲ್ಲಿ ಹೈ-ಪರ್ಫಾರ್ಮೆನ್ಸ್ ಸೆಂಟರ್/ಅಂತರರಾಷ್ಟ್ರೀಯ/ಭಾರತ ಎ/ಭಾರತ ಅಂಡರ್-19/ಭಾರತ ಮಹಿಳಾ/ಐಪಿಎಲ್/ರಾಜ್ಯ ತಂಡದಲ್ಲಿ ಕನಿಷ್ಠ 3 ವರ್ಷಗಳ ಕ್ರಿಕೆಟ್ ತರಬೇತಿಯ ದಾಖಲೆಯನ್ನು ಹೊಂದಿರಬೇಕು.
  • ಬಿಸಿಸಿಐ ಸಿಒಇ ಲೆವೆಲ್ 2 ತರಬೇತುದಾರರು ಹೈ-ಪರ್ಫಾರ್ಮೆನ್ಸ್ ಸೆಂಟರ್/ಅಂತರರಾಷ್ಟ್ರೀಯ/ಭಾರತ ಎ/ಭಾರತ ಅಂಡರ್-19/ಭಾರತ ಮಹಿಳಾ/ಐಪಿಎಲ್ ತಂಡಕ್ಕೆ ಕನಿಷ್ಠ 3 ವರ್ಷಗಳ (ಕಳೆದ 7 ವರ್ಷಗಳಲ್ಲಿ) ಕ್ರಿಕೆಟ್ ತರಬೇತಿಯ ದಾಖಲೆಯನ್ನು ಹೊಂದಿರುವವರು ಈ ಹುದ್ದೆಗೆ ಅರ್ಜಿ ಹಾಕಬಹುದಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:24 pm, Fri, 28 March 25

ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