AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breaking News: ಗುಜರಾತ್ ತಂಡದಿಂದ ಹೊರಬಿದ್ರಾ ಗಿಲ್? ಕುತೂಹಲ ಹುಟ್ಟಿಸಿದ ಫ್ರಾಂಚೈಸಿಯ ಟ್ವೀಟ್..!

Shubman Gill: ಶನಿವಾರ ಸಂಜೆ ಗುಜರಾತ್ ಫ್ರಾಂಚೈಸಿ ಅಚ್ಚರಿಯ ಟ್ವೀಟ್ ಮಾಡಿದ್ದು, ಈ ಟ್ವೀಟ್ ನೋಡಿದವರೆಲ್ಲ ಗಿಲ್ ಜತೆಗಿನ ಸಂಬಂಧವನ್ನು ಗುಜರಾತ್ ಕಡಿದುಕೊಂಡಿದೆ ಎಂದು ಭಾವಿಸುತ್ತಿದ್ದಾರೆ.

Breaking News: ಗುಜರಾತ್ ತಂಡದಿಂದ ಹೊರಬಿದ್ರಾ ಗಿಲ್? ಕುತೂಹಲ ಹುಟ್ಟಿಸಿದ ಫ್ರಾಂಚೈಸಿಯ ಟ್ವೀಟ್..!
Shubman Gill
TV9 Web
| Updated By: ಪೃಥ್ವಿಶಂಕರ|

Updated on:Sep 17, 2022 | 7:28 PM

Share

ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರವೇ. ಪ್ರತಿಯೊಬ್ಬ ಕ್ರಿಕೆಟಿಗನು ಈ ಟೂರ್ನಿಯಲ್ಲಿ ಆಡಬೇಕೆಂಬ ಹೆಬ್ಬಯಕೆಯನ್ನು ಹೊಂದಿರುತ್ತಾನೆ. ಅದಕ್ಕೆ ಕಾರಣಗಳು ಹಲವಿವೆ. ಮೊದಲನ್ನೇಯದ್ದು, ಈ ಟೂರ್ನಿಯಲ್ಲಿ ಆಡುವ ಆಟಗಾರನ ಮೇಲೆ ಹಣದ ಮಳೆಯೇ ಹರಿದರೆ, ಎರಡನೇಯದ್ದು, ಈ ಟೂರ್ನಿಯಲ್ಲಿ ಮಿಂಚುವ ಆಟಗಾರನಿಗೆ ಟೀಂ ಇಂಡಿಯಾ ಕದ ತೆರೆಯುವುದು ಗ್ಯಾರಂಟಿ. ಪ್ರತಿ ವರ್ಷದಂತೆ ಈ ವರ್ಷವೂ ಐಪಿಎಲ್ (IPL-2022) ಅತ್ಯಂತ ಯಶಸ್ವಿಯಾಗಿ ನಡೆಯಿತು. ಆದರೆ ಈ ಟೂರ್ನಿಯಲ್ಲಿ ನಡೆದ ಅಚ್ಚರಿಯೆಂದರೆ, ಮೊದಲ ಬಾರಿಗೆ ಐಪಿಎಲ್ ಲೋಕಕ್ಕೆ ಕಾಲಿಟ್ಟಿದ್ದ ಗುಜರಾತ್ ಟೈಟಾನ್ಸ್ (Gujarat Titans) ತಂಡ ತನ್ನ ಮೊದಲ ಸೀಸನ್​ನಲ್ಲೇ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಪಾಂಡ್ಯ ನಾಯಕತ್ವದಲ್ಲಿ ಈ ತಂಡ ಟ್ರೋಪಿ ಗೆದ್ದಿತ್ತಾದರೂ, ಈ ತಂಡದ ಗೆಲುವಿಗೆ ಪ್ರಮುಖ ಕಾರಣ ಈ ತಂಡದಲ್ಲಿದ್ದ ಪ್ರತಿಯೊಬ್ಬ ಆಟಗಾರನು ನೀಡಿದ 100 ಪ್ರತಿಶತ ಪ್ರದರ್ಶನ. ಅಂತಹ ಆಟಗಾರರ ಪೈಕಿ ಟೀಂ ಇಂಡಿಯಾದ ಯುವ ಓಪನರ್ ಶುಭ್​ಮನ್ ಗಿಲ್ ಒಬ್ಬರು. ಈ ಮೂಲಕ ಈ ತಂಡದಲ್ಲಿ ದೀರ್ಘ ಸಮಯದವರೆಗೆ ಆಡುವ ಆಟಗಾರರಲ್ಲಿ ಗಿಲ್ ಕೂಡ ಸೇರಿದ್ದರು. ಆದರೆ ಗುಜರಾತ್ ಫ್ರಾಂಚೈಸ್ ಶನಿವಾರ ಮಾಡಿರುವ ಟ್ವೀಟ್​ನಿಂದ ಇಡೀ ಕ್ರಿಕೆಟ್ ಅಭಿಮಾನಿಗಳು ಶಾಕ್​ಗೆ ಒಳಗಾಗಿದ್ದಾರೆ.

