AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌತ್ ಆಫ್ರಿಕಾ ಎಷ್ಟು ರನ್​​​ಗಳಿಂದ ಗೆದ್ದರೆ ಟೀಮ್ ಇಂಡಿಯಾ ಹೊರಬೀಳಲಿದೆ?

ICC Women's T20 World Cup 2026: ವುಮೆನ್ಸ್ ಟಿ20 ವಿಶ್ವಕಪ್​ ಲೀಗ್​ ಹಂತದ ಕೊನೆಯ ಎರಡು ಪಂದ್ಯಗಳಲ್ಲಿ ಸೌತ್ ಆಫ್ರಿಕಾ, ಬಾಂಗ್ಲಾದೇಶ್ ಹಾಗೂ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಕಣಕ್ಕಿಳಿಯಲಿವೆ. ಇಲ್ಲಿ ಸೌತ್ ಆಫ್ರಿಕಾ ಬಾಂಗ್ಲಾದೇಶ್ ತಂಡವನ್ನು ಎದುರಿಸಿದರೆ, ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದೆ.

ಸೌತ್ ಆಫ್ರಿಕಾ ಎಷ್ಟು ರನ್​​​ಗಳಿಂದ ಗೆದ್ದರೆ ಟೀಮ್ ಇಂಡಿಯಾ ಹೊರಬೀಳಲಿದೆ?
South AfricaImage Credit source: Starsports
ಝಾಹಿರ್ ಯೂಸುಫ್
|

Updated on:Jun 28, 2026 | 9:24 AM

Share

ಟಿ20 ವಿಶ್ವಕಪ್​​​ನಲ್ಲಿ ಸೆಮಿಫೈನಲ್ ಆಡಲಿರುವ 4 ತಂಡಗಳಾವುವು? ಈ ಪ್ರಶ್ನೆಗೆ ಇಂದು (ಜೂ.27) ಸ್ಪಷ್ಟ ಉತ್ತರ ಸಿಗಲಿದೆ. ಏಕೆಂದರೆ ಇಂದು ನಡೆಯಲಿರುವ 2 ಪಂದ್ಯಗಳ ಮೂಲಕ ಮೂರು ತಂಡಗಳ ಟಿ20 ವಿಶ್ವಕಪ್ ಸೆಮಿಫೈನಲ್ ಭವಿಷ್ಯ ನಿರ್ಧಾರವಾಗಲಿದೆ. ಆ ಪಂದ್ಯಗಳು ಯಾವುದೆಂದರೆ…

  • ಭಾರತ vs ಆಸ್ಟ್ರೇಲಿಯಾ
  • ಸೌತ್ ಆಫ್ರಿಕಾ vs ಬಾಂಗ್ಲಾದೇಶ್

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ 8 ಅಂಕಗಳೊಂದಿಗೆ ಸೆಮಿಫೈನಲ್​​ಗೇರುವುದು ಬಹುತೇಕ ಖಚಿತ. ಇನ್ನು ಬಾಂಗ್ಲಾದೇಶ್ ವಿರುದ್ಧ ಸೌತ್ ಆಫ್ರಿಕಾ ತಂಡ ಗೆದ್ದರೆ ಒಟ್ಟು 8 ಅಂಕಗಳನ್ನು ಪಡೆಯಲಿದೆ. ಆದರೆ ಟೀಮ್ ಇಂಡಿಯಾವನ್ನು ಹಿಂದಿಕ್ಕಬೇಕಿದ್ದರೆ ಸೌತ್ ಆಫ್ರಿಕಾ ತಂಡವು ಭಾರೀ ಅಂತರದಿಂದ ಗೆಲ್ಲಬೇಕು. ಆ ಗೆಲುವಿಗಾಗಿ ಪವಾಡವೇ ನಡೆಯಬೇಕು.

ಪ್ರಸ್ತುತ ಸನ್ನಿವೇಶದಲ್ಲಿ ಭಾರತ ತಂಡವು ಆಡಿರುವ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ +2.268 ರನ್ ರೇಟ್‌ನೊಂದಿಗೆ ಗ್ರೂಪ್‌ನಲ್ಲಿ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಇನ್ನೊಂದೆಡೆ, ಸೌತ್ ಆಫ್ರಿಕಾ ತಂಡವು +0.734 ರನ್ ರೇಟ್ ಹೊಂದಿದ್ದು, ಮೂರನೇ ಸ್ಥಾನದಲ್ಲಿದೆ. ಉಭಯ ತಂಡಗಳ ರನ್ ರೇಟ್ ನಡುವೆ ದೊಡ್ಡ ವ್ಯತ್ಯಾಸವಿರುವುದರಿಂದ ಸೌತ್ ಆಫ್ರಿಕಾ ಇಂದಿನ ಪಂದ್ಯದಲ್ಲಿ ಕೇವಲ ಗೆದ್ದರೆ ಸಾಲದು, ಬದಲಿಗೆ ಇತಿಹಾಸ ಸೃಷ್ಟಿಸಬೇಕಿದೆ.

ಸೌತ್ ಆಫ್ರಿಕಾ ತಂಡದ ಲೆಕ್ಕಾಚಾರ:

ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ 160 ರನ್ ಗಳಿಸಿ, ಕೇವಲ 1 ರನ್‌ನಿಂದ ಜಯ ಸಾಧಿಸಿದರೂ ಸಹ ಭಾರತದ ರನ್ ರೇಟ್ ಅತ್ಯುನ್ನತ ಮಟ್ಟದಲ್ಲಿಯೇ ಇರಲಿದೆ. ಈ ಮೂಲಕ ಸೆಮಿಫೈನಲ್​ಗೇರಬಹುದು. ಇತ್ತ ಭಾರತ ತಂಡವನ್ನು ನೆಟ್ ರನ್ ರೇಟ್​ನಲ್ಲಿ ಹಿಂದಿಕ್ಕಬೇಕಿದ್ದರೆ ಸೌತ್ ಆಫ್ರಿಕಾ ತಂಡವು ಈ ಕೆಳಗಿನ ರೀತಿಯಲ್ಲಿ ಪಂದ್ಯ ಗೆಲ್ಲಬೇಕು…

  • 100 ರನ್‌ಗಳ ಟಾರ್ಗೆಟ್ ಇದ್ದರೆ: ಸೌತ್ ಆಫ್ರಿಕಾ ಈ ಸಣ್ಣ ಮೊತ್ತವನ್ನು ಕೇವಲ 3.3 ರಿಂದ 4 ಓವರ್‌ಗಳ ಒಳಗೆ (ಅಂದರೆ ಸುಮಾರು 22 ಎಸೆತಗಳಲ್ಲಿ) ಚೇಸ್ ಮಾಡಬೇಕಾಗುತ್ತದೆ.
  • 150 ರನ್‌ಗಳ ಟಾರ್ಗೆಟ್ ಇದ್ದರೆ: ಈ ಮಧ್ಯಮ ಮೊತ್ತವನ್ನು ಸೌತ್ ಆಫ್ರಿಕಾ ಕೇವಲ 4.5 ರಿಂದ 5 ಓವರ್‌ಗಳ ಒಳಗೆ (ಅಂದರೆ ಸುಮಾರು 28 ರಿಂದ 30 ಎಸೆತಗಳಲ್ಲಿ) ಬೆನ್ನಟ್ಟಬೇಕು.
  • 200 ರನ್‌ಗಳ ಬೃಹತ್ ಟಾರ್ಗೆಟ್ ಇದ್ದರೆ: ಒಂದು ವೇಳೆ ಬಾಂಗ್ಲಾದೇಶ್ ತಂಡ 200 ರನ್ ಗಳಿಸಿದರೆ, ಸೌತ್ ಆಫ್ರಿಕಾ ಅದನ್ನು ಕೇವಲ 5.3 ರಿಂದ 6 ಓವರ್‌ಗಳ ಒಳಗೆ (ಅಂದರೆ ಸುಮಾರು 34 ಎಸೆತಗಳಲ್ಲಿ) ಚೇಸ್ ಮಾಡಬೇಕಾಗುತ್ತದೆ.

ಒಂದು ವೇಳೆ ಬಾಂಗ್ಲಾದೇಶ್ ವಿರುದ್ಧ ಸೌತ್ ಆಫ್ರಿಕಾ ತಂಡವು ಮೊದಲು ಬ್ಯಾಟಿಂಗ್​ ಮಾಡಿದರೆ ಈ ಅಂತರದಲ್ಲಿ ಗೆಲ್ಲುವುದು ಅನಿವಾರ್ಯ. ಇದರ ಲೆಕ್ಕಾಚಾರ ಈ ಕೆಳಗಿನಂತಿದೆ…