ಶನಿವಾರ ಸಂಜೆ ಗುಜರಾತ್ ಫ್ರಾಂಚೈಸಿ ಅಚ್ಚರಿಯ ಟ್ವೀಟ್ ಮಾಡಿದ್ದು, ಈ ಟ್ವೀಟ್ ನೋಡಿದವರೆಲ್ಲ ಗಿಲ್ ಜತೆಗಿನ ಸಂಬಂಧವನ್ನು ಗುಜರಾತ್ ಕಡಿದುಕೊಂಡಿದೆ ಎಂದು ಭಾವಿಸುತ್ತಿದ್ದಾರೆ. ಗಿಲ್ ಕೂಡ ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದು, “ಈ ಪ್ರಯಾಣವು ಸ್ಮರಣೀಯವಾಗಿದೆ ಎಂದು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಗುಜರಾತ್ ಮಾಡಿರುವ ಟ್ವೀಟ್ ಏನೆಂದರೆ, ಇದು ನೆನಪಿಟ್ಟುಕೊಳ್ಳುವಂತಹ ಜರ್ನಿಯಾಗಿದೆ. ನಿಮ್ಮ ಮುಂದಿನ ಪ್ರಯತ್ನಕ್ಕೆ ನಾವು ಶುಭ ಹಾರೈಸುತ್ತೇವೆ ಶುಭಮನ್ ಗಿಲ್ ಎಂದು ಗುಜರಾತ್ ಟ್ವೀಟ್ ಮಾಡಿದೆ.

ಗೊಂದಲಕ್ಕೊಳಗಾದ ಅಭಿಮಾನಿಗಳು

ಗುಜರಾತ್‌ನ ಈ ಟ್ವೀಟ್‌ನಿಂದ ಫ್ರಾಂಚೈಸ್, ಗಿಲ್ ಜೊತೆಗಿನ ಸಂಬಂಧವನ್ನು ಮುರಿಯಲು ಮನಸ್ಸು ಮಾಡಿದ್ದು, ಗಿಲ್ ಅವರನ್ನು ಮತ್ತೊಂದು ಫ್ರಾಂಚೈಸಿಗೆ ಹಸ್ತಾಂತರಿಸಲು ಸಿದ್ಧವಾಗಿದೆ ಎಂದು ತೋರುತ್ತದೆ. ಇದೇ ವೇಳೆ ಗಿಲ್ ಕೂಡ ಈ ಟ್ವೀಟ್​ಗೆ ರಿಟ್ವೀಟ್ ಮಾಡಿದ್ದು, ಅವರು ಕೂಡ ಈ ನಿರ್ಧಾರವನ್ನು ಒಪ್ಪಿಕೊಂಡು ತಂಡವನ್ನು ತೊರೆಯಲು ಸಿದ್ಧರಾಗಿದ್ದಾರೆ ಎಂದು ತೋರುತ್ತದೆ. ಆದರೆ ಈ ವಿಷಯದ ವಾಸ್ತವ ಏನೆಂಬುದರ ಬಗ್ಗೆ ಇನ್ನು ಏನೂ ಸ್ಪಷ್ಟವಾಗಿಲ್ಲ. ಕೆಲವೊಮ್ಮೆ ಐಪಿಎಲ್ ಫ್ರಾಂಚೈಸಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಗೊಂದಲಕ್ಕೀಡು ಮಾಡುವ ಕೆಲಸಗಳನ್ನು ಹಾಗಾಗ್ಗೆ ಮಾಡುತ್ತಿರುತ್ತವೆ. ಈ ಹಿಂದೆ ಕಳೆದ ಐಪಿಎಲ್ ಆರಂಭಕ್ಕೂ ಮೊದಲು, ರಾಜಸ್ಥಾನ್ ರಾಯಲ್ಸ್ ಸಂಜು ಸ್ಯಾಮ್ಸನ್​ಗೆ ಸಂಬಂಧಿಸಿದಂತೆ ಇದೇ ರೀತಿಯ ಕೆಲಸವನ್ನು ಮಾಡಿತ್ತು. ಅಂದಹಾಗೆ, ಯಾವುದೇ ಫ್ರಾಂಚೈಸಿಯೂ ತನ್ನ ತಂಡದ ಆಟಗಾರನೊಂದಿಗಿನ ತನ್ನ ಒಪ್ಪಂದವನ್ನು ರದ್ದುಗೊಳಿಸಿದಾಗ ಅದು ಅಧಿಕೃತ ಹೇಳಿಕೆಯ ಮೂಲಕ ಈ ವಿಷಯವನ್ನು ಸ್ಪಷ್ಟವಾಗಿ ಹೇಳುತ್ತದೆ. ಆದರೆ ಇದುವರೆಗೆ ಗುಜರಾತ್ ಫ್ರಾಂಚೈಸಿ ಕಡೆಯಿಂದ ಆ ರೀತಿಯ ಯಾವುದೇ ಹೇಳಿಕೆ ಕಂಡುಬಂದಿಲ್ಲ.

Published On - 6:20 pm, Sat, 17 September 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್