  • 150 ರನ್ ಗಳಿಸಿದರೆ: ಸೌತ್ ಆಫ್ರಿಕಾ ತಂಡವು ಬಾಂಗ್ಲಾದೇಶವನ್ನು ಕೇವಲ 28 ರಿಂದ 30 ರನ್‌ಗಳ ಒಳಗೆ ಆಲೌಟ್ ಮಾಡಬೇಕು. ಅಂದರೆ ಕನಿಷ್ಠ 120 ರಿಂದ 122 ರನ್‌ಗಳ ಬೃಹತ್ ಅಂತರದ ಗೆಲುವು ಸಾಧಿಸಬೇಕು.
  • 180 ರನ್ ಗಳಿಸಿದರೆ: ಬಾಂಗ್ಲಾದೇಶ್ ತಂಡವನ್ನು ಗರಿಷ್ಠ 35 ರಿಂದ 40 ರನ್‌ಗಳ ಒಳಗೆ ಕಟ್ಟಿಹಾಕಬೇಕಾಗುತ್ತದೆ. ಅಂದರೆ ಸುಮಾರು 140 ರಿಂದ 145 ರನ್‌ಗಳ ಅಂತರದ ಗೆಲುವು ಅಗತ್ಯವಿರುತ್ತದೆ.
  • 200 ರನ್‌ಗಳ ಬೃಹತ್ ಮೊತ್ತ ಗಳಿಸಿದರೆ: ಸೌತ್ ಆಫ್ರಿಕಾ ತಂಡವು ಬಾಂಗ್ಲಾದೇಶ್ ತಂಡವನ್ನು ಕನಿಷ್ಠ 167 ರನ್‌ಗಳ ಬೃಹತ್ ಅಂತರದಿಂದ ಸೋಲಿಸಬೇಕಾಗುತ್ತದೆ. ಅಂದರೆ ಬಾಂಗ್ಲಾದೇಶವನ್ನು ಕೇವಲ 33 ರನ್‌ಗಳ ಒಳಗೆ ಆಲೌಟ್ ಮಾಡಬೇಕಾದ ಅಸಾಧ್ಯ ಪರಿಸ್ಥಿತಿ ಎದುರಾಗುತ್ತದೆ.

ಇಂತಹದೊಂದು ಪವಾಡಸದೃಶ ಗೆಲುವು ದಾಖಲಿಸಿದರೆ ಮಾತ್ರ ಸೌತ್ ಆಫ್ರಿಕಾ ತಂಡವು ಭಾರತ ತಂಡವನ್ನು ನೆಟ್​ ರನ್ ರೇಟ್​ನಲ್ಲಿ ಹಿಂದಿಕ್ಕಬಹುದು.

  • ಸೌತ್ ಆಫ್ರಿಕಾ ತಂಡದ ನೆಟ್ ರನ್ ರೇಟ್: +0.734
  • ಭಾರತ ತಂಡದ ನೆಟ್ ರನ್ ರೇಟ್: +2.268

ಇದನ್ನೂ ಓದಿ: ಫಿಫಾ ವಿಶ್ವಕಪ್ 2026 ನಾಕೌಟ್ ವೇಳಾಪಟ್ಟಿ ಪ್ರಕಟ

ಒಟ್ಟಾರೆಯಾಗಿ, ಸೌತ್ ಆಫ್ರಿಕಾ ತಂಡವು ಸೆಮಿಫೈನಲ್ ತಲುಪಬೇಕಾದರೆ ಬಾಂಗ್ಲಾದೇಶ್ ವಿರುದ್ಧ ಕೇವಲ ಕ್ರಿಕೆಟ್ ಆಡಿದರೆ ಸಾಲದು, ಅಕ್ಷರಶಃ ಬಿರುಗಾಳಿಯ ಬ್ಯಾಟಿಂಗ್ ಮತ್ತು ಮಾರಕ ಬೌಲಿಂಗ್ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಇದೆ.

Published On - 9:24 am, Sun, 28 June 26

Follow Us
ಇಂದು ಈ ರಾಶಿಯವರು ಮಾತಿನ ಮೇಲೆ ನಿಗಾ ವಹಿಸಿ!
ಇಂದು ಈ ರಾಶಿಯವರು ಮಾತಿನ ಮೇಲೆ ನಿಗಾ ವಹಿಸಿ!
ಭಾಮಾ ಹರೀಶ್ ಪುತ್ರ ನಿಧನ: ಘಟನೆ ವಿವರಿಸಿದ ಜೊತೆಯಲ್ಲಿದ್ದ ಗೆಳೆಯ
ಭಾಮಾ ಹರೀಶ್ ಪುತ್ರ ನಿಧನ: ಘಟನೆ ವಿವರಿಸಿದ ಜೊತೆಯಲ್ಲಿದ್ದ ಗೆಳೆಯ
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!